ಬೆಂಗಳೂರು: ಲಕ್ಷ್ಮಿ ಪಟಾಕಿ ಹೊಡೆಯಲು ಹೋಗಿ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಚಾಮರಾಜಪೇಟೆ ಆಜಾದ್ನಗರದಲ್ಲಿ ನಡೆದಿದೆ.
ಮಧನ್ (7) ವರ್ಷ, ಗಾಯಗೊಂಡ ಬಾಲಕ. ಮಧನ್ ಇಂದು ಮಧ್ಯಾಹ್ನ ಪಟಾಕಿ ಸಿಡಿಸುವಾಗ ಈ ದುರ್ಘಟನೆ ಸಂಭವಿಸಿದೆ. ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನೊಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭೀರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.