ETV Bharat / state

ಬೀದಿ ನಾಯಿ ಹಾವಳಿಯಿಂದ ರಕ್ಷಣೆ ಹೇಗೆ? ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಕ್ರಮವೇನು?

author img

By

Published : Jun 26, 2019, 11:21 PM IST

ನಾಯಿಗಳು ಮರಿ ಹಾಕುವ ಕಾಲವಿದು. ಮರಿ ಹಾಕುವ ಸಮಯ ಬಂದಾಗ ನಾಯಿಗಳು ಹೆಚ್ಚು ಕೋಪದಲ್ಲಿರುತ್ತವೆ. ಈ ವೇಳೆ ಅವುಗಳು ಗುಂಪು ಗುಂಪಾಗಿ ಓಡಾಡುವುದು ಸಾಮಾನ್ಯ. ಮರಿಗಳ ರಕ್ಷಣೆಗೆ ಜನರ ಮೇಲೆ ಎರಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಸಾಲು ಸಾಲು ಬೀದಿ ನಾಯಿಗಳ ಹಾವಳಿ

ಬೆಂಗಳೂರು: ನಾಯಿಗಳು ಮರಿ ಹಾಕುವ ಕಾಲವಿದು. ಮರಿ ಹಾಕುವ ಸಮಯ ಬಂದಾಗ ನಾಯಿಗಳು ಹೆಚ್ಚು ಕೋಪದಲ್ಲಿರುತ್ತವೆ. ಈ ವೇಳೆ ಅವುಗಳು ಗುಂಪು ಗುಂಪಾಗಿ ಓಡಾಡುವುದು ಸಾಮಾನ್ಯ. ಮರಿಗಳ ರಕ್ಷಣೆಗೆ ಜನರ ಮೇಲೆ ಎರಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಬೀದಿ ನಾಯಿ ಹಾವಳಿ ಬಗ್ಗೆ ಮಾತನಾಡಿದ ಅವರು, ನಾಯಿಗಳಿಗೂ ಭಯ ಇರುತ್ತದೆ. ಹಾಗಾಗಿ ಅವುಗಳು ದುರ್ಬಲರಾದ ಮಕ್ಕಳು, ಮಹಿಳೆಯರ ಮೇಲೆಯೇ ದಾಳಿ ಮಾಡುವುದು ಹೆಚ್ಚು.

ಹೀಗಾಗಿ ನಾಯಿಗಳನ್ನು ದಿಟ್ಟಿಸಿ ನೋಡುವುದಾಗಲಿ, ಹೆಚ್ಚು ನಾಯಿಗಳ ಗುಂಪಿನ ಮಧ್ಯೆ ಕೀಟಲೆ ಮಾಡುವುದಾಗಲಿ ಮಾಡಬಾರದು. ನಾಯಿಗಳನ್ನು ಬೇರೆ ಕಡೆ ಬಿಡುವುದಾಗಲಿ ಅಥವಾ ಕೊಲ್ಲುವುದಾಗಲಿ ಇದಕ್ಕೆ ಪರಿಹಾರವಲ್ಲ. ಇದರಿಂದ ಉಳಿದ ನಾಯಿಗಳು ಹೆಚ್ಚು ಕೋಪಗೊಳ್ಳುತ್ತವೆ ಎಂದಿದ್ದಾರೆ.

ಬೀದಿ ನಾಯಿಗಳ ಹಾವಳಿ ತಡೆಗೆ ಪಾಲಿಕೆ ಕೈಗೊಂಡ ಕ್ರಮ:

ಇದೇ ಹೆಸರಿನಲ್ಲಿ ಬಿಬಿಎಂಪಿ ವರ್ಷ ವರ್ಷ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೂ ಸಮರ್ಪಕವಾಗಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡುವಲ್ಲಿ ಇಲ್ಲಿನ ಅಧಿಕಾರಿ ವರ್ಗ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಒಂದು ವರ್ಷದಲ್ಲಿ ಒಂದು ನಾಯಿಗೆ 900 ರೂ. ವೆಚ್ಚದಂತೆ ಬರೋಬ್ಬರಿ 47,000 ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ನಗರದಲ್ಲಿ ಸಾಲು ಸಾಲು ಬೀದಿ ನಾಯಿಗಳ ಹಾವಳಿ

ಇದು ನಕಲಿ ಬಿಲ್ ಎನ್ನಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಇದೇ ರೀತಿ ಬೋಗಸ್ ಲೆಕ್ಕಗಳನ್ನು ನೀಡುತ್ತಾ ಜನರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಮೂಲಕ ಬಿಬಿಎಂಪಿಯ ಅಧಿಕಾರಿಗಳು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಇದೆ.

ಈ ಬಗ್ಗೆ ಮೇಯರ್​ ಅವರನ್ನು ಪ್ರಶ್ನಿಸಿದ್ರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದೆ ಎಂದು ಅಧಿಕಾರಿಗಳನ್ನು ದೂರಿದ್ದಾರೆ. ಇತ್ತ ಹೊಸ ಟೆಂಡರ್ ಪ್ರಕ್ರಿಯೆ ಕೂಡಾ ಅರ್ಧಕ್ಕೆ ಸ್ಥಗಿತವಾಗಿದ್ದು, ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಎಬಿಸಿ ಚಿಕಿತ್ಸೆ ನೀಡಲು ಸೆಂಟರ್​ಗಳ ಸಮಸ್ಯೆಯಾಗಿವೆ. ದೂರು ಬಂದ ಕಡೆಯಲ್ಲಿ ಮಾತ್ರ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ನಾಯಿಗಳ ಎಬಿಸಿ ಚಿಕಿತ್ಸೆಯ ಟೆಂಡರ್​ ಅನುಮೋದನೆ ಹಂತದಲ್ಲೇ ಇದೆ ಎಂದಿದ್ದಾರೆ.

ಬೆಂಗಳೂರು: ನಾಯಿಗಳು ಮರಿ ಹಾಕುವ ಕಾಲವಿದು. ಮರಿ ಹಾಕುವ ಸಮಯ ಬಂದಾಗ ನಾಯಿಗಳು ಹೆಚ್ಚು ಕೋಪದಲ್ಲಿರುತ್ತವೆ. ಈ ವೇಳೆ ಅವುಗಳು ಗುಂಪು ಗುಂಪಾಗಿ ಓಡಾಡುವುದು ಸಾಮಾನ್ಯ. ಮರಿಗಳ ರಕ್ಷಣೆಗೆ ಜನರ ಮೇಲೆ ಎರಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಬೀದಿ ನಾಯಿ ಹಾವಳಿ ಬಗ್ಗೆ ಮಾತನಾಡಿದ ಅವರು, ನಾಯಿಗಳಿಗೂ ಭಯ ಇರುತ್ತದೆ. ಹಾಗಾಗಿ ಅವುಗಳು ದುರ್ಬಲರಾದ ಮಕ್ಕಳು, ಮಹಿಳೆಯರ ಮೇಲೆಯೇ ದಾಳಿ ಮಾಡುವುದು ಹೆಚ್ಚು.

ಹೀಗಾಗಿ ನಾಯಿಗಳನ್ನು ದಿಟ್ಟಿಸಿ ನೋಡುವುದಾಗಲಿ, ಹೆಚ್ಚು ನಾಯಿಗಳ ಗುಂಪಿನ ಮಧ್ಯೆ ಕೀಟಲೆ ಮಾಡುವುದಾಗಲಿ ಮಾಡಬಾರದು. ನಾಯಿಗಳನ್ನು ಬೇರೆ ಕಡೆ ಬಿಡುವುದಾಗಲಿ ಅಥವಾ ಕೊಲ್ಲುವುದಾಗಲಿ ಇದಕ್ಕೆ ಪರಿಹಾರವಲ್ಲ. ಇದರಿಂದ ಉಳಿದ ನಾಯಿಗಳು ಹೆಚ್ಚು ಕೋಪಗೊಳ್ಳುತ್ತವೆ ಎಂದಿದ್ದಾರೆ.

ಬೀದಿ ನಾಯಿಗಳ ಹಾವಳಿ ತಡೆಗೆ ಪಾಲಿಕೆ ಕೈಗೊಂಡ ಕ್ರಮ:

ಇದೇ ಹೆಸರಿನಲ್ಲಿ ಬಿಬಿಎಂಪಿ ವರ್ಷ ವರ್ಷ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೂ ಸಮರ್ಪಕವಾಗಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡುವಲ್ಲಿ ಇಲ್ಲಿನ ಅಧಿಕಾರಿ ವರ್ಗ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಒಂದು ವರ್ಷದಲ್ಲಿ ಒಂದು ನಾಯಿಗೆ 900 ರೂ. ವೆಚ್ಚದಂತೆ ಬರೋಬ್ಬರಿ 47,000 ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ನಗರದಲ್ಲಿ ಸಾಲು ಸಾಲು ಬೀದಿ ನಾಯಿಗಳ ಹಾವಳಿ

ಇದು ನಕಲಿ ಬಿಲ್ ಎನ್ನಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಇದೇ ರೀತಿ ಬೋಗಸ್ ಲೆಕ್ಕಗಳನ್ನು ನೀಡುತ್ತಾ ಜನರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಮೂಲಕ ಬಿಬಿಎಂಪಿಯ ಅಧಿಕಾರಿಗಳು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಇದೆ.

ಈ ಬಗ್ಗೆ ಮೇಯರ್​ ಅವರನ್ನು ಪ್ರಶ್ನಿಸಿದ್ರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದೆ ಎಂದು ಅಧಿಕಾರಿಗಳನ್ನು ದೂರಿದ್ದಾರೆ. ಇತ್ತ ಹೊಸ ಟೆಂಡರ್ ಪ್ರಕ್ರಿಯೆ ಕೂಡಾ ಅರ್ಧಕ್ಕೆ ಸ್ಥಗಿತವಾಗಿದ್ದು, ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಎಬಿಸಿ ಚಿಕಿತ್ಸೆ ನೀಡಲು ಸೆಂಟರ್​ಗಳ ಸಮಸ್ಯೆಯಾಗಿವೆ. ದೂರು ಬಂದ ಕಡೆಯಲ್ಲಿ ಮಾತ್ರ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ನಾಯಿಗಳ ಎಬಿಸಿ ಚಿಕಿತ್ಸೆಯ ಟೆಂಡರ್​ ಅನುಮೋದನೆ ಹಂತದಲ್ಲೇ ಇದೆ ಎಂದಿದ್ದಾರೆ.

Intro:ಬೀದಿ ನಾಯಿಯ ಹಾವಳಿಯಿಂದ ಸಾರ್ವಜನಿಕರಿಗೆ ರಕ್ಷಣೆ ಹೇಗೆ? - ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಎಡವಿದ್ದೆಲ್ಲಿ?

ಬೆಂಗಳೂರು- ಸಾಲು ಸಾಲು ಬೀದಿನಾಯಿ ಹಾವಳಿಗಳ ಘಟನೆಗಳು ನಡೀತಿವೆ. ಇತ್ತ ಜನರ ಸುರಕ್ಷತೆ ನೋಡಿಕೊಳ್ಳಬೇಕಾದ ಬಿಬಿಎಂಪಿ ತನ್ನ ಕರ್ತವ್ಯವನ್ನೇ ಮರೆತಿದೆ. ಹಸುಗೂಸುಗಳು ಜೀವ ಕಳೆದುಕೊಳ್ತಿವೆ. ಈ ನಿಟ್ಟಿನಲ್ಲಿ ಬೀದಿನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಧರ್ ತಿಳಿಸಿದ್ದಾರೆ‌.
ಹೇಳಿ ಕೇಳಿ ನಾಯಿಗಳು ಮರಿ ಹಾಕುವ ಕಾಲ ಇದು. ಆರುತಿಂಗಳಿಗೆ ಒಮ್ಮೆ ಅಂದ್ರೆ ಜುಲೈ-ಆಗಷ್ಟ್ ತಿಂಗಳಿಗೆ ಹಾಗೂ ಜನವರಿ ತಿಂಗಳ ಸಮಯದಲ್ಲಿ ಮರಿಹಾಕುವ ಸಮಯ ಬಂದಾಗ ನಾಯಿಗಳು ಹೆಚ್ಚೇ ಕೋಪದಲ್ಲಿರುತ್ತವೆ. ಅಥವಾ ಗುಂಪುಗುಂಪಲ್ಲಿ ಓಡಾಡುತ್ತಿರುತ್ತವೆ. ಮರಿಗಳ ರಕ್ಷಣೆಗೆ ಜನರ ಮೇಲೆ ಎರಗುವ ಸಾಧ್ಯತೆ ಹೆಚ್ಚಿರುತ್ತವೆ.
ಇನ್ನು ನಾಯಿಗಳಿಗೂ ಭಯ ಇರುವುದರಿಂದ ದುರ್ಬಲರಾದ ಮಕ್ಕಳು, ಮಹಿಳೆಯರ ಮೇಲೆಯೇ ದಾಳಿ ಮಾಡುವುದು ಹೆಚ್ಚು. ಹೀಗಾಗಿ ನಾಯಿಗಳನ್ನು ದಿಟ್ಟಿಸಿ ನೋಡುವುದಾಗಲೀ, ಹೆಚ್ಚು ನಾಯಿಗಳ ಗುಂಪಿನ ಮಧ್ಯೆ ಕೀಟಲೆ ಮಾಡುವುದಾಗಲೀ ಮಾಡಬಾರದೆಂದು ಅವರು ತಿಳಿಸಿದರು‌.
ಇನ್ನು ಬೀದಿನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು,
ನಾಯಿಗಳನ್ನು ಬೇರೆ ಕಡೆ ಬಿಡುವುದು ಅಥವಾ ಕೊಲ್ಲುವುದು ಇದಕ್ಕೆ ಪರಿಹಾರವಲ್ಲ. ಇದರಿಂದ ಉಳಿಯುವ ನಾಯಿಯೂ ಹೆಚ್ಚು ಕೋಪಗೊಳ್ಳುತ್ತವೆ ಎಂದರು.
ಇನ್ನು ಬೀದಿನಾಯಿಗಳ ಹಾವಳಿ ತಡೆಗೆ ಪಾಲಿಕೆ ಕೈಗೊಂಡ ಕ್ರಮಗಳನ್ನು ಕೇಳಿದ್ರೆ ವರ್ಷ ವರ್ಷ ಲಕ್ಷಾಂತರ ರುಪಾಯಿ ವೆಚ್ಚ ಮಾಡುವ ಬಿಬಿಎಂಪಿ ಇನ್ನೂ ಸಮರ್ಪಕವಾಗಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡುವಲ್ಲಿ ವಿಫಲವಾಗಿದೆ. ಕಳೆದ ಒಂದು ವರ್ಷದಲ್ಲಿ ಒಂದು ನಾಯಿಗೆ 900 ರೂಪಾಯಿ ವೆಚ್ಚದಂತೆ,47000 ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದೆ ಎಂದು ದಾಖಲೆ ತೋರಿಸುತ್ತಾರೆ. ಆದ್ರೆ ಕಳೆದ ಹಲವಾರು ವರ್ಷಗಳಿಂದ ಇದೇ ರೀತಿ ಬೋಗಸ್ ಲೆಕ್ಕಗಳನ್ನು ನೀಡುತ್ತಾ, ಹಣ ಕೊಳ್ಳೆಹೊಡೆಯುತ್ತಾ, ಜನರ ಪ್ರಾಣದೊಂದಿಗೆ ಬಿಬಿಎಂಪಿ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ.
ಈ ಬಗ್ಗೆ ಮೇಯರ್ ನ ಪ್ರಶ್ನಿಸಿದ್ರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆಗ್ತಿದೆ ಎಂದು ಅಧಿಕಾರಿಗಳನ್ನು ದೂರುತ್ತಾರೆ. ಇತ್ತ ಹೊಸ ಟೆಂಡರ್ ಪ್ರಕ್ರಿಯೆ ಕೂಡಾ ಅರ್ಧಕ್ಕೇ ಸ್ಥಗಿತವಾಗಿದ್ದು ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ಎಬಿಸಿ ಚಿಕಿತ್ಸೆ ನೀಡಲು ಸೆಂಟರ್ ಗಳ ಸಮಸ್ಯೆಯಾಗಿವೆ. ದೂರು ಬಂದ ಕಡೆಯಲ್ಲಿ ಮಾತ್ರ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗ್ತಿತ್ತು. ಅಲ್ಲದೆ ನಾಯಿಗಳ ಎಬಿಸಿ ಚಿಕಿತ್ಸೆಯ ಟೆಂಡರ್ ಅನುಮೋದನೆ ಹಂತದಲ್ಲೇ ಇದೆ ಎಂಬ ಉತ್ತರ ಬೇಜವಾಬ್ದಾರಿ ಎಂದರು. ಇನ್ನು ನಿರಂತರವಾಗಿ ಎಬಿಸಿ ಚಿಕಿತ್ಸೆ ಮಾಡಲು ಕಟ್ಟುನಿಟ್ಟಾಗಿ ತಿಳಿಸಿದ್ದೇನೆ. ಅಲ್ಲದೆ ಹಲವು ಬಾರಿ ಫೆರೋಶಿಯಸ್ ನಾಯಿಗಳಿದ್ದು, ಅವಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಕಾನೂನು ಮೊರೆ ಹೋಗಲಾಗುವುದು ಎಂದರು. ಎಬಿಸಿ ಚಿಕಿತ್ಸೆ ಬಳಿಕವೂ ಕಚ್ಚುವ ನಾಯಿಗಳನ್ನು, ಬೇರೆ ಕಡೆ ರವಾನೆ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಪೀಲು ಹೋಗಲಾಗಿದೆ‌ ಜುಲೈ ಒಂದನೇ ತಾರೀಕು ಇದರ ತೀರ್ಪು ಬರಲಿದೆ ಎಂದರು.
ಒಟ್ಟಿನಲ್ಲಿ ಪಾಲಿಕೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲಿ, ಬಿಡಲಿ ಸಾರ್ವಜನಿಕರಂತೂ ಈ ಎರಡು ತಿಂಗಳಲ್ಲಿ ಎಚ್ಚರಿಕೆಯಿಂದಿರೋದು ಒಳಿತು..

ಸೌಮ್ಯಶ್ರೀ



Body:KN_BNG_02_26_dog_story_script_sowmya_7202707


Conclusion:KN_BNG_02_26_dog_story_script_sowmya_7202707
ETV Bharat Logo

Copyright © 2024 Ushodaya Enterprises Pvt. Ltd., All Rights Reserved.