ETV Bharat / state

ಹೆಚ್​ಎಎಲ್ ನೌಕರರ ಪ್ರತಿಭಟನೆ: ಮುಷ್ಕರ ನಿಲ್ಲಿಸುವಂತೆ ಹೈಕೋರ್ಟ್‌ ಆದೇಶ - hindustan aironaticals limited update

ವೇತನ ಪರಿಷ್ಕರಣೆಗಾಗಿ ಹೆಚ್​ಎಎಲ್​ ನೌಕರರು ಅಕ್ಟೋಬರ್​ 14 ರಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸದಂತೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಪ್ರತಿಭಟನಾ ನಿರತ ಹೆಚ್​ಎಎಲ್​ ನೌಕರರು
author img

By

Published : Oct 24, 2019, 8:02 AM IST

ಬೆಂಗಳೂರು: ಕೆಲ ದಿನಗಳಿಂದ ವೇತನ ಪರಿಷ್ಕರಣೆಗಾಗಿ ಹೆಚ್ಎಎಲ್ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಹೆಚ್‌ಎ​ಎಲ್​ ನೌಕರರ ಹೋರಾಟವನ್ನು ಪ್ರಶ್ನಿಸಿ ಹೆಚ್​ಎಎಲ್​ ಆಡಳಿತ ಮಂಡಳಿ ಹೈಕೋರ್ಟ್​ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಮಧ್ಯಂತರ ಆದೇಶ ಹೊರಡಿಸಿದೆ.

ಹೆಚ್​ಎಎಲ್ ನೌಕರರ ಪ್ರತಿಭಟನೆ

ಕೋರ್ಟ್‌ ಹೇಳಿದ್ದು:

'ಪ್ರತಿಭಟನೆಯಿಂದ ಹೆಚ್​ಎಎಲ್​ನ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಾರದು. ನಿಮ್ಮ ನಡೆಯಿಂದಾಗಿ ಸಂಸ್ಥೆಯ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಮುಷ್ಕರ ನಿಲ್ಲಿಸಿ'.

ನೌಕರರ ಮುಷ್ಕರದಿಂದ ಸಂಸ್ಥೆಗೆ ದಿನವೊಂದಕ್ಕೆ ಸರಾಸರಿ 17 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ದೂರಿ ಹೆಚ್‌ಎಎಲ್‌ನ ಆಡಳಿತ ಮಂಡಳಿ ಕೋರ್ಟ್‌ಗೆ ತಿಳಿಸಿತ್ತು. ಮುಷ್ಕರವನ್ನು ಕಾನೂನುಬಾಹಿರವೆಂದು ಹೇಳುತ್ತಾ, ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವಾಗ ನೌಕರರು ಮುಷ್ಕರವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ವಾದಿಸಿತ್ತು.

ಪ್ರತಿಭಟನಾಕಾರರ ಸಮಸ್ಯೆ ಪರಿಹಾರಕ್ಕೆ ರಾಜಿ ಸಂಧಾನ ಕ್ರಮ ಮುಂದುವರಿಸುವಂತೆ ಮತ್ತು ವಿವಾದದ ಇತ್ಯರ್ಥಕ್ಕೆ ಸಹಕರಿಸುವಂತೆ ಹೆಚ್‌ಎಎಲ್‌ನ ಆಡಳಿತ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ.

ಮುಷ್ಕರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ, ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗಲಿದೆ. ಹಾಗಾಗಿ ಮುಷ್ಕರ ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಹಿಂದೂಸ್ತಾನ್ ಏರೋನಾಟಿಕಲ್ಸ್​ ನೌಕರರ ಸಂಘ (ಹೆಚ್‌ಎಇಎ) ಪ್ರತಿಕ್ರಿಯೆ ನೀಡಿದೆ.

ಬೆಂಗಳೂರು: ಕೆಲ ದಿನಗಳಿಂದ ವೇತನ ಪರಿಷ್ಕರಣೆಗಾಗಿ ಹೆಚ್ಎಎಲ್ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಹೆಚ್‌ಎ​ಎಲ್​ ನೌಕರರ ಹೋರಾಟವನ್ನು ಪ್ರಶ್ನಿಸಿ ಹೆಚ್​ಎಎಲ್​ ಆಡಳಿತ ಮಂಡಳಿ ಹೈಕೋರ್ಟ್​ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಮಧ್ಯಂತರ ಆದೇಶ ಹೊರಡಿಸಿದೆ.

ಹೆಚ್​ಎಎಲ್ ನೌಕರರ ಪ್ರತಿಭಟನೆ

ಕೋರ್ಟ್‌ ಹೇಳಿದ್ದು:

'ಪ್ರತಿಭಟನೆಯಿಂದ ಹೆಚ್​ಎಎಲ್​ನ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಾರದು. ನಿಮ್ಮ ನಡೆಯಿಂದಾಗಿ ಸಂಸ್ಥೆಯ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಮುಷ್ಕರ ನಿಲ್ಲಿಸಿ'.

ನೌಕರರ ಮುಷ್ಕರದಿಂದ ಸಂಸ್ಥೆಗೆ ದಿನವೊಂದಕ್ಕೆ ಸರಾಸರಿ 17 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ದೂರಿ ಹೆಚ್‌ಎಎಲ್‌ನ ಆಡಳಿತ ಮಂಡಳಿ ಕೋರ್ಟ್‌ಗೆ ತಿಳಿಸಿತ್ತು. ಮುಷ್ಕರವನ್ನು ಕಾನೂನುಬಾಹಿರವೆಂದು ಹೇಳುತ್ತಾ, ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವಾಗ ನೌಕರರು ಮುಷ್ಕರವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ವಾದಿಸಿತ್ತು.

ಪ್ರತಿಭಟನಾಕಾರರ ಸಮಸ್ಯೆ ಪರಿಹಾರಕ್ಕೆ ರಾಜಿ ಸಂಧಾನ ಕ್ರಮ ಮುಂದುವರಿಸುವಂತೆ ಮತ್ತು ವಿವಾದದ ಇತ್ಯರ್ಥಕ್ಕೆ ಸಹಕರಿಸುವಂತೆ ಹೆಚ್‌ಎಎಲ್‌ನ ಆಡಳಿತ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ.

ಮುಷ್ಕರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ, ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗಲಿದೆ. ಹಾಗಾಗಿ ಮುಷ್ಕರ ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಹಿಂದೂಸ್ತಾನ್ ಏರೋನಾಟಿಕಲ್ಸ್​ ನೌಕರರ ಸಂಘ (ಹೆಚ್‌ಎಇಎ) ಪ್ರತಿಕ್ರಿಯೆ ನೀಡಿದೆ.

Intro:ಬೆಂಗಳೂರು:

ಕೆಲ ದಿನಗಳಿಂದ ಹೆಚ್‌ ಎ ಎಲ್ ನೌಕರರು ನಡೆಸಿತ್ತಿರುವ ಪ್ರತಿಭಟನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಹೆಚ್‌ಎ​ಎಲ್​ ನೌಕರರ ಹೋರಾಟವನ್ನ ಪ್ರಶ್ನೆ ಮಾಡಿ ಹೆಚ್​ಎಎಲ್​ ಆಡಳಿತ ಮಂಡಳಿ ಹೈಕೋರ್ಟ್​ ಮೊರೆ ಹೋಗಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್​, ಮಧ್ಯಂತರ ಆದೇಶ ನೀಡಿದೆ. ಪ್ರತಿಭಟನೆ ಹೆಚ್​ಎಎಲ್​ ಸಂಸ್ಥೆಯ ದಿನನಿತ್ಯದ ಕೆಲಸ-ಕಾರ್ಯಗಳಿಗೆ ಅಡ್ಡಿ ಆಗಬಾರದು. ನಿಮ್ಮ ಪ್ರತಿಭಟನೆಯಿಂದಾಗಿ ಸಂಸ್ಥೆಯ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಮುಷ್ಕರವನ್ನ ನಿಲ್ಲಿಸಿ ಅಂತಾ ಕೋರ್ಟ್​ ಸೂಚನೆ ನೀಡಿದೆ.

ನೌಕರರ ಮುಷ್ಕರದಿಂದ ಸಂಸ್ಥೆಗೆ ದಿನವೊಂದಕ್ಕೆ ಸರಾಸರಿ 17 ಕೋಟಿ ರೂ. ನಷ್ಟವಾಗುತ್ತಿದ್ದು ಇದನ್ನು ಪ್ರಶ್ನಿಸಿ ಎಚ್‌ಎಎಲ್‌ನ ಆಡಳಿತ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಮುಷ್ಕರವನ್ನು ಕಾನೂನುಬಾಹಿರವೆಂದು ಹೇಳುತ್ತಾ, ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವಾಗ ನೌಕರರು ಮುಷ್ಕರವನ್ನು ಮುಂದುವರಿಸಲು ಸಾಧ್ಯವಿಲ್ಲಲ್ಲ ಎಂದು ಆಡಳಿತ ಮಂಡಳಿ ವಾದಿಸಿದೆ.

Body:ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಸಂಬಂಧ ಹೆಚ್​ಎಎಲ್​ ನೌಕರರು ಅಕ್ಟೋಬರ್ 14 ರಿಂದ ಪ್ರತಿಭಟನೆ ನಡೆಸ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆ ಸಂಸ್ಥೆಗೆ ಭಾರೀ ನಷ್ಟ ಆಗ್ತಿದೆ.
ಹೀಗಾಗಿ ಹೆಚ್​ಎಎಲ್​ ಆಡಳಿತ ಮಂಡಳಿ ಹೈಕೋರ್ಟ್​ ಮೊರೆ ಹೋಗಿತ್ತು.

ಮುಷ್ಕರವನ್ನು ಪ್ರಶ್ನಿಸಿ ಎಚ್‌ಎಎಲ್ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ಮುಷ್ಕರವನ್ನು ಮುಂದುವರಿಸದಂತೆ ನೌಕರರಿಗೆ ಮಧ್ಯಂತರ ತಡೆ ಆದೇಶವನ್ನು ಜಾರಿಗೊಳಿಸಿದೆ.



Conclusion:ಹಿಂದೂಸ್ತಾನ್‌ ಏರೋನಾಟಿಕ್ಸ್‌ ಎಂಪ್ಲಾಯೀಸ್‌ ಅಸೋಸಿಯೇಷನ್‌,ಪದಾಧಿಕಾರಿಗಳು ಹಾಗೂ ನೌಕರರು ಮುಷ್ಕರ ನಿಲ್ಲಿಸಬೇಕು. ಕಚೇರಿಯ ದೈನಂದಿನ ಕಾರ್ಯಚಟುವಟಿಕೆಗೆ ಭಂಗವಾಗುವ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಅದಾಗ್ಯೂ ಈ ಸಮಸ್ಯೆ ಪರಿಹಾರಕ್ಕೆ ರಾಜಿ ಸಂಧಾನ ಕ್ರಮ ಮುಂದುವರಿಸುವಂತೆ ಮತ್ತು ವಿವಾದದ ಇತ್ಯರ್ಥಕ್ಕೆ ಸಹಕರಿಸುವಂತೆ ಎಚ್‌ಎಎಲ್‌ನ ಆಡಳಿತ ಮಂಡಳಿಗೆ ಸಹ ಕೋರ್ಟ್ ಸೂಚನೆ ನೀಡಿದೆ.

ನ್ಯಾಯಾಲಯದ ಮಧ್ಯಂತರ ಆದೇಶದ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಎಚ್‌ಎಎಲ್, ಹಿಂದೂಸ್ತಾನ್ ಏರೋನಾಟಿಕ್ಸ್ ನೌಕರರ ಸಂಘ (ಎಚ್‌ಎಇಎ) ಮುಷ್ಕರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.ಒಂದೊಮ್ಮೆ ಕೆಲ್ಸಕ್ಕೆ ಹಾಜರಾಗದಿದ್ದಲ್ಲಿ , ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗಲಿದೆ ಎಂದು ಹೇಳೀದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.