ETV Bharat / state

ಗಣೇಶೋತ್ಸವ ಖುಷಿ ಕಸಿದ ಕೊರೊನಾ; ಬೆಂಗಳೂರಿನಲ್ಲಿ ಹಬ್ಬದ ಆಚರಣೆಗೆ ಮುಂದಾಗದ ಸಂಘ-ಸಂಸ್ಥೆಗಳು

author img

By

Published : Aug 21, 2020, 7:39 PM IST

ಮಹಾಮಾರಿ ಕೊರೊನಾ ಜನರ ಖುಷಿ ಕಸಿದುಕೊಂಡಿದೆ. ಧಾರ್ಮಿಕ ಭಾವನೆಗೆ ಸ್ಪಂದಿಸಿ ಸರ್ಕಾರ ಅನುಮತಿ ನೀಡಿದ್ದರೂ ಸಂಘ ಸಂಸ್ಥೆಗಳು ಮಾತ್ರ ಗಣೇಶೋತ್ಸವದ ಆಚರಣೆಗೆ ಮುಂದೆ ಬರುತ್ತಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.

Ganesh Chaturthi festival celebration amid the corona fear
ಗಣೇಶೋತ್ಸವ ಆಚರಣೆ

ಬೆಂಗಳೂರು: ಕೊರೊನಾ ಭೀತಿ ನಡುವೆಯೂ ಸರ್ಕಾರ ಜನರ ಧಾರ್ಮಿಕ ಭಾವನೆಗೆ ಸ್ಪಂದಿಸಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವಂತೆ ಸೂಚಿಸಿದೆ. ವಾರ್ಡ್​ಗೊಂದೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ತಿಳಿಸಲಾಗಿದೆ. ಆದರೆ, ಸರ್ಕಾರ ಅನುಮತಿ ಕೊಟ್ಟರೂ ಸಂಘ ಸಂಸ್ಥೆಗಳು ಮಾತ್ರ ಗಣೇಶೋತ್ಸವ ಆಚರಣೆಗೆ ಮುಂದೆ ಬರುತ್ತಿಲ್ಲ ಅನ್ನೋದು ಅಚ್ಚರಿ ತಂದಿದೆ.

ಹೌದು, ಅಚ್ಚರಿಯಾದರೂ ಇದು ಸತ್ಯ:

ದಕ್ಷಿಣ ವಲಯದ 44 ವಾರ್ಡ್​ಗಳಲ್ಲಿ ಕೇವಲ ಒಂದೇ ವಾರ್ಡ್​ನಿಂದ ಒಂದು ಸಂಘಟನೆ ಮಾತ್ರ ಗಣೇಶೋತ್ಸವ ಆಚರಣೆಗೆ ಮುಂದೆ ಬಂದಿದೆ. ಯಲಹಂಕದ 11 ವಾರ್ಡ್​ಗಳಲ್ಲಿ ಒಂದು ವಾರ್ಡ್​ನಿಂದ 7 ಅರ್ಜಿಗಳು ಬಂದಿದೆ. ಪ್ರತೀ ವರ್ಷ ಗಲ್ಲಿ ಗಲ್ಲಿ-ಮೈದಾನದಲ್ಲಿ ಆಚರಿಸಲಾಗುತ್ತಿದ್ದ ಗಣೇಶೋತ್ಸವ ಈ ಸಾರಿ ಕೊರೊನಾ ಕಾರಣದಿಂದ ಮಂಕಾಗಿದೆ ಎನ್ನಲಾಗುತ್ತಿದೆ.

Ganesh Chaturthi festival celebration amid the corona fear
ಗಣೇಶೋತ್ಸವ ಆಚರಣೆ

ನಿಯಮದಂತೆ ಪ್ರತೀ ವಲಯಗಳಲ್ಲಿ ಜಂಟಿ ಆಯುಕ್ತರಿಗೆ ಜವಾಬ್ದಾರಿ ನೀಡಿ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ವಾರ್ಡ್​ನಲ್ಲಿ ಒಂದು ಕಡೆ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ವಾರ್ಡ್​ಗಳಲ್ಲಿ ಸಂಘಗಳ ಮಧ್ಯೆ ಕಿತ್ತಾಟ ನಡೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅಚ್ಚರಿ ಎಂದರೆ ಸಂಘ ಸಂಸ್ಥೆಗಳಿಂದ ಅದೆಷ್ಟೋ ವಾರ್ಡ್​ಗಳಲ್ಲಿ ಒಂದು ಮನವಿ ಸಹ ಬಂದಿಲ್ಲ ಎಂದು ವಲಯದ ಜಂಟಿ ಆಯುಕ್ತರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Ganesh Chaturthi festival celebration amid the corona fear
ಗಣೇಶೋತ್ಸವ ಆಚರಣೆ

ಕೊರೊನಾದಿಂದ ಕಲೆಕ್ಷನ್​ ಕಟ್​:

ಈ ಮೊದಲು ನಗರದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಯಾವುದೇ ಬರವಿರಲಿಲ್ಲ. ಆದರೆ, ಕೊರೊನಾ ಬಂದ ಬಳಿಕ ಎಲ್ಲವೂ ಕಡಿಮೆಯಾಗಿದೆ. ಜನರಿಂದ ಹಣ ಸಂಗ್ರಹಿಸಿ ಅದ್ಧೂರಿ ಕಾರ್ಯಕ್ರಮ ಮಾಡಲಾಗುತ್ತಿತ್ತು. ಆದರೆ, ಈಗ ಜನರ ಬಳಿ ಹಣ ಇಲ್ಲ. ದುಡ್ಡು ಕೊಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿಯೇ ಹಲವು ಸಂಘಟನೆಗಳು ಗಣೇಶನ ಪ್ರತಿಷ್ಠಾಪಣೆಗೆ ಹಿಂದೇಟು ಹಾಕಿವೆ ಎಂಬ ಮಾತು ಕೇಳಿಬಂದಿದೆ. ಇನ್ನೊಂದೆಡೆ ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಸಹ ಇದರ ಸಹವಾಸದಿಂದ ದೂರವೇ ಉಳಿದಿದ್ದಾರೆ. ಮನೆಯಲ್ಲೇ ಸಣ್ಣ ಪ್ರಮಾಣದ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸಲು ಮುಂದಾಗಿದ್ದಾರೆ.

ಸರ್ಕಾರ ಅನುಮತಿ ಕೊಟ್ಟಿದ್ದು ತಡವಾಯ್ತು!

ಆರಂಭದಿಂದಲೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಇಲ್ಲವೆಂದೇ ಇತ್ತು. ಈಗ ತಡವಾಗಿ ಅನುಮತಿ ನೀಡಲಾಗಿದೆ. ಇದರಿಂದ ಸಿದ್ಧತೆ ಮಾಡಿಕೊಳ್ಳಲು ಸಮಯವಿಲ್ಲ. ಹಾಗಾಗಿ ಹಲವು ಸಂಘ-ಸಂಸ್ಥೆಗಳು ಗಣೇಶೋತ್ಸವದಿಂದ ದೂರವೇ ಉಳಿದಿವೆ. ಇದರಿಂದ ನಮ್ಮ ವ್ಯಾಪಾರಕ್ಕೂ ಪೆಟ್ಟು ಇದ್ದಿದೆ ಎನ್ನುತ್ತಾರೆ ಗಣೇಶಮೂರ್ತಿ ಮಾರಾಟದ ವ್ಯಾಪಾರಿ ತೀರ್ಥಗಿರಿ.

ವಲಯವಾರು ಗಣೇಶೋತ್ಸವ ಬೇಡಿಕೆ ಹೀಗಿದೆ:

ಪೂರ್ವ ವಲಯದಲ್ಲಿ ಒಟ್ಟು 44 ವಾರ್ಡ್​ಗಳಿದ್ದು ಹೆಬ್ಬಾಳ ಸೇರಿ ಎರಡು ವಾರ್ಡ್​ನಿಂದ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಮನವಿ ಬಂದಿದೆ. ಉಳಿದ ವಾರ್ಡ್​ಗಳಲ್ಲಿ ನಾವೇ ಸ್ಥಳ ಗುರುತಿಸಿಟ್ಟಿದ್ದೇವೆ ಎನ್ನುತ್ತಾರೆ ಜಂಟಿ ಆಯುಕ್ತರಾದ ಪಲ್ಲವಿ.

Ganesh Chaturthi festival celebration amid the corona fear
ಗಣೇಶೋತ್ಸವ ಆಚರಣೆ

ಯಲಹಂಕದಲ್ಲಿ ಒಟ್ಟು 11 ವಾರ್ಡ್​ಗಳಿದ್ದು, ವಾರ್ಡ್ ನಂಬರ್ ಏಳರಿಂದ ಏಳು ಅರ್ಜಿಗಳು ಮಾತ್ರ ಬಂದಿದೆ. ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲೇ ಗಣೇಶ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದಕ್ಷಿಣ ವಲಯದಲ್ಲಿ ಹೆಚ್ಚಾದ ಕೊರೊನಾ :

ದಕ್ಷಿಣ ವಲಯ ಹಬ್ಬ-ಹರಿದಿನಗಳನ್ನು ಆಚರಿಸಲು ಸದಾ ಮುಂದು. ಆದರೆ, ಈ ಬಾರಿ ಕೋವಿಡ್​ ಅತಿಹೆಚ್ಚಾಗಿ ದಕ್ಷಿಣ ವಲಯಕ್ಕೇ ಬಾಧಿಸಿರುವುದರಿಂದ ಜನರಲ್ಲಿ ಭೀತಿಯಿದೆ. ಒಟ್ಟು 44 ವಾರ್ಡ್​ಗಳಲ್ಲಿ ಬಸವನಗುಡಿಯಿಂದ ಮಾತ್ರ ಮನವಿ ಬಂದಿದೆ ಎನ್ನುತ್ತಾರೆ ಸ್ಥಳೀಯರಾದ ಜೆಸಿ ವೀರಭದ್ರಸ್ವಾಮಿ. ಇನ್ನು ದಾಸರಹಳ್ಳಿ ವಲಯದಲ್ಲಿ ಒಟ್ಟು ಎಂಟು ವಾರ್ಡ್​ಗಳಿದ್ದು, ವಾರ್ಡ್ ನಂಬರ್ 41 ರಿಂದ ಮಾತ್ರ ಮನವಿ ಬಂದಿದೆ ಎಂದು ಸ್ಥಳೀಯ ನಿವಾಸಿ ಪರಶುರಾಮೇಗೌಡ ತಿಳಿಸಿದರು.

ಗಣೇಶೋತ್ಸವದ ಖುಷಿ ಕಸಿದುಕೊಂಡ ಕೊರೊನಾ

ಉಳಿದ ನಾಲ್ಕು ವಲಯಗಳಲ್ಲೂ ಹೆಚ್ಚಿನ ಮನವಿ ಇಲ್ಲ. ಎಲ್ಲರೂ ಸರಳವಾಗಿ ದೇವಸ್ಥಾನ, ಮನೆಯಲ್ಲಿ ಮಾತ್ರ ಆಚರಣೆಗೆ ಒಲವು ಹೊಂದಿದ್ದಾರೆ. ಶಿವಾಜಿನಗರದ‌ ಬಸ್ ನಿಲ್ದಾಣದ ಬಳಿ ಪ್ರತೀ ವರ್ಷ ಆಚರಣೆ ಮಾಡುತ್ತಿದ್ದ ಸಂಘದ ಮುಖ್ಯಸ್ಥ ಬಸವರಾಜ್ ಪಡುಕೋಟೆ ಮಾತನಾಡಿ, ಈ ಬಾರಿ ಸರಳವಾಗಿ ದೇವಸ್ಥಾನದಲ್ಲಿಯೇ ಗಣೇಶ ಚತುರ್ಥಿ ಆಚರಣೆ ಮಾಡಲಾಗುವುದು ಎಂದಿದ್ದಾರೆ.

ಬೆಂಗಳೂರು: ಕೊರೊನಾ ಭೀತಿ ನಡುವೆಯೂ ಸರ್ಕಾರ ಜನರ ಧಾರ್ಮಿಕ ಭಾವನೆಗೆ ಸ್ಪಂದಿಸಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವಂತೆ ಸೂಚಿಸಿದೆ. ವಾರ್ಡ್​ಗೊಂದೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ತಿಳಿಸಲಾಗಿದೆ. ಆದರೆ, ಸರ್ಕಾರ ಅನುಮತಿ ಕೊಟ್ಟರೂ ಸಂಘ ಸಂಸ್ಥೆಗಳು ಮಾತ್ರ ಗಣೇಶೋತ್ಸವ ಆಚರಣೆಗೆ ಮುಂದೆ ಬರುತ್ತಿಲ್ಲ ಅನ್ನೋದು ಅಚ್ಚರಿ ತಂದಿದೆ.

ಹೌದು, ಅಚ್ಚರಿಯಾದರೂ ಇದು ಸತ್ಯ:

ದಕ್ಷಿಣ ವಲಯದ 44 ವಾರ್ಡ್​ಗಳಲ್ಲಿ ಕೇವಲ ಒಂದೇ ವಾರ್ಡ್​ನಿಂದ ಒಂದು ಸಂಘಟನೆ ಮಾತ್ರ ಗಣೇಶೋತ್ಸವ ಆಚರಣೆಗೆ ಮುಂದೆ ಬಂದಿದೆ. ಯಲಹಂಕದ 11 ವಾರ್ಡ್​ಗಳಲ್ಲಿ ಒಂದು ವಾರ್ಡ್​ನಿಂದ 7 ಅರ್ಜಿಗಳು ಬಂದಿದೆ. ಪ್ರತೀ ವರ್ಷ ಗಲ್ಲಿ ಗಲ್ಲಿ-ಮೈದಾನದಲ್ಲಿ ಆಚರಿಸಲಾಗುತ್ತಿದ್ದ ಗಣೇಶೋತ್ಸವ ಈ ಸಾರಿ ಕೊರೊನಾ ಕಾರಣದಿಂದ ಮಂಕಾಗಿದೆ ಎನ್ನಲಾಗುತ್ತಿದೆ.

Ganesh Chaturthi festival celebration amid the corona fear
ಗಣೇಶೋತ್ಸವ ಆಚರಣೆ

ನಿಯಮದಂತೆ ಪ್ರತೀ ವಲಯಗಳಲ್ಲಿ ಜಂಟಿ ಆಯುಕ್ತರಿಗೆ ಜವಾಬ್ದಾರಿ ನೀಡಿ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ವಾರ್ಡ್​ನಲ್ಲಿ ಒಂದು ಕಡೆ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ವಾರ್ಡ್​ಗಳಲ್ಲಿ ಸಂಘಗಳ ಮಧ್ಯೆ ಕಿತ್ತಾಟ ನಡೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅಚ್ಚರಿ ಎಂದರೆ ಸಂಘ ಸಂಸ್ಥೆಗಳಿಂದ ಅದೆಷ್ಟೋ ವಾರ್ಡ್​ಗಳಲ್ಲಿ ಒಂದು ಮನವಿ ಸಹ ಬಂದಿಲ್ಲ ಎಂದು ವಲಯದ ಜಂಟಿ ಆಯುಕ್ತರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Ganesh Chaturthi festival celebration amid the corona fear
ಗಣೇಶೋತ್ಸವ ಆಚರಣೆ

ಕೊರೊನಾದಿಂದ ಕಲೆಕ್ಷನ್​ ಕಟ್​:

ಈ ಮೊದಲು ನಗರದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಯಾವುದೇ ಬರವಿರಲಿಲ್ಲ. ಆದರೆ, ಕೊರೊನಾ ಬಂದ ಬಳಿಕ ಎಲ್ಲವೂ ಕಡಿಮೆಯಾಗಿದೆ. ಜನರಿಂದ ಹಣ ಸಂಗ್ರಹಿಸಿ ಅದ್ಧೂರಿ ಕಾರ್ಯಕ್ರಮ ಮಾಡಲಾಗುತ್ತಿತ್ತು. ಆದರೆ, ಈಗ ಜನರ ಬಳಿ ಹಣ ಇಲ್ಲ. ದುಡ್ಡು ಕೊಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿಯೇ ಹಲವು ಸಂಘಟನೆಗಳು ಗಣೇಶನ ಪ್ರತಿಷ್ಠಾಪಣೆಗೆ ಹಿಂದೇಟು ಹಾಕಿವೆ ಎಂಬ ಮಾತು ಕೇಳಿಬಂದಿದೆ. ಇನ್ನೊಂದೆಡೆ ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಸಹ ಇದರ ಸಹವಾಸದಿಂದ ದೂರವೇ ಉಳಿದಿದ್ದಾರೆ. ಮನೆಯಲ್ಲೇ ಸಣ್ಣ ಪ್ರಮಾಣದ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸಲು ಮುಂದಾಗಿದ್ದಾರೆ.

ಸರ್ಕಾರ ಅನುಮತಿ ಕೊಟ್ಟಿದ್ದು ತಡವಾಯ್ತು!

ಆರಂಭದಿಂದಲೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಇಲ್ಲವೆಂದೇ ಇತ್ತು. ಈಗ ತಡವಾಗಿ ಅನುಮತಿ ನೀಡಲಾಗಿದೆ. ಇದರಿಂದ ಸಿದ್ಧತೆ ಮಾಡಿಕೊಳ್ಳಲು ಸಮಯವಿಲ್ಲ. ಹಾಗಾಗಿ ಹಲವು ಸಂಘ-ಸಂಸ್ಥೆಗಳು ಗಣೇಶೋತ್ಸವದಿಂದ ದೂರವೇ ಉಳಿದಿವೆ. ಇದರಿಂದ ನಮ್ಮ ವ್ಯಾಪಾರಕ್ಕೂ ಪೆಟ್ಟು ಇದ್ದಿದೆ ಎನ್ನುತ್ತಾರೆ ಗಣೇಶಮೂರ್ತಿ ಮಾರಾಟದ ವ್ಯಾಪಾರಿ ತೀರ್ಥಗಿರಿ.

ವಲಯವಾರು ಗಣೇಶೋತ್ಸವ ಬೇಡಿಕೆ ಹೀಗಿದೆ:

ಪೂರ್ವ ವಲಯದಲ್ಲಿ ಒಟ್ಟು 44 ವಾರ್ಡ್​ಗಳಿದ್ದು ಹೆಬ್ಬಾಳ ಸೇರಿ ಎರಡು ವಾರ್ಡ್​ನಿಂದ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಮನವಿ ಬಂದಿದೆ. ಉಳಿದ ವಾರ್ಡ್​ಗಳಲ್ಲಿ ನಾವೇ ಸ್ಥಳ ಗುರುತಿಸಿಟ್ಟಿದ್ದೇವೆ ಎನ್ನುತ್ತಾರೆ ಜಂಟಿ ಆಯುಕ್ತರಾದ ಪಲ್ಲವಿ.

Ganesh Chaturthi festival celebration amid the corona fear
ಗಣೇಶೋತ್ಸವ ಆಚರಣೆ

ಯಲಹಂಕದಲ್ಲಿ ಒಟ್ಟು 11 ವಾರ್ಡ್​ಗಳಿದ್ದು, ವಾರ್ಡ್ ನಂಬರ್ ಏಳರಿಂದ ಏಳು ಅರ್ಜಿಗಳು ಮಾತ್ರ ಬಂದಿದೆ. ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲೇ ಗಣೇಶ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದಕ್ಷಿಣ ವಲಯದಲ್ಲಿ ಹೆಚ್ಚಾದ ಕೊರೊನಾ :

ದಕ್ಷಿಣ ವಲಯ ಹಬ್ಬ-ಹರಿದಿನಗಳನ್ನು ಆಚರಿಸಲು ಸದಾ ಮುಂದು. ಆದರೆ, ಈ ಬಾರಿ ಕೋವಿಡ್​ ಅತಿಹೆಚ್ಚಾಗಿ ದಕ್ಷಿಣ ವಲಯಕ್ಕೇ ಬಾಧಿಸಿರುವುದರಿಂದ ಜನರಲ್ಲಿ ಭೀತಿಯಿದೆ. ಒಟ್ಟು 44 ವಾರ್ಡ್​ಗಳಲ್ಲಿ ಬಸವನಗುಡಿಯಿಂದ ಮಾತ್ರ ಮನವಿ ಬಂದಿದೆ ಎನ್ನುತ್ತಾರೆ ಸ್ಥಳೀಯರಾದ ಜೆಸಿ ವೀರಭದ್ರಸ್ವಾಮಿ. ಇನ್ನು ದಾಸರಹಳ್ಳಿ ವಲಯದಲ್ಲಿ ಒಟ್ಟು ಎಂಟು ವಾರ್ಡ್​ಗಳಿದ್ದು, ವಾರ್ಡ್ ನಂಬರ್ 41 ರಿಂದ ಮಾತ್ರ ಮನವಿ ಬಂದಿದೆ ಎಂದು ಸ್ಥಳೀಯ ನಿವಾಸಿ ಪರಶುರಾಮೇಗೌಡ ತಿಳಿಸಿದರು.

ಗಣೇಶೋತ್ಸವದ ಖುಷಿ ಕಸಿದುಕೊಂಡ ಕೊರೊನಾ

ಉಳಿದ ನಾಲ್ಕು ವಲಯಗಳಲ್ಲೂ ಹೆಚ್ಚಿನ ಮನವಿ ಇಲ್ಲ. ಎಲ್ಲರೂ ಸರಳವಾಗಿ ದೇವಸ್ಥಾನ, ಮನೆಯಲ್ಲಿ ಮಾತ್ರ ಆಚರಣೆಗೆ ಒಲವು ಹೊಂದಿದ್ದಾರೆ. ಶಿವಾಜಿನಗರದ‌ ಬಸ್ ನಿಲ್ದಾಣದ ಬಳಿ ಪ್ರತೀ ವರ್ಷ ಆಚರಣೆ ಮಾಡುತ್ತಿದ್ದ ಸಂಘದ ಮುಖ್ಯಸ್ಥ ಬಸವರಾಜ್ ಪಡುಕೋಟೆ ಮಾತನಾಡಿ, ಈ ಬಾರಿ ಸರಳವಾಗಿ ದೇವಸ್ಥಾನದಲ್ಲಿಯೇ ಗಣೇಶ ಚತುರ್ಥಿ ಆಚರಣೆ ಮಾಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.