ETV Bharat / state

JDSನಲ್ಲೂ ಅಸಮಾಧಾನದ ಹೊಗೆ : ಜಿಲ್ಲಾವಾರು ಸಭೆಗೆ ಗೈರಾದ ಕೆಲವು ಶಾಸಕರು

author img

By

Published : Jul 19, 2021, 5:10 PM IST

ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರ ಗೈರು ಸಭೆಯಲ್ಲಿ ಎದ್ದು ಕಂಡಿತು. ಕೋಲಾರ ಜಿಲ್ಲೆಯ ಕೆಲವು ನಾಯಕರು ಸಭೆಗೆ ಗೈರಾಗಿರೋದು ಕುತೂಹಲಕ್ಕೆ ಕಾರಣವಾಗಿದೆ..

ಜಿಲ್ಲಾವಾರು ಸಭೆಗೆ ಗೈರಾದ ಕೆಲವು ಶಾಸಕರು
ಜಿಲ್ಲಾವಾರು ಸಭೆಗೆ ಗೈರಾದ ಕೆಲವು ಶಾಸಕರು

ಬೆಂಗಳೂರು : ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳರಲ್ಲೂ ಆಂತರಿಕ ಕಚ್ಚಾಟ ಸುದ್ದಿಯಾಗ್ತಾನೆ ಇದೆ. ಇದರ ಮಧ್ಯೆ ಜೆಡಿಎಸ್‌ನಲ್ಲೂ ಇಂದು ನಡೆದ ಜಿಲ್ಲಾವಾರು ಸಭೆಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಂಘಟನೆ ಕುರಿತು ಜಿಲ್ಲಾವಾರು ಸಭೆ ನಡೆಸಲಾಗುತ್ತಿದೆ. ಇಂದು ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮುಖಂಡರ ಸಭೆ ನಡೆಯಿತು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಡಾ.‌ಶ್ರೀನಿವಾಸಮೂರ್ತಿ, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ, ಮಧುಗಿರಿ ಶಾಸಕ ವೀರಭದ್ರಪ್ಪ, ಹೊಸಕೋಟೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶ್ರೀಧರ್‌ಗೌಡ, ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಲಾಲ್ ಮತ್ತಿತರ ಮುಖಂಡರು ಸಭೆಯಲ್ಲಿದ್ದರು.

ಇಬ್ಬರು ಶಾಸಕರ ಗೈರು : ಆದರೆ, ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರ ಗೈರು ಸಭೆಯಲ್ಲಿ ಎದ್ದು ಕಾಣುತಿತ್ತು. ಕೋಲಾರ ಜಿಲ್ಲೆಯ ಕೆಲವು ನಾಯಕರು ಸಭೆಯಿಂದ ಗೆದೂರವೇ ಉಳಿದಿದ್ದಾರೆ. ಪ್ರತಿಯೊಬ್ಬ ಮುಖಂಡರು ತಮ್ಮ ಕ್ಷೇತ್ರದಲ್ಲಿನ ಸಂಘಟನೆ ಕುರಿತು ಹಲವು ಸಮಸ್ಯೆಗಳನ್ನು ಹೇಳಿಕೊಂಡರು. ಪ್ರತಿ ತಾಲೂಕಿನ ಬಗ್ಗೆ ಮುಖಂಡರಿಂದ ಕುಮಾರಸ್ವಾಮಿ ಅವರು ಮಾಹಿತಿ ಪಡೆದದರು.

ಇದನ್ನೂ ಓದಿ : ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ : ದಚ್ಚು-ಇಜಿಲ ಜಟಾಪಟಿಗೆ ಜಗ್ಗೇಶ್ ಗರಂ

ಬೆಂಗಳೂರು : ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳರಲ್ಲೂ ಆಂತರಿಕ ಕಚ್ಚಾಟ ಸುದ್ದಿಯಾಗ್ತಾನೆ ಇದೆ. ಇದರ ಮಧ್ಯೆ ಜೆಡಿಎಸ್‌ನಲ್ಲೂ ಇಂದು ನಡೆದ ಜಿಲ್ಲಾವಾರು ಸಭೆಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಂಘಟನೆ ಕುರಿತು ಜಿಲ್ಲಾವಾರು ಸಭೆ ನಡೆಸಲಾಗುತ್ತಿದೆ. ಇಂದು ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮುಖಂಡರ ಸಭೆ ನಡೆಯಿತು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಡಾ.‌ಶ್ರೀನಿವಾಸಮೂರ್ತಿ, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ, ಮಧುಗಿರಿ ಶಾಸಕ ವೀರಭದ್ರಪ್ಪ, ಹೊಸಕೋಟೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶ್ರೀಧರ್‌ಗೌಡ, ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಲಾಲ್ ಮತ್ತಿತರ ಮುಖಂಡರು ಸಭೆಯಲ್ಲಿದ್ದರು.

ಇಬ್ಬರು ಶಾಸಕರ ಗೈರು : ಆದರೆ, ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರ ಗೈರು ಸಭೆಯಲ್ಲಿ ಎದ್ದು ಕಾಣುತಿತ್ತು. ಕೋಲಾರ ಜಿಲ್ಲೆಯ ಕೆಲವು ನಾಯಕರು ಸಭೆಯಿಂದ ಗೆದೂರವೇ ಉಳಿದಿದ್ದಾರೆ. ಪ್ರತಿಯೊಬ್ಬ ಮುಖಂಡರು ತಮ್ಮ ಕ್ಷೇತ್ರದಲ್ಲಿನ ಸಂಘಟನೆ ಕುರಿತು ಹಲವು ಸಮಸ್ಯೆಗಳನ್ನು ಹೇಳಿಕೊಂಡರು. ಪ್ರತಿ ತಾಲೂಕಿನ ಬಗ್ಗೆ ಮುಖಂಡರಿಂದ ಕುಮಾರಸ್ವಾಮಿ ಅವರು ಮಾಹಿತಿ ಪಡೆದದರು.

ಇದನ್ನೂ ಓದಿ : ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ : ದಚ್ಚು-ಇಜಿಲ ಜಟಾಪಟಿಗೆ ಜಗ್ಗೇಶ್ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.