ETV Bharat / state

ವೈದ್ಯರ ನಿರ್ಲಕ್ಷ್ಯ ಆರೋಪ: ವೃದ್ಧ ಸಾವು, ಮೃತನ ಕುಟುಂಬಸ್ಥರಿಂದ ಡಾಕ್ಟರ್​ ಮೇಲೆ ಹಲ್ಲೆ - ದೊಡ್ಡಬಳ್ಳಾಪುರ ಆಸ್ಪತ್ರೆ ರೋಗಿ ಸಾವು ಸುದ್ದಿ

ದೊಡ್ಡಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಗೆ ಕೆಮ್ಮು ನೆಗಡಿಯೆಂದು ಬಂದಿದ್ದ ರೋಗಿಗೆ 5 ಇಂಜೆಕ್ಷನ್ ನೀಡಿದ ಪರಿಣಾಮ ವಯೋವೃದ್ಧ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ರೆ ತಮ್ಮ ವಿರುದ್ಧ ಕೇಳಿಬಂದಿರುವ ನಿರ್ಲಕ್ಷ್ಯ ಆರೋಪವನ್ನು ಅಲ್ಲಗಳೆದಿರುವ ಆಸ್ಪತ್ರೆ ಸಿಬ್ಬಂದಿ ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.

ವೈದ್ಯರ ನಿರ್ಲಕ್ಷ್ಯ ವೃದ್ಧ ಸಾವು
author img

By

Published : Nov 7, 2019, 11:26 PM IST

ದೊಡ್ಡಬಳ್ಳಾಪುರ: ಕೆಮ್ಮು ನೆಗಡಿಯೆಂದು ಆಸ್ಪತ್ರೆಗೆ ಬಂದಿದ್ದ ರೋಗಿಗೆ 5 ಇಂಜೆಕ್ಷನ್ ಕೊಟ್ಟ ಪರಿಣಾಮ ಆತ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗಂಗಾಧರಯ್ಯ (75) ಮೃತ ವೃದ್ಧ. ಶನಿವಾರ ರಾತ್ರಿ 7:30 ಕೆಮ್ಮು ನೆಗಡಿಯಿಂದ ಬಳಲುತ್ತಿದ್ದ ಗಂಗಾಧರಯ್ಯನನ್ನು ತಾಲೂಕಿನ ಬಾಶೆಟ್ಟಿಹಳ್ಳಿಯ ರಕ್ಷಿತ ಎನ್ನುವ ಆಸ್ಪತ್ರೆಗೆ ಕರೆತಂದಿದ್ದರು. ವೃದ್ಧನನ್ನು ಪರೀಕ್ಷಿಸಿದ ವೈದ್ಯರು ಮೊದಲು ಐದು ಇಂಜೆಕ್ಷನ್ ನೀಡಿದ್ದರು. ಕೆಲ ಕ್ಷಣಗಳ ನಂತರ ರೋಗಿ ಬೆವರಲು ಶುರು ಮಾಡಿದಾಗ ಮತ್ತೊಂದು ಇಂಜೆಕ್ಷನ್ ನೀಡಿದ್ದರು ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ.

ಮರಳಿ ಮನೆಗೆ ಬಂದ ನಂತರ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮತ್ತೆ ಅದೇ ಆಸ್ಪತ್ರೆಗೆ ಬಂದಾಗ ಬೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು ಎನ್ನಲಾಗ್ತಿದೆ. ಬೇರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ರೋಗಿ ಸಾವನ್ನಪ್ಪಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅನ್ನೋದು ಮೃತನ ಸಂಬಂಧಿಕರ ಆರೋಪವಾಗಿದೆ.

ವೃದ್ಧ ಸಾವು- ವೈದ್ಯರ ವಿರುದ್ಧ ಆರೋಪ

ಆದ್ರೆ ವೈದ್ಯರು ಈ ಆರೋಪವನ್ನು ತಳ್ಳಿಹಾಕಿದ್ದು, ಮೃತ ವ್ಯಕ್ತಿ ಕೆಲವು ದಿನಗಳ ಹಿಂದೆ ಸ್ಟ್ರೋಕ್ ಗೆ ತುತ್ತಾಗಿದ್ದರು. ಕಫದಿಂದ ಬಳಲುತ್ತಿದ್ದ ಅವರಿಗೆ ಎರಡೇ ಇಂಜೆಕ್ಷನ್ ಕೊಟ್ಟಿರೋದು. ಮನೆಗೆ ಕರ್ಕೊಂಡ್ ಹೋದ ನಂತರ ಅವರಿಗೆ ಜ್ಯೂಸ್ ಕುಡಿಸಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೆ ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಮೃತ ವ್ಯಕ್ತಿಯ ಮರಣೋತ್ತರ ವರದಿ ಬಂದ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ. ನಾವು ತಪ್ಪು ಮಾಡಿದ್ರೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುವುದಾಗಿ ಹೇಳಿದ್ದಾರೆ.

ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಪ್ರಕರಣದ ಹಿಂದಿನ ಸತ್ಯಾಸತ್ಯತೆ ಮರಣೋತ್ತರ ವರದಿ ಮೇಲೆ ನಿಂತಿದೆ. ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತ್​ ಡಿಹೆಚ್ ಓ ಗೆ ಪತ್ರ ಬರೆದು ಆಸ್ಪತ್ರೆಗಳ ಅಸಲಿಯತ್ತು ಬಯಲು ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ದೊಡ್ಡಬಳ್ಳಾಪುರ: ಕೆಮ್ಮು ನೆಗಡಿಯೆಂದು ಆಸ್ಪತ್ರೆಗೆ ಬಂದಿದ್ದ ರೋಗಿಗೆ 5 ಇಂಜೆಕ್ಷನ್ ಕೊಟ್ಟ ಪರಿಣಾಮ ಆತ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗಂಗಾಧರಯ್ಯ (75) ಮೃತ ವೃದ್ಧ. ಶನಿವಾರ ರಾತ್ರಿ 7:30 ಕೆಮ್ಮು ನೆಗಡಿಯಿಂದ ಬಳಲುತ್ತಿದ್ದ ಗಂಗಾಧರಯ್ಯನನ್ನು ತಾಲೂಕಿನ ಬಾಶೆಟ್ಟಿಹಳ್ಳಿಯ ರಕ್ಷಿತ ಎನ್ನುವ ಆಸ್ಪತ್ರೆಗೆ ಕರೆತಂದಿದ್ದರು. ವೃದ್ಧನನ್ನು ಪರೀಕ್ಷಿಸಿದ ವೈದ್ಯರು ಮೊದಲು ಐದು ಇಂಜೆಕ್ಷನ್ ನೀಡಿದ್ದರು. ಕೆಲ ಕ್ಷಣಗಳ ನಂತರ ರೋಗಿ ಬೆವರಲು ಶುರು ಮಾಡಿದಾಗ ಮತ್ತೊಂದು ಇಂಜೆಕ್ಷನ್ ನೀಡಿದ್ದರು ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ.

ಮರಳಿ ಮನೆಗೆ ಬಂದ ನಂತರ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮತ್ತೆ ಅದೇ ಆಸ್ಪತ್ರೆಗೆ ಬಂದಾಗ ಬೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು ಎನ್ನಲಾಗ್ತಿದೆ. ಬೇರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ರೋಗಿ ಸಾವನ್ನಪ್ಪಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅನ್ನೋದು ಮೃತನ ಸಂಬಂಧಿಕರ ಆರೋಪವಾಗಿದೆ.

ವೃದ್ಧ ಸಾವು- ವೈದ್ಯರ ವಿರುದ್ಧ ಆರೋಪ

ಆದ್ರೆ ವೈದ್ಯರು ಈ ಆರೋಪವನ್ನು ತಳ್ಳಿಹಾಕಿದ್ದು, ಮೃತ ವ್ಯಕ್ತಿ ಕೆಲವು ದಿನಗಳ ಹಿಂದೆ ಸ್ಟ್ರೋಕ್ ಗೆ ತುತ್ತಾಗಿದ್ದರು. ಕಫದಿಂದ ಬಳಲುತ್ತಿದ್ದ ಅವರಿಗೆ ಎರಡೇ ಇಂಜೆಕ್ಷನ್ ಕೊಟ್ಟಿರೋದು. ಮನೆಗೆ ಕರ್ಕೊಂಡ್ ಹೋದ ನಂತರ ಅವರಿಗೆ ಜ್ಯೂಸ್ ಕುಡಿಸಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೆ ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಮೃತ ವ್ಯಕ್ತಿಯ ಮರಣೋತ್ತರ ವರದಿ ಬಂದ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ. ನಾವು ತಪ್ಪು ಮಾಡಿದ್ರೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುವುದಾಗಿ ಹೇಳಿದ್ದಾರೆ.

ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಪ್ರಕರಣದ ಹಿಂದಿನ ಸತ್ಯಾಸತ್ಯತೆ ಮರಣೋತ್ತರ ವರದಿ ಮೇಲೆ ನಿಂತಿದೆ. ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತ್​ ಡಿಹೆಚ್ ಓ ಗೆ ಪತ್ರ ಬರೆದು ಆಸ್ಪತ್ರೆಗಳ ಅಸಲಿಯತ್ತು ಬಯಲು ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

Intro:ಕೆಮ್ಮು ನೆಗಡಿ ರೋಗಿಗೆ 6 ಇಂಜೆಕ್ಷನ್ ಕೊಟ್ಟ ಡಾಕ್ಟರ್.

ವೈದ್ಯರ ನಿರ್ಲಕ್ಷ್ಯ ವೃದ್ಧ ಸಾವು ಮೃತನ ಸಂಬಂಧಿಕರ ಆರೋಪ
Body:ದೊಡ್ಡಬಳ್ಳಾಪುರ : ಕೆಮ್ಮು ನೆಗಡಿಯೆಂದು ಆಸ್ಪತ್ರೆಗೆ ಬಂದ ರೋಗಿಗೆ ಐದು ಇಂಜೆಕ್ಷನ್ ಕೊಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ವಯೋವೃದ್ದ ಪ್ರಾಣಕಳೆದು ಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ವೈದ್ಯರು ಸಾಕ್ಷತ್ ದೇವರ ರೂಪ ವೈದ್ಯೋ ನಾರಾಯಾಣನೆಂದು ಕರೆಯಲಾಗುತ್ತದೆ. ಅದೇ ಭಾವನೆಯಲ್ಲಿ ರೋಗಿ ಡಾಕ್ಟರ್ ಬಳಿ ಹೋಗ್ತಾನೆ. ಅದೇ ವೈದ್ಯ ಪ್ರಾಣ ಉಳಿಸುವ ಬದಲಿಗೆ ಪ್ರಾಣವನ್ನೇ ತೆಗೆದ್ರೆ ಹೇಗೆ. ಹೌದು ವೈದ್ಯರ ನಿರ್ಲಕ್ಷ್ಯಕ್ಕೆ ಗಂಗಧರಯ್ಯ (75) ವಯೋವೃದ್ದ ಪ್ರಾಣ ಕಳೆದುಕೊಂಡಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ರಕ್ಷಿತ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು. ವೈದ್ಯರ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ

ಫ್ಲೋ…

ಕಳೆದ ಶನಿವಾರ ರಾತ್ರಿ 7:30ಕ್ಕೆ ಬಾಶೆಟ್ಟಿಹಳ್ಳಿಯ ವೀರಾಪುರ ಗ್ರಾಮದಿಂದ ಗಂಗಧರಯ್ಯನನ್ನ ರಕ್ಷಿತ ಆಸ್ಪತ್ರೆಗೆ ಕರ್ಕೊಂಡ್ ಬರ್ತಾರೆ. ಆತ ನೆಗಡಿ ಮತ್ತು ಕೆಮ್ಮನಿಂದ ಬಳಲುತ್ತಿದ್ದಾರು. ವೃದ್ಧನನ್ನ ಪರಿಕ್ಷೀಸಿದ ವೈದ್ಯರು ಗ್ಲೂಕೋಸ್ ಕೊಡುವ ರೀತಿಯಲ್ಲಿ ಐದು ಇಂಜೆಕ್ಷನ್ ಕೊಟ್ಟಿದ್ದಾರೆ. ಕೆಲವೇ ಕ್ಷಣಗಳಲ್ಲಿ ರೋಗಿ ಬೆವರಲು ಶುರು ಮಾಡಿದ್ದಾಗ ಮತ್ತೊಂದು ಇಂಜೆಕ್ಷನ್ ಕೊಟ್ಟಿದ್ದಾರೆ. ಮನೆಗೆ ಕರ್ಕೊಂಡ್ ಬಂದ ನಂತರ ರೋಗಿಯ ಸ್ಥಿತಿ ಮತ್ತಷ್ಟು ಗಂಭೀರವಾಯ್ತು ಮತ್ತೇ ರಕ್ಷಿತ ಆಸ್ಪತ್ರೆಗೆ ಕರ್ಕೊಂಡ್ ಹೋದಾಗ ಪಕ್ಕದಲ್ಲಿನ ಮತ್ತೊಂದು ಆಸ್ಪತ್ರೆ ಕರೆದುಕೊಂಡು ಹೊಗುವಂತೆ . ಅಲ್ಲಿಗೆ ಹೋಗುವಷ್ಷರಲ್ಲಿ ರೋಗಿ ಸಾವನ್ನಪ್ಪಿದ್ದರು ರೋಗಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತನ ಸಂಬಂಧಿಕರ ಆರೋಪ.

01a-ಬೈಟ್ : ವಿಶ್ವನಾಥ್. ಮೃತನ ಸಂಬಂಧಿ
01b-ಬೈಟ್ : ಅಂಬರೀಶ್ . ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯ.

ಅದರೆ ರಕ್ಷಿತ ಆಸ್ಪತ್ರೆಯ ವೈದ್ಯರು ಮೃತನ ಸಂಬಂಧಿಕರು ಆರೋಪವನ್ನು ಅಲ್ಲಗೆಳೆಯುತ್ತಾರೆ. ಮೃತ ವ್ಯಕ್ತಿ ಕೆಲವು ದಿನಗಳ ಹಿಂದೆ ಸ್ಟ್ರೋಕ್ ಗೆ ತುತ್ತಾಗಿದ್ದರು. ಕಫದಿಂದ ಬಳಲುತ್ತಿದ್ದ ಅವರಿಗೆ ಎರಡೇ ಇಂಜೆಕ್ಷನ್ ಕೊಟ್ಟಿರೋದು. ಮನೆಗೆ ಕರ್ಕೊಂಡ್ ಹೋದ ನಂತರ ಅವರಿಗೆ ಜ್ಯೂಸ್ ಕುಡಿಸಿದ್ದಾರೆ ಇದರಿಂದ ಅವರು ಸಾವನ್ನಪ್ಪಿದ್ದಾರೆ. ಅಲ್ಲದೆ ನಮ್ಮ ಮೇಲು ಹಲ್ಲೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಮರಣೋತ್ತರ ವರದಿ ಬಂದ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ. ನಾವು ತಪ್ಪು ಮಾಡಿದ್ರೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುವುದ್ದಾಗಿ ಹೇಳುತ್ತಾರೆ.

01c-ಬೈಟ್ : ಡಾ. ನಿವೇದಿತಾ. ಚಿಕಿತ್ಸೆ ನೀಡಿದ ಡಾಕ್ಟರ್

ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು. ಪ್ರಕರಣದ ಹಿಂದಿನ ಸತ್ಯಾಸತ್ಯನೆ ಮರಣೋತ್ತರ ವರದಿ ಮೇಲೆ ನಿಂತಿದೆ. ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಡಿಹೆಚ್ ಓ ಗೆ ಪತ್ರ ಬರೆದು ಆಸ್ಪತ್ರೆಗಳ ಅಸಲಿಯತ್ ಬಯಲು ಮಾಡುವಂತೆ ಮನವಿ ಮಾಡಿದೆ.



Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.