ETV Bharat / state

ಐಟಿ ಸಂಸ್ಥೆಯ ಪಕ್ಷಪಾತ ದಾಳಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ರಮೇಶ್ ಕುಮಾರ್ - karnataka state politics

ಸ್ವಾಯತ್ತ ಸಂಸ್ಥೆ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು ದುರಾದೃಷ್ಟಕರ. ಜನರು ಇನ್ನಾದರೂ ಜಾಗೃತರಾಗಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್
author img

By

Published : Oct 10, 2019, 1:49 PM IST

ಬೆಂಗಳೂರು: ಐಟಿ ಸಂಸ್ಥೆ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅವರು, ಈ ಬೆಳವಣಿಗೆ ದೇಶ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ‌ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್

ವಿಧಾನಸೌಧದಲ್ಲಿ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಕಾಂಗ್ರೆಸ್​ನವರಲ್ಲಿ ಹಣ ಇದ್ದರೆ ದಾಳಿ ಮಾಡಬೇಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸಂವಿಧಾನ ಹಾಗೂ ಕಾನೂನು ತನ್ನ ಅಸ್ತಿತ್ವ ಉಳಿಸಿಕೊಂಡು ಕ್ರಮ ಜರುಗಿಸಿದರೆ ದೇಶಕ್ಕೆ ಒಳ್ಳೆಯದು.‌ ಆದರೆ ಅದು ಆಗುತ್ತಿಲ್ಲ ಎಂದು ಕಿಡಿ‌ಕಾರಿದರು. ಅಲ್ಲದೆ, ಈ ರೀತಿ ಸ್ವಾಯತ್ತ ಸಂಸ್ಥೆಗಳನ್ನು ಪಕ್ಷಗಳು ಬಳಸಿಕೊಳ್ಳುವ ರೀತಿಯಿಂದ ಅವುಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತವೆ ಎಂದರು.

ನೆಗಡಿ ಎಂದು ಮೂಗೇ ಕತ್ತರಿಸಿದರೆ ಹೇಗೆ..?

ನೆಗಡಿ ಬಂದಿದೆ ಎಂದು ಮೂಗೇ ಕತ್ತರಿಸಿದರೆ ಹೇಗೆ ಎಂದು ರಮೇಶ್ ‌ಕುಮಾರ್ ಮಾಧ್ಯಮಗಳ ಮೇಲಿನ ನಿರ್ಬಂಧ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಇದು ದುರಾದೃಷ್ಟಕರ ವಿಚಾರ‌. ಇವೆಲ್ಲವೂ ಕೂಡ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ದೇಶ ನಾಶಗೊಳಿಸುವ ಕ್ರಮವಾಗಿದೆ ಎಂದು ರಮೇಶ್​ಕುಮಾರ್​ ಕಿಡಿಕಾರಿದರು. ‌

ಇನ್ನು ಸಂವಿಧಾನವನ್ನು ಸಡಿಲಗೊಳಿಸುವಂಥ ಸಂವಿಧಾನೇತರ ಶಕ್ತಿಗಳು ಸಂವಿಧಾನದ ಹೆಸರಲ್ಲೇ, ಅದರ ಬುಡ ಅಲುಗಾಡಿಸುತ್ತಿದ್ದು, ಜನ‌ ಜಾಗೃತರಾಗಬೇಕು. ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದು ಮಾಜಿ ಸ್ಪೀಕರ್​ ಸೂಚ್ಯವಾಗಿ ಹೇಳಿದರು.

ಬೆಂಗಳೂರು: ಐಟಿ ಸಂಸ್ಥೆ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅವರು, ಈ ಬೆಳವಣಿಗೆ ದೇಶ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ‌ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್

ವಿಧಾನಸೌಧದಲ್ಲಿ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಕಾಂಗ್ರೆಸ್​ನವರಲ್ಲಿ ಹಣ ಇದ್ದರೆ ದಾಳಿ ಮಾಡಬೇಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸಂವಿಧಾನ ಹಾಗೂ ಕಾನೂನು ತನ್ನ ಅಸ್ತಿತ್ವ ಉಳಿಸಿಕೊಂಡು ಕ್ರಮ ಜರುಗಿಸಿದರೆ ದೇಶಕ್ಕೆ ಒಳ್ಳೆಯದು.‌ ಆದರೆ ಅದು ಆಗುತ್ತಿಲ್ಲ ಎಂದು ಕಿಡಿ‌ಕಾರಿದರು. ಅಲ್ಲದೆ, ಈ ರೀತಿ ಸ್ವಾಯತ್ತ ಸಂಸ್ಥೆಗಳನ್ನು ಪಕ್ಷಗಳು ಬಳಸಿಕೊಳ್ಳುವ ರೀತಿಯಿಂದ ಅವುಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತವೆ ಎಂದರು.

ನೆಗಡಿ ಎಂದು ಮೂಗೇ ಕತ್ತರಿಸಿದರೆ ಹೇಗೆ..?

ನೆಗಡಿ ಬಂದಿದೆ ಎಂದು ಮೂಗೇ ಕತ್ತರಿಸಿದರೆ ಹೇಗೆ ಎಂದು ರಮೇಶ್ ‌ಕುಮಾರ್ ಮಾಧ್ಯಮಗಳ ಮೇಲಿನ ನಿರ್ಬಂಧ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಇದು ದುರಾದೃಷ್ಟಕರ ವಿಚಾರ‌. ಇವೆಲ್ಲವೂ ಕೂಡ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ದೇಶ ನಾಶಗೊಳಿಸುವ ಕ್ರಮವಾಗಿದೆ ಎಂದು ರಮೇಶ್​ಕುಮಾರ್​ ಕಿಡಿಕಾರಿದರು. ‌

ಇನ್ನು ಸಂವಿಧಾನವನ್ನು ಸಡಿಲಗೊಳಿಸುವಂಥ ಸಂವಿಧಾನೇತರ ಶಕ್ತಿಗಳು ಸಂವಿಧಾನದ ಹೆಸರಲ್ಲೇ, ಅದರ ಬುಡ ಅಲುಗಾಡಿಸುತ್ತಿದ್ದು, ಜನ‌ ಜಾಗೃತರಾಗಬೇಕು. ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದು ಮಾಜಿ ಸ್ಪೀಕರ್​ ಸೂಚ್ಯವಾಗಿ ಹೇಳಿದರು.

Intro:Body:KN_BNG_03_RAMESHKUMAR_BYTE_SCRIPT_7201951

ಇದು ದೇಶಕ್ಕೆ, ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ವಿಷಯ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಐಟಿ ಸಂಸ್ಥೆ ಪಕ್ಷವೊಂದರ ಅಂಗವಾಗಿ ವರ್ತಿಸುತ್ತಿದ್ದು, ಅದು ದೇಶಕ್ಕೂ ಹಾಗು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ‌ ಎಂದು ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಐಟಿ ದಾಳಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಕಾಂಗ್ರೆಸ್ ನವರಲ್ಲಿ ಹಣ ಇದ್ದರೆ ದಾಳಿ ಮಾಡಬೇಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಕಾನೂನು, ಸಂವಿಧಾನ ವಿರುದ್ಧವಾಗಿ ನಡೆದರು ಕೂಡ ಸಶಸ್ತವಾಗಿ ಸಂವಿಧಾನ ಹಾಗೂ ಕಾನೂನು ತನ್ನ ಅಸ್ತಿತ್ವ ಉಳಿಸಿಕೊಂಡು ಕ್ರಮ ಜರುಗಿಸಿದರೆ ದೇಶಕ್ಕೆ ಒಳ್ಳೆಯದು ಆಗುತ್ತದೆ.‌ ಆದರೆ ಅದು ಆಗುತ್ತಿಲ್ಲ ಎಂದು ಕಿಡಿ‌ಕಾರಿದರು.

ಈ ರೀತಿ ಸಂಸ್ಥೆಗಳನ್ನು ಬಳಸಿಕೊಳ್ಳುವ ರೀತಿಯಿಂದ ಅವುಗಳ ನಂಬಿಕೆಯನ್ನು ಕಳೆದುಕೊಳ್ಳುತ್ತವೆ ಎಂದು ವಾಗ್ದಾಳಿ ನಡೆಸಿದರು.

ನೆಗಡಿ ಎಂದು ಮೂಗೇ ಕತ್ತರಿಸಿದರೆ ಹೇಗೆ?:

ನೆಗಡಿ ಹಿಡಿದಿದೆ ಎಂದು ಮೂಗೇ ಕತ್ತರಿಸಿದರೆ ಹೇಗೆ ಎಂದು ರಮೇಶ್ ‌ಕುಮಾರ್ ಮಾಧ್ಯಮ ನಿರ್ಬಂಧ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಇದು ದುರದೃಷ್ಟಕರ ವಿಚಾರ‌. ಇವೆಲ್ಲವೂ ಕೂಡ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ದೇಶ ನಾಶಗೊಳಿಸುವ ಕ್ರಮವಾಗಿದೆ ಎಂದು ಕಿಡಿ ಕಾರಿದರು ‌

ಸ್ಪೀಕರ್ ಈ ನಿರ್ಧಾರದ ಹಿಂದೆ ಆರ್ ಎಸ್ಎಸ್ ಕುಮ್ಮಕ್ಕು ಇದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಂವಿಧಾನವನ್ನು ಸಡಿಲಗೊಳಿಸುವಂಥ ಸಂವಿಧಾನೇತರ ಶಕ್ತಿಗಳು ಸಂವಿಧಾನದ ಹೆಸರಲ್ಲೇ ಒಳಗೆ ಸೇರಿ, ಸಂವಿಧಾನದ ಬುಡ ಅಲುಗಾಡಿಸುತ್ತಿದ್ದಾರೆ. ಜನ‌ಜಾಗೃತರಾಗಬೇಕು. ಸಂವಿಧಾನ ವನ್ನು ರಕ್ಷಣೆ ಮಾಡಬೇಕು ಎಂದು ಸೂಚ್ಯವಾಗಿ ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.