ETV Bharat / state

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಪೊಲೀಸರ ವಿರುದ್ಧದ ಆರೋಪಗಳಿಗೆ ಕಮಲ್​ ಪಂತ್ ಸ್ಪಷ್ಟನೆ ​

author img

By

Published : Aug 27, 2020, 1:46 PM IST

ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಡಿಜಿಟಲ್​ ಎವಿಡೆನ್ಸ್​​ ಆಧಾರದ ಮೇಲೆಯೇ ಆರೋಪಿಗಳನ್ನು ಬಂಧಿಸಲಾಗಿದೆಯೇ ಹೊರತು, ಯಾವುದೇ ಅಮಾಯಕರನ್ನು ನಾವು ಇದೂವರೆಗೂ ಬಂಧಿಸಿಲ್ಲವೆಂದು ಬೆಂಗಳೂರು ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ಸ್ಪಷ್ಟಪಡಿಸಿದ್ದಾರೆ.

Kamal Pant
ಕಮಲ್​ ಪಂತ್​ ಹೇಳಿಕೆ

ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತನಿಖೆ ಮುಂದುವರೆದಿದ್ದು, ಈವರೆಗೆ ಯಾವುದೇ ಅಮಾಯಕರನ್ನೂ ಸಹ ಬಂಧಿಸಿಲ್ಲವೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​​ ಸ್ಪಷ್ಟನೆ ನೀಡಿದ್ದಾರೆ.

ಗಲಭೆ ಪ್ರಕರಣದ ತನಿಖೆ ಕುರಿತು ಕಮಲ್​ ಪಂತ್​ ಮಾಹಿತಿ

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ‌ ಇಲ್ಲಿಯವರೆಗೆ 377 ಆರೋಪಿಗಳನ್ನು ಬಂಧಿಸಲಾಗಿದ್ದು, ಕೆಲವರನ್ನ ಬಿಡುಗಡೆ ಮಾಡಿ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 65 ಕೇಸ್​ಗಳು ದಾಖಲಾಗಿದ್ದು, ಅದರಲ್ಲಿ 3 ಕೇಸ್ ಸಿಸಿಬಿ ಬಳಿ ಇವೆ. ಇನ್ನುಳಿದಂತೆ 62 ಕೇಸ್​ಗಳನ್ನು ನಗರದ ವಿವಿಧ ಪೊಲೀಸ್​​ ಠಾಣೆಗಳಲ್ಲಿ ತನಿಖೆ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದರು.

ಈ ಗಲಭೆ ಪ್ರಕರಣದಿಂದಾಗಿ 10 ಕೋಟಿಯಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ಸೇರಿದಂತೆ ಇನ್ನಿತರ ನಷ್ಟ ಸಂಭವಿಸಿದೆ ಎಂಬುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ನನ್ನನ್ನು ಎರಡು ಸಲ ಭೇಟಿ ಮಾಡಿದ್ದಾರೆ. ತನಿಖೆಯ ಬಗ್ಗೆ ಅವರಿಗೆ ಸಮಾಧಾನವಾಗಿದೆ ಎಂದು ಪಂತ್​ ಹೇಳಿದ್ದಾರೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಗಳ ಪೋಷಕರು ಆರೋಪಿಸಿದ್ದಾರೆ‌. ಆದರೆ ನಾವು ಇದೂವರೆಗೆ ಅಂಥಹವರನ್ನು ಅರೆಸ್ಟ್​​ ಮಾಡಿಲ್ಲ, ಡಿಜಿಟಲ್ ಎವಿಡೆನ್ಸ್ ಆಧಾರದ ಮೇಲೆಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತನಿಖೆ ಮುಂದುವರೆದಿದ್ದು, ಈವರೆಗೆ ಯಾವುದೇ ಅಮಾಯಕರನ್ನೂ ಸಹ ಬಂಧಿಸಿಲ್ಲವೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​​ ಸ್ಪಷ್ಟನೆ ನೀಡಿದ್ದಾರೆ.

ಗಲಭೆ ಪ್ರಕರಣದ ತನಿಖೆ ಕುರಿತು ಕಮಲ್​ ಪಂತ್​ ಮಾಹಿತಿ

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ‌ ಇಲ್ಲಿಯವರೆಗೆ 377 ಆರೋಪಿಗಳನ್ನು ಬಂಧಿಸಲಾಗಿದ್ದು, ಕೆಲವರನ್ನ ಬಿಡುಗಡೆ ಮಾಡಿ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 65 ಕೇಸ್​ಗಳು ದಾಖಲಾಗಿದ್ದು, ಅದರಲ್ಲಿ 3 ಕೇಸ್ ಸಿಸಿಬಿ ಬಳಿ ಇವೆ. ಇನ್ನುಳಿದಂತೆ 62 ಕೇಸ್​ಗಳನ್ನು ನಗರದ ವಿವಿಧ ಪೊಲೀಸ್​​ ಠಾಣೆಗಳಲ್ಲಿ ತನಿಖೆ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದರು.

ಈ ಗಲಭೆ ಪ್ರಕರಣದಿಂದಾಗಿ 10 ಕೋಟಿಯಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ಸೇರಿದಂತೆ ಇನ್ನಿತರ ನಷ್ಟ ಸಂಭವಿಸಿದೆ ಎಂಬುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ನನ್ನನ್ನು ಎರಡು ಸಲ ಭೇಟಿ ಮಾಡಿದ್ದಾರೆ. ತನಿಖೆಯ ಬಗ್ಗೆ ಅವರಿಗೆ ಸಮಾಧಾನವಾಗಿದೆ ಎಂದು ಪಂತ್​ ಹೇಳಿದ್ದಾರೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಗಳ ಪೋಷಕರು ಆರೋಪಿಸಿದ್ದಾರೆ‌. ಆದರೆ ನಾವು ಇದೂವರೆಗೆ ಅಂಥಹವರನ್ನು ಅರೆಸ್ಟ್​​ ಮಾಡಿಲ್ಲ, ಡಿಜಿಟಲ್ ಎವಿಡೆನ್ಸ್ ಆಧಾರದ ಮೇಲೆಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.