ETV Bharat / state

ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಅಬ್ಬರದ ಪ್ರಚಾರ.. ರಾಜ್ಯದಲ್ಲಿ "ಎಲೆಕ್ಷನ್ ಮೂಡ್" ನಿರ್ಮಾಣ..‌‌!

author img

By

Published : Oct 11, 2022, 11:50 AM IST

ರಾಜಕೀಯ ಪಕ್ಷಗಳ ಬಿಡುವಿಲ್ಲದ ಚುನಾವಣೆ ಸಂಬಂಧಿತ ಚಟುವಟಿಕೆಗಳಿಂದಾಗಿ ವಿಧಾನಸಭೆ "ಚುನಾವಣೆ ಮೂಡ್ " ರಾಜ್ಯದಲ್ಲಿ ಈಗಿನಿಂದಲೇ ಸೃಷ್ಟಿಯಾದಂತೆ ಭಾಸವಾಗುತ್ತಿದೆ. ಚುನಾವಣೆ ವೇಳಾಪಟ್ಟಿ ಘೋಷಣೆಯಾದಾಗ ನಡೆಸುವಂತಹ ಮಟ್ಟದ ಕಾವೇರಿದ ಚುನಾವಣೆ ಪ್ರಚಾರವನ್ನು ಸಭೆ - ಸಮಾರಂಭ, ಚುನಾವಣೆ ರ್ಯಾಲಿಗಳನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಪೈಪೋಟಿಗೆ ಬಿದ್ದವರಂತೆ ಹಮ್ಮಿಕೊಳ್ಳತೊಡಗಿವೆ.

ಎಲೆಕ್ಷನ್ ಮೂಡ್
ಎಲೆಕ್ಷನ್ ಮೂಡ್

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಇನ್ನೂ 8 ತಿಂಗಳು ಬಾಕಿಯಿರುವಾಗಲೇ ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪೈಪೋಟಿಗೆ ಇಳಿದವರಂತೆ ಮತದಾರರ ಸೆಳೆಯಲು ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸುತ್ತಿವೆ. ರ್ಯಾಲಿ, ಯಾತ್ರೆ ಸಮಾವೇಶಗಳಂತಹ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿವೆ.

ಜೆಡಿಎಸ್ ವರಿಷ್ಠರ ಕಾರ್ಯಕ್ರಮ
ಜೆಡಿಎಸ್ ವರಿಷ್ಠರ ಕಾರ್ಯಕ್ರಮ

ರಾಜಕೀಯ ಪಕ್ಷಗಳ ಬಿಡುವಿಲ್ಲದ ಚುನಾವಣೆ ಸಂಬಂಧಿತ ಚಟುವಟಿಕೆಗಳಿಂದಾಗಿ ವಿಧಾನಸಭೆ "ಚುನಾವಣೆ ಮೂಡ್ " ರಾಜ್ಯದಲ್ಲಿ ಈಗಿನಿಂದಲೇ ಸೃಷ್ಟಿಯಾದಂತೆ ಭಾಸವಾಗುತ್ತಿದೆ. ಚುನಾವಣೆ ವೇಳಾಪಟ್ಟಿ ಘೋಷಣೆಯಾದಾಗ ನಡೆಸುವಂತಹ ಮಟ್ಟದ ಕಾವೇರಿದ ಚುನಾವಣೆ ಪ್ರಚಾರವನ್ನು ಸಭೆ - ಸಮಾರಂಭ, ಚುನಾವಣೆ ರ್ಯಾಲಿಗಳನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಪೈಪೋಟಿಗೆ ಬಿದ್ದವರಂತೆ ಹಮ್ಮಿಕೊಳ್ಳತೊಡಗಿವೆ.

ಜೆಡಿಎಸ್ ವರಿಷ್ಠರ ಕಾರ್ಯಕ್ರಮ
ಜೆಡಿಎಸ್ ವರಿಷ್ಠರ ಕಾರ್ಯಕ್ರಮ

ರಾಜ್ಯದಲ್ಲಿ ಕಾಂಗ್ರೆಸ್ 21 ದಿನ ಪಾದಯಾತ್ರೆ: ಕಾಂಗ್ರೆಸ್ ಪಕ್ಷವು ಎಐಸಿಸಿ ಮುಖ್ಯಸ್ಥರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆಯನ್ನು ರಾಜ್ಯದಲ್ಲಿ 21 ದಿನಗಳ ಕಾಲ ನಡೆಸಿ ಕಾಂಗ್ರೆಸ್ ಪರವಾದ ಅಲೆಯನ್ನು ನಿರ್ಮಾಣ ಮಾಡಲು ಶ್ರಮಿಸುತ್ತಿದೆ. ರಾಹುಲ್ ಗಾಂಧಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಇತರ ಪ್ರಮುಖ ನಾಯಕರು ಪಾಲ್ಗೊಂಡು ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ
ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ

ಕಾಂಗ್ರೆಸ್ ಪಕ್ಷದಿಂದ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಾಗಲಿರುವ ಹಾಲಿ ಶಾಸಕರು, ಮಾಜಿ ಶಾಸಕರು, ಹೊಸದಾಗಿ ಟಿಕೆಟ್ ಬಯಸುವ ಮುಖಂಡರು ರಾಹುಲ್ ಜೊತೆ ತಮ್ಮ ಕ್ಷೇತ್ರದ ಕಾರ್ಯಕರ್ತರ ಒಡಗೂಡಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಮತಾರರ ಗಮನ ಸೆಳೆಯುತ್ತಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ ಸಭೆ
ಬಿಜೆಪಿ ಕಾರ್ಯಕಾರಿಣಿ ಸಭೆ

ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಿಂದ ಎಚ್ಚೆತ್ತ ಆಡಳಿತ ಪಕ್ಷ ಬಿಜೆಪಿ, ಕಾಂಗ್ರೆಸ್ ಪರ ಅಲೆ ನಿರ್ಮಾಣಕ್ಕೆ ತಡೆಯೊಡ್ಡಲು ಪ್ರತಿ ಕಾರ್ಯಕ್ರಮ ರೂಪಿಸತೊಡಗಿದೆ. ರಾಜ್ಯದಾದ್ಯಂತ ರ್ಯಾಲಿ, ಸಮಾವೇಶ, ಸಂವಾದ, ಸಭೆಗಳನ್ನು ನಡೆಸುವ ಮೂಲಕ ಮತದಾರರನ್ನು ಒಲಿಸಿಕೊಳ್ಳಲು ಕಸರತ್ತು ನಡೆಸಿದೆ.

ರಾಹುಲ್ ಪಾದಯಾತ್ರೆ
ರಾಹುಲ್ ಪಾದಯಾತ್ರೆ

ಜನಸ್ಪಂದನ: ಇದರ ಭಾಗವಾಗಿ ಇಂದಿನಿಂದ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜನಸ್ಪಂದನೆ ಯಾತ್ರೆ ನಡೆಸುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲು ಮುಂದಾಳತ್ವದಲ್ಲಿ ಮತ್ತೊಂದು ತಂಡವು ಜನಸ್ಪಂದನೆ ಯಾತ್ರೆ ಕೈಗೊಂಡು ಬಿಜೆಪಿ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನತೆಗೆ ತಲುಪಿಸುತ್ತಿದೆ.

ಎಲೆಕ್ಷನ್ ಮೂಡ್
ಎಲೆಕ್ಷನ್ ಮೂಡ್

ಪಂಚರತ್ನ: ಕಾಂಗ್ರೆಸ್ ಪಕ್ಚದ ಪಾದಯಾತ್ರೆ ಮತ್ತು ಬಿಜೆಪಿಯ ಯಾತ್ರೆ, ಸಮಾವೇಶಗಳಿಗೆ ಕೌಂಟರ್ ನೀಡಲು ಜೆಡಿಎಸ್ ಸಹ ಹಲವಾರು ಸಮಾವೇಶಗಳನ್ನು ನಡೆಸಲು ಸಿದ್ಧತೆ ನಡೆಸಿದೆ. ಈಗಾಗಲೇ ಜನಮಿತ್ರ ಸಮಾವೇಶ ಪೂರ್ಣಗೊಳಿಸಿದ ಜಾತ್ಯಾತೀತ ಜನತಾದಳವು ನವೆಂಬರ್ 1 ರಿಂದ "ಪಂಚರತ್ನ" ಸಮಾವೇಶಕ್ಕೆ ಮೈಸೂರಿನಲ್ಲಿ ಚಾಲನೆ ನೀಡಲಿದೆ.

ಆಡಳಿತ ಪಕ್ಷ ಬಿಜೆಪಿ, ಪ್ರತಿ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್​​ನ ಬಿಡುವಿಲ್ಲದ ಪಾದಯಾತ್ರೆ, ರ್ಯಾಲಿ, ಸಮಾವೇಶದ ಕಾರ್ಯಕ್ರಮಗಳಿಂದಾಗಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ವಾತಾವರಣ ಸೃಷ್ಟಿಯಾಗಿದೆ. ಅಬ್ಬರದ ಪ್ರಚಾರ ಈಗಿನಿಂದಲೇ ಆರಂಭವಾಗಿದೆ. ವಿಧಾನಸಭೆಗೆ ಯಾವ ಕ್ಷಣದಲ್ಲಿಯಾದರೂ ಚುನಾವಣೆ ಘೋಷಣೆಯಾದರೆ ಎಲೆಕ್ಷನ್ ಎದುರಿಸಲು ಸಿದ್ಧವೆನ್ನುವ ಸಂದೇಶವನ್ನು ರಾಜಕೀಯ ಪಕ್ಷಗಳು ನೀಡತೊಡಗಿವೆ.

ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ರಾಜ್ಯದಾದ್ಯಂತ ಚುನಾವಣೆ ಪ್ರಚಾರ ಪೂರ್ಣಗೊಳಿಸಿ ಪಕ್ಷದ ಪರವಾದ ಅಲೆ ನಿರ್ಮಿಸಿಕೊಳ್ಳಲು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಮೇಲಿಂದ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಒಂದು ಪಕ್ಷದ ಕಾರ್ಯಕ್ರಮಕ್ಕೆ ಪ್ರತಿಯಾಗಿ ಮತ್ತೊಂದು ಪಕ್ಷವು ಮಗದೊಂದು ಕಾರ್ಯಕ್ರಮ ರೂಪಿಸಿ ಮತದಾರರನ್ನು ಒಲಿಸಿಕೊಳ್ಳಲು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಚುನಾವಣೆ ಹುಮ್ಮಸ್ಸು ತುಂಬುತ್ತಿವೆ.

ಕೇಂದ್ರ ಚುನಾವಣೆ ಆಯೋಗ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದರೆ ಚುನಾವಣೆ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆಗಳ ಕಟ್ಟು ಪಾಡುಗಳ ನಡುವೆ ಅಡೆ ತಡೆಗಳಿಲ್ಲದೆ ಸಮಾವೇಶ, ಚುನಾವಣೆ ರ್ಯಾಲಿ ನಡೆಸುವುದು ಕಷ್ಟವೆನ್ನುವ ಅಭಿಪ್ರಾಯದಿಂದ ರಾಜಕೀಯ ಪಕ್ಷಗಳು ಈಗಿನಿಂದಲೇ ಅಬ್ಬರದ ಚುನಾವಣೆ ಪ್ರಚಾರಕ್ಕೆ ಇಳಿದಿವೆ ಎಂದೂ ಹೇಳಲಾಗುತ್ತಿದೆ.

(ಓದಿ: ಭಾರತ್​ ಜೋಡೋದಲ್ಲಿ ಮಕ್ಕಳ ದುರ್ಬಳಕೆ ಆರೋಪ.. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ಸ್ಪಷ್ಟನೆ)

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಇನ್ನೂ 8 ತಿಂಗಳು ಬಾಕಿಯಿರುವಾಗಲೇ ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪೈಪೋಟಿಗೆ ಇಳಿದವರಂತೆ ಮತದಾರರ ಸೆಳೆಯಲು ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸುತ್ತಿವೆ. ರ್ಯಾಲಿ, ಯಾತ್ರೆ ಸಮಾವೇಶಗಳಂತಹ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿವೆ.

ಜೆಡಿಎಸ್ ವರಿಷ್ಠರ ಕಾರ್ಯಕ್ರಮ
ಜೆಡಿಎಸ್ ವರಿಷ್ಠರ ಕಾರ್ಯಕ್ರಮ

ರಾಜಕೀಯ ಪಕ್ಷಗಳ ಬಿಡುವಿಲ್ಲದ ಚುನಾವಣೆ ಸಂಬಂಧಿತ ಚಟುವಟಿಕೆಗಳಿಂದಾಗಿ ವಿಧಾನಸಭೆ "ಚುನಾವಣೆ ಮೂಡ್ " ರಾಜ್ಯದಲ್ಲಿ ಈಗಿನಿಂದಲೇ ಸೃಷ್ಟಿಯಾದಂತೆ ಭಾಸವಾಗುತ್ತಿದೆ. ಚುನಾವಣೆ ವೇಳಾಪಟ್ಟಿ ಘೋಷಣೆಯಾದಾಗ ನಡೆಸುವಂತಹ ಮಟ್ಟದ ಕಾವೇರಿದ ಚುನಾವಣೆ ಪ್ರಚಾರವನ್ನು ಸಭೆ - ಸಮಾರಂಭ, ಚುನಾವಣೆ ರ್ಯಾಲಿಗಳನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಪೈಪೋಟಿಗೆ ಬಿದ್ದವರಂತೆ ಹಮ್ಮಿಕೊಳ್ಳತೊಡಗಿವೆ.

ಜೆಡಿಎಸ್ ವರಿಷ್ಠರ ಕಾರ್ಯಕ್ರಮ
ಜೆಡಿಎಸ್ ವರಿಷ್ಠರ ಕಾರ್ಯಕ್ರಮ

ರಾಜ್ಯದಲ್ಲಿ ಕಾಂಗ್ರೆಸ್ 21 ದಿನ ಪಾದಯಾತ್ರೆ: ಕಾಂಗ್ರೆಸ್ ಪಕ್ಷವು ಎಐಸಿಸಿ ಮುಖ್ಯಸ್ಥರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆಯನ್ನು ರಾಜ್ಯದಲ್ಲಿ 21 ದಿನಗಳ ಕಾಲ ನಡೆಸಿ ಕಾಂಗ್ರೆಸ್ ಪರವಾದ ಅಲೆಯನ್ನು ನಿರ್ಮಾಣ ಮಾಡಲು ಶ್ರಮಿಸುತ್ತಿದೆ. ರಾಹುಲ್ ಗಾಂಧಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಇತರ ಪ್ರಮುಖ ನಾಯಕರು ಪಾಲ್ಗೊಂಡು ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ
ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ

ಕಾಂಗ್ರೆಸ್ ಪಕ್ಷದಿಂದ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಾಗಲಿರುವ ಹಾಲಿ ಶಾಸಕರು, ಮಾಜಿ ಶಾಸಕರು, ಹೊಸದಾಗಿ ಟಿಕೆಟ್ ಬಯಸುವ ಮುಖಂಡರು ರಾಹುಲ್ ಜೊತೆ ತಮ್ಮ ಕ್ಷೇತ್ರದ ಕಾರ್ಯಕರ್ತರ ಒಡಗೂಡಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಮತಾರರ ಗಮನ ಸೆಳೆಯುತ್ತಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ ಸಭೆ
ಬಿಜೆಪಿ ಕಾರ್ಯಕಾರಿಣಿ ಸಭೆ

ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಿಂದ ಎಚ್ಚೆತ್ತ ಆಡಳಿತ ಪಕ್ಷ ಬಿಜೆಪಿ, ಕಾಂಗ್ರೆಸ್ ಪರ ಅಲೆ ನಿರ್ಮಾಣಕ್ಕೆ ತಡೆಯೊಡ್ಡಲು ಪ್ರತಿ ಕಾರ್ಯಕ್ರಮ ರೂಪಿಸತೊಡಗಿದೆ. ರಾಜ್ಯದಾದ್ಯಂತ ರ್ಯಾಲಿ, ಸಮಾವೇಶ, ಸಂವಾದ, ಸಭೆಗಳನ್ನು ನಡೆಸುವ ಮೂಲಕ ಮತದಾರರನ್ನು ಒಲಿಸಿಕೊಳ್ಳಲು ಕಸರತ್ತು ನಡೆಸಿದೆ.

ರಾಹುಲ್ ಪಾದಯಾತ್ರೆ
ರಾಹುಲ್ ಪಾದಯಾತ್ರೆ

ಜನಸ್ಪಂದನ: ಇದರ ಭಾಗವಾಗಿ ಇಂದಿನಿಂದ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜನಸ್ಪಂದನೆ ಯಾತ್ರೆ ನಡೆಸುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲು ಮುಂದಾಳತ್ವದಲ್ಲಿ ಮತ್ತೊಂದು ತಂಡವು ಜನಸ್ಪಂದನೆ ಯಾತ್ರೆ ಕೈಗೊಂಡು ಬಿಜೆಪಿ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನತೆಗೆ ತಲುಪಿಸುತ್ತಿದೆ.

ಎಲೆಕ್ಷನ್ ಮೂಡ್
ಎಲೆಕ್ಷನ್ ಮೂಡ್

ಪಂಚರತ್ನ: ಕಾಂಗ್ರೆಸ್ ಪಕ್ಚದ ಪಾದಯಾತ್ರೆ ಮತ್ತು ಬಿಜೆಪಿಯ ಯಾತ್ರೆ, ಸಮಾವೇಶಗಳಿಗೆ ಕೌಂಟರ್ ನೀಡಲು ಜೆಡಿಎಸ್ ಸಹ ಹಲವಾರು ಸಮಾವೇಶಗಳನ್ನು ನಡೆಸಲು ಸಿದ್ಧತೆ ನಡೆಸಿದೆ. ಈಗಾಗಲೇ ಜನಮಿತ್ರ ಸಮಾವೇಶ ಪೂರ್ಣಗೊಳಿಸಿದ ಜಾತ್ಯಾತೀತ ಜನತಾದಳವು ನವೆಂಬರ್ 1 ರಿಂದ "ಪಂಚರತ್ನ" ಸಮಾವೇಶಕ್ಕೆ ಮೈಸೂರಿನಲ್ಲಿ ಚಾಲನೆ ನೀಡಲಿದೆ.

ಆಡಳಿತ ಪಕ್ಷ ಬಿಜೆಪಿ, ಪ್ರತಿ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್​​ನ ಬಿಡುವಿಲ್ಲದ ಪಾದಯಾತ್ರೆ, ರ್ಯಾಲಿ, ಸಮಾವೇಶದ ಕಾರ್ಯಕ್ರಮಗಳಿಂದಾಗಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ವಾತಾವರಣ ಸೃಷ್ಟಿಯಾಗಿದೆ. ಅಬ್ಬರದ ಪ್ರಚಾರ ಈಗಿನಿಂದಲೇ ಆರಂಭವಾಗಿದೆ. ವಿಧಾನಸಭೆಗೆ ಯಾವ ಕ್ಷಣದಲ್ಲಿಯಾದರೂ ಚುನಾವಣೆ ಘೋಷಣೆಯಾದರೆ ಎಲೆಕ್ಷನ್ ಎದುರಿಸಲು ಸಿದ್ಧವೆನ್ನುವ ಸಂದೇಶವನ್ನು ರಾಜಕೀಯ ಪಕ್ಷಗಳು ನೀಡತೊಡಗಿವೆ.

ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ರಾಜ್ಯದಾದ್ಯಂತ ಚುನಾವಣೆ ಪ್ರಚಾರ ಪೂರ್ಣಗೊಳಿಸಿ ಪಕ್ಷದ ಪರವಾದ ಅಲೆ ನಿರ್ಮಿಸಿಕೊಳ್ಳಲು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಮೇಲಿಂದ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಒಂದು ಪಕ್ಷದ ಕಾರ್ಯಕ್ರಮಕ್ಕೆ ಪ್ರತಿಯಾಗಿ ಮತ್ತೊಂದು ಪಕ್ಷವು ಮಗದೊಂದು ಕಾರ್ಯಕ್ರಮ ರೂಪಿಸಿ ಮತದಾರರನ್ನು ಒಲಿಸಿಕೊಳ್ಳಲು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಚುನಾವಣೆ ಹುಮ್ಮಸ್ಸು ತುಂಬುತ್ತಿವೆ.

ಕೇಂದ್ರ ಚುನಾವಣೆ ಆಯೋಗ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದರೆ ಚುನಾವಣೆ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆಗಳ ಕಟ್ಟು ಪಾಡುಗಳ ನಡುವೆ ಅಡೆ ತಡೆಗಳಿಲ್ಲದೆ ಸಮಾವೇಶ, ಚುನಾವಣೆ ರ್ಯಾಲಿ ನಡೆಸುವುದು ಕಷ್ಟವೆನ್ನುವ ಅಭಿಪ್ರಾಯದಿಂದ ರಾಜಕೀಯ ಪಕ್ಷಗಳು ಈಗಿನಿಂದಲೇ ಅಬ್ಬರದ ಚುನಾವಣೆ ಪ್ರಚಾರಕ್ಕೆ ಇಳಿದಿವೆ ಎಂದೂ ಹೇಳಲಾಗುತ್ತಿದೆ.

(ಓದಿ: ಭಾರತ್​ ಜೋಡೋದಲ್ಲಿ ಮಕ್ಕಳ ದುರ್ಬಳಕೆ ಆರೋಪ.. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ಸ್ಪಷ್ಟನೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.