ETV Bharat / state

ಯೋಗಿ ಸರ್ಕಾರ ದೇಶಕ್ಕೆ ರೋಗ ತಂದುಕೊಟ್ಟಿದೆ: ಹಥ್ರಾಸ್​ ಘಟನೆ ಖಂಡಿಸಿ ಡಿಕೆಶಿ ವಾಗ್ದಾಳಿ

author img

By

Published : Oct 2, 2020, 11:21 AM IST

ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ಘಟನೆ ಸಂಬಂಧ ಯುಪಿ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್​ ಹರಿಹಾಯ್ದರು.

DK Shivakumar spark on Uttar Pradesh, DK Shivakumar spark on Uttar Pradesh government, DK Shivakumar, DK Shivakumar news, Hathras rape and murder case, Hathras rape and murder case 2020, Hathras rape and murder news, ಉತ್ತರಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದ ಡಿಕೆ ಶಿವಕುಮಾರ್​, ಹಥ್ರಾಸ್​ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಹಥ್ರಾಸ್​ ಯುವತಿ ಅತ್ಯಾಚಾರ ಮತ್ತು ಕೊಲೆ, ಹಥ್ರಾಸ್​ ಯುವತಿ ಅತ್ಯಾಚಾರ ಮತ್ತು ಕೊಲೆ ಸುದ್ದಿ, ಹಥ್ರಾಸ್​ ಯುವತಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿದ ಡಿಕೆಶಿ, ಡಿಕೆ ಶಿವಕುಮಾರ್​, ಡಿಕೆ ಶಿವಕುಮಾರ್ ಸುದ್ದಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​,
ಹಥ್ರಾಸ್​ ಘಟನೆ ಖಂಡಿಸಿ ಡಿಕೆಶಿ ವಾಗ್ದಾಳಿ

ಬೆಳಗಾವಿ: ಯೋಗಿ ಆದಿತ್ಯನಾಥ್​ ಸರ್ಕಾರ ದೇಶಕ್ಕೆ ರೋಗ ತಂದುಕೊಟ್ಟಿದೆ. ಸಂಸ್ಕಾರಯುತ ದೇಶಕ್ಕೆ ಕಪ್ಪು ಚುಕ್ಕೆ ತಂದುಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಹಥ್ರಾಸ್​ ಘಟನೆ ಖಂಡಿಸಿ ಡಿಕೆಶಿ ವಾಗ್ದಾಳಿ

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಗೌರವ, ಸ್ವಾಭಿಮಾನ, ನಮ್ಮ ಸಮುದಾಯಕ್ಕೆ ಜಗತ್ತಿನ ಮುಂದೆ ಯೋಗಿ ಸರ್ಕಾರ ಕಪ್ಪು ಚುಕ್ಕೆ ತಂದಿದೆ. ದಲಿತ ಯುವತಿ ಎಂಬುವುದು ಪ್ರಶ್ನೆ ಇಲ್ಲಿ ಉದ್ಭವಿಸಲ್ಲ. ಮಾನವಕುಲಕ್ಕೆ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.

ಅಂಗಡಿ ಅಂತ್ಯಸಂಸ್ಕಾರ ಹೇಗಾಯ್ತು ಗೊತ್ತಲ್ಲ!

ಸುರೇಶ್​ ಅಂಗಡಿ ಅವರು ರೈಲ್ವೆ ಸಚಿವರಾಗಿದ್ದರು. ಬೆಳಗಾವಿಯಲ್ಲಿ ಆರ್ಮಿ ಬೇಸ್ ಇದೆ. ಪಾರ್ಥಿವ ಶರೀರವನ್ನು ಇಲ್ಲಿಗೆ ತರಬಹುದಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಡಿಕೆಶಿ ಆರೋಪಿಸಿದರು.

ಪಾರ್ಥಿವ ಶರೀರ ಇಲ್ಲಿಗೆ ತಂದು ಗೌರವಯುತ ಅಂತ್ಯಸಂಸ್ಕಾರ ಮಾಡಬೇಕಿತ್ತು. ಕ್ಷೇತ್ರದ ಜನತೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಬೇಕಿತ್ತು. ಎರಡು ತಿಂಗಳ ಹಿಂದೆ ಏನೇನೋ ರಾಜಕಾರಣ ನಡೆದಿತ್ತು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗಲಿಲ್ಲ ಎಂದು ಹೇಳಿದರು.

ಅಂತ್ಯ ಸಂಸ್ಕಾರ ಹೇಗಾಯಿತು ಎಂಬುವುದನ್ನು ಎಲ್ಲರೂ ವಿಡಿಯೋದಲ್ಲಿ ನೋಡಿದ್ದಾರೆ. ಕ್ಷೇತ್ರದ ಜನರು ಸುರೇಶ್ ಅಂಗಡಿಯವರ ಆತ್ಮ ಹಾಗೂ ಅವರ ಕುಟುಂಬ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಇಂದು ಸಂಜೆ ಜಿಲ್ಲಾ ಕಾಂಗ್ರೆಸ್ ಕಮಿಟಿ ಜತೆ ಸಭೆ ನಡೆಸಲಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಈ ಹಿಂದೆ ಸೋತವರು, ಗೆದ್ದವರ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ ಎಂದರು.

ಬೆಳಗಾವಿ: ಯೋಗಿ ಆದಿತ್ಯನಾಥ್​ ಸರ್ಕಾರ ದೇಶಕ್ಕೆ ರೋಗ ತಂದುಕೊಟ್ಟಿದೆ. ಸಂಸ್ಕಾರಯುತ ದೇಶಕ್ಕೆ ಕಪ್ಪು ಚುಕ್ಕೆ ತಂದುಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಹಥ್ರಾಸ್​ ಘಟನೆ ಖಂಡಿಸಿ ಡಿಕೆಶಿ ವಾಗ್ದಾಳಿ

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಗೌರವ, ಸ್ವಾಭಿಮಾನ, ನಮ್ಮ ಸಮುದಾಯಕ್ಕೆ ಜಗತ್ತಿನ ಮುಂದೆ ಯೋಗಿ ಸರ್ಕಾರ ಕಪ್ಪು ಚುಕ್ಕೆ ತಂದಿದೆ. ದಲಿತ ಯುವತಿ ಎಂಬುವುದು ಪ್ರಶ್ನೆ ಇಲ್ಲಿ ಉದ್ಭವಿಸಲ್ಲ. ಮಾನವಕುಲಕ್ಕೆ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.

ಅಂಗಡಿ ಅಂತ್ಯಸಂಸ್ಕಾರ ಹೇಗಾಯ್ತು ಗೊತ್ತಲ್ಲ!

ಸುರೇಶ್​ ಅಂಗಡಿ ಅವರು ರೈಲ್ವೆ ಸಚಿವರಾಗಿದ್ದರು. ಬೆಳಗಾವಿಯಲ್ಲಿ ಆರ್ಮಿ ಬೇಸ್ ಇದೆ. ಪಾರ್ಥಿವ ಶರೀರವನ್ನು ಇಲ್ಲಿಗೆ ತರಬಹುದಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಡಿಕೆಶಿ ಆರೋಪಿಸಿದರು.

ಪಾರ್ಥಿವ ಶರೀರ ಇಲ್ಲಿಗೆ ತಂದು ಗೌರವಯುತ ಅಂತ್ಯಸಂಸ್ಕಾರ ಮಾಡಬೇಕಿತ್ತು. ಕ್ಷೇತ್ರದ ಜನತೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಬೇಕಿತ್ತು. ಎರಡು ತಿಂಗಳ ಹಿಂದೆ ಏನೇನೋ ರಾಜಕಾರಣ ನಡೆದಿತ್ತು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗಲಿಲ್ಲ ಎಂದು ಹೇಳಿದರು.

ಅಂತ್ಯ ಸಂಸ್ಕಾರ ಹೇಗಾಯಿತು ಎಂಬುವುದನ್ನು ಎಲ್ಲರೂ ವಿಡಿಯೋದಲ್ಲಿ ನೋಡಿದ್ದಾರೆ. ಕ್ಷೇತ್ರದ ಜನರು ಸುರೇಶ್ ಅಂಗಡಿಯವರ ಆತ್ಮ ಹಾಗೂ ಅವರ ಕುಟುಂಬ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಇಂದು ಸಂಜೆ ಜಿಲ್ಲಾ ಕಾಂಗ್ರೆಸ್ ಕಮಿಟಿ ಜತೆ ಸಭೆ ನಡೆಸಲಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಈ ಹಿಂದೆ ಸೋತವರು, ಗೆದ್ದವರ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.