ETV Bharat / state

ವರುಣಾಘಾತಕ್ಕೆ ಸಾವಿಗೀಡಾದವರ ಸಂಖ್ಯೆ ಏರಿಕೆ: ಜಿಲ್ಲಾವಾರು ಮೃತರ ಸಂಖ್ಯೆ ವಿವರ - bangalore News

ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹಕ್ಕೆ ತುತ್ತಾಗಿ ಸಂಭವಿಸಿರುವ ಹಾನಿಯ ಸಂಪೂರ್ಣ ವಿವರ ಇಲ್ಲಿದೆ.

ಭೀಕರ ಪ್ರವಾಹದಿಂದ ಜನರ ರಕ್ಷಣಾ ಕಾರ್ಯ
author img

By

Published : Aug 19, 2019, 11:20 PM IST

ಬೆಂಗಳೂರು: ರಾಜ್ಯದ ಉಂಟಾಗಿರುವ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ.

ಕೃಷ್ಣ ಮೇಲ್ದಂಡೆ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಇದರ ಪರಿಣಾಮ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ 0.64 ಲಕ್ಷ ಕ್ಯೂಸೆಕ್​ ನೀರಿನ ಹರಿವು ಕಂಡುಬಂದಿದೆ. ಪ್ರವಾಹಕ್ಕೆ ತುತ್ತಾಗಿ ಬೆಳಗಾವಿಯಲ್ಲಿ 19 ಮಂದಿ ಸಾವಿಗೀಡಾಗಿದ್ದರೆ, ಕೊಡಗಿನಲ್ಲಿ 13, ಶಿವಮೊಗ್ಗದಲ್ಲಿ 10, ಚಿಕ್ಕಮಗಳೂರಿನಲ್ಲಿ 10 ಹಾಗೂ ಮೈಸೂರಿನಲ್ಲಿ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Bangalore
2019ರ ಪ್ರವಾಹದ ಹಾನಿ ವಿವರ

ಉಳಿದಂತೆ ಉತ್ತರ ಕನ್ನಡ, ಹಾಸನ, ಉಡುಪಿ, ಧಾರವಾಡದಲ್ಲಿ ತಲಾ 4 ಮಂದಿ ಹಾಗೂ ಬಾಗಲಕೋಟೆಯಲ್ಲಿ 3 ಮಂದಿ ಸಾವಿಗೀಡಾಗಿದ್ದು, ಗದಗ, ಯಾದಗಿರಿ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಇನ್ನು, ಕೊಡಗಿನಲ್ಲಿ 3, ಹಾವೇರಿಯಲ್ಲಿ ಒಬ್ಬರು ಬೆಳಗಾವಿಯಲ್ಲಿ 5 ಮಂದಿ ಎಂದು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಪ್ರಮಾಣ ಇಳಿಮುಖವಾಗಿದೆ. ಇತ್ತ ಆಲಮಟ್ಟಿ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣವನ್ನೂ ಕಡಿಮೆಗೊಳಿಸಲಾಗಿದೆ.

ವರುಣಾಘಾತಕ್ಕೆ ಸಂಭವಿಸಿದ ಹಾನಿ ವಿವರ:

  • ಒಟ್ಟು ಸಂಭವಿಸಿದ ಸಾವು -82
  • ನಾಪತ್ತೆಯಾದವರ ಸಂಖ್ಯೆ- 9
  • ಜಾನುವಾರುಗಳ ಸಾವು -992
  • ಒಟ್ಟು ರಕ್ಷಿಸಲ್ಪಟ್ಟ ಸಂತ್ರಸ್ತರು- 2,10,095
  • ಪ್ರವಾಹ ಪೀಡಿತ ಜಿಲ್ಲೆ -22
  • ಪ್ರವಾಹ ಪೀಡಿತ ತಾಲೂಕು- 103
  • ಒಟ್ಟು ಬೆಳೆ ಹಾನಿ- 7.5ಲಕ್ಷ ಹೆಕ್ಟೇರ್
  • ಒಟ್ಟು ಮನೆಗಳ ಹಾನಿ -75,317

ಬೆಂಗಳೂರು: ರಾಜ್ಯದ ಉಂಟಾಗಿರುವ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ.

ಕೃಷ್ಣ ಮೇಲ್ದಂಡೆ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಇದರ ಪರಿಣಾಮ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ 0.64 ಲಕ್ಷ ಕ್ಯೂಸೆಕ್​ ನೀರಿನ ಹರಿವು ಕಂಡುಬಂದಿದೆ. ಪ್ರವಾಹಕ್ಕೆ ತುತ್ತಾಗಿ ಬೆಳಗಾವಿಯಲ್ಲಿ 19 ಮಂದಿ ಸಾವಿಗೀಡಾಗಿದ್ದರೆ, ಕೊಡಗಿನಲ್ಲಿ 13, ಶಿವಮೊಗ್ಗದಲ್ಲಿ 10, ಚಿಕ್ಕಮಗಳೂರಿನಲ್ಲಿ 10 ಹಾಗೂ ಮೈಸೂರಿನಲ್ಲಿ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Bangalore
2019ರ ಪ್ರವಾಹದ ಹಾನಿ ವಿವರ

ಉಳಿದಂತೆ ಉತ್ತರ ಕನ್ನಡ, ಹಾಸನ, ಉಡುಪಿ, ಧಾರವಾಡದಲ್ಲಿ ತಲಾ 4 ಮಂದಿ ಹಾಗೂ ಬಾಗಲಕೋಟೆಯಲ್ಲಿ 3 ಮಂದಿ ಸಾವಿಗೀಡಾಗಿದ್ದು, ಗದಗ, ಯಾದಗಿರಿ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಇನ್ನು, ಕೊಡಗಿನಲ್ಲಿ 3, ಹಾವೇರಿಯಲ್ಲಿ ಒಬ್ಬರು ಬೆಳಗಾವಿಯಲ್ಲಿ 5 ಮಂದಿ ಎಂದು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಪ್ರಮಾಣ ಇಳಿಮುಖವಾಗಿದೆ. ಇತ್ತ ಆಲಮಟ್ಟಿ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣವನ್ನೂ ಕಡಿಮೆಗೊಳಿಸಲಾಗಿದೆ.

ವರುಣಾಘಾತಕ್ಕೆ ಸಂಭವಿಸಿದ ಹಾನಿ ವಿವರ:

  • ಒಟ್ಟು ಸಂಭವಿಸಿದ ಸಾವು -82
  • ನಾಪತ್ತೆಯಾದವರ ಸಂಖ್ಯೆ- 9
  • ಜಾನುವಾರುಗಳ ಸಾವು -992
  • ಒಟ್ಟು ರಕ್ಷಿಸಲ್ಪಟ್ಟ ಸಂತ್ರಸ್ತರು- 2,10,095
  • ಪ್ರವಾಹ ಪೀಡಿತ ಜಿಲ್ಲೆ -22
  • ಪ್ರವಾಹ ಪೀಡಿತ ತಾಲೂಕು- 103
  • ಒಟ್ಟು ಬೆಳೆ ಹಾನಿ- 7.5ಲಕ್ಷ ಹೆಕ್ಟೇರ್
  • ಒಟ್ಟು ಮನೆಗಳ ಹಾನಿ -75,317
Intro:newsBody:ವರುಣಾಘಾತಕ್ಕೆ ಸಾವಿಗೀಡಾದವರ ಸಂಖ್ಯೆ 82ಕ್ಕೆ ಏರಿಕೆ: 9 ಮಂದಿ ನಾಪತ್ತೆ

ಬೆಂಗಳೂರು: ರಾಜ್ಯದ ಭೀಕರ ಪ್ರವಾಹದಿಂದ ಈವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ.

ನಿನ್ನೆ 76 ಮುಂದಿದ್ದ ಸಾವಿನ ಸಂಖ್ಯೆ ಇಂದು 82 ಕ್ಕೆ ಏರಿಕೆಯಾಗಿದೆ. ಇನ್ನು ಸುಮಾರು 9 ಮಂದಿ ಪ್ರವಾಹದಿಂದ ನಾಪತ್ತೆಯಾಗಿದ್ದಾರೆ. ಇಂದು ಕೃಷ್ಣಾ ಮೇಲ್ದಂಡೆ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಇದರ ಪರಿಣಾಮ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ 0.64 ಲಕ್ಷ ಕ್ಯೂಸೆಕ್ಸ್ ನೀರಿನ ಹರಿವು ಕಂಡುಬಂದಿದೆ. ಬೆಳಗಾವಿಯಲ್ಲಿ 19 ಮಂದಿ ಸಾವಿಗೀಡಾಗಿದ್ದರೆ, ಕೊಡಗಿನಲ್ಲಿ 13, ಶಿವಮೊಗ್ಗದಲ್ಲಿ 10 ಮಂದಿ ಹಾಗೂ ಚಿಕ್ಕಮಗಳೂರಿನಲ್ಲಿ 10, ಮೈಸೂರಿನಲ್ಲಿ 5, ಮಂದಿ ಪ್ರಾಣ ಕಳಕೊಂಡಿದ್ದಾರೆ. ಉಳಿದಂತೆ ಉತ್ತರ ಕನ್ನಡ, ಹಾಸನ, ಉಡುಪಿ, ಧಾರವಾಡದಲ್ಲಿ ತಲಾ 4 ಮಂದಿ ಹಾಗೂ ಬಾಗಲಕೋಟೆಯಲ್ಲಿ ತಲಾ 3 ಮಂದಿ ಸಾವಿಗೀಡಾಗಿದ್ದಾರೆ. ಗದಗ್, ಯಾದಗಿರಿ, ದಾವಣಗೆರೆ, ಜಿಲ್ಲೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ನಾಪತ್ತೆಯಾದವರನ್ನು ಕೊಡಗಿನಲ್ಲಿ 3, ಹಾವೇರಿಯಲ್ಲಿ ಒಬ್ಬರು ಬೆಳಗಾವಿಯಲ್ಲಿ 5 ಮಂದಿ ಎಂದು ಗುರುತಿಸಲಾಗಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಪ್ರಮಾಣ ಇಳಿ ಮುಖವಾಗಿದೆ. ಇತ್ತ ಆಲಮಟ್ಟಿ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣವನ್ನೂ ಕಡಿಮೆಗೊಳಿಸಲಾಗಿದೆ.

ವರುಣಾಘಾತಕ್ಕೆ ಸಂಭವಿಸಿದ ಹಾನಿ ವಿವರ:

ಒಟ್ಟು ಸಂಭವಿಸಿದ ಸಾವು 82

ನಾಪತ್ತೆಯಾದವರ ಸಂಖ್ಯೆ 9

ಜಾನುವರುಗಳ ಸಾವು 992

ಒಟ್ಟು ಸಂರಕ್ಷಿಸಲ್ಪಟ್ಟ ಸಂತ್ರಸ್ತರು 2,10,095

ಪ್ರವಾಹ ಪೀಡಿತ ಜಿಲ್ಲೆ 22

ಪ್ರವಾಹ ಪೀಡಿತ ತಾಲೂಕು 103

ಒಟ್ಟು ಬೆಳೆ ಹಾನಿ 7.5ಲಕ್ಷ ಹೆಕ್ಟೇರ್

ಒಟ್ಟು ಮನೆಗಳ ಹಾನಿ 75,317Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.