ETV Bharat / state

ತೀರ್ಪು ಕಕ್ಷಿದಾರರ ಪರ ಬಂದಿಲ್ಲ ಎಂದರೆ ವಂಚನೆ ಆಗುವುದಿಲ್ಲ.. ಹೈಕೋರ್ಟ್​

author img

By

Published : Oct 8, 2022, 5:41 PM IST

ಯಾವುದೇ ಪ್ರಕರಣ ಅರ್ಹತೆ, ವಾಸ್ತವಾಂಶ ಮತ್ತು ಕಾನೂನು ಅನ್ವಯದ ಮೇಲೆ ಅಂತಿಮ ತೀರ್ಮಾನ ಹೊರ ಬರುತ್ತದೆ. ಅಂತಿಮ ತೀರ್ಮಾನಕ್ಕೂ ಹಾಗೂ ಶುಲ್ಕ ಪಾವತಿ, ಅದರ ಪ್ರಮಾಣಕ್ಕೂ ಸಂಬಂಧ ಇರುವುದಿಲ್ಲ. ಅದು ಅಪ್ರಸ್ತುತವಾಗಿದ್ದು, ವಕೀಲ ಹಾಗೂ ಕಕ್ಷಿದಾರ ನಡುವಿನ ಖಾಸಗಿ ವಿಷಯವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

HighCourt
ಹೈಕೋರ್ಟ್​

ಬೆಂಗಳೂರು: ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣವೊಂದರ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅನುಕೂಲಕರವಾದ ತೀರ್ಪು ಪಡೆದುಕೊಳ್ಳುವುದಾಗಿ ಹೇಳಿ ಲಕ್ಷಾಂತರ ಶುಲ್ಕ ಸ್ವೀಕರಿಸಿ ನಂತರ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್​ ರದ್ದುಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಂಕನಾಡಿಯ ವೃದ್ಧರಾದ ಸಿಪ್ರಿಯನ್ ಮೆನೆಜಸ್ ಎಂಬುವರು ತಮ್ಮ ವಿರುದ್ಧ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಹಿರಿಯ ವಕೀಲ ಕೆ.ಎಸ್. ಮಹದೇವನ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಕಕ್ಷಿದಾರ ಪ್ರಕರಣದಲ್ಲಿ ಯಶಸ್ಸು ಸಿಕ್ಕಿಲ್ಲ, ಅನುಕೂಲಕರವಾದ ತೀರ್ಪು ಪಡೆಯಲಾಗಲಿಲ್ಲ ಎಂಬ ಕಾರಣಕ್ಕೆ ವಕೀಲರು ನಂಬಿಕೆ ದ್ರೋಹ ಅಥವಾ ವಂಚನೆ ಎಸಗಿದ್ದಾರೆ ಎಂದು ಹೇಳುವುದು ವಿನಾಶಕಾರಿ ಸನ್ನಿವೇಶಕ್ಕೆ ದಾರಿ ಮಾಡಿಕೊಡುತ್ತದೆ. ವಕೀಲರು ವಿಚಾರಣೆಗೆ ಹಾಜರಾಗಿ, ಪ್ರಕರಣದಲ್ಲಿ ಯಶಸ್ವಿಯಾಗಲು ತಮ್ಮೆಲ್ಲಾ ಪ್ರಯತ್ನ ನಡೆಸಬಹುದಷ್ಟೇ. ಪ್ರಕರಣ ಕೇವಲ ಅದರ ಅರ್ಹತೆ ಮೇಲೆ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲ ಕಕ್ಷಿದಾರರು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ನ್ಯಾಯಾಲಯಗಳಲ್ಲಿ ಅನುಕೂಲಕರ ಆದೇಶ ಪಡೆಯುವುದಾಗಿ ಯಾವುದೇ ವಕೀಲ ಹೇಳಲು ಸಾಧ್ಯವಿಲ್ಲ. ಶುಲ್ಕ ಪಾವತಿಸಲಾಗಿದೆ ಎಂಬ ಕಾರಣಕ್ಕೆ ವಕೀಲರು ಖಂಡಿತವಾಗಿಯೂ ಅನುಕೂಲಕರ ತೀರ್ಪು ಪಡೆಯುತ್ತಾರೆ ಎಂದು ನಂಬಬಾರದು. ಯಾವುದೇ ಪ್ರಕರಣದಲ್ಲಿ ಒಬ್ಬರು ಮಾತ್ರ ಗೆಲ್ಲುತ್ತಾರೆ. ಯಾವುದೇ ಪ್ರಕರಣ ಅರ್ಹತೆ, ವಾಸ್ತವಾಂಶ ಮತ್ತು ಕಾನೂನು ಅನ್ವಯದ ಮೇಲೆ ಅಂತಿಮ ತೀರ್ಮಾನ ಹೊರಬರುತ್ತದೆ.

ಅಂತಿಮ ತೀರ್ಮಾನಕ್ಕೂ ಹಾಗೂ ಶುಲ್ಕ ಪಾವತಿ, ಅದರ ಪ್ರಮಾಣಕ್ಕೂ ಸಂಬಂಧವಿರುವುದಿಲ್ಲ. ಅದು ಅಪ್ರಸ್ತುತವಾಗಿದ್ದು, ವಕೀಲ ಹಾಗೂ ಕಕ್ಷಿದಾರ ನಡುವಿನ ಖಾಸಗಿ ವಿಷಯವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ವಿವರ: ಸಿಪ್ರಿಯನ್ ಮೆನೆಜಸ್ ಅವರು ತಮ್ಮ ದೂರಿನಲ್ಲಿ ಪ್ರಕರಣವೊಂದರ ಸಂಬಂಧ ವಕೀಲ ಕೆ.ಎಸ್. ಮಹದೇವನ್ ಅವರು ತಾನು ಹಿರಿಯ ವಕೀಲನಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಹಿರಿಯ ವಕೀಲರ ಸಂಪರ್ಕ ಹೊಂದಿದ್ದೇನೆ. ತಮ್ಮ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರನ್ನು ನಿಯೋಜಿಸಲಾಗುವುದು. ಅವರು ನಿಮ್ಮ ಪ್ರಕರಣವನ್ನು ಪ್ರತಿನಿಧಿಸಿ, ಅನುಕೂಲಕರವಾದ ತೀರ್ಪು ಪಡೆಯುತ್ತಾರೆ’ ಎಂದು ತಿಳಿಸಿದ್ದರು.

ಅವರ ಮಾತಿನ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರು ಹಾಜರಾಗುವುದಕ್ಕೆ, ಮಾಧವನ್ ಅವರು ದೆಹಲಿ ಪ್ರಯಾಣಿಸಲು, ಕೋರ್ಟ್‌ಗೆ ಹಾಜರಾಗಲು 14.60 ಲಕ್ಷ ರು. ಶುಲ್ಕವನ್ನು ಪಾವತಿಸಿದ್ದೇನೆ. ಆದರೆ, ಪ್ರಕರಣ 2016ರ ಏ.18ರಂದು ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದ ಸ್ಥಿತಿಗತಿ ತಿಳಿಯಲು ಆ ದಿನದ ಅಂತ್ಯದಲ್ಲಿ ಮಹದೇವನ್ ಅವರಿಗೆ ಕರೆ ಮಾಡಿದಾಗ ಸೂಕ್ತ ಮಾಹಿತಿ ನೀಡಲಿಲ್ಲ’ ಎಂದು ಆರೋಪಿಸಿದ್ದರು.

ಅಲ್ಲದೇ, ಮಹಾದೇವನ್ ಅವರ ಪ್ರಮಾಣಿಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪದಡಿ ಖಾಸಗಿ ದೂರು ದಾಖಲಿಸಿದ್ದರು. ಅದರ ರದ್ದತಿಗೆ ಕೋರಿ ಮಹದೇವನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಷರತ್ತು ಉಲ್ಲಂಘಿಸಿದ ನೈಜಿರಿಯಾ ಪ್ರಜೆಗೆ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣವೊಂದರ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅನುಕೂಲಕರವಾದ ತೀರ್ಪು ಪಡೆದುಕೊಳ್ಳುವುದಾಗಿ ಹೇಳಿ ಲಕ್ಷಾಂತರ ಶುಲ್ಕ ಸ್ವೀಕರಿಸಿ ನಂತರ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್​ ರದ್ದುಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಂಕನಾಡಿಯ ವೃದ್ಧರಾದ ಸಿಪ್ರಿಯನ್ ಮೆನೆಜಸ್ ಎಂಬುವರು ತಮ್ಮ ವಿರುದ್ಧ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಹಿರಿಯ ವಕೀಲ ಕೆ.ಎಸ್. ಮಹದೇವನ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಕಕ್ಷಿದಾರ ಪ್ರಕರಣದಲ್ಲಿ ಯಶಸ್ಸು ಸಿಕ್ಕಿಲ್ಲ, ಅನುಕೂಲಕರವಾದ ತೀರ್ಪು ಪಡೆಯಲಾಗಲಿಲ್ಲ ಎಂಬ ಕಾರಣಕ್ಕೆ ವಕೀಲರು ನಂಬಿಕೆ ದ್ರೋಹ ಅಥವಾ ವಂಚನೆ ಎಸಗಿದ್ದಾರೆ ಎಂದು ಹೇಳುವುದು ವಿನಾಶಕಾರಿ ಸನ್ನಿವೇಶಕ್ಕೆ ದಾರಿ ಮಾಡಿಕೊಡುತ್ತದೆ. ವಕೀಲರು ವಿಚಾರಣೆಗೆ ಹಾಜರಾಗಿ, ಪ್ರಕರಣದಲ್ಲಿ ಯಶಸ್ವಿಯಾಗಲು ತಮ್ಮೆಲ್ಲಾ ಪ್ರಯತ್ನ ನಡೆಸಬಹುದಷ್ಟೇ. ಪ್ರಕರಣ ಕೇವಲ ಅದರ ಅರ್ಹತೆ ಮೇಲೆ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲ ಕಕ್ಷಿದಾರರು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ನ್ಯಾಯಾಲಯಗಳಲ್ಲಿ ಅನುಕೂಲಕರ ಆದೇಶ ಪಡೆಯುವುದಾಗಿ ಯಾವುದೇ ವಕೀಲ ಹೇಳಲು ಸಾಧ್ಯವಿಲ್ಲ. ಶುಲ್ಕ ಪಾವತಿಸಲಾಗಿದೆ ಎಂಬ ಕಾರಣಕ್ಕೆ ವಕೀಲರು ಖಂಡಿತವಾಗಿಯೂ ಅನುಕೂಲಕರ ತೀರ್ಪು ಪಡೆಯುತ್ತಾರೆ ಎಂದು ನಂಬಬಾರದು. ಯಾವುದೇ ಪ್ರಕರಣದಲ್ಲಿ ಒಬ್ಬರು ಮಾತ್ರ ಗೆಲ್ಲುತ್ತಾರೆ. ಯಾವುದೇ ಪ್ರಕರಣ ಅರ್ಹತೆ, ವಾಸ್ತವಾಂಶ ಮತ್ತು ಕಾನೂನು ಅನ್ವಯದ ಮೇಲೆ ಅಂತಿಮ ತೀರ್ಮಾನ ಹೊರಬರುತ್ತದೆ.

ಅಂತಿಮ ತೀರ್ಮಾನಕ್ಕೂ ಹಾಗೂ ಶುಲ್ಕ ಪಾವತಿ, ಅದರ ಪ್ರಮಾಣಕ್ಕೂ ಸಂಬಂಧವಿರುವುದಿಲ್ಲ. ಅದು ಅಪ್ರಸ್ತುತವಾಗಿದ್ದು, ವಕೀಲ ಹಾಗೂ ಕಕ್ಷಿದಾರ ನಡುವಿನ ಖಾಸಗಿ ವಿಷಯವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ವಿವರ: ಸಿಪ್ರಿಯನ್ ಮೆನೆಜಸ್ ಅವರು ತಮ್ಮ ದೂರಿನಲ್ಲಿ ಪ್ರಕರಣವೊಂದರ ಸಂಬಂಧ ವಕೀಲ ಕೆ.ಎಸ್. ಮಹದೇವನ್ ಅವರು ತಾನು ಹಿರಿಯ ವಕೀಲನಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಹಿರಿಯ ವಕೀಲರ ಸಂಪರ್ಕ ಹೊಂದಿದ್ದೇನೆ. ತಮ್ಮ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರನ್ನು ನಿಯೋಜಿಸಲಾಗುವುದು. ಅವರು ನಿಮ್ಮ ಪ್ರಕರಣವನ್ನು ಪ್ರತಿನಿಧಿಸಿ, ಅನುಕೂಲಕರವಾದ ತೀರ್ಪು ಪಡೆಯುತ್ತಾರೆ’ ಎಂದು ತಿಳಿಸಿದ್ದರು.

ಅವರ ಮಾತಿನ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರು ಹಾಜರಾಗುವುದಕ್ಕೆ, ಮಾಧವನ್ ಅವರು ದೆಹಲಿ ಪ್ರಯಾಣಿಸಲು, ಕೋರ್ಟ್‌ಗೆ ಹಾಜರಾಗಲು 14.60 ಲಕ್ಷ ರು. ಶುಲ್ಕವನ್ನು ಪಾವತಿಸಿದ್ದೇನೆ. ಆದರೆ, ಪ್ರಕರಣ 2016ರ ಏ.18ರಂದು ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದ ಸ್ಥಿತಿಗತಿ ತಿಳಿಯಲು ಆ ದಿನದ ಅಂತ್ಯದಲ್ಲಿ ಮಹದೇವನ್ ಅವರಿಗೆ ಕರೆ ಮಾಡಿದಾಗ ಸೂಕ್ತ ಮಾಹಿತಿ ನೀಡಲಿಲ್ಲ’ ಎಂದು ಆರೋಪಿಸಿದ್ದರು.

ಅಲ್ಲದೇ, ಮಹಾದೇವನ್ ಅವರ ಪ್ರಮಾಣಿಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪದಡಿ ಖಾಸಗಿ ದೂರು ದಾಖಲಿಸಿದ್ದರು. ಅದರ ರದ್ದತಿಗೆ ಕೋರಿ ಮಹದೇವನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಷರತ್ತು ಉಲ್ಲಂಘಿಸಿದ ನೈಜಿರಿಯಾ ಪ್ರಜೆಗೆ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.