ETV Bharat / state

ಜೀವಿತಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗೆ ಮಗಳೊಂದಿಗಿರಲು ಒಂದು ತಿಂಗಳು ಪೆರೋಲ್ ಮಂಜೂರು ಮಾಡಿದ ಹೈಕೋರ್ಟ್

author img

By ETV Bharat Karnataka Team

Published : Nov 7, 2023, 10:38 PM IST

ಅಪ್ರಾಪ್ತೆಯ ಅಪಹರಣ ಮತ್ತು ಅತ್ಯಾಚಾರವೆಸೆಗಿದ ಪ್ರಕರಣದಲ್ಲಿ 2020ರಿಂದ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ತನ್ನ ಪುತ್ರಿಯ ಜೊತೆ ಇರಲು ಒಂದು ತಿಂಗಳ ಕಾಲ ಪೆರೋಲ್ ಮೇಲೆ ಬಿಡುಗಡೆಗೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಅಪ್ರಾಪ್ತೆಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ತನ್ನ ಅಪ್ರಾಪ್ತ ಪುತ್ರಿಯ ಜೊತೆ ಇರಲು ಒಂದು ತಿಂಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪುತ್ರಿಗೆ ಎರಡು ತಿಂಗಳಿದ್ದಾಗ ಪತಿ ಜೈಲು ಪಾಲಾಗಿದ್ದು, ಈವರೆಗೂ ಪುತ್ರಿಯನ್ನು ಕಾಣಲು ಅವಕಾಶವಾಗಿಲ್ಲ. ಆದ್ದರಿಂದ ಪುತ್ರಿಯನ್ನು ಕಂಡು ಜೊತೆಗಿರಲು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರುವ ತನ್ನ ಪತಿ ಶಮಿವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್ ನೀಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮ್ರಿನ್ ತಾಜ್ ಎಂಬುವರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರೆಯ ಪತಿ ಶಮಿವುಲ್ಲಾಗೆ 30 ದಿನಗಳ ಕಾಲ ಪೆರೋಲ್ ಪಡೆಯಲು ಅರ್ಹನಾಗಿದ್ದಾರೆ. ಆದ್ದರಿಂದ ಪೆರೋಲ್ ನೀಡಲು ನಿರಾಕರಿಸಿ 2023ರ ಸೆ.5 ರಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರು ನೀಡಿದ್ದ ಹಿಂಬರಹ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದೆ.

ಅಲ್ಲದೇ, ಅರ್ಜಿದಾರೆಯ ಮನವಿಯಂತೆ ಶಮಿವುಲ್ಲಾ ಅವರನ್ನು 2023ರ ನ. 6 ರಿಂದ ಡಿ.5 ರವರೆಗೆ ಪೆರೋಲ್ ಮೇಲೆ ಬಿಡುಗಡೆ ಮಾಡುವ ಸಂಬಂಧ ಅಧೀಕ್ಷಕರು ಸೂಕ್ತ ಆದೇಶ ಹೊರಡಿಸಬೇಕು. ಈ ವೇಳೆ ಶಮಿವುಲ್ಲಾಗೆ ಅಧೀಕ್ಷಕರು ಸೂಕ್ತ ಷರತ್ತು ವಿಧಿಸಲು ಸ್ವತಂತ್ರರಾಗಿದ್ದಾರೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ. ಅಲ್ಲದೇ, ಪೆರೋಲ್ ಅವಧಿಯಲ್ಲಿನ ಶಮಿವುಲ್ಲಾ ನಡವಳಿಕೆ ಆಧಾರದ ಮೇಲೆ ಪೆರೋಲ್ ವಿಸ್ತರಣೆಗೆ ಕೋರುವ ಅವಕಾಶವನ್ನು ಸಹ ನ್ಯಾಯಾಲಯ ಕಾಯ್ದಿರಿಸಿದೆ.

ಪ್ರಕರಣದ ಹಿನ್ನೆಲೆ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪೋಕ್ಸೋ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಶಮಿವುಲ್ಲಾನನ್ನು ದೋಷಿಯಾಗಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಮಾನಿಸಿತ್ತು. ಆತನಿಗೆ ಜೀವಿತಾವಧಿಯ ಕಾಲ ಜೈಲು ಶಿಕ್ಷೆ ಮತ್ತು 4.5 ಲಕ್ಷ ರೂ. ದಂಡ ವಿಧಿಸಿ 2020ರ ಅ.27 ರಂದು ಆದೇಶಿಸಿತ್ತು. ಹೀಗಾಗಿ, ಶಮಿವುಲ್ಲಾ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಕಳೆದ ಆ.30 ರಂದು ಜೈಲು ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದ ಶಮೀವುಲ್ಲಾ ಪತ್ನಿ ಅಮ್ರೀನ್ ತಾಜ್, ತಮ್ಮ ಪತಿಯನ್ನು 2018 ರಲ್ಲಿ ವಶಕ್ಕೆ ಪಡೆಯಲಾಗಿದೆ. ಆಗ ಪುತ್ರಿಗೆ ಎರಡು ತಿಂಗಳು ಮಾತ್ರ ಆಗಿತ್ತು. ಕಳೆದ ಐದು ವರ್ಷಗಳಿಂದ ಪತಿ ಜೈಲಿನಲ್ಲಿದ್ದು, ಈವರೆಗೂ ಪುತ್ರಿಯನ್ನು ಕಾಣಲು ಅವಕಾಶವಾಗಲಿಲ್ಲ. ಪುತ್ರಿಯನ್ನು ಕಾಣಲು ಶಮೀವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್ ಮಂಜೂರು ಮಾಡಬೇಕು ಎಂದು ಕೋರಿ ಅಮ್ರೀನ್ ತಾಜ್ ಜೈಲು ಅಧಿಕ್ಷಕರಿಗೆ ಕೋರಿದ್ದರು.

ಆದರೆ, ಗಂಭೀರ ಪ್ರಕರಣದಲ್ಲಿ ಸತ್ರ ನ್ಯಾಯಾಲಯವು ಶಮೀವುಲ್ಲಾಗೆ ಜೀವಿತಾವಧಿ ಕಾಲದ ಜೈಲು ಶಿಕ್ಷೆ ವಿಧಿಸಿದೆ. ಇದರಿಂದ ಕರ್ನಾಟಕ ಕಾರಾಗೃಹಗಳ ಕೈಪಿಡಿ-2021ರ ನಿಯಮ, 671ರ ಉಪನಿಯಮ 1ರ ಅನ್ವಯ ಪೆರೋಲ್ ರಜೆಗೆ ಆತ ಅರ್ಹನಾಗಿರುವುದಿಲ್ಲ ಎಂದು ತಿಳಿಸಿ ಅಧೀಕ್ಷಕರು 2023ರ ಆ.31 ರಂದು ಹಿಂಬರಹ ನೀಡಿದ್ದರು. ಇದರಿಂದ ಅಮ್ರೀನ್ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ವಿಟಿಯು ಕುಲಪತಿಯಾಗಿ ವಿದ್ಯಾಶಂಕರ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತೆಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ತನ್ನ ಅಪ್ರಾಪ್ತ ಪುತ್ರಿಯ ಜೊತೆ ಇರಲು ಒಂದು ತಿಂಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪುತ್ರಿಗೆ ಎರಡು ತಿಂಗಳಿದ್ದಾಗ ಪತಿ ಜೈಲು ಪಾಲಾಗಿದ್ದು, ಈವರೆಗೂ ಪುತ್ರಿಯನ್ನು ಕಾಣಲು ಅವಕಾಶವಾಗಿಲ್ಲ. ಆದ್ದರಿಂದ ಪುತ್ರಿಯನ್ನು ಕಂಡು ಜೊತೆಗಿರಲು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರುವ ತನ್ನ ಪತಿ ಶಮಿವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್ ನೀಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮ್ರಿನ್ ತಾಜ್ ಎಂಬುವರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರೆಯ ಪತಿ ಶಮಿವುಲ್ಲಾಗೆ 30 ದಿನಗಳ ಕಾಲ ಪೆರೋಲ್ ಪಡೆಯಲು ಅರ್ಹನಾಗಿದ್ದಾರೆ. ಆದ್ದರಿಂದ ಪೆರೋಲ್ ನೀಡಲು ನಿರಾಕರಿಸಿ 2023ರ ಸೆ.5 ರಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರು ನೀಡಿದ್ದ ಹಿಂಬರಹ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದೆ.

ಅಲ್ಲದೇ, ಅರ್ಜಿದಾರೆಯ ಮನವಿಯಂತೆ ಶಮಿವುಲ್ಲಾ ಅವರನ್ನು 2023ರ ನ. 6 ರಿಂದ ಡಿ.5 ರವರೆಗೆ ಪೆರೋಲ್ ಮೇಲೆ ಬಿಡುಗಡೆ ಮಾಡುವ ಸಂಬಂಧ ಅಧೀಕ್ಷಕರು ಸೂಕ್ತ ಆದೇಶ ಹೊರಡಿಸಬೇಕು. ಈ ವೇಳೆ ಶಮಿವುಲ್ಲಾಗೆ ಅಧೀಕ್ಷಕರು ಸೂಕ್ತ ಷರತ್ತು ವಿಧಿಸಲು ಸ್ವತಂತ್ರರಾಗಿದ್ದಾರೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ. ಅಲ್ಲದೇ, ಪೆರೋಲ್ ಅವಧಿಯಲ್ಲಿನ ಶಮಿವುಲ್ಲಾ ನಡವಳಿಕೆ ಆಧಾರದ ಮೇಲೆ ಪೆರೋಲ್ ವಿಸ್ತರಣೆಗೆ ಕೋರುವ ಅವಕಾಶವನ್ನು ಸಹ ನ್ಯಾಯಾಲಯ ಕಾಯ್ದಿರಿಸಿದೆ.

ಪ್ರಕರಣದ ಹಿನ್ನೆಲೆ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪೋಕ್ಸೋ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಶಮಿವುಲ್ಲಾನನ್ನು ದೋಷಿಯಾಗಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಮಾನಿಸಿತ್ತು. ಆತನಿಗೆ ಜೀವಿತಾವಧಿಯ ಕಾಲ ಜೈಲು ಶಿಕ್ಷೆ ಮತ್ತು 4.5 ಲಕ್ಷ ರೂ. ದಂಡ ವಿಧಿಸಿ 2020ರ ಅ.27 ರಂದು ಆದೇಶಿಸಿತ್ತು. ಹೀಗಾಗಿ, ಶಮಿವುಲ್ಲಾ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಕಳೆದ ಆ.30 ರಂದು ಜೈಲು ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದ ಶಮೀವುಲ್ಲಾ ಪತ್ನಿ ಅಮ್ರೀನ್ ತಾಜ್, ತಮ್ಮ ಪತಿಯನ್ನು 2018 ರಲ್ಲಿ ವಶಕ್ಕೆ ಪಡೆಯಲಾಗಿದೆ. ಆಗ ಪುತ್ರಿಗೆ ಎರಡು ತಿಂಗಳು ಮಾತ್ರ ಆಗಿತ್ತು. ಕಳೆದ ಐದು ವರ್ಷಗಳಿಂದ ಪತಿ ಜೈಲಿನಲ್ಲಿದ್ದು, ಈವರೆಗೂ ಪುತ್ರಿಯನ್ನು ಕಾಣಲು ಅವಕಾಶವಾಗಲಿಲ್ಲ. ಪುತ್ರಿಯನ್ನು ಕಾಣಲು ಶಮೀವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್ ಮಂಜೂರು ಮಾಡಬೇಕು ಎಂದು ಕೋರಿ ಅಮ್ರೀನ್ ತಾಜ್ ಜೈಲು ಅಧಿಕ್ಷಕರಿಗೆ ಕೋರಿದ್ದರು.

ಆದರೆ, ಗಂಭೀರ ಪ್ರಕರಣದಲ್ಲಿ ಸತ್ರ ನ್ಯಾಯಾಲಯವು ಶಮೀವುಲ್ಲಾಗೆ ಜೀವಿತಾವಧಿ ಕಾಲದ ಜೈಲು ಶಿಕ್ಷೆ ವಿಧಿಸಿದೆ. ಇದರಿಂದ ಕರ್ನಾಟಕ ಕಾರಾಗೃಹಗಳ ಕೈಪಿಡಿ-2021ರ ನಿಯಮ, 671ರ ಉಪನಿಯಮ 1ರ ಅನ್ವಯ ಪೆರೋಲ್ ರಜೆಗೆ ಆತ ಅರ್ಹನಾಗಿರುವುದಿಲ್ಲ ಎಂದು ತಿಳಿಸಿ ಅಧೀಕ್ಷಕರು 2023ರ ಆ.31 ರಂದು ಹಿಂಬರಹ ನೀಡಿದ್ದರು. ಇದರಿಂದ ಅಮ್ರೀನ್ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ವಿಟಿಯು ಕುಲಪತಿಯಾಗಿ ವಿದ್ಯಾಶಂಕರ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.