ETV Bharat / state

ನೂತನ ಆಯುಕ್ತರ ಮೇಲೆ ಅಸಮಾಧಾನ: ಅರ್ಧದಲ್ಲೇ ನಗರ ಪ್ರದಕ್ಷಿಣೆ ಕೈಬಿಟ್ಟ ಉಪಮೇಯರ್

author img

By

Published : Sep 8, 2019, 2:44 PM IST

ಸಿಎಂ ಯಡಿಯೂರಪ್ಪ ಇಂದು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಈ ವೇಳೆ ಬಿಬಿಎಂಪಿ ನೂತನ ಆಯುಕ್ತರು​​ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಉಪಮೇಯರ್​ ನಗರ ಪ್ರದಕ್ಷಿಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಉಪಮೇಯರ್ ಭದ್ರೇಗೌಡ , Deputy Mayor Bhadre Gowda

ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಈ ವೇಳೆ ಬಿಬಿಎಂಪಿ ನೂತನ ಆಯುಕ್ತರು ತನಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಉಪಮೇಯರ್​ ಭದ್ರೇಗೌಡ ತಮ್ಮ ಕಾರಿನಲ್ಲಿ ವಾಪಸಾಗಿರುವ ಘಟನೆ ನಡೆಯಿತು.

ಉಪಮೇಯರ್ ಭದ್ರೇಗೌಡ

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಭದ್ರೇಗೌಡ, ಕಾಮಗಾರಿ ವೀಕ್ಷಣೆ ವೇಳೆ ನೂತನ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಅವರು ಸ್ವಲ್ವ ಪಕ್ಕಕ್ಕೆ ಬನ್ನಿ ಎಂದರು. ಅದಕ್ಕೆ ನಾನು ಪಕ್ಕಕ್ಕೆ ಹೋಗಿ ಸರ್​ ಎಂದೆ. ಆಗ ನಾನು ನನ್ನ ಪಾಡಿಗೆ ನಾನು ನಿಂತಿದ್ದೆ. ಆದರೆ ಮತ್ತೆ ತಮ್ಮ ಕೈಯಿಂದ ನನ್ನನ್ನು ತಳ್ಳಿ ಆ ಕಡೆ ಹೋದರು. ಇಷ್ಟಾದ ಮೇಲೆ ನಾನು ಅವರ ಜೊತೆ ಹೋಗಲ್ಲವೆಂದು ಅನಿಲ್ ಕುಮಾರ್ ವಿರುದ್ಧ ಭದ್ರೇಗೌಡ ಕೆಂಡಾಮಂಡಲವಾದರು.

ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಈ ವೇಳೆ ಬಿಬಿಎಂಪಿ ನೂತನ ಆಯುಕ್ತರು ತನಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಉಪಮೇಯರ್​ ಭದ್ರೇಗೌಡ ತಮ್ಮ ಕಾರಿನಲ್ಲಿ ವಾಪಸಾಗಿರುವ ಘಟನೆ ನಡೆಯಿತು.

ಉಪಮೇಯರ್ ಭದ್ರೇಗೌಡ

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಭದ್ರೇಗೌಡ, ಕಾಮಗಾರಿ ವೀಕ್ಷಣೆ ವೇಳೆ ನೂತನ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಅವರು ಸ್ವಲ್ವ ಪಕ್ಕಕ್ಕೆ ಬನ್ನಿ ಎಂದರು. ಅದಕ್ಕೆ ನಾನು ಪಕ್ಕಕ್ಕೆ ಹೋಗಿ ಸರ್​ ಎಂದೆ. ಆಗ ನಾನು ನನ್ನ ಪಾಡಿಗೆ ನಾನು ನಿಂತಿದ್ದೆ. ಆದರೆ ಮತ್ತೆ ತಮ್ಮ ಕೈಯಿಂದ ನನ್ನನ್ನು ತಳ್ಳಿ ಆ ಕಡೆ ಹೋದರು. ಇಷ್ಟಾದ ಮೇಲೆ ನಾನು ಅವರ ಜೊತೆ ಹೋಗಲ್ಲವೆಂದು ಅನಿಲ್ ಕುಮಾರ್ ವಿರುದ್ಧ ಭದ್ರೇಗೌಡ ಕೆಂಡಾಮಂಡಲವಾದರು.

Intro:KN_BNG_02_BHAREGOWDA_dmayore_VIEDO_7201801


Body:KN_BNG_02_BHAREGOWDA_dmayore_VIEDO_7201801


Conclusion:KN_BNG_02_BHAREGOWDA_dmayore_VIEDO_7201801
ETV Bharat Logo

Copyright © 2024 Ushodaya Enterprises Pvt. Ltd., All Rights Reserved.