ETV Bharat / state

ಜನರಿಗಾಗಿ ಇರೋ ಫುಟ್​ಪಾತ್​ಗಳೇ ಇಲ್ಲಿ ಮಾಯ... ಬಲು ಜೋರು ವ್ಯಾಪಾರ!

ಫುಟ್​ಪಾತ್​ಗಳಿರುವುದು ಪಾದಾಚಾರಿಗಳಿಗೆ ಸುರಕ್ಷಿತವಾಗಿ ಸಂಚಾರ ಮಾಡಲೆಂದು... ಆದರೆ ಇಲ್ಲಿ ಕೆಲವು ಅಂಗಡಿಗಳು ಅದನ್ನೇ ನುಂಗಿಬಿಟ್ಟಿವೆ. ಇನ್ನು ಈ ಕುರಿತು ವಿಚಾರಿಸಿದರೆ ವ್ಯಾಪಾರಸ್ಥರು ಪ್ರಶ್ನಿಸಿದವರ ವಿರುದ್ಧವೇ ಹರಿಹಾಯುತ್ತಾರೆ. ಹಾಗಾದರೆ ಏನಿದು ಫುಟ್​ಪಾತ್​ ಬಕಾಸುರರ ಕತೆ ನೋಡೋಣ...

author img

By

Published : Apr 22, 2019, 6:20 PM IST

ಫುಟ್​ಪಾತ್ ಆಕ್ರಮಿಸಿರುವ ಅಂಗಡಿಗಳು

ಬೆಂಗಳೂರು: ವಾಹನ ಸಂಚಾರದಿಂದ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪ್ರತ್ಯೇಕವಾಗಿ ನಡೆದಾಡಲೆಂದು ಪುಟ್​ಪಾತ್ ಮಾಡಿರುತ್ತಾರೆ. ಆದರೆ, ವಾರ್ಡ್ ನಂ.4ರ ವ್ಯಾಪ್ತಿಯಲ್ಲಿ ಫುಟ್​ಪಾತ್ ಆಕ್ರಮಿಸಿಕೊಂಡು ಬಿಂದಾಸ್ ಆಗಿ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳು ಅಪಘಾತದ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂಗಡಿಗಳ ಆಕ್ರಮಿತ ಫುಟ್​ಪಾತ್

ಯಲಹಂಕ ಉಪನಗರದ ಡೈರಿ ಸರ್ಕಲ್​ನಿಂದ ಬೊಮ್ಮಸಂದ್ರ ಸರ್ಕಲ್​ವರೆಗೆ ಇರುವ ಬಹುತೇಕ ಮಳಿಗೆಗಳು ಫುಟ್​​ಪಾತ್ ಮೇಲೆ ಟೀ ಅಂಗಡಿ, ಪ್ಲಾಸ್ಟಿಕ್ ಅಂಗಡಿ, ಫರ್ನಿಚರ್ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಈ ಬಗ್ಗೆ ಯಲಹಂಕದ ಉಪನಗರದ ‘ಸಿಟಿಜನ್ ಪೋರಂ’ ಸಂಘದವರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಹಲವಾರು ಬಾರಿ ಮೌಖಿಕವಾಗಿ ದೂರು ನೀಡಿ ಫುಟ್​ಪಾತ್ ತೆರವುಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.

ಅಸಹಾಯಕ ಕಾರ್ಪೋರೇಟರ್:
ಇನ್ನು ಈ ಸಮಸ್ಯೆ ಬಗ್ಗೆ ಈಟಿವಿ ಭಾರತ್, ವಾರ್ಡ್ ನಂ.4ರ ಕಾರ್ಪೋರೇಟರ್ ಎಂ.ಸತೀಶ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಸುಮಾರು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಫುಟ್​ಪಾತ್ ಮೇಲಿಟ್ಟಿರುವ ವಸ್ತುಗಳನ್ನು ನಾವು ವಶಪಡಿಸಿಕೊಂಡರೆ 2-3 ದಿನಗಳ ಬಳಿಕ ಮತ್ತೆ ಇಟ್ಟುಕೊಳ್ಳುತ್ತಾರೆ ಎಂಬ ಅಸಹಾಯಕತೆಯನ್ನು ತೋಡಿಕೊಂಡರು. ಅಧಿಕಾರಿಗಳಿಗೆ ತಿಳಿಸಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರು.

ಪ್ರಶ್ನಿಸಿದವರಿಗೆ ಬೆದರಿಸುತ್ತಾರೆ:
ಯಲಹಂಕ ಉಪನಗರದಿಂದ ಬೊಮ್ಮಸಂದ್ರ ಸರ್ಕಲ್​ವರೆಗೂ ಬಹುತೇಕ ದೊಡ್ಡ ದೊಡ್ಡ ಅಂಗಡಿಗಳಿವೆ. ಇವುಗಳ ಮಾಲೀಕರು ಪ್ರಭಾವಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಯಾರಾದರೂ ಪ್ರಶ್ನಿಸಲು ಹೋದರೆ ಪಾದಾಚಾರಿಗಳಿಗೆ ಬೆದರಿಕೆ ಹಾಕುತ್ತಾರೆಂದು ಪಾದಾಚಾರಿಗಳು ಹೇಳುತ್ತಾರೆ. ಈ ಬಗ್ಗೆ ಮಾಧ್ಯಮದವರೊಂದಿಗೂ ಮಾತನಾಡಲು ಭಯಭೀತರಾಗುತ್ತಾರೆ ಎನ್ನಲಾಗಿದೆ.

ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆಗ ರಸ್ತೆಗಿಳಿಯಲು ಭಯವಾಗುತ್ತದೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕೂಡಲೇ ಇತ್ತ ಗಮನವಹಿಸಿ ಪಾದಾಚಾರಿಗಳ ಮಾರ್ಗವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಾದಾಚಾರಿಗಳು ಮನವಿ ಮಾಡುತ್ತಾರೆ.

ಬೆಂಗಳೂರು: ವಾಹನ ಸಂಚಾರದಿಂದ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪ್ರತ್ಯೇಕವಾಗಿ ನಡೆದಾಡಲೆಂದು ಪುಟ್​ಪಾತ್ ಮಾಡಿರುತ್ತಾರೆ. ಆದರೆ, ವಾರ್ಡ್ ನಂ.4ರ ವ್ಯಾಪ್ತಿಯಲ್ಲಿ ಫುಟ್​ಪಾತ್ ಆಕ್ರಮಿಸಿಕೊಂಡು ಬಿಂದಾಸ್ ಆಗಿ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳು ಅಪಘಾತದ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂಗಡಿಗಳ ಆಕ್ರಮಿತ ಫುಟ್​ಪಾತ್

ಯಲಹಂಕ ಉಪನಗರದ ಡೈರಿ ಸರ್ಕಲ್​ನಿಂದ ಬೊಮ್ಮಸಂದ್ರ ಸರ್ಕಲ್​ವರೆಗೆ ಇರುವ ಬಹುತೇಕ ಮಳಿಗೆಗಳು ಫುಟ್​​ಪಾತ್ ಮೇಲೆ ಟೀ ಅಂಗಡಿ, ಪ್ಲಾಸ್ಟಿಕ್ ಅಂಗಡಿ, ಫರ್ನಿಚರ್ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಈ ಬಗ್ಗೆ ಯಲಹಂಕದ ಉಪನಗರದ ‘ಸಿಟಿಜನ್ ಪೋರಂ’ ಸಂಘದವರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಹಲವಾರು ಬಾರಿ ಮೌಖಿಕವಾಗಿ ದೂರು ನೀಡಿ ಫುಟ್​ಪಾತ್ ತೆರವುಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.

ಅಸಹಾಯಕ ಕಾರ್ಪೋರೇಟರ್:
ಇನ್ನು ಈ ಸಮಸ್ಯೆ ಬಗ್ಗೆ ಈಟಿವಿ ಭಾರತ್, ವಾರ್ಡ್ ನಂ.4ರ ಕಾರ್ಪೋರೇಟರ್ ಎಂ.ಸತೀಶ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಸುಮಾರು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಫುಟ್​ಪಾತ್ ಮೇಲಿಟ್ಟಿರುವ ವಸ್ತುಗಳನ್ನು ನಾವು ವಶಪಡಿಸಿಕೊಂಡರೆ 2-3 ದಿನಗಳ ಬಳಿಕ ಮತ್ತೆ ಇಟ್ಟುಕೊಳ್ಳುತ್ತಾರೆ ಎಂಬ ಅಸಹಾಯಕತೆಯನ್ನು ತೋಡಿಕೊಂಡರು. ಅಧಿಕಾರಿಗಳಿಗೆ ತಿಳಿಸಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರು.

ಪ್ರಶ್ನಿಸಿದವರಿಗೆ ಬೆದರಿಸುತ್ತಾರೆ:
ಯಲಹಂಕ ಉಪನಗರದಿಂದ ಬೊಮ್ಮಸಂದ್ರ ಸರ್ಕಲ್​ವರೆಗೂ ಬಹುತೇಕ ದೊಡ್ಡ ದೊಡ್ಡ ಅಂಗಡಿಗಳಿವೆ. ಇವುಗಳ ಮಾಲೀಕರು ಪ್ರಭಾವಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಯಾರಾದರೂ ಪ್ರಶ್ನಿಸಲು ಹೋದರೆ ಪಾದಾಚಾರಿಗಳಿಗೆ ಬೆದರಿಕೆ ಹಾಕುತ್ತಾರೆಂದು ಪಾದಾಚಾರಿಗಳು ಹೇಳುತ್ತಾರೆ. ಈ ಬಗ್ಗೆ ಮಾಧ್ಯಮದವರೊಂದಿಗೂ ಮಾತನಾಡಲು ಭಯಭೀತರಾಗುತ್ತಾರೆ ಎನ್ನಲಾಗಿದೆ.

ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆಗ ರಸ್ತೆಗಿಳಿಯಲು ಭಯವಾಗುತ್ತದೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕೂಡಲೇ ಇತ್ತ ಗಮನವಹಿಸಿ ಪಾದಾಚಾರಿಗಳ ಮಾರ್ಗವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಾದಾಚಾರಿಗಳು ಮನವಿ ಮಾಡುತ್ತಾರೆ.

Intro:ಸಂಜಯ್ ನಾಗ್ ಬೆಂಗಳೂರು, KA10014
*******************************””””””
ಬೆಂಗಳೂರು: ವಾಹನ ಸಂಚಾರದಿಂದ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪ್ಪ್ರತ್ಯೇಕವಾಗಿ ನಡೆದಾಡಲೆಂದು ಪುಟ್ ಪಾತ್ ಮಾಡಿರುತ್ತಾರೆ. ಆದರೆ, ವಾರ್ಡ್ ನಂ.4ರ ವ್ಯಾಪ್ತಿಯಲ್ಲಿ ಪುಟ್ ಪಾತ್ ಆಕ್ರಮಿಸಿಕೊಂಡು ಬಿಂದಾಸ್ ಆಗಿ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳು ಅಪಘಾತ ಭಯದಲ್ಲೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಲಹಂಕ ಉಪನಗರದ ಡೈರಿ ಸರ್ಕಲ್ ನಿಂದ ಬೊಮ್ಮಸಂದ್ರ ಸರ್ಕಲ್ ವರೆಗೆ ಇರುವ ಬಹುತೇಕ ಮಳಿಗೆಗಳು ಪುಟ್ಪಾತ್ ಮೇಲೆ ಟೀ ಅಂಡಿ, ಪ್ಲಾಸ್ಟಿಕ್ ಅಂಗಡಿ, ಪರ್ನಿಚರ್ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಈ ಬಗ್ಗೆ ಯಲಹಂಕದ ಉಪನಗರದ ‘ಸಿಟಿಜನ್ ಪೋರಂ’ ಸಂಘದವರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಹಲವಾರು ಬಾರಿ ಮೌಕಿಕವಾಗಿ ದೂರು ನೀಡಿ ಪುಟ್ ಪಾತ್ ತೆರವುಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆಆದರೆ, ಬಿಬಿಎಂಪಿ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.

Body:ಅಸಹಾಯಕ ಕಾರ್ಪೋರೇಟರ್: ಈ ಸಮಸ್ಯೆ ಬಗ್ಗೆ ಈ ಟಿವಿ ಭಾರತ್ ವಾರ್ಡ್ ನಂ.4ರ ಕಾರ್ಪೋರೇಟರ್ ಎಂ.ಸತೀಶ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಸುಮಾರು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಫುಟ್ಪಾತ್ ಮೇಲಿಟ್ಟಿರುವ ವಸ್ತುಗಳನ್ನು ನಾವು ವಶಪಡಿಸಿಕೊಂಡರೆ 2-3ದಿನಗಳ ಬಳಿಕ ಮತ್ತೆ ಇಟ್ಟುಕೊಳ್ಳುತ್ತಾರೆ ಎಂಬ ಅಸಹಾಯಕತೆಯನ್ನು ತೋಡಿಕೊಂಡರು. ಅಧಿಕಾರಿಗಳಿಗೆ ತಿಳಿಸಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರು.

ಪ್ರಶ್ನಿಸಿದವರಿಗೆ ಬೆದರಿಸುತ್ತಾರೆ: ಯಲಹಂಕ ಉಪನಗರದಿಂದ ಬೊಮ್ಮಸಂದ್ರ ಸರ್ಕಲ್ ವರೆಗೂ ಬಹುತೇಕ ದೊಡ್ಡ ದೊಡ್ಡ ಅಂಗಡಿಗಳಿವೆ. ಇವುಗಳ ಮಾಲೀಕರು ಪ್ರಭಾವಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಯಾರಾದರೂ ಪ್ರಶ್ನಿಸಲು ಹೋದರೆ ಪಾದಾಚಾರಿಗಳಿಗೆ ಬೆದರಿಕೆ ಹಾಕುತ್ತಾರೆಂದು ಪಾದಾಚಾರಿಗಳು ಹೇಳುತ್ತಾರೆ. ಈ ಬಗ್ಗೆ ಮಾಧ್ಯಮದವರೊಂದಿಗೂ ಮಾತನಾಡಲು ಭಯಭೀತರಾಗುತ್ತಾರೆ.

Conclusion:ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆಗ ರಸ್ತೆಗಿಳಿಯಲು ಭಯವಾಗುತ್ತದೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕೂಡಲೇ ಇತ್ತ ಗಮನವಹಿಸಿ ಪಾದಾಚಾರಿಗಳ ಮಾರ್ಗವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಪಾದಾಚಾರಿಗಳು ಮನವಿ ಮಾಡುತ್ತಾರೆ.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.