ETV Bharat / state

ಆಪರೇಷನ್ ಜನಕ, ಪಕ್ಷಾಂತರಿಗಳ ಪಿತಾಮಹ ಮಿಸ್ಟರ್ ಯಡಿಯೂರಪ್ಪ: ಸಿದ್ದರಾಮಯ್ಯ ಆರೋಪ

author img

By

Published : Dec 1, 2019, 4:05 PM IST

ಹೊರಮಾವು, ಕಲ್ಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿರುಸಿನ ಮತ ಪ್ರಚಾರ ನಡೆಸಿದರು. ಪ್ರಚಾರಕ್ಕೆ ಬಂದ ಸಿದ್ದರಾಮಯ್ಯಗೆ ಕಾರ್ಯಕರ್ತರು ಸೇಬಿನ ಹಾರ ಹಾಕಿ ಭರ್ಜರಿಯಾಗಿ ಬರಮಾಡಿಕೊಂಡರು.

bng
ಹೊರಮಾವು, ಕಲ್ಕೆರೆ ಸುತ್ತಮುತ್ತ ಪ್ರದೇಶಗಳಲ್ಲಿ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿರುಸಿನ ಮತ ಪ್ರಚಾರ ನಡೆಸಿದರು.

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಅನರ್ಹ ಅಂದರೆ ನಾಲಾಯಕ್ ಅಂತ ಅರ್ಥ. ಈ ನಾಲಾಯಕ್ ಗಳಿಗೆ ಮತ ಹಾಕಬೇಡಿ. ಇಂತಹ ಪಕ್ಷ ದ್ರೋಹಿಗಳಿಗೆ ಪಾಠ ಕಲಿಸಿ ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದರು.

ಹೊರಮಾವು, ಕಲ್ಕೆರೆ ಸುತ್ತಮುತ್ತ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿರುಸಿನ ಪ್ರಚಾರ

ಹೊರಮಾವು, ಕಲ್ಕೆರೆ ಸುತ್ತಮುತ್ತ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಶಾಸಕರಿಗೆ‌ ನೀಡಿದ ಅನುದಾನ ಹಿಂಪಡೆದಿದ್ದಾರೆ. ಈ ಅವಧಿಯಲ್ಲಿ ಯಡಿಯೂರಪ್ಪ ಶಾಸಕರನ್ನು ಖರೀದಿಸಿ ಹಿಂಬಾಗಿಲಿಂದ ಸರ್ಕಾರ ರಚನೆ ಮಾಡಿದ್ದಾರೆ ಎಂದರು.

ಪಕ್ಷಾಂತರ, ಅಪರೇಷನ್​ ಜನಕ ಈ ಯಡಿಯೂರಪ್ಪ. ಹಿಂಬಾಗಿಲ ಮೂಲಕವೇ ಯಡಿಯೂರಪ್ಪ ಸಿಎಂ ಆಗಿದ್ದಾರೆ. 17 ಶಾಸಕರು ಬಿಜೆಪಿಗೆ ಹೋಗಿದ್ದಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅಭಿವೃದ್ಧಿ ಮಾಡೋಕೆ 17 ಜನ ಬಿಜೆಪಿಗೆ ಹೋಗಿಲ್ಲ. ದುಡ್ಡು, ಅಧಿಕಾರಕ್ಕಾಗಿ ಮಾತ್ರ ಬಿಜೆಪಿಗೆ ಹೋಗಿರೋದು. ಕೆ.ಆರ್.ಪುರಂಗೆ ಅನುದಾನ ಕೊಟ್ಟಿದ್ದು ನಾನು. ಅದರಲ್ಲಿಯೂ ಬಸವರಾಜ್ ಲೂಟಿ ಹೊಡೆದಿದ್ದಾರೆ. ಇವತ್ತು ಕೋಟ್ಯಂತರ ರೂಪಾಯಿ ಎಲೆಕ್ಷನ್​ಗೆ ಖರ್ಚು ಮಾಡ್ತಿರೋದು ಲೂಟಿ ಮಾಡಿರೋ ದುಡ್ಡು, ಹೀಗಾಗಿ ಬಸವರಾಜ್​ನ ನೋಟು ಪಡೆದು ಕಾಂಗ್ರೆಸ್​ನ ನಾರಾಯಣಸ್ವಾಮಿಗೆ ಓಟು ನೀಡಿ ಎಂದರು.

ಈ ಚುನಾವಣೆ ನಾವು ಬಯಸಿರಲಿಲ್ಲ. ಅನಗತ್ಯವಾಗಿ ಈ ಚುನಾವಣೆ ಬಂದಿದೆ. ಭೈರತಿ ಬಸವರಾಜ್ ಕಾಂಗ್ರೆಸ್​ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಾನು ಹೋರಾಟ ಮಾಡಿ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ ಲೂಟಿ ಹೊಡೆದಿದ್ದಾರೆ. ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್​ನಲ್ಲಿ ಏನು ಕಡಿಮೆ ಆಗಿತ್ತು ಜನ ಕೇಳಿ. ನಾನು ಸಿಎಂ ಆಗಿದ್ದಾಗ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೆ‌.‌ ಈಗ ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ. ನಿಮಗೆ, ಕಾಂಗ್ರೆಸ್​ಗೆ ಭೈರತಿ ಮೋಸ ಮಾಡಿದ್ದಾರೆ ಎಂದರು.

ಅಂದು ಎ.ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿ ಟಿಕೆಟ್ ಕೊಟ್ಟೆ. ನಾನು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅನ್ನಿಸುತ್ತಿದೆ. ‌ನಾನು ಟಿಕೆಟ್ ಕೊಡಿಸದೇ ಇದ್ದರೆ ಭೈರತಿ ಬಸವರಾಜ್ ಶಾಸಕರೇ ಆಗುತ್ತಿರಲಿಲ್ಲ ಎಂದರು.

15 ಕ್ಷೇತ್ರದಲ್ಲಿ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಜನರು ಇವರನ್ನು ಸೋಲಿಸಲು ಕಾಯ್ತಿದ್ದಾರೆ. ಕೆ.ಆರ್. ಪುರಂನಲ್ಲಿ ಬಸವರಾಜ್ ವಿರುದ್ಧ ಜನ ಇದ್ದಾರೆ. ಬಸವರಾಜ್ ಎಲ್ಲರನ್ನ ಹೆದರಿಸುತ್ತಾರಂತೆ. ನಿಮ್ಮ ಬೆದರಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರೊಲ್ಲ. ಯಾರು ಹೆದರಬೇಡಿ. ಬಸವರಾಜ್​ಗೆ ತಕ್ಕ ಪಾಠ ಕಲಿಸಿ ಎಂದರು.

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಅನರ್ಹ ಅಂದರೆ ನಾಲಾಯಕ್ ಅಂತ ಅರ್ಥ. ಈ ನಾಲಾಯಕ್ ಗಳಿಗೆ ಮತ ಹಾಕಬೇಡಿ. ಇಂತಹ ಪಕ್ಷ ದ್ರೋಹಿಗಳಿಗೆ ಪಾಠ ಕಲಿಸಿ ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದರು.

ಹೊರಮಾವು, ಕಲ್ಕೆರೆ ಸುತ್ತಮುತ್ತ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿರುಸಿನ ಪ್ರಚಾರ

ಹೊರಮಾವು, ಕಲ್ಕೆರೆ ಸುತ್ತಮುತ್ತ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಶಾಸಕರಿಗೆ‌ ನೀಡಿದ ಅನುದಾನ ಹಿಂಪಡೆದಿದ್ದಾರೆ. ಈ ಅವಧಿಯಲ್ಲಿ ಯಡಿಯೂರಪ್ಪ ಶಾಸಕರನ್ನು ಖರೀದಿಸಿ ಹಿಂಬಾಗಿಲಿಂದ ಸರ್ಕಾರ ರಚನೆ ಮಾಡಿದ್ದಾರೆ ಎಂದರು.

ಪಕ್ಷಾಂತರ, ಅಪರೇಷನ್​ ಜನಕ ಈ ಯಡಿಯೂರಪ್ಪ. ಹಿಂಬಾಗಿಲ ಮೂಲಕವೇ ಯಡಿಯೂರಪ್ಪ ಸಿಎಂ ಆಗಿದ್ದಾರೆ. 17 ಶಾಸಕರು ಬಿಜೆಪಿಗೆ ಹೋಗಿದ್ದಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅಭಿವೃದ್ಧಿ ಮಾಡೋಕೆ 17 ಜನ ಬಿಜೆಪಿಗೆ ಹೋಗಿಲ್ಲ. ದುಡ್ಡು, ಅಧಿಕಾರಕ್ಕಾಗಿ ಮಾತ್ರ ಬಿಜೆಪಿಗೆ ಹೋಗಿರೋದು. ಕೆ.ಆರ್.ಪುರಂಗೆ ಅನುದಾನ ಕೊಟ್ಟಿದ್ದು ನಾನು. ಅದರಲ್ಲಿಯೂ ಬಸವರಾಜ್ ಲೂಟಿ ಹೊಡೆದಿದ್ದಾರೆ. ಇವತ್ತು ಕೋಟ್ಯಂತರ ರೂಪಾಯಿ ಎಲೆಕ್ಷನ್​ಗೆ ಖರ್ಚು ಮಾಡ್ತಿರೋದು ಲೂಟಿ ಮಾಡಿರೋ ದುಡ್ಡು, ಹೀಗಾಗಿ ಬಸವರಾಜ್​ನ ನೋಟು ಪಡೆದು ಕಾಂಗ್ರೆಸ್​ನ ನಾರಾಯಣಸ್ವಾಮಿಗೆ ಓಟು ನೀಡಿ ಎಂದರು.

ಈ ಚುನಾವಣೆ ನಾವು ಬಯಸಿರಲಿಲ್ಲ. ಅನಗತ್ಯವಾಗಿ ಈ ಚುನಾವಣೆ ಬಂದಿದೆ. ಭೈರತಿ ಬಸವರಾಜ್ ಕಾಂಗ್ರೆಸ್​ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಾನು ಹೋರಾಟ ಮಾಡಿ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ ಲೂಟಿ ಹೊಡೆದಿದ್ದಾರೆ. ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್​ನಲ್ಲಿ ಏನು ಕಡಿಮೆ ಆಗಿತ್ತು ಜನ ಕೇಳಿ. ನಾನು ಸಿಎಂ ಆಗಿದ್ದಾಗ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೆ‌.‌ ಈಗ ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ. ನಿಮಗೆ, ಕಾಂಗ್ರೆಸ್​ಗೆ ಭೈರತಿ ಮೋಸ ಮಾಡಿದ್ದಾರೆ ಎಂದರು.

ಅಂದು ಎ.ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿ ಟಿಕೆಟ್ ಕೊಟ್ಟೆ. ನಾನು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅನ್ನಿಸುತ್ತಿದೆ. ‌ನಾನು ಟಿಕೆಟ್ ಕೊಡಿಸದೇ ಇದ್ದರೆ ಭೈರತಿ ಬಸವರಾಜ್ ಶಾಸಕರೇ ಆಗುತ್ತಿರಲಿಲ್ಲ ಎಂದರು.

15 ಕ್ಷೇತ್ರದಲ್ಲಿ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಜನರು ಇವರನ್ನು ಸೋಲಿಸಲು ಕಾಯ್ತಿದ್ದಾರೆ. ಕೆ.ಆರ್. ಪುರಂನಲ್ಲಿ ಬಸವರಾಜ್ ವಿರುದ್ಧ ಜನ ಇದ್ದಾರೆ. ಬಸವರಾಜ್ ಎಲ್ಲರನ್ನ ಹೆದರಿಸುತ್ತಾರಂತೆ. ನಿಮ್ಮ ಬೆದರಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರೊಲ್ಲ. ಯಾರು ಹೆದರಬೇಡಿ. ಬಸವರಾಜ್​ಗೆ ತಕ್ಕ ಪಾಠ ಕಲಿಸಿ ಎಂದರು.

Intro:Body:ಆಪರೇಷನ್ ಜನಕ, ಪಕ್ಷಾಂತರಿಗಳ ಪಿತಾಮಹ ಮಿಸ್ಟರ್ ಯಡಿಯೂರಪ್ಪ: ಗುಟುರು ಹಾಕಿದ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹ ಮಾಡಿದ್ದಾರೆ.. ಅನರ್ಹ ಅಂದರೆ ನಾಲಾಯಕ್ ಅಂತ ಅರ್ಥ. ಈ ನಾಲಾಯಕ್ ಗಳಿಗೆ ಮತ ಹಾಕಬೇಡಿ. ಇಂತಹ ಪಕ್ಷ ದ್ರೋಹಿಗಳಿಗೆ ಪಾಠ ಕಲಿಸಿ ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹೊರಮಾವು, ಕಲ್ಕೆರೆ ಸುತ್ತಮುತ್ತ ಪ್ರದೇಶಗಳಲ್ಲಿ ಬಿರುಸಿನ ಮತ ಪ್ರಚಾರ ನಡೆಸಿದರು. ಅಲ್ಲದೆ.. ಸೇಬಿನ ಹಾರ ಹಾಕಿ ಭರ್ಜರಿಯಾಗಿ ಕಾರ್ಯಕರ್ತರು ಬರಮಾಡಿಕೊಂಡರು..

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ.. ಶಾಸಕರಿಗೆ‌ ನೀಡಿದ ಅನುದಾನ ಹಿಂಪಡೆದಿದ್ದಾರೆ. ಈ ಅವಧಿಯಲ್ಲಿ ಯಡಿಯೂರಪ್ಪ ಶಾಸಕರನ್ನು ಖರೀದಿಸಿ ಹಿಂಬಾಗಿಲಿಂದ ಸರ್ಕಾರ ರಚನೆ ಮಾಡಿದ್ದಾರೆ. ಪಕ್ಷಾಂತರದ ಪಿತಾಮಹ ಮಿಸ್ಟರ್ ಯಡಿಯೂರಪ್ಪ. ಹಿಂಬಾಗಿಲ ಮೂಲಕವೇ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆಪರೇಷನ್ ಜನಕ, ಪಿತಾಮಹ ಯಡಿಯೂರಪ್ಪ ಆಗಿದ್ದಾರೆ ಎಂದಯ ಏಕವಚನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು..17 ಶಾಸಕರು ಬಿಜೆಪಿಗೆ ಹೋಗಿದ್ದಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅಭಿವೃದ್ಧಿ ಮಾಡೋಕೆ 17 ಜನ ಬಿಜೆಪಿಗೆ ಹೋಗಿಲ್ಲ. ದುಡ್ಡು,ಅಧಿಕಾರಕ್ಕಾಗಿ ಮಾತ್ರ ಬಿಜೆಪಿಗೆ ಹೋಗಿರೋದು. ಕೆ.ಆರ್.ಪುರಂಗೆ ಅನುದಾನ ಕೊಟ್ಟಿದ್ದು ನಾನು. ಅದರಲ್ಲಿಯೂ ಬಸವರಾಜ್ ಲೂಟಿ ಹೊಡೆದಿದ್ದಾರೆ. ಇವತ್ತು ಕೋಟ್ಯಂತರ ರೂಪಾಯಿ ಎಲೆಕ್ಷನ್ ಗೆ ಖರ್ಚು ಮಾಡ್ತಿದ್ದಾರೆ. ಲೂಟಿ ಮಾಡಿರೋ ದುಡ್ಡು, ಬಿಜೆಪಿ ಅವರಯ ಕೊಟ್ಟಿರುವ ಹಣ. ಹೀಗಾಗಿ ಬಸವರಾಜ್ ನ ನೋಟು ಕಾಂಗ್ರೆಸ್ ನಾರಾಯಣಸ್ವಾಮಿ ಗೆ ಓಟು ಎಂದರು..


ಈ ಚುನಾವಣೆ ನಾವು ಬಯಸಿರಲಿಲ್ಲ. ಅನಗತ್ಯವಾಗಿ ಈ ಚುನಾವಣೆ ಬಂದಿದೆ. ಭೈರತಿ ಬಸವರಾಜ್ ಕಾಂಗ್ರೆಸ್ ನಿಂದ ಎರಡು ಬಾರಿ ಆಯ್ಕೆ ಮಾಡಿದಿದ್ದರು.. ನಾನು ಹೋರಾಟ ಮಾಡಿ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದಿ ಅಧಿಕಾರ ಅನುಭವಿಸಿ ಲೂಟಿ ಹೊಡೆದಿದ್ದಾರೆ..ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಏನು ಕಡಿಮೆ ಆಗಿತ್ತು ಜನ ಕೇಳಿ. ನಾನು ಸಿಎಂ ಆಗಿದ್ದಾಗ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೆ‌.‌ಈಗ ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ.ನಿಮಗೆ, ಕಾಂಗ್ರೆಸ್ ಗೆ ಭೈರತಿ ಮೋಸ ಮಾಡಿದ್ದಾರೆ ಎಂದರು..

ಅಂದು ಎ.ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿ ಟಿಕೆಟ್ ಕೊಟ್ಟೆ. ನಾನು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅನ್ನಿಸುತ್ತಿದೆ..‌ನಾನು ಟಿಕೆಟ್ ಕೊಡಿಸದೇ ಇದ್ದರೆ ಭೈರತಿ ಬಸವರಾಜ್ ಶಾಸಕರೇ ಆಗುತ್ತಿರಲಿಲ್ಲ ಎಂದರು.

15 ಕ್ಷೇತ್ರದಲ್ಲಿ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಜನರು ಇವರನ್ನು ಸೋಲಿಸಲು ಕಾಯ್ತಿದ್ದಾರೆ. ಕೆ.ಆರ್. ಪುರಂನಲ್ಲಿ ಬಸವರಾಜ್ ವಿರುದ್ಧ ಜನ ಇದ್ದಾರೆ. ಬಸವರಾಜ್ ಎಲ್ಲರನ್ನ ಹೆದರಿಸುತ್ತಾರಂತೆ. ನಿಮ್ಮ ಬೆದರಿಕೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರೊಲ್ಲ.ಯಾರು ಹೆದರಬೇಡಿ. ಬಸವರಾಜ್ ತಕ್ಕ ಪಾಠ ಕಲಿಸಿ ಎಂದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.