ಬೆಂಗಳೂರು: ಅಜ್ಮೀರಾ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣ ನಡೆದಿರುವ ಹಿನ್ನೆಲೆ ಇಡಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆಸ್ತಿ ಜಪ್ತಿ ಮಾಡಿದ್ದಾರೆ.
ಅಜ್ಮೀರಾಗೆ ಸೇರಿದ ಕೃಷಿ ಜಮೀನು, ರೆಸಿಡೆನ್ಸಿಯಲ್ ಪ್ಲಾಟ್, ಬ್ಯಾಂಕ್ ಖಾತೆಯಲ್ಲಿದ್ದ ಹಣ ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಓದಿ: ಭಾಗ್ಯಲಕ್ಷ್ಮಿ ಯೋಜನೆಯನ್ನು ಎಲ್ಐಸಿ ಮೂಲಕ ಜಾರಿಗೊಳಿಸಲು ಸಿಎಂಗೆ ಮನವಿ
2019ರ ಜನವರಿಯಲ್ಲಿ ನಡೆದಿದ್ದ ಬಹುಕೋಟಿ ವಂಚನೆ ಪ್ರಕರಣ ಹಿನ್ನೆಲೆ ಹೂಡಿಕೆದಾರರು ಸಿಸಿಬಿಗೆ ದೂರು ನೀಡಿದ್ದರು. ಆಗ ಸುಮಾರು 400 ಕೊಟಿ ವಂಚನೆ ಮಾಡಿದ್ದ ಆರೋಪ ಕೇಳಿ ಬಂದಿತ್ತು.