ETV Bharat / state

ಸಂಚಾರ ಪೊಲೀಸರ ಹಲ್ಲೆ ಆರೋಪ: ಐಐಎಸ್​​ಸಿ ವಿಜ್ಞಾನಿ ದೂರು

author img

By

Published : Aug 16, 2019, 8:40 PM IST

Updated : Aug 16, 2019, 9:56 PM IST

ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿ ಅವನೀಶ್ ಪ್ರತಾಪ್ ಸಿಂಗ್ ಎಂಬುವರ ಮೇಲೆ ಸಂಚಾರ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಂಚಾರಿ ಪೊಲೀಸರ ಹಲ್ಲೆ

ಬೆಂಗಳೂರು: ಬಾಡಿಗೆ ಕಾರು ಪಡೆದು ಸ್ನೇಹಿತರೊಂದಿಗೆ ಬನ್ನೇರುಘಟ್ಟ ರಾಷ್ಟ್ರೀಯ ಪಾರ್ಕ್​ಗೆ ತೆರಳುವಾಗ ತಪಾಸಣೆಗಾಗಿ ಅಡ್ಡಗಟ್ಟಿದ ಮೈಕೊ‌ ಲೇಔಟ್ ಸಂಚಾರ ಪೊಲೀಸರು, ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಐಐಎಸ್​​​ಸಿ ವಿಜ್ಞಾನಿ ಆರೋಪಿಸಿದ್ದಾರೆ.

complaint letter
ಅವನೀಶ್ ಪ್ರತಾಪ್ ಸಿಂಗ್ ಬರೆದ ದೂರಿನ ಪತ್ರ

ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿ ಅವನೀಶ್ ಪ್ರತಾಪ್ ಸಿಂಗ್ ಎಂಬುವರು ಕಳೆದ ಭಾನುವಾರ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ಗೆ ಕಂಪೆನಿಯೊಂದರ ಕಾರು ಬಾಡಿಗೆ ಪಡೆದು ಸ್ನೇಹಿತರೊಂದಿಗೆ ತೆರಳಿದ್ದರು.‌ ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್ ಬಳಿ ಮೈಕೊ ಲೇಔಟ್ ಸಂಚಾರ ಪೊಲೀಸರು ಕಾರನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.

ಸಂಚಾರಿ ಪೊಲೀಸರ ಹಲ್ಲೆ ದೃಶ್ಯ

ಸಮವಸ್ತ್ರ ಧರಿಸದೆ ವಾಹನ ಚಾಲನೆ ಮಾಡಿದ್ದೀರಾ. ಹೀಗಾಗಿ 100 ರೂ.ದಂಡ ಪಾವತಿಸಿ ಎಂದು ಅವನೀಶ್ ಸಿಂಗ್​​ಗೆ ಪೊಲೀಸರು ಸೂಚಿಸಿದ್ದರು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಕಾರನ್ನು ಬಾಡಿಗೆ ಪಡೆದು ವಾಹನ ಚಾಲನೆ ಮಾಡುತ್ತಿದ್ದು, ಸಮವಸ್ತ್ರ ಧರಿಸಿಲ್ಲ.‌ ಅಲ್ಲದೆ ದಂಡ ವಿಧಿಸಲು ಅವಕಾಶವಿಲ್ಲ ಎಂದು ಹೇಳಿದೆ. ಆದರೆ, ಪೊಲೀಸರು ದಂಡ ಕಟ್ಟಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಮೈಕೋ ಲೇಔಟ್​ ಠಾಣೆಗೆ ನೀಡಿರುವ ದೂರಿನಲ್ಲಿ ಅವನೀಶ್​ ತಿಳಿಸಿದ್ದಾರೆ.

ಬೆಂಗಳೂರು: ಬಾಡಿಗೆ ಕಾರು ಪಡೆದು ಸ್ನೇಹಿತರೊಂದಿಗೆ ಬನ್ನೇರುಘಟ್ಟ ರಾಷ್ಟ್ರೀಯ ಪಾರ್ಕ್​ಗೆ ತೆರಳುವಾಗ ತಪಾಸಣೆಗಾಗಿ ಅಡ್ಡಗಟ್ಟಿದ ಮೈಕೊ‌ ಲೇಔಟ್ ಸಂಚಾರ ಪೊಲೀಸರು, ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಐಐಎಸ್​​​ಸಿ ವಿಜ್ಞಾನಿ ಆರೋಪಿಸಿದ್ದಾರೆ.

complaint letter
ಅವನೀಶ್ ಪ್ರತಾಪ್ ಸಿಂಗ್ ಬರೆದ ದೂರಿನ ಪತ್ರ

ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿ ಅವನೀಶ್ ಪ್ರತಾಪ್ ಸಿಂಗ್ ಎಂಬುವರು ಕಳೆದ ಭಾನುವಾರ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ಗೆ ಕಂಪೆನಿಯೊಂದರ ಕಾರು ಬಾಡಿಗೆ ಪಡೆದು ಸ್ನೇಹಿತರೊಂದಿಗೆ ತೆರಳಿದ್ದರು.‌ ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್ ಬಳಿ ಮೈಕೊ ಲೇಔಟ್ ಸಂಚಾರ ಪೊಲೀಸರು ಕಾರನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.

ಸಂಚಾರಿ ಪೊಲೀಸರ ಹಲ್ಲೆ ದೃಶ್ಯ

ಸಮವಸ್ತ್ರ ಧರಿಸದೆ ವಾಹನ ಚಾಲನೆ ಮಾಡಿದ್ದೀರಾ. ಹೀಗಾಗಿ 100 ರೂ.ದಂಡ ಪಾವತಿಸಿ ಎಂದು ಅವನೀಶ್ ಸಿಂಗ್​​ಗೆ ಪೊಲೀಸರು ಸೂಚಿಸಿದ್ದರು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಕಾರನ್ನು ಬಾಡಿಗೆ ಪಡೆದು ವಾಹನ ಚಾಲನೆ ಮಾಡುತ್ತಿದ್ದು, ಸಮವಸ್ತ್ರ ಧರಿಸಿಲ್ಲ.‌ ಅಲ್ಲದೆ ದಂಡ ವಿಧಿಸಲು ಅವಕಾಶವಿಲ್ಲ ಎಂದು ಹೇಳಿದೆ. ಆದರೆ, ಪೊಲೀಸರು ದಂಡ ಕಟ್ಟಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಮೈಕೋ ಲೇಔಟ್​ ಠಾಣೆಗೆ ನೀಡಿರುವ ದೂರಿನಲ್ಲಿ ಅವನೀಶ್​ ತಿಳಿಸಿದ್ದಾರೆ.

Intro:Body: ಸಂಚಾರಿ ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಐಎಎಸ್ಸಿ ವಿಜ್ಞಾನಿ ಆರೋಪ

ಬೆಂಗಳೂರು: ಬಾಡಿಗೆ ಕಾರು ಪಡೆದು ಸ್ನೇಹಿತರೊಂದಿಗೆ ಬನ್ನೇರುಘಟ್ಟ ರಾಷ್ಟ್ರೀಯ ಪಾರ್ಕ್ ಗೆ ತೆರಳುವಾಗ ತಪಾಸಣೆಗಾಗಿ ಅಡ್ಡಗಟ್ಟಿದ ಮೈಕೊ‌ ಲೇಔಟ್ ಸಂಚಾರಿ ಪೊಲೀಸರು, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಐಎಎಸ್ಸಿ ವಿಜ್ಞಾನಿ ಆರೋಪಿಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿ ಅವನೀಶ್ ಪ್ರತಾಪ್ ಸಿಂಗ್ ಎಂಬುವರು ಕಳೆದ ಭಾನುವಾರ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ಕಂಪೆನಿಯೊಂದರ ಕಾರು ಬಾಡಿಗೆ ಪಡೆದು ಸ್ನೇಹಿತರೊಂದಿಗೆ ತೆರಳಿದ್ದರು.‌ ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್ ಬಳಿ ಮೈಕೊ ಲೇಔಟ್ ಸಂಚಾರಿ‌ ಪೊಲೀಸರು ಕಾರನ್ನು ಅಡ್ಡಗಟ್ಟಿದ್ದಾರೆ. ಸಮವಸ್ತ್ರ ಧರಿಸದೆ ವಾಹನ ಚಾಲನೆ ಮಾಡಿದ್ದೀರಾ.. ಹೀಗಾಗಿ 100 ರೂ.ದಂಡ ಪಾವತಿಸಿ ಎಂದು ಅವನೀಶ್ ಸಿಂಗ್ ಗೆ ಸೂಚಿಸಿದ್ದಾರೆ.‌ ಇದಕ್ಕೊಪ್ಪದ ಸಿಂಗ್..‌ ನಾನು ಕಾರನ್ನು ಬಾಡಿಗೆ ಪಡೆದು ವಾಹನ ಚಾಲನೆ ಮಾಡುತ್ತಿದ್ದು, ಸಮವಸ್ತ್ರ ಧರಿಸಿಲ್ಲ...‌ಅಲ್ಲದೆ ದಂಡ ವಿಧಿಸಲು ಅವಕಾಶವಿಲ್ಲ ಎಂದಿದ್ದಾರೆ. ದಂಡ ವಿಧಿಸಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿರುವುದನ್ನು ವಿಡಿಯೊ ಮಾಡಿಕೊಂಡ ಸಿಂಗ್ ಮೇಲೆ ಹಲ್ಲೆಗೆ‌ ಮುಂದಾಗಿದ್ದಾರೆ.
Conclusion:
Last Updated : Aug 16, 2019, 9:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.