ETV Bharat / state

ದರ್ಶನ್ ಬೆಂಬಲಿಗರು, ರೌಡಿಗಳು ಸತತವಾಗಿ ಕರೆ ಮಾಡಿ ಬೆದರಿಕೆ ಹಾಕ್ತಿದ್ದಾರೆ: ಇಂದ್ರಜಿತ್ ಲಂಕೇಶ್

author img

By

Published : Jul 19, 2021, 4:57 PM IST

Updated : Jul 19, 2021, 5:16 PM IST

ದರ್ಶನ್​ ಅಭಿಮಾನಿಗಳು ಹಾಗೂ ಅವರ ಬೆಂಬಲಿಗರು ಸತತವಾಗಿ ನನಗೆ ಕರೆ ಮಾಡುತ್ತಿದ್ದಾರೆ. ಅಶ್ಲೀಲ ಚಿತ್ರಗಳನ್ನು ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ಬೇರೆ ನಂಬರ್‌ಗಳಿಂದ ಫೋನ್ ಮಾಡಿ, ಹೆದರಿಸಬಹುದು ಅಂದುಕೊಂಡ್ರೆ ಅದು ತಪ್ಪು. ನಾನು ಹೆದರೋಲ್ಲ- ಇಂದ್ರಜಿತ್ ಲಂಕೇಶ್‌

ನಿರ್ದೇಶಕ ಇಂದ್ರಜಿತ್​ ಲಂಕೇಶ್​​  ಸೈಬರ್ ಕ್ರೈಮ್ ಠಾಣೆಗೆ ದೂರು
ನಿರ್ದೇಶಕ ಇಂದ್ರಜಿತ್​ ಲಂಕೇಶ್​​ ಸೈಬರ್ ಕ್ರೈಮ್ ಠಾಣೆಗೆ ದೂರು

ಬೆಂಗಳೂರು: ಕಳೆದ ಐದಾದು ದಿನಗಳಿಂದ ನಟ ದರ್ಶನ್ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದೆ. ಇದೀಗ ದರ್ಶನ್ ಬೆಂಬಲಿಗರು ಹಾಗೂ ಅಭಿಮಾನಿಗಳು ಫೋನ್​ ಕಾಲ್​ ಮಾಡಿ ಹಾಗೂ ಮೆಸೇಜ್‌ಗಳನ್ನು ಕಳುಹಿಸುವ​ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್​ ಲಂಕೇಶ್​​ ಸೈಬರ್ ಕ್ರೈಮ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನಿರ್ದೇಶಕ ಇಂದ್ರಜಿತ್​ ಲಂಕೇಶ್​​ ಸೈಬರ್ ಕ್ರೈಮ್ ಠಾಣೆಗೆ ದೂರು

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದರ್ಶನ್​ ಅಭಿಮಾನಿಗಳು ಹಾಗೂ ಅವರ ಬೆಂಬಲಿಗರು ಸತತವಾಗಿ ನನಗೆ ಕರೆ ಮಾಡುತ್ತಿದ್ದಾರೆ. ಅಶ್ಲೀಲ ಚಿತ್ರಗಳನ್ನು ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ಬೇರೆ ನಂಬರ್‌ಗಳಿಂದ ಫೋನ್ ಮಾಡಿ, ಹೆದರಿಸಬಹುದು ಅಂದುಕೊಂಡ್ರೆ ಅದು ತಪ್ಪು. ನಾನು ಹೆದರೋಲ್ಲ ಎಂದು ಅವರು ಹೇಳಿದರು.

ನಿರ್ದೇಶಕ ಇಂದ್ರಜಿತ್​ ಲಂಕೇಶ್​​ ಆರೋಪ

ಸಂವಿಧಾನದ 4ನೇ ಸ್ತಂಭ ಅಂದ್ರೆ ಅದು ಮಾಧ್ಯಮ. ಮಾಧ್ಯಮದ ಮೇಲೂ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದರು. ಇದೇ ವೇಳೆ, ವಕೀಲರಾದ ಶ್ಯಾಮ್ ಸುಂದರ್ ಮತ್ತು ನಮ್ಮ ಸಂಬಂಧ ಮೂವತ್ತು ವರ್ಷಗಳದ್ದು. ಅವರು ನಮ್ಮ ಪತ್ರಿಕೆಯ ಲೀಗಲ್ ಅಡ್ವೈಸರ್ ಇಂದ್ರಜಿತ್ ಲಂಕೇಶ್ ತಿಳಿಸಿದರು.

ಇದನ್ನೂ ಓದಿ: ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ : ದಚ್ಚು-ಇಜಿಲ ಜಟಾಪಟಿಗೆ ಜಗ್ಗೇಶ್ ಗರಂ

ಬೆಂಗಳೂರು: ಕಳೆದ ಐದಾದು ದಿನಗಳಿಂದ ನಟ ದರ್ಶನ್ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದೆ. ಇದೀಗ ದರ್ಶನ್ ಬೆಂಬಲಿಗರು ಹಾಗೂ ಅಭಿಮಾನಿಗಳು ಫೋನ್​ ಕಾಲ್​ ಮಾಡಿ ಹಾಗೂ ಮೆಸೇಜ್‌ಗಳನ್ನು ಕಳುಹಿಸುವ​ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್​ ಲಂಕೇಶ್​​ ಸೈಬರ್ ಕ್ರೈಮ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನಿರ್ದೇಶಕ ಇಂದ್ರಜಿತ್​ ಲಂಕೇಶ್​​ ಸೈಬರ್ ಕ್ರೈಮ್ ಠಾಣೆಗೆ ದೂರು

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದರ್ಶನ್​ ಅಭಿಮಾನಿಗಳು ಹಾಗೂ ಅವರ ಬೆಂಬಲಿಗರು ಸತತವಾಗಿ ನನಗೆ ಕರೆ ಮಾಡುತ್ತಿದ್ದಾರೆ. ಅಶ್ಲೀಲ ಚಿತ್ರಗಳನ್ನು ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ಬೇರೆ ನಂಬರ್‌ಗಳಿಂದ ಫೋನ್ ಮಾಡಿ, ಹೆದರಿಸಬಹುದು ಅಂದುಕೊಂಡ್ರೆ ಅದು ತಪ್ಪು. ನಾನು ಹೆದರೋಲ್ಲ ಎಂದು ಅವರು ಹೇಳಿದರು.

ನಿರ್ದೇಶಕ ಇಂದ್ರಜಿತ್​ ಲಂಕೇಶ್​​ ಆರೋಪ

ಸಂವಿಧಾನದ 4ನೇ ಸ್ತಂಭ ಅಂದ್ರೆ ಅದು ಮಾಧ್ಯಮ. ಮಾಧ್ಯಮದ ಮೇಲೂ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದರು. ಇದೇ ವೇಳೆ, ವಕೀಲರಾದ ಶ್ಯಾಮ್ ಸುಂದರ್ ಮತ್ತು ನಮ್ಮ ಸಂಬಂಧ ಮೂವತ್ತು ವರ್ಷಗಳದ್ದು. ಅವರು ನಮ್ಮ ಪತ್ರಿಕೆಯ ಲೀಗಲ್ ಅಡ್ವೈಸರ್ ಇಂದ್ರಜಿತ್ ಲಂಕೇಶ್ ತಿಳಿಸಿದರು.

ಇದನ್ನೂ ಓದಿ: ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ : ದಚ್ಚು-ಇಜಿಲ ಜಟಾಪಟಿಗೆ ಜಗ್ಗೇಶ್ ಗರಂ

Last Updated : Jul 19, 2021, 5:16 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.