ಬೆಂಗಳೂರು : ತಜ್ಞರು ನೀಡಿರುವ ಲಾಕ್ಡೌನ್ ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಜ್ಞರು ಲಾಕ್ಡೌನ್ ಮಾಡಲು ಸಲಹೆ ನೀಡಿದರೆ, ರಾಜ್ಯ ಸರ್ಕಾರ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು.
ರಾಜ್ಯ ಸರ್ಕಾರ ಈಗಾಗಲೇ ತಜ್ಞರ ಸಲಹೆ ಕಡೆಗಣಿಸಿ ಆಗಬಾರದ ಅನಾಹುತಕ್ಕೆ ನೇರ ಕಾರಣವಾಗಿದೆ. ಒಂದೊಮ್ಮೆ ಲಾಕ್ಡೌನ್ ಅನಿವಾರ್ಯವಾದರೆ ಕೇರಳ ಮಾದರಿ ಅನುಸರಿಸಲಿ. ಬಡವರ್ಗಕ್ಕೆ ಜೀವನ ಭದ್ರತೆ ಹಾಗೂ ಆಹಾರ ಭದ್ರತೆ ಕಲ್ಪಿಸಿ ಲಾಕ್ಡೌನ್ ಮಾಡಲಿ ಎಂದಿದ್ದಾರೆ.
-
ತಜ್ಞರು ಲಾಕ್ಡೌನ್ ಮಾಡಲು ಸಲಹೆ ನೀಡಿದರೆ ರಾಜ್ಯ ಸರ್ಕಾರ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 7, 2021 " class="align-text-top noRightClick twitterSection" data="
ರಾಜ್ಯ ಸರ್ಕಾರ ಈಗಾಗಲೇ ತಜ್ಞರ ಸಲಹೆ ಕಡೆಗಣಿಸಿ ಆಗಬಾರದ ಅನಾಹುತಕ್ಕೆ ನೇರ ಕಾರಣವಾಗಿದೆ.
ಒಂದೊಮ್ಮೆ ಲಾಕ್ಡೌನ್ ಅನಿವಾರ್ಯವಾದರೆ ಕೇರಳ ಮಾದರಿ ಅನುಸರಿಸಲಿ.
ಬಡವರ್ಗಕ್ಕೆ ಜೀವನ ಭದ್ರತೆ ಹಾಗೂ ಆಹಾರ ಭದ್ರತೆ ಕಲ್ಪಿಸಿ ಲಾಕ್ಡೌನ್ ಮಾಡಲಿ.
">ತಜ್ಞರು ಲಾಕ್ಡೌನ್ ಮಾಡಲು ಸಲಹೆ ನೀಡಿದರೆ ರಾಜ್ಯ ಸರ್ಕಾರ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 7, 2021
ರಾಜ್ಯ ಸರ್ಕಾರ ಈಗಾಗಲೇ ತಜ್ಞರ ಸಲಹೆ ಕಡೆಗಣಿಸಿ ಆಗಬಾರದ ಅನಾಹುತಕ್ಕೆ ನೇರ ಕಾರಣವಾಗಿದೆ.
ಒಂದೊಮ್ಮೆ ಲಾಕ್ಡೌನ್ ಅನಿವಾರ್ಯವಾದರೆ ಕೇರಳ ಮಾದರಿ ಅನುಸರಿಸಲಿ.
ಬಡವರ್ಗಕ್ಕೆ ಜೀವನ ಭದ್ರತೆ ಹಾಗೂ ಆಹಾರ ಭದ್ರತೆ ಕಲ್ಪಿಸಿ ಲಾಕ್ಡೌನ್ ಮಾಡಲಿ.ತಜ್ಞರು ಲಾಕ್ಡೌನ್ ಮಾಡಲು ಸಲಹೆ ನೀಡಿದರೆ ರಾಜ್ಯ ಸರ್ಕಾರ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 7, 2021
ರಾಜ್ಯ ಸರ್ಕಾರ ಈಗಾಗಲೇ ತಜ್ಞರ ಸಲಹೆ ಕಡೆಗಣಿಸಿ ಆಗಬಾರದ ಅನಾಹುತಕ್ಕೆ ನೇರ ಕಾರಣವಾಗಿದೆ.
ಒಂದೊಮ್ಮೆ ಲಾಕ್ಡೌನ್ ಅನಿವಾರ್ಯವಾದರೆ ಕೇರಳ ಮಾದರಿ ಅನುಸರಿಸಲಿ.
ಬಡವರ್ಗಕ್ಕೆ ಜೀವನ ಭದ್ರತೆ ಹಾಗೂ ಆಹಾರ ಭದ್ರತೆ ಕಲ್ಪಿಸಿ ಲಾಕ್ಡೌನ್ ಮಾಡಲಿ.
ಸರಿಯಾದ ಕ್ರಮ : ಸುಪ್ರೀಂಕೋರ್ಟ್ ತೀರ್ಪು ಬೆಂಬಲಿಸಿರುವ ಅವರು, ಆಕ್ಸಿಜನ್ ಕೊಡಲು ತಗಾದೆ ಎತ್ತಿ ಸುಪ್ರೀಂ ಮೆಟ್ಟಿಲೇರಿದ್ದ ಕೇಂದ್ರಕ್ಕೆ ಬೆಂಡೆತ್ತಿರುವುದು ಸರಿಯಾದ ಕ್ರಮ.
ಜನರ ಪ್ರಾಣವಾಯುವಿಗೂ ಸಂಚಕಾರ ತರುವ ಈ ಕೇಂದ್ರ ಸರ್ಕಾರಕ್ಕೆ ಮನುಷ್ಯತ್ವ ಇಲ್ಲವೆ? ಇವರಿಗೆ ರಾಜ್ಯದ ಜನ ಮನುಷ್ಯರಂತೆ ಕಾಣಿಸುತ್ತಿಲ್ಲವೆ? ಬೆನ್ನುಮೂಳೆಯಿಲ್ಲದ ಬಿಜೆಪಿಯ 25 ಸಂಸದರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ರಾಮನ ಜಪ ಮಾಡಿಕೊಂಡು ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಈಗ ರಾವಣನ ಸರ್ಕಾರವಾಗಿದೆ. ಬೆಡ್ ಬ್ಲಾಕ್ ದಂಧೆಯಲ್ಲಿ ಶಾಸಕರ ಗೂಂಡಾಗಿರಿ ಯಾವ ಪುಡಿ ರೌಡಿಗೂ ಕಡಿಮೆಯಿಲ್ಲ.
ಪ್ರದರ್ಶನ ಶೂರ ತೇಜಸ್ವಿ ಸೂರ್ಯರಿಗೆ ಧೈರ್ಯ ಹಾಗೂ ನೈತಿಕತೆಯಿದ್ದರೆ ಬೆಡ್ ಬ್ಲಾಕ್ ದಂಧೆಯ ಹಿಂದೆ ಶಾಸಕ ಸತೀಶ್ ರೆಡ್ಡಿ ಕೈವಾಡದ ಬಗ್ಗೆ ಈಗ ಅಣಿಮುತ್ತು ಉದುರಿಸಲಿ ಎಂದು ಹೇಳಿದ್ದಾರೆ.
ಕೊರೊನಾದ ಎರಡನೇ ಡೋಸ್ ಲಸಿಕೆಯೇ ಕೊಡದ ಕೇಂದ್ರ ಸರ್ಕಾರ ಅದ್ಯಾವ ಆಧಾರದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡುವ ಸುಳ್ಳು ಭರವಸೆ ನೀಡಿತು? ಜನ ಎರಡನೇ ಡೋಸ್ ಲಸಿಕೆಗೆ ಪರದಾಡುತ್ತಿದ್ದಾರೆ.
ಬಿಜೆಪಿಯವರು ಸುಳ್ಳನ್ನು ಮನೆದೇವರು ಮಾಡಿಕೊಂಡಿದ್ದಾರೆ. ಹೀಗೆ ಸುಳ್ಳು ಹೇಳುವ ಬಿಜೆಪಿಯವರಿಗೆ ಆತ್ಮಸಾಕ್ಷಿ ಹೋಗಲಿ, ಕನಿಷ್ಟ ಪಕ್ಷ ನಾಚಿಕೆಯೂ ಇಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಓದಿ: ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಲ್ಯಾಕ್ ಮಾರ್ಕೆಟ್; ಒಂದಕ್ಕೆ 70 ಸಾವಿರ ರೂ. ಬೆಲೆ, ನಾಲ್ವರ ಬಂಧನ