ETV Bharat / state

ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ: ಮರಗಳು ಬಿದ್ದು ಹಲವು ವಾಹನಗಳು ಜಖಂ!

author img

By

Published : May 28, 2020, 10:39 AM IST

Updated : May 28, 2020, 12:43 PM IST

ನಿನ್ನೆ ಸಂಜೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ನಗರದ ಬಹುತೇಕ ಕಡೆ ಮರಗಳು ನೆಲಕ್ಕುರುಳಿವೆ. ಮನೆ ಮುಂದೆ ನಿಲ್ಲಿಸಿದ್ದ ಕೆಲವು ಕಾರು, ಬೈಕ್ , ಆಟೋಗಳು ಜಖಂಗೊಂಡಿವೆ.

Rain in Bangalore
ಬೆಂಗಳೂರಿನಲ್ಲಿ ಸುರಿದ ಮಳೆಗೆ ಜಖಂಗೊಂಡ ವಾಹನಗಳು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ನಗರದ ಬಹುತೇಕ ಕಡೆ ಮರಗಳು ನೆಲಕ್ಕುರುಳಿವೆ. ಪರಿಣಾಮ ಬಹುತೇಕ ರಸ್ತೆಗಳಲ್ಲಿ ಕರೆಂಟ್ ಇಲ್ಲದೇ ಇದ್ದು, ಮತ್ತೊಂದೆಡೆ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್, ಆಟೋಗಳು ಜಖಂಗೊಂಡಿವೆ.

ಮಲ್ಲೇಶ್ವರಂನ 15ನೇ ಕ್ರಾಸ್​ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರ್ ಮೇಲೆ ಬೃಹದಾಕಾರದ ಮರ ಬಿದ್ದಿದ್ದು, ಕಾರು ಜಖಂ ಆಗಿದೆ. ಸದ್ಯ ಕಾರಿನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಬೆಂಗಳೂರಿನಲ್ಲಿ ಸುರಿದ ಮಳೆಗೆ ಜಖಂಗೊಂಡ ವಾಹನಗಳು

ನಗರದದ ಮಲ್ಲೇಶ್ವರಂ, ಗಾಂಧಿನಗರ, ಜಯನಗರ, ಶಾಂತಿನಗರ, ಯಶವಂತಪುರ, ಆರ್​​​​​.ಟಿ. ನಗರ ಹೀಗೆ ಬಹುತೇಕ ಕಡೆಗಳಲ್ಲಿ‌ ಮಳೆಯ ಅವಾಂತರದಿಂದ ರಸ್ತೆ ಬದಿ ನೀರು ಇರುವ ಕಾರಣ ಮುಂಜಾನೆ ಟ್ರಾಫಿಕ್ ಜಾಮ್​ ಉಂಟಾಗಿದೆ.‌ ಹೀಗಾಗಿ ಟ್ರಾಫಿಕ್ ಪೊಲೀಸರು ಮುಂಜಾನೆ ರಸ್ತೆಗಿಳಿದು ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ.

ಇನ್ನು ನಗರದ ಹಲವೆಡೆ 88 ಮರಗಳು ಹಾಗೂ ಕೊಂಬೆಗಳು ಧರೆಗುರುಳಿದ್ದು, ಜೊತೆಗೆ 39 ವಿದ್ಯುತ್ ಕಂಬಗಳು ಮುರಿದು ಬಿದ್ದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಎರಡು ದಿನದಿಂದ ವಿದ್ಯುತ್, ನೀರು ಇಲ್ಲದೆ ಜನ ಪರದಾಡುವಂತಾಗಿದೆ.

Rain in Bangalore
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ಪ್ರತಿ

ಆರ್​​​.ಆರ್. ನಗರದಲ್ಲಿ 35 ಮಿ.ಮೀ., ಯಲಹಂಕ ವಲಯದಲ್ಲಿ 32 ಮಿ.ಮೀ., ಪಶ್ಚಿಮ ವಲಯದ ನಂದಿನಿ ಲೇಔಟ್ ನಲ್ಲಿ 18 ಮಿ.ಮೀ.ನಷ್ಟು ಮಳೆ ಪ್ರಮಾಣ ದಾಖಲಾಗಿದ್ದು, ಉಳಿದ ವಲಯಗಳಲ್ಲಿ 10ರಿಂದ 14 ಮಿ.ಮೀ. ಮಳೆ ದಾಖಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ನಗರದ ಬಹುತೇಕ ಕಡೆ ಮರಗಳು ನೆಲಕ್ಕುರುಳಿವೆ. ಪರಿಣಾಮ ಬಹುತೇಕ ರಸ್ತೆಗಳಲ್ಲಿ ಕರೆಂಟ್ ಇಲ್ಲದೇ ಇದ್ದು, ಮತ್ತೊಂದೆಡೆ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್, ಆಟೋಗಳು ಜಖಂಗೊಂಡಿವೆ.

ಮಲ್ಲೇಶ್ವರಂನ 15ನೇ ಕ್ರಾಸ್​ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರ್ ಮೇಲೆ ಬೃಹದಾಕಾರದ ಮರ ಬಿದ್ದಿದ್ದು, ಕಾರು ಜಖಂ ಆಗಿದೆ. ಸದ್ಯ ಕಾರಿನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಬೆಂಗಳೂರಿನಲ್ಲಿ ಸುರಿದ ಮಳೆಗೆ ಜಖಂಗೊಂಡ ವಾಹನಗಳು

ನಗರದದ ಮಲ್ಲೇಶ್ವರಂ, ಗಾಂಧಿನಗರ, ಜಯನಗರ, ಶಾಂತಿನಗರ, ಯಶವಂತಪುರ, ಆರ್​​​​​.ಟಿ. ನಗರ ಹೀಗೆ ಬಹುತೇಕ ಕಡೆಗಳಲ್ಲಿ‌ ಮಳೆಯ ಅವಾಂತರದಿಂದ ರಸ್ತೆ ಬದಿ ನೀರು ಇರುವ ಕಾರಣ ಮುಂಜಾನೆ ಟ್ರಾಫಿಕ್ ಜಾಮ್​ ಉಂಟಾಗಿದೆ.‌ ಹೀಗಾಗಿ ಟ್ರಾಫಿಕ್ ಪೊಲೀಸರು ಮುಂಜಾನೆ ರಸ್ತೆಗಿಳಿದು ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ.

ಇನ್ನು ನಗರದ ಹಲವೆಡೆ 88 ಮರಗಳು ಹಾಗೂ ಕೊಂಬೆಗಳು ಧರೆಗುರುಳಿದ್ದು, ಜೊತೆಗೆ 39 ವಿದ್ಯುತ್ ಕಂಬಗಳು ಮುರಿದು ಬಿದ್ದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಎರಡು ದಿನದಿಂದ ವಿದ್ಯುತ್, ನೀರು ಇಲ್ಲದೆ ಜನ ಪರದಾಡುವಂತಾಗಿದೆ.

Rain in Bangalore
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ಪ್ರತಿ

ಆರ್​​​.ಆರ್. ನಗರದಲ್ಲಿ 35 ಮಿ.ಮೀ., ಯಲಹಂಕ ವಲಯದಲ್ಲಿ 32 ಮಿ.ಮೀ., ಪಶ್ಚಿಮ ವಲಯದ ನಂದಿನಿ ಲೇಔಟ್ ನಲ್ಲಿ 18 ಮಿ.ಮೀ.ನಷ್ಟು ಮಳೆ ಪ್ರಮಾಣ ದಾಖಲಾಗಿದ್ದು, ಉಳಿದ ವಲಯಗಳಲ್ಲಿ 10ರಿಂದ 14 ಮಿ.ಮೀ. ಮಳೆ ದಾಖಲಾಗಿದೆ.

Last Updated : May 28, 2020, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.