ETV Bharat / state

ಹೈಕಮಾಂಡ್ ಮೂರನೇ ಆಯ್ಕೆ ಬಯಸಿದರೆ ಸಿಎಂ ಆಗಲು ನಾನು ಸಿದ್ಧ: ಪರಮೇಶ್ವರ್

author img

By

Published : May 17, 2023, 4:23 PM IST

75 ವರ್ಷಗಳಿಂದ ದಲಿತರು ಮತ ಹಾಕಿದ್ದಾರೆ. ಆದರೆ, ಹೈಕಮಾಂಡ್ ಜಾತಿ ಆಧಾರಿತವಾಗಿ ಸಿಎಂ ಆಯ್ಕೆ ಮಾಡಲ್ಲ. ದಲಿತ ಸಿಎಂ ಮಾಡಿ ಅಂತಾ ಕೇಳುವುದು ತಪ್ಪಾ? ಅಲ್ವಲ್ಲ. ಹೈಕಮಾಂಡ್ ಇದನ್ನು ಪರಿಗಣಿಸಬೇಕು ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಮನವಿ ಮಾಡಿದ್ದಾರೆ.

DCM Dr G Parameshwar
ಡಿಸಿಎಂ ಡಾ ಜಿ ಪರಮೇಶ್ವರ್

ಬೆಂಗಳೂರು: ಹೈಕಮಾಂಡ್​​ನಿಂದ ಮೂರನೇ ಆಯ್ಕೆ ಬಂದರೆ ನಾನು ಸಿದ್ದ ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಯಾವಾಗಲೂ ಸಿದ್ದವಾಗಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಇಂದು ಆಗಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ. ದಿಲ್ಲಿಗೆ ಬರುವಂತೆ ನನಗೆ ಬುಲಾವ್ ಬಂದಿಲ್ಲ, ಕೆಲವರು ಕರೆ‌ ಮಾತನಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಪಡೆದು ಹೋಗಿದ್ದಾರೆ. ಇವತ್ತು ಅಂತಿಮ ಆಗಬಹುದು ಎಂಬ ನಿರೀಕ್ಷೆಯಿದೆ ಎಂದು ತಿಳಿಸಿದರು.

ಆದಷ್ಟು ಬೇಗ ಸಿಎಂ ಹಾಗೂ ಸರ್ಕಾರದ ಬಗ್ಗೆ ತೀರ್ಮಾನ ಆಗಲಿದೆ. ಹೊರಗಡೆ ಚರ್ಚೆ ಬೇರೆ ಇರುತ್ತದೆ. ಒಳಗಡೆ ಬೇರೆ ನಡೆಯುತ್ತಿರುತ್ತದೆ. ಸ್ವಾಭಾವಿಕವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ಪಿ ಕೇಳುತ್ತಿದ್ದಾರೆ. ಅರ್ಹತೆ ಇರುವವರು ಇದ್ದಾರೆ. ಆದರೆ, ಇಬ್ಬರು ಓಡಾಡಿದ್ದಾರೆ. ಪಟ್ಟು ಹಿಡಿದಿದ್ದಾರೆ ಎಂಬುದು ಪ್ರಶ್ನೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ. ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ ಎಂದರು.

ದಲಿತ ಸಿಎಂ ಕೂಗಿನ ವಿಚಾರಕ್ಕೆ 75 ವರ್ಷಗಳಿಂದ ದಲಿತರು ಮತ ಹಾಕಿದ್ದಾರೆ. ನಿನ್ನೆ ತುಮಕೂರಿನ ಕೊರಟಗೆರೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಗೆ ಕೊಡಿ‌ ಎಂದು ಮನವಿ ಮಾಡಿದ್ದಾರೆ. ಕೇಳುವುದು ತಪ್ಪು ಎಂದು ನಾನು ಹೇಳಲ್ಲ.

ಆದರೆ ಹೈಕಮಾಂಡ್ ಜಾತಿ ಆಧಾರಿತವಾಗಿ ಸಿಎಂ ಆಯ್ಕೆ ಮಾಡಲ್ಲ. ದಲಿತ ಸಿಎಂ ಮಾಡಿ ಅಂತಾ ಕೇಳುವುದು ತಪ್ಪಾ? ಅಲ್ಲ. ಹೈಕಮಾಂಡ್ ಇದನ್ನು ಪರಿಗಣಿಸಲೇಬೇಕು. ಯಾಕೆ ಅಂದರೆ ದಲಿತ ಸಮುದಾಯದವರು ಈ ಪಕ್ಷಕ್ಕೆ ಮತವನ್ನು ಹಾಕ್ತಾನೆ ಬಂದಿದ್ದಾರೆ. ಆದ್ದರಿಂದ ಅವರ ಬೇಡಿಕೆಯನ್ನು ಹೈಕಮಾಂಡ್ ನಾಯಕರು ಪರಿಗಣಿಸಬೇಕಾಗುತ್ತೆ ಎಂದು ಮನವಿ ಮಾಡಿದರು.

ದಲಿತ ಸಿಎಂ ಅಂತಾ ನನಗೂ ಕರೆ ಬಂದಿತ್ತು. ಪ್ರತಿಭಟನೆ ಮಾಡುತ್ತೇವೆ ಎಂದು ಕರೆ ಮಾಡಿದ್ರು. ಪ್ರತಿಭಟನೆ ಮಾಡುತ್ತೇವೆ, ಗಲಾಟೆ ಮಾಡುತ್ತೇವೆ ಎಂದು ಹೇಳಿದ್ರು. ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ರು. ನಾನು ಅವರಿಗೆ ಹೇಳಿದೆ, ಬೇಡಪ್ಪಾ ಹಾಗೆಲ್ಲ ಮಾಡಬೇಡಿ. ಈ ಸಮಯದಲ್ಲಿ ನಾವು ಗೊಂದಲ ಸೃಷ್ಟಿಮಾಡಿಕೊಳ್ಳಬಾರದು. ಹೈಕಮಾಂಡ್ ನಾಯಕರು ಎಲ್ಲ ನೋಡುತ್ತಿರುತ್ತಾರೆ, ಅವರಿಗೆ ಎಲ್ಲ ಗೊತ್ತಿದೆ ಎಂದು ಹೇಳಿದ್ದೆ ಎಂದರು.

ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲವಿದೆ ಎಂದು ನಂಬರ್ ಹೇಳಿರುವ ವಿಚಾರಕ್ಕೆ ಮಾತನಾಡಿ, ಹೈಕಮಾಂಡ್ ಯಾರಿಗೆ ಎಷ್ಟು ಜನ ಬೆಂಬಲಿಸಿದ್ದಾರೆ ಎಂದು ಹೇಳಲ್ಲ. ಸಿದ್ದರಾಮಯ್ಯ ಅವರದ್ದು ಗೆಸಿಂಗ್ ನಂಬರ್ ಇರಬಹುದು. ಆ ಮೂಲಕ ತಮ್ಮ ಬಲ ಹೆಚ್ಚಾಗಿದೆ ಎಂದು ತೋರಿಸಿಕೊಳ್ಳಲು ಹೇಳಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ಯಾರಂಟಿ ಕಾರ್ಡ್​ಗೆ ಕಂಡಿಷನ್ಸ್ ಹಾಕಿಲ್ಲ:ಗ್ಯಾರಂಟಿ ಕಾರ್ಡ್ ಜಾರಿ ಕಂಡಿಷನ್ ಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗೆ ಎನು ಬೇಕಾದರೂ ಹೇಳಲಿ. ಬಿಜೆಪಿಯವರಿಗೆ ಇವತ್ತಿಗೂ ಬುದ್ದಿ ಬರಲ್ವ. ಜನ ಇಷ್ಟು ಬಹುಮತ ಕೊಟ್ಟಿದ್ದಾರೆ. ಇವತ್ತು ಚೀಪ್ ಕಮೆಂಟ್ ಮಾಡ್ತಾರೆ ಅಂದ್ರೆ, ಅವರು ಮನಸ್ಥಿತಿ ಗೊತ್ತಿಲ್ಲ.

ಕಂಡಿಷನ್ಸ್ ಹಾಕಿಲ್ಲ,ಪ್ರಕ್ರಿಯೆಗಳು ಮಾಡಬೇಕು ಅಲ್ವಾ? ಹಾಗೆ ಎಲ್ಲ ಮಾಡಬೇಕಾ? ನಾವು ಕಂಡಿಷನ್ಸ್ ನಾವು ಮಾಡಿಲ್ಲ. ನಿಯಮಗಳನ್ನು ಮಾಡಬೇಕು. ಯಾರಿಗೂ ವಿಧವಾ ವೇತನ, ಹಿರಿಯಗೆ ಪಿಂಚಣಿ ಕೊಡ್ತಾ ಇದ್ದೀವಿ. ಅವರಿಗೆ ಎರಡು ಸಾವಿರ ಕೊಟ್ಟರೆ ಡಬ್ಬಲ್ ಪೇಮೆಂಟ್ ಆಗುತ್ತೆ. ಇವೆಲ್ಲ ಪರಿಶೀಲನೆ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

ಪ್ರಕ್ರಿಯೆಗಳನ್ನು ಮಾಡಿಕೊಳ್ಳಬೇಕು. ಪದ್ದತಿ, ನಿಯಮ ಬೇಕು ಅಲ್ವ ಅದನ್ನು ಮಾಡ್ತೀವಿ. 200 ಯುನಿಟ್ ವಿದ್ಯುತ್ ಫ್ರೀ ಮಾಡ್ತೀವಿ ಅಂತ ಹೇಳಿದ್ದಿವಿ. 200 ಯುನಿಟ್ ಮೇಲೆ ಹೋದವರಿಗೆ ನಿಯಮ ಮಾಡಬೇಕು ಅಲ್ವ? ಯಾವುದೇ ಪ್ರಕ್ರಿಯೆ ಮಾಡಿಲ್ಲ. ಆರ್ಥಿಕ ಸ್ಥಿತಿ ಬಗ್ಗೆ ಏನಾಗುತ್ತೆ ಅಂತ ಮಾಡಿದ್ದೀವಿ. ನಿಯಮಗಳನ್ನು ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರನ್ನು ಸಿಎಂ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕೆಲವು ಕಡೆ ಬ್ರೇಕ್ ಆಗಿದೆ. 2013 ರಲ್ಲಿ ಕೆಪಿಸಿಸಿ ಪ್ರೆಸಿಡೆಂಟ್ ಸೋಲು ಕಂಡಿದ್ದರು. ಹಾಗಾಗಿ ಈ ರೀತಿಯ ಪ್ರಸಂಗ ಬಂದಿರಲಿಲ್ಲ. ಈಗ ಕೆಪಿಸಿಸಿ ಪ್ರೆಸಿಡೆಂಟ್ ಗೆದ್ದಿದ್ದಾರೆ. ಆದ್ದರಿಂದ ಪ್ರಸಂಗ ಬಂದಿದೆ ಎಂದ ಪರಮೇಶ್ವರ್ ಮಾಹಿತಿ ನೀಡಿದರು.

ಹೈಕಮಾಂಡ್ ಯಾವತ್ತು ಸ್ಟ್ರಾಂಗ್:ಸಿಎಂ ಆಯ್ಕೆಯಲ್ಲಿ ಹೈಕಮಾಂಡ್ ವೀಕ್ ಎಂಬ ವಿಚಾರಕ್ಕೆ ಮಾತನಾಡಿ, ಹೈಕಮಾಂಡ್ ಯಾವತ್ತು ಸ್ಟ್ರಾಂಗ್ ಆಗಿ ಇರುತ್ತೆ. ಸಾಂದರ್ಭಿಕವಾಗಿ ತೀರ್ಮಾನ ಮಾಡ್ತಾರೆ. ಅವರು ಯಾರು ಒಬ್ಬರ ಹೆಸರು ಹೇಳಬಹುದು. ಸಮಾಧಾನಕರವಾಗಿ ಎಲ್ಲ ಅಂತ್ಯ ಆಗಬೇಕು. ಸಂಘರ್ಷ ರೀತಿ ಆಗಬಾರದು. ಮುಂದಿನ ದಿನಗಳಲ್ಲಿ ಅದು ಒಳ್ಳೆಯದು ಆಗಲ್ಲ. ನಾವಾಗಿಯೇ ಅದನ್ನ ಕ್ರಿಕೆಟ್ ಮಾಡಿದಾಗೆ ಆಗುತ್ತೆ. ಒಂದು ದಿನ ಹೆಚ್ಚಿನ ಸಮಯ ತೆಗೆದುಕೊಂಡು ನಿರ್ಧಾರ ಆಗುತ್ತೆ. ವೀಕ್ ಹೈಕಮಾಂಡ್ ಇರಲ್ಲ ಎಂದಿದ್ದಾರೆ.

ಇದನ್ನೂಓದಿ:ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತ ಚರ್ಚೆ ಆರಂಭ: ಮುಂಚೂಣಿಯಲ್ಲಿ ಬೊಮ್ಮಾಯಿ‌ ಹೆಸರು

ಬೆಂಗಳೂರು: ಹೈಕಮಾಂಡ್​​ನಿಂದ ಮೂರನೇ ಆಯ್ಕೆ ಬಂದರೆ ನಾನು ಸಿದ್ದ ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಯಾವಾಗಲೂ ಸಿದ್ದವಾಗಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಇಂದು ಆಗಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ. ದಿಲ್ಲಿಗೆ ಬರುವಂತೆ ನನಗೆ ಬುಲಾವ್ ಬಂದಿಲ್ಲ, ಕೆಲವರು ಕರೆ‌ ಮಾತನಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಪಡೆದು ಹೋಗಿದ್ದಾರೆ. ಇವತ್ತು ಅಂತಿಮ ಆಗಬಹುದು ಎಂಬ ನಿರೀಕ್ಷೆಯಿದೆ ಎಂದು ತಿಳಿಸಿದರು.

ಆದಷ್ಟು ಬೇಗ ಸಿಎಂ ಹಾಗೂ ಸರ್ಕಾರದ ಬಗ್ಗೆ ತೀರ್ಮಾನ ಆಗಲಿದೆ. ಹೊರಗಡೆ ಚರ್ಚೆ ಬೇರೆ ಇರುತ್ತದೆ. ಒಳಗಡೆ ಬೇರೆ ನಡೆಯುತ್ತಿರುತ್ತದೆ. ಸ್ವಾಭಾವಿಕವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ಪಿ ಕೇಳುತ್ತಿದ್ದಾರೆ. ಅರ್ಹತೆ ಇರುವವರು ಇದ್ದಾರೆ. ಆದರೆ, ಇಬ್ಬರು ಓಡಾಡಿದ್ದಾರೆ. ಪಟ್ಟು ಹಿಡಿದಿದ್ದಾರೆ ಎಂಬುದು ಪ್ರಶ್ನೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ. ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ ಎಂದರು.

ದಲಿತ ಸಿಎಂ ಕೂಗಿನ ವಿಚಾರಕ್ಕೆ 75 ವರ್ಷಗಳಿಂದ ದಲಿತರು ಮತ ಹಾಕಿದ್ದಾರೆ. ನಿನ್ನೆ ತುಮಕೂರಿನ ಕೊರಟಗೆರೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಗೆ ಕೊಡಿ‌ ಎಂದು ಮನವಿ ಮಾಡಿದ್ದಾರೆ. ಕೇಳುವುದು ತಪ್ಪು ಎಂದು ನಾನು ಹೇಳಲ್ಲ.

ಆದರೆ ಹೈಕಮಾಂಡ್ ಜಾತಿ ಆಧಾರಿತವಾಗಿ ಸಿಎಂ ಆಯ್ಕೆ ಮಾಡಲ್ಲ. ದಲಿತ ಸಿಎಂ ಮಾಡಿ ಅಂತಾ ಕೇಳುವುದು ತಪ್ಪಾ? ಅಲ್ಲ. ಹೈಕಮಾಂಡ್ ಇದನ್ನು ಪರಿಗಣಿಸಲೇಬೇಕು. ಯಾಕೆ ಅಂದರೆ ದಲಿತ ಸಮುದಾಯದವರು ಈ ಪಕ್ಷಕ್ಕೆ ಮತವನ್ನು ಹಾಕ್ತಾನೆ ಬಂದಿದ್ದಾರೆ. ಆದ್ದರಿಂದ ಅವರ ಬೇಡಿಕೆಯನ್ನು ಹೈಕಮಾಂಡ್ ನಾಯಕರು ಪರಿಗಣಿಸಬೇಕಾಗುತ್ತೆ ಎಂದು ಮನವಿ ಮಾಡಿದರು.

ದಲಿತ ಸಿಎಂ ಅಂತಾ ನನಗೂ ಕರೆ ಬಂದಿತ್ತು. ಪ್ರತಿಭಟನೆ ಮಾಡುತ್ತೇವೆ ಎಂದು ಕರೆ ಮಾಡಿದ್ರು. ಪ್ರತಿಭಟನೆ ಮಾಡುತ್ತೇವೆ, ಗಲಾಟೆ ಮಾಡುತ್ತೇವೆ ಎಂದು ಹೇಳಿದ್ರು. ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ರು. ನಾನು ಅವರಿಗೆ ಹೇಳಿದೆ, ಬೇಡಪ್ಪಾ ಹಾಗೆಲ್ಲ ಮಾಡಬೇಡಿ. ಈ ಸಮಯದಲ್ಲಿ ನಾವು ಗೊಂದಲ ಸೃಷ್ಟಿಮಾಡಿಕೊಳ್ಳಬಾರದು. ಹೈಕಮಾಂಡ್ ನಾಯಕರು ಎಲ್ಲ ನೋಡುತ್ತಿರುತ್ತಾರೆ, ಅವರಿಗೆ ಎಲ್ಲ ಗೊತ್ತಿದೆ ಎಂದು ಹೇಳಿದ್ದೆ ಎಂದರು.

ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲವಿದೆ ಎಂದು ನಂಬರ್ ಹೇಳಿರುವ ವಿಚಾರಕ್ಕೆ ಮಾತನಾಡಿ, ಹೈಕಮಾಂಡ್ ಯಾರಿಗೆ ಎಷ್ಟು ಜನ ಬೆಂಬಲಿಸಿದ್ದಾರೆ ಎಂದು ಹೇಳಲ್ಲ. ಸಿದ್ದರಾಮಯ್ಯ ಅವರದ್ದು ಗೆಸಿಂಗ್ ನಂಬರ್ ಇರಬಹುದು. ಆ ಮೂಲಕ ತಮ್ಮ ಬಲ ಹೆಚ್ಚಾಗಿದೆ ಎಂದು ತೋರಿಸಿಕೊಳ್ಳಲು ಹೇಳಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ಯಾರಂಟಿ ಕಾರ್ಡ್​ಗೆ ಕಂಡಿಷನ್ಸ್ ಹಾಕಿಲ್ಲ:ಗ್ಯಾರಂಟಿ ಕಾರ್ಡ್ ಜಾರಿ ಕಂಡಿಷನ್ ಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗೆ ಎನು ಬೇಕಾದರೂ ಹೇಳಲಿ. ಬಿಜೆಪಿಯವರಿಗೆ ಇವತ್ತಿಗೂ ಬುದ್ದಿ ಬರಲ್ವ. ಜನ ಇಷ್ಟು ಬಹುಮತ ಕೊಟ್ಟಿದ್ದಾರೆ. ಇವತ್ತು ಚೀಪ್ ಕಮೆಂಟ್ ಮಾಡ್ತಾರೆ ಅಂದ್ರೆ, ಅವರು ಮನಸ್ಥಿತಿ ಗೊತ್ತಿಲ್ಲ.

ಕಂಡಿಷನ್ಸ್ ಹಾಕಿಲ್ಲ,ಪ್ರಕ್ರಿಯೆಗಳು ಮಾಡಬೇಕು ಅಲ್ವಾ? ಹಾಗೆ ಎಲ್ಲ ಮಾಡಬೇಕಾ? ನಾವು ಕಂಡಿಷನ್ಸ್ ನಾವು ಮಾಡಿಲ್ಲ. ನಿಯಮಗಳನ್ನು ಮಾಡಬೇಕು. ಯಾರಿಗೂ ವಿಧವಾ ವೇತನ, ಹಿರಿಯಗೆ ಪಿಂಚಣಿ ಕೊಡ್ತಾ ಇದ್ದೀವಿ. ಅವರಿಗೆ ಎರಡು ಸಾವಿರ ಕೊಟ್ಟರೆ ಡಬ್ಬಲ್ ಪೇಮೆಂಟ್ ಆಗುತ್ತೆ. ಇವೆಲ್ಲ ಪರಿಶೀಲನೆ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

ಪ್ರಕ್ರಿಯೆಗಳನ್ನು ಮಾಡಿಕೊಳ್ಳಬೇಕು. ಪದ್ದತಿ, ನಿಯಮ ಬೇಕು ಅಲ್ವ ಅದನ್ನು ಮಾಡ್ತೀವಿ. 200 ಯುನಿಟ್ ವಿದ್ಯುತ್ ಫ್ರೀ ಮಾಡ್ತೀವಿ ಅಂತ ಹೇಳಿದ್ದಿವಿ. 200 ಯುನಿಟ್ ಮೇಲೆ ಹೋದವರಿಗೆ ನಿಯಮ ಮಾಡಬೇಕು ಅಲ್ವ? ಯಾವುದೇ ಪ್ರಕ್ರಿಯೆ ಮಾಡಿಲ್ಲ. ಆರ್ಥಿಕ ಸ್ಥಿತಿ ಬಗ್ಗೆ ಏನಾಗುತ್ತೆ ಅಂತ ಮಾಡಿದ್ದೀವಿ. ನಿಯಮಗಳನ್ನು ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರನ್ನು ಸಿಎಂ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕೆಲವು ಕಡೆ ಬ್ರೇಕ್ ಆಗಿದೆ. 2013 ರಲ್ಲಿ ಕೆಪಿಸಿಸಿ ಪ್ರೆಸಿಡೆಂಟ್ ಸೋಲು ಕಂಡಿದ್ದರು. ಹಾಗಾಗಿ ಈ ರೀತಿಯ ಪ್ರಸಂಗ ಬಂದಿರಲಿಲ್ಲ. ಈಗ ಕೆಪಿಸಿಸಿ ಪ್ರೆಸಿಡೆಂಟ್ ಗೆದ್ದಿದ್ದಾರೆ. ಆದ್ದರಿಂದ ಪ್ರಸಂಗ ಬಂದಿದೆ ಎಂದ ಪರಮೇಶ್ವರ್ ಮಾಹಿತಿ ನೀಡಿದರು.

ಹೈಕಮಾಂಡ್ ಯಾವತ್ತು ಸ್ಟ್ರಾಂಗ್:ಸಿಎಂ ಆಯ್ಕೆಯಲ್ಲಿ ಹೈಕಮಾಂಡ್ ವೀಕ್ ಎಂಬ ವಿಚಾರಕ್ಕೆ ಮಾತನಾಡಿ, ಹೈಕಮಾಂಡ್ ಯಾವತ್ತು ಸ್ಟ್ರಾಂಗ್ ಆಗಿ ಇರುತ್ತೆ. ಸಾಂದರ್ಭಿಕವಾಗಿ ತೀರ್ಮಾನ ಮಾಡ್ತಾರೆ. ಅವರು ಯಾರು ಒಬ್ಬರ ಹೆಸರು ಹೇಳಬಹುದು. ಸಮಾಧಾನಕರವಾಗಿ ಎಲ್ಲ ಅಂತ್ಯ ಆಗಬೇಕು. ಸಂಘರ್ಷ ರೀತಿ ಆಗಬಾರದು. ಮುಂದಿನ ದಿನಗಳಲ್ಲಿ ಅದು ಒಳ್ಳೆಯದು ಆಗಲ್ಲ. ನಾವಾಗಿಯೇ ಅದನ್ನ ಕ್ರಿಕೆಟ್ ಮಾಡಿದಾಗೆ ಆಗುತ್ತೆ. ಒಂದು ದಿನ ಹೆಚ್ಚಿನ ಸಮಯ ತೆಗೆದುಕೊಂಡು ನಿರ್ಧಾರ ಆಗುತ್ತೆ. ವೀಕ್ ಹೈಕಮಾಂಡ್ ಇರಲ್ಲ ಎಂದಿದ್ದಾರೆ.

ಇದನ್ನೂಓದಿ:ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತ ಚರ್ಚೆ ಆರಂಭ: ಮುಂಚೂಣಿಯಲ್ಲಿ ಬೊಮ್ಮಾಯಿ‌ ಹೆಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.