ETV Bharat / state

ದೋಸ್ತಿ ನಾಯಕರ ಬೇಜವಾಬ್ದಾರಿತನದ ಪರಮಾವಧಿ : ಗಳಿಗೆ ನೋಡಿ ಸದನಕ್ಕೋದ ನಾಯಕರು

ಬೆಳಗ್ಗೆ 10 ಗಂಟೆಗೆ ಸದನ ಪ್ರಾರಂಭ ಮಾಡಬೇಕೆಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದರೂ ಕೂಡ ದೋಸ್ತಿ ಸರ್ಕಾರದ ನಾಯಕರು ಸದನಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ. ಬೆ. 10.30ರ ಶುಭ ಗಳಿಗೆ ನೋಡಿಕೊಂಡೇ ಸದನಕ್ಕೆ ಹಾಜಾರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

author img

By

Published : Jul 23, 2019, 11:50 AM IST

Updated : Jul 23, 2019, 2:47 PM IST

ಗಂಟೆ ಹತ್ತಾದರು ಸದನಕ್ಕೋಗದ ನಾಯಕರು

ಬೆಂಗಳೂರು: ಹತ್ತು ಗಂಟೆಗೆ ಸದನ ಪ್ರಾರಂಭ ಮಾಡಬೇಕೆಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದರೂ ಕೂಡ ದೋಸ್ತಿ ಸರ್ಕಾರದ ನಾಯಕರು ಸದನಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದು, 10.30ರ ಶುಭ ಗಳಿಗೆ ನೋಡಿ ಸದನಕ್ಕೆ ಹೋಗಿದ್ದರು. ಈ ವಿಷಯ ಈಗ ಭರ್ಜರಿ ಚರ್ಚೆಯಾಗುತ್ತಿದೆ.

ಗಂಟೆ ಹತ್ತಾದರೂ ಸದನಕ್ಕೆ ಹೋಗಿರಲಿಲ್ಲ ಜೆಡಿಎಸ್​ ಶಾಸಕರು

ಈಗಾಗಲೇ ಸದನದೊಳಗೆ ಸ್ಪೀಕರ್​ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಹಾಜರಿದ್ದಾರೆ. ಹಾಗೇ ದೋಸ್ತಿ ಪಾಳಯದಲ್ಲಿ ಎ.ಟಿ. ರಾಮಸ್ವಾಮಿ, ಸಚಿವ ಪ್ರಿಯಂಕ ಖರ್ಗೆ ಸದನಕ್ಕೆ ಹಾಜರಾಗಿದ್ದರು. ಆದ್ರೆ ಇತರ ದೋಸ್ತಿ ನಾಯಕರು ಸುಪ್ರೀಂಕೋರ್ಟ್​​ ವಿಚಾರಣೆ ನೋಡಿಕೊಂಡು ಸದನಕ್ಕೆ ಬರುವ ಹುನ್ನಾರದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದವು.

ಇದೀಗ ಮೈತ್ರಿ ಪಾಳಯದ ನಾಯಕರು ರೆಸಾರ್ಟ್​​ನಿಂದ ಬಸ್​ ಮುಖಾಂತರ ಸದನಕ್ಕೆ ತೆರಳಿದ್ದರು.

ಸ್ಪೀಕರ್ ಬೇಸರ :

ಸ್ಪೀಕರ್ ರಮೇಶ್ ಕುಮಾರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಸದಸ್ಯರು ಆಗಮಿಸುವುದು ತಡವಾದಂತೆ ಮಹತ್ವದ ಸಮಯ ವ್ಯರ್ಥವಾಗಲಿದೆ. ಭಾಷಣಕ್ಕೆ ಅವರಿಗೆ ಅವಕಾಶ ಕಡಿಮೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಬೆಂಗಳೂರು: ಹತ್ತು ಗಂಟೆಗೆ ಸದನ ಪ್ರಾರಂಭ ಮಾಡಬೇಕೆಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದರೂ ಕೂಡ ದೋಸ್ತಿ ಸರ್ಕಾರದ ನಾಯಕರು ಸದನಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದು, 10.30ರ ಶುಭ ಗಳಿಗೆ ನೋಡಿ ಸದನಕ್ಕೆ ಹೋಗಿದ್ದರು. ಈ ವಿಷಯ ಈಗ ಭರ್ಜರಿ ಚರ್ಚೆಯಾಗುತ್ತಿದೆ.

ಗಂಟೆ ಹತ್ತಾದರೂ ಸದನಕ್ಕೆ ಹೋಗಿರಲಿಲ್ಲ ಜೆಡಿಎಸ್​ ಶಾಸಕರು

ಈಗಾಗಲೇ ಸದನದೊಳಗೆ ಸ್ಪೀಕರ್​ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಹಾಜರಿದ್ದಾರೆ. ಹಾಗೇ ದೋಸ್ತಿ ಪಾಳಯದಲ್ಲಿ ಎ.ಟಿ. ರಾಮಸ್ವಾಮಿ, ಸಚಿವ ಪ್ರಿಯಂಕ ಖರ್ಗೆ ಸದನಕ್ಕೆ ಹಾಜರಾಗಿದ್ದರು. ಆದ್ರೆ ಇತರ ದೋಸ್ತಿ ನಾಯಕರು ಸುಪ್ರೀಂಕೋರ್ಟ್​​ ವಿಚಾರಣೆ ನೋಡಿಕೊಂಡು ಸದನಕ್ಕೆ ಬರುವ ಹುನ್ನಾರದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದವು.

ಇದೀಗ ಮೈತ್ರಿ ಪಾಳಯದ ನಾಯಕರು ರೆಸಾರ್ಟ್​​ನಿಂದ ಬಸ್​ ಮುಖಾಂತರ ಸದನಕ್ಕೆ ತೆರಳಿದ್ದರು.

ಸ್ಪೀಕರ್ ಬೇಸರ :

ಸ್ಪೀಕರ್ ರಮೇಶ್ ಕುಮಾರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಸದಸ್ಯರು ಆಗಮಿಸುವುದು ತಡವಾದಂತೆ ಮಹತ್ವದ ಸಮಯ ವ್ಯರ್ಥವಾಗಲಿದೆ. ಭಾಷಣಕ್ಕೆ ಅವರಿಗೆ ಅವಕಾಶ ಕಡಿಮೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

Intro:KN_BNG_01_23_JDS_Ambarish_7203301
Slug: ೧೦ ಗಂಟೆ ಯಾದರೂ ರೆಸಾರ್ಟ್ ನಿಂದ ಹೊರ ಬಾರದ ಜೆಡಿಎಸ್ ಶಾಸಕರು
ಒಳ್ಳೆ ಟೈಂ ಗಾಗಿ ವೈಟ್ ಮಾಡ್ತಿರುವ ಶಾಸಕರು

ಬೆಂಗಳೂರು: ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿರುವ ಜೆಡಿಎಸ್ ಶಾಸಕರು ೧೦ ಗಂಟೆಯಾದ್ರು ರೆಸಾರ್ಟ್ ನಿಂದ ಹೊರಬಾರದೇ ಶುಭ ಗಳಿಗೆಗಾಗಿ ಕಾಯುತ್ತಿದ್ದಾರೆ.. ೧೦ ಗಂಟೆಗೆ ಕಲಾಪವನ್ನು ಸ್ಪೀಕರ್ ನಿಗದಿ ಮಾಡಿದ್ರೂ, ಶಾಸಕರು ಮಾತ್ರ ವಿಧಾನಸೌಧಕ್ಕೆ ತೆರಳಲು ತಡ ಮಾಡುತ್ತಿದ್ದಾರೆ.. ರೆಸಾರ್ಟ್ ನಲ್ಲಿ ಬಸ್ ಬಂದು ನಿಂತಿದ್ರು ಬಸ್ ಹತ್ತದ ಶಾಸಕರು.. ರಾತ್ರಿ ತಡವಾದ ಕಾರಣ ಕೆಲ ಶಾಸಕರು ಮನೆಗೆ ತೆರಳಿದ್ರು. ಉಳಿದ ಶಾಸಕರು ಶುಭ ಕಾಲಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ..


16 ನೇ ದಿನ ಪೂರೈಸಿದ ರೆಸಾರ್ಟ್ ವಾಸ್ತವ್ಯ

ಕಳೆದ 16 ದಿನಗಳಿಂದ ರೆಸಾರ್ಟ್ ನಲ್ಲಿರುವ ಶಾಸಕರು. ಇಂದಿಗೆ ಜೆಡಿಎಸ್ ಶಾಸಕರು ರೆಸಾರ್ಟ್ ಗೆ ಬಂದು ೧೬ ದಿನವಾಗಿದ್ದು, ಇಂದು ಕೊನೆಯ ದಿನವಾಗಲಿದೆ.. ಎಲ್ಲರಿಗೂ ಇಂದೇ ರೆಸಾರ್ಟ್ ವಾಸ್ತವ್ಯ ಕೊನೆಯಾಗಲಿದೆ ಎನ್ನಲಾಗಿದ್ದು, ವಿಧಾನಸೌಧದ ಬೆಳವಣಿಗೆಯ ಮೇಲೆ ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಲಿದ್ದಾರೆ ಎನ್ನಲಾಗಿದೆ.

Body:NoConclusion:No
Last Updated : Jul 23, 2019, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.