ETV Bharat / state

ಜೇನುನೊಣಗಳ ಸಂತತಿ ಕ್ಷೀಣ! ರೈತರಿಗೆ ಸಂಕಷ್ಟ...! ಇದಕ್ಕೆ ಕಾರಣವೇನು?

ಬೇಡಿಕೆ ಹೆಚ್ಚಾದಂತೆ ಹಲವರು ಕಾಡಿಗೆ ನುಗ್ಗಿ ಜೇನು ಸಂಗ್ರಹಿಸಿ ಮಾರುಕಟ್ಟೆಗೆ ನೀಡಲು ಮುಂದಾಗಿದ್ದಾರೆ. ಜೇನು‌ ತೆಗೆಯುವಾಗ ಸರಿಯಾದ ವಿಧಾನ ಗೊತ್ತಿರದೇ ಜೇನುನೊಣಗಳಿಗೆ ಹಾನಿ ಮಾಡಲಾಗುತ್ತಿದೆ.

author img

By

Published : Jun 27, 2019, 12:02 PM IST

ಮಕರಂದ ಹೀರುವ ಜೇನುನೊಣಗಳ ಸಂತತಿ ಕ್ಷೀಣ

ಬೆಂಗಳೂರು: ರೈತನ ಜೊತೆಗಾರ, ಕೃಷಿ ಕ್ಷೇತ್ರದ ಬಹು ದೊಡ್ಡ ಪಾಲುದಾರವಾಗಿರುವ ಜೇನುನೊಣಗಳು ದಿನೇ ದಿನೆ ನಗರೀಕರಣವಾದಂತೆ ನಶಿಸುವ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳಿಂದ ಜೇನುನೊಣ ಸಂರಕ್ಷಣೆಯ ಕೂಗು ಕೇಳಿ ಬರುತ್ತಿದೆ.

ಹೌದು, ಜೇನುನೊಣಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಆತಂಕಗೊಂಡಿರುವ ಪರಿಸರವಾದಿಗಳು ಜೇನುನೊಣವನ್ನು ರಾಜ್ಯ ಕೀಟವಾಗಿ ಮಾಡಿ ಆ ಮೂಲಕ ಒಂದು ಕಠಿಣ ಕಾನೂನು ತರುವಂತೆ ಸರ್ಕಾರಕ್ಕೆ ಕರೆ ನೀಡುತ್ತಿದ್ದಾರೆ.

ಹಿಂದೆಯೂ ಈ ವಿಚಾರವಾಗಿ ಸಾಕಷ್ಟು ತಜ್ಞರು ಎಚ್ಚರಿಕೆ ನೀಡಿದರು. ಜೇನುನೊಣಗಳಿಂದ ನೈಸರ್ಗಿಕವಾಗಿ ನಡೆಯುತ್ತಿದ್ದ ಪ್ರಕ್ರಿಯೆಯನ್ನ ಈಗ ನಾವೇ ಸೃಷ್ಟಿ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೇ ಜೇನುನೊಣಗಳ ಉಳಿಯುವಿಕೆ‌ ಬಹಳ ಮುಖ್ಯವಾದದು.‌ ಕೃಷಿಕರಿಗೆ ಕೃಷಿ ಕೆಲಸದಲ್ಲಿ ‌ಉತ್ತಮ ಪಾತ್ರವಹಿಸುವುದೇ ಈ ಜೇನುನೊಣಗಳು. ಇದೀಗ ಜೇನುಹುಳುಗಳು ಕಣ್ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಚ್ಚರಿಯಾದರೂ ಇದು ಸತ್ಯ. ಮಾರುಕಟ್ಟೆಯಲ್ಲಿ ಜೇನುತುಪ್ಪಕ್ಕೆ ಸಾಕಷ್ಟು ಬೇಡಿಕೆ ಇದೆ.‌ ಇತ್ತೀಚೆಗೆ ಜೇನುಹನಿ ಡಯಟ್ ಫುಡ್​ಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದೆ ಎಂದು ಅರಿತ ಕಂಪನಿಗಳು, ಇದನ್ನೇ ಬಂಡವಾಳ ಮಾಡಿಕೊಂಡು ಜಾಹೀರಾತಿನ ಮೂಲಕ ಕಾಡಿನಲ್ಲಿ ಸಂಗ್ರಹಿಸಿರುವ ಜೇನು ಲಭ್ಯ ಎಂದು ಜಾಹೀರಾತು ನೀಡುತ್ತಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಬೇಡಿಕೆ ಹೆಚ್ಚಾದಂತೆ ಹಲವರು ಕಾಡಿಗೆ ನುಗ್ಗಿ ಜೇನು ಸಂಗ್ರಹಿಸಿ ಮಾರುಕಟ್ಟೆಗೆ ನೀಡಲು ಮುಂದಾಗಿದ್ದಾರೆ. ಜೇನು‌ ತೆಗೆಯುವಾಗ ಸರಿಯಾದ ವಿಧಾನ ಗೊತ್ತಿರದೇ ಜೇನುನೊಣಗಳಿಗೆ ಹಾನಿ ಮಾಡಲಾಗುತ್ತಿದೆ. ಆದ್ದರಿಂದ ಜೇನುನೊಣಗಳ ಉಳಿಯುವಿಕೆಗೆ ಮುಖ್ಯವಾಗಿ ಕಾಡಿನಲ್ಲಿ ಜೇನು ತೆಗೆಯುವುದನ್ನ ನಿಷೇಧಿಸಬೇಕು. ಆದಷ್ಟು ಜೇನುಪೆಟ್ಟಿಗೆ ಕ್ರಮಕ್ಕೆ ಪ್ರೋತ್ಸಾಹಿಸುವುದರಿಂದ ನೊಣಗಳ ಸಂತತಿ ಉಳಿಯಲು ಸಾಧ್ಯ ಅಂತಾರೆ ತಜ್ಞರು.

1980 ರಲ್ಲಿ ನಾಶವಾಗಿತ್ತು ಜೇನುನೊಣಗಳು:

1980 ರಲ್ಲಿ ತಾಥಯ್ ಸಾಕ್ ಬ್ರೂಡ್ ಎಂಬ ಕಾಯಿಲೆ ಬಂದು ಸಾಕಷ್ಟು ಜೇನುಹುಳುಗಳು ನಾಶವಾಗಿದ್ದವು.‌ ಮೈಸೂರು, ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸತ್ತುಹೋಗಿದ್ದವು. ನಂತರದ ದಿನಗಳಲ್ಲಿ ಮತ್ತೆ ಸಂತತಿ ಹೆಚ್ಚಿತ್ತು. ಆದರೆ, ಈಗ ಇಡೀ ಪ್ರಪಂಚದಲ್ಲಿ ಜೇನುನೊಣಗಳಿಗೆ ಬಾಧಿಸುವ ಕಾಲೋನಿ ಕೊಲೊಪ್ಸ್ ಡಿಸಾರ್ಡರ್ ಎಂಬ ಕಾಯಿಲೆ ಬಂದಿದ್ದು, ಈ ಕಾಯಿಲೆಗೆ ಕಾರಣವಾಗುತ್ತಿರುವುದು. ಕೃಷಿ ಕೆಲಸಗಳಲ್ಲಿ ಬಳಸುವ ರಾಸಾಯನಿಕ ಸಿಂಪಡಣೆ ಹಾಗೂ ಅತೀ ಹೆಚ್ಚು ಮಲೀನ ಎನ್ನಲಾಗುತ್ತಿದೆ. ಆದ್ದರಿಂದ ಜೇನುಹುಳುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಬೆಂಗಳೂರು: ರೈತನ ಜೊತೆಗಾರ, ಕೃಷಿ ಕ್ಷೇತ್ರದ ಬಹು ದೊಡ್ಡ ಪಾಲುದಾರವಾಗಿರುವ ಜೇನುನೊಣಗಳು ದಿನೇ ದಿನೆ ನಗರೀಕರಣವಾದಂತೆ ನಶಿಸುವ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳಿಂದ ಜೇನುನೊಣ ಸಂರಕ್ಷಣೆಯ ಕೂಗು ಕೇಳಿ ಬರುತ್ತಿದೆ.

ಹೌದು, ಜೇನುನೊಣಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಆತಂಕಗೊಂಡಿರುವ ಪರಿಸರವಾದಿಗಳು ಜೇನುನೊಣವನ್ನು ರಾಜ್ಯ ಕೀಟವಾಗಿ ಮಾಡಿ ಆ ಮೂಲಕ ಒಂದು ಕಠಿಣ ಕಾನೂನು ತರುವಂತೆ ಸರ್ಕಾರಕ್ಕೆ ಕರೆ ನೀಡುತ್ತಿದ್ದಾರೆ.

ಹಿಂದೆಯೂ ಈ ವಿಚಾರವಾಗಿ ಸಾಕಷ್ಟು ತಜ್ಞರು ಎಚ್ಚರಿಕೆ ನೀಡಿದರು. ಜೇನುನೊಣಗಳಿಂದ ನೈಸರ್ಗಿಕವಾಗಿ ನಡೆಯುತ್ತಿದ್ದ ಪ್ರಕ್ರಿಯೆಯನ್ನ ಈಗ ನಾವೇ ಸೃಷ್ಟಿ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೇ ಜೇನುನೊಣಗಳ ಉಳಿಯುವಿಕೆ‌ ಬಹಳ ಮುಖ್ಯವಾದದು.‌ ಕೃಷಿಕರಿಗೆ ಕೃಷಿ ಕೆಲಸದಲ್ಲಿ ‌ಉತ್ತಮ ಪಾತ್ರವಹಿಸುವುದೇ ಈ ಜೇನುನೊಣಗಳು. ಇದೀಗ ಜೇನುಹುಳುಗಳು ಕಣ್ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಚ್ಚರಿಯಾದರೂ ಇದು ಸತ್ಯ. ಮಾರುಕಟ್ಟೆಯಲ್ಲಿ ಜೇನುತುಪ್ಪಕ್ಕೆ ಸಾಕಷ್ಟು ಬೇಡಿಕೆ ಇದೆ.‌ ಇತ್ತೀಚೆಗೆ ಜೇನುಹನಿ ಡಯಟ್ ಫುಡ್​ಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದೆ ಎಂದು ಅರಿತ ಕಂಪನಿಗಳು, ಇದನ್ನೇ ಬಂಡವಾಳ ಮಾಡಿಕೊಂಡು ಜಾಹೀರಾತಿನ ಮೂಲಕ ಕಾಡಿನಲ್ಲಿ ಸಂಗ್ರಹಿಸಿರುವ ಜೇನು ಲಭ್ಯ ಎಂದು ಜಾಹೀರಾತು ನೀಡುತ್ತಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಬೇಡಿಕೆ ಹೆಚ್ಚಾದಂತೆ ಹಲವರು ಕಾಡಿಗೆ ನುಗ್ಗಿ ಜೇನು ಸಂಗ್ರಹಿಸಿ ಮಾರುಕಟ್ಟೆಗೆ ನೀಡಲು ಮುಂದಾಗಿದ್ದಾರೆ. ಜೇನು‌ ತೆಗೆಯುವಾಗ ಸರಿಯಾದ ವಿಧಾನ ಗೊತ್ತಿರದೇ ಜೇನುನೊಣಗಳಿಗೆ ಹಾನಿ ಮಾಡಲಾಗುತ್ತಿದೆ. ಆದ್ದರಿಂದ ಜೇನುನೊಣಗಳ ಉಳಿಯುವಿಕೆಗೆ ಮುಖ್ಯವಾಗಿ ಕಾಡಿನಲ್ಲಿ ಜೇನು ತೆಗೆಯುವುದನ್ನ ನಿಷೇಧಿಸಬೇಕು. ಆದಷ್ಟು ಜೇನುಪೆಟ್ಟಿಗೆ ಕ್ರಮಕ್ಕೆ ಪ್ರೋತ್ಸಾಹಿಸುವುದರಿಂದ ನೊಣಗಳ ಸಂತತಿ ಉಳಿಯಲು ಸಾಧ್ಯ ಅಂತಾರೆ ತಜ್ಞರು.

1980 ರಲ್ಲಿ ನಾಶವಾಗಿತ್ತು ಜೇನುನೊಣಗಳು:

1980 ರಲ್ಲಿ ತಾಥಯ್ ಸಾಕ್ ಬ್ರೂಡ್ ಎಂಬ ಕಾಯಿಲೆ ಬಂದು ಸಾಕಷ್ಟು ಜೇನುಹುಳುಗಳು ನಾಶವಾಗಿದ್ದವು.‌ ಮೈಸೂರು, ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸತ್ತುಹೋಗಿದ್ದವು. ನಂತರದ ದಿನಗಳಲ್ಲಿ ಮತ್ತೆ ಸಂತತಿ ಹೆಚ್ಚಿತ್ತು. ಆದರೆ, ಈಗ ಇಡೀ ಪ್ರಪಂಚದಲ್ಲಿ ಜೇನುನೊಣಗಳಿಗೆ ಬಾಧಿಸುವ ಕಾಲೋನಿ ಕೊಲೊಪ್ಸ್ ಡಿಸಾರ್ಡರ್ ಎಂಬ ಕಾಯಿಲೆ ಬಂದಿದ್ದು, ಈ ಕಾಯಿಲೆಗೆ ಕಾರಣವಾಗುತ್ತಿರುವುದು. ಕೃಷಿ ಕೆಲಸಗಳಲ್ಲಿ ಬಳಸುವ ರಾಸಾಯನಿಕ ಸಿಂಪಡಣೆ ಹಾಗೂ ಅತೀ ಹೆಚ್ಚು ಮಲೀನ ಎನ್ನಲಾಗುತ್ತಿದೆ. ಆದ್ದರಿಂದ ಜೇನುಹುಳುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

Intro:ಮಕರಂದ ಹೀರುವ ಜೇನುನೊಣಗಳ ಸಂತತಿ ಕ್ಷೀಣ; ಮಾರುಕಟ್ಟೆಯ ಬಗೆಬಗೆಯ ಜಾಹೀರಾತೇ ಇದಕ್ಕೆ‌ ಕಾರಣನಾ???

ಬೆಂಗಳೂರು: ರೈತನ ಜೊತೆಗಾರನಾಗಿದ್ದು, ಕೃಷಿ ಕ್ಷೇತ್ರಕ್ಕೆ‌ ಬಹು ದೊಡ್ಡ ಪಾಲುದಾರರಾಗಿರೋದು ಜೇನುನೊಣಗಳು.. ದಿನೇ ದಿನೇ ನಗರೀಕರಣ ವಾದಂತೆ ಇದೀಗ ಜೇನುನೊಣಗಳು ನಶಿಸುವ ಹಂತಕ್ಕೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳಿಂದ ಈಗ ಜೇನುನೊಣ ಸಂರಕ್ಷಣೆ ಮಾಡುವಂತೆ ಕೂಗು ಕೇಳಿ ಬರುತ್ತಿದೆ.. ಜೇನುನೊಣಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಆತಂಕಗೊಂಡಿರುವ ಪರಿಸರವಾದಿಗಳು ಜೇನುನೊಣವನ್ನು ರಾಜ್ಯ ಕೀಟವಾಗಿ ಮಾಡಿ ಆ ಮೂಲಕ ಒಂದು ಕಠಿಣ ಕಾನೂನು ತರುವಂತೆ ಸರ್ಕಾರಕ್ಕೆ ಕರೆ ನೀಡುತ್ತಿದ್ದಾರೆ..

ಈ ಹಿಂದೆಯು ಈ ವಿಚಾರವಾಗಿ ಸಾಕಷ್ಟು ತಜ್ಞರು ಎಚ್ಚರಿಕೆಯನ್ನು ನೀಡಿದರು..‌ ಜೇನುನೊಣಗಳಿಂದ ನೈಸರ್ಗಿಕವಾಗಿ ನಡೆಯುತ್ತಿದ್ದ ಪ್ರಕ್ರಿಯೆಯನ್ನ ಈಗ ನಾವೇ ಸೃಷ್ಟಿ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಅಂತ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ..‌

ಅಂದಹಾಗೇ ಜೇನುನೊಣಗಳ ಉಳಿಯುವಿಕೆ‌ ಬಹಳ ಮುಖ್ಯವಾದದು.‌ ಕೃಷಿಕರಿಗೆ ಕೃಷಿ ಕೆಲಸದಲ್ಲಿ ‌ಉತ್ತಮ ಪಾತ್ರವಹಿಸುವುದೇ ಈ ಜೇನುನೊಣಗಳು..‌ ಇದೀಗ ಜೇನುಹುಳುಗಳು ಕಣ್ಮರೆಯಾಗುವ ಪರಿಸ್ಥಿತಿಗೆ ಕಾರಣವಾಗಿ ಇರುವುದು ಮಾರುಕಟ್ಟೆಯಲ್ಲಿ ಬರುವ ಬಗೆಬಗೆಯ ಬಣ್ಣ ಬಣ್ಣದ ಜಾಹೀರಾತುಗಳು.. ಹೌದು, ಮಾರುಕಟ್ಟೆಯಲ್ಲಿ ಜೇನಿನ‌ಹನಿಗೆ ಸಾಕಷ್ಟು ಬೇಡಿಕೆ ಇದೆ..‌ ಇತ್ತೀಚೆಗೆ ಜೇನುಹನಿ ಟಯಟ್ ಫುಡ್ ಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದೆ... ಇದನ್ನೇ ಬಂಡವಾಳ ಮಾಡಿಕೊಂಡಿರುವ ದೇಸಿ ಕಂಪೆನಿಗಳು, ಜಾಹಿರಾತಿನ ಮೂಲಕ ಕಾಡಿನಲ್ಲಿ ಸಂಗ್ರಹಿಸಿರುವ ಜೇನು ಎಲ್ಲವೂ ಲಭ್ಯವೆಂದು ಲೇಬಲ್ ಜಾಹೀರಾತು ನೀಡುತ್ತಿರುವುದು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ..

ಹಾಗೇ ಜೇನುನೊಣಗಳ ವಾಸಸ್ಥಾನಕ್ಕೆ ಕುತ್ತು ಉಂಟಾಗಿದ್ದು, ಹಲವರು ಕಾಡಿಗೆ ನುಗ್ಗಿ ಜೇನು ಸಂಗ್ರಹಿಸುವುದು ಹೆಚ್ಚಾಗಿದೆ..ಜೊತೆಗೆ ಗೂಡಿನಲ್ಲಿ
ಜೇನು‌ ತೆಗೆಯುವಾಗ ಸರಿಯಾದ ವಿಧಾನವೂ ಗೊತ್ತಿರದೇ ಜೇನುನೊಣಗಳಿಗೆ ಹಾನಿ ಮಾಡಲಾಗುತ್ತಿದೆಯಂತೆ.. ಜೇನುನೊಣಗಳು ನಶಿಸದಂತೆ ಉಳಿಯುವಿಕೆಗೆ ಮುಖ್ಯವಾಗಿ ಕಾಡಿನಲ್ಲಿ ಜೇನು ತೆಗೆಯುವುದನ್ನ ನಿಷೇಧಿಸುವುದು.. ಅದಷ್ಟು ಜೇನು ಪೆಟ್ಟಿಗೆ ಕ್ರಮಕ್ಕೆ ಪ್ರೋತ್ಸಾಹಿಸುವುದರಿಂದ ನೊಣಗಳ ಸಂತತಿ ಸಾಧ್ಯ ಅಂತಾರೆ ತಜ್ಞರು..

*1980 ರ ಸಮಯದಲ್ಲಿ ಕಾಯಿಲೆಗೆ ತುತ್ತಾಗಿ ನಾಶವಾಗಿತ್ತು ಜೇನುನೊಣಗಳು*

1980 ರಲ್ಲಿ ತಾಥಯ್ ಸಾಕ್ ಬ್ರೂಡ್ ಎಂಬ ಕಾಯಿಲೆ ಬಂದು ಸಾಕಷ್ಟು ಜೇನುಹುಳುಗಳು ನಾಶವಾಗಿತ್ತು.‌ ಮೈಸೂರು, ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸತ್ತುಹೋಗಿದ್ವು.. ನಂತರದ ದಿನಗಳಲ್ಲಿ ಕ್ರಮೇಣವಾಗಿ ಮತ್ತೆ ಸಂತತಿ ಹೆಚ್ಚಿತ್ತು.. ಆದರೆ ಈಗ ಇಡೀ ಪ್ರಪಂಚದಲ್ಲಿ ಜೇನುನೊಣಗಳಿಗೆ ಬಾದಿಸುವ ಒಂದು ಕಾಯಿಲೆ ಇದ್ದು, ಅದುವೇ ಕಾಲೋನಿ ಕೊಲೊಪ್ಸ್ ಡಿಸಾರ್ಡರ್..‌ಈ ಕಾಯಿಲೆ ಬಂದರೆ ಜೇನುಹುಳು ಸಾವನ್ನಪ್ಪುತ್ತೆ..‌ ಇದಕ್ಕೆ‌ ಕಾರಣವಾಗಿದ್ದು ಮತ್ತೆ ಅದೇ ಕೃಷಿ ಕೆಲಸಗಳಲ್ಲಿ ಬಳಸುವ ರಾಸಾಯನಿಕ ಸಿಂಪಡಣೆ, ಅತೀ ಹೆಚ್ಚು ಮಲೀನದಿಂದಾಗಿ ಕಾಲೋನಿ ಕೊಲೊಪ್ಸ್ ಡಿಸಾರ್ಡರ್ ಹೆಚ್ಚಾಗುವ ಸಂಭವವಿದೆ...

ಒಟ್ಟಾರೆ,, ಕೃಷಿ ಗೆ ನೀರು ಎಷ್ಟು ಮುಖ್ಯವೋ ಜೇನುನೊಣಗಳ ಪಾತ್ರವೂ ಅಷ್ಟೇ ಮುಖ್ಯ.. ಸದ್ಯ ಜೇನು ನೊಣಗಳ ಉಳಿವಿಕೆ ಪರಿಸರ ತಜ್ಞರಿಂದ ಎಚ್ಚರಿಕೆ ಬಂದಿದ್ದು, ಅರಣ್ಯ ಇಲಾಖೆ ಮತ್ತು ಸರ್ಕಾರ ಈ ಸಂಬಂಧ ಗಂಭೀರವಾಗಿ ಚಿಂತಿಸಬೇಕಿದೆ.. ಜೇನುಹುಳು ನಶಿಸಿ‌ಹೋದರೆ,
ಮುಂದೊಂದು ದಿನ ಬಹುದೊಡ್ಡ ದುರಂತಕ್ಕೆ ಕಾರಣವಾಗಲಿದೆ...

KN_BNG_04_26_HONEYCOMB_SCRIPT_7201801

ವಿಡಿಯೋ ಫೈಲ್ ಶಾರ್ಟ್ ಬಳಿಸಿಕೊಳ್ಳಿ...‌
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.