ETV Bharat / state

Bengaluru crime: ಕುಂಟ ಎಂದು ರೇಗಿಸಿದ್ದಕ್ಕೆ ಹಾಲೋಬ್ಲಾಕ್‌ ಇಟ್ಟಿಗೆಯಿಂದ ಹೊಡೆದು ಯುವಕನ ಹತ್ಯೆ.. ಇಬ್ಬರು ಸ್ನೇಹಿತರ ಬಂಧನ

author img

By

Published : Jun 22, 2023, 3:34 PM IST

Updated : Jun 22, 2023, 7:49 PM IST

ಬೆಂಗಳೂರು ಅನ್ನಪೂರ್ಣೇಶ್ವರಿ ನಗರದ ಚಾಮುಂಡೇಶ್ವರಿ ಬಾರ್ ಬಳಿ‌ ನಿನ್ನೆ ರಾತ್ರಿ ಯುವಕನನ್ನು ಹತ್ಯೆಗೈದ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

Arrest of the accused
ಆರೋಪಿಗಳ ಬಂಧನ

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ

ಬೆಂಗಳೂರು: ಕುಂಟ ಎಂದು ಛೇಡಿಸಿದಕ್ಕೆ ಯುವಕನನ್ನು ಕರೆದೊಯ್ದು ಸ್ನೇಹಿತರೇ ಹಾಲೋಬ್ಲಾಕ್‌‌ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದು ಈ ಸಂಬಂಧ ಇಬ್ಬರು ಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಚಾಮುಂಡೇಶ್ವರಿ ಬಾರ್ ಬಳಿ‌ ನಿನ್ನೆ ರಾತ್ರಿ ವಿಜಯ್ ಕುಮಾರ್ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಬಾರ್ ಕ್ಯಾಷಿಯರ್ ಲಕ್ಷಣ್ಣಗೌಡ ಎಂಬುವರು ನೀಡಿದ ದೂರಿನ‌ ಮೇರೆಗೆ ಹತ್ಯೆಗೊಳಗಾದ ವಿಜಯ್ ಸ್ನೇಹಿತರಾಗಿದ್ದ ಗಿರೀಶ್ ಹಾಗೂ ಲೋಕೇಶ್ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ವಿಜಯ್ ಚಾಮುಂಡೇಶ್ವರಿ ಬಾರ್ ನಲ್ಲಿ 2022 ರಲ್ಲಿ ಸಪ್ಲೈಯರ್ ಆಗಿ ಕೆಲಸ ಸೇರಿಕೊಂಡಿದ್ದ. ಆರು ತಿಂಗಳ ಕಾಲ ಕೆಲಸ ಮಾಡಿ ಅನ್ಯ ಕಾರಣಕ್ಕಾಗಿ ಕೆಲಸ ತೊರೆದು ಡ್ರೈವರ್ ಆಗಿ ಕೆಲಸ‌ ಮಾಡುತ್ತಿದ್ದ. ಈ ಮಧ್ಯೆ ಆಗಾಗ ಬಾರ್ ಗೆ ಮದ್ಯಸೇವನೆಗೆ ಮಾಡಲು ವಿಜಯ್ ಬರುತ್ತಿದ್ದ. ನಿನ್ನೆ ಸಂಜೆ 7 ಗಂಟೆಗೆ ಬಾರ್ ಗೆ ಬಂದಿದ್ದ ಈತ ರಾತ್ರಿ 10 ಗಂಟೆವರೆಗೂ ಬಾರ್ ನಲ್ಲಿದ್ದ.‌ ಈ ವೇಳೆ ಅಲ್ಲಿಗೆ ಬಂದ ಗಿರೀಶ್ ಹಾಗೂ ಲೊಕೇಶ್ ನೊಂದಿಗೆ‌‌ ಮದ್ಯಪಾರ್ಟಿ ಮಾಡಿದ್ದನು. ಬಿಲ್ ನೀಡುವ ವಿಚಾರದಲ್ಲಿ ಗಲಾಟೆಯಾಗಿದೆ. ಮಾತಿನ ಭರದಲ್ಲಿ ಗಿರೀಶ್ ಗೆ ವಿಜಯ್ ಕುಂಟ ಎಂದು‌ ರೇಗಿಸಿದ್ದಾನೆ. ಅನಂತರ ಬಾರ್ ಹೊರಗೆಯೂ ಮೂವರಲ್ಲಿ ಗಲಾಟೆ ಶುರುವಾಗಿದೆ.

murdered youth
ಹತ್ಯೆಯಾದ ಯುವಕ

ಬಾರ್ ಕೂಗಳತೆ ದೂರಕ್ಕೆ ವಿಜಯ್​ನನ್ನು ಕರೆದುಕೊಂಡು ಹೋದ ಆರೋಪಿಗಳು ಅಲ್ಲೇ ಇದ್ದ ಹಾಲೋಬ್ಲಾಕ್‌ ಕಲ್ಲಿನಿಂದ ತಲೆ ಮೇಲೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ‌ ಕುಸಿದುಬಿದ್ದು ವಿಜಯ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ದುಷ್ಕೃತ್ಯ ನಡೆಸಿದ ಬಳಿಕ ಬಂಧನ ಭೀತಿಯಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಬಾರ್ ಕ್ಯಾಷಿಯರ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಕೃತ್ಯವೆಸಗಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ, ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ - ಮಂಗಳೂರು : ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೋ ನ್ಯಾಯಾಲಯ ಇಂದು ಆರೋಪಿಗೆ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿದೆ.

ಅಪರಾಧಿಯು ಅಪ್ರಾಪ್ತ ಬಾಲಕಿಯ ತಾಯಿಯ ಎರಡನೇ ಪತಿ. ಬಾಲಕಿಯ ತಾಯಿ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಜುಲೈ 26ರಂದು ನಸುಕಿನ ವೇಳೆ 3.30ರ ವೇಳೆಗೆ ಈತ ತನ್ನ ಪತ್ನಿಯ ಮೊದಲನೆ ಪತಿಯ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರ ಮಾಡಿದ್ದನು. ಅಲ್ಲದೇ ಯಾರಲ್ಲಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದನು. ಬಳಿಕ ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ದೊಡ್ಡಮ್ಮನ ಬಳಿ ತಿಳಿಸಿದ್ದಳು. ಅವರು ತಕ್ಷಣ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂಓದಿ:ಯಲ್ಲಮ್ಮ ದೇವಿ ಉತ್ಸವದಲ್ಲಿ ನೂಕು ನುಗ್ಗಲು.. ಐವರಿಗೆ ಚಾಕು ಇರಿತ, 200 ಮೊಬೈಲ್​ ಕಳವು!

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ

ಬೆಂಗಳೂರು: ಕುಂಟ ಎಂದು ಛೇಡಿಸಿದಕ್ಕೆ ಯುವಕನನ್ನು ಕರೆದೊಯ್ದು ಸ್ನೇಹಿತರೇ ಹಾಲೋಬ್ಲಾಕ್‌‌ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದು ಈ ಸಂಬಂಧ ಇಬ್ಬರು ಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಚಾಮುಂಡೇಶ್ವರಿ ಬಾರ್ ಬಳಿ‌ ನಿನ್ನೆ ರಾತ್ರಿ ವಿಜಯ್ ಕುಮಾರ್ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಬಾರ್ ಕ್ಯಾಷಿಯರ್ ಲಕ್ಷಣ್ಣಗೌಡ ಎಂಬುವರು ನೀಡಿದ ದೂರಿನ‌ ಮೇರೆಗೆ ಹತ್ಯೆಗೊಳಗಾದ ವಿಜಯ್ ಸ್ನೇಹಿತರಾಗಿದ್ದ ಗಿರೀಶ್ ಹಾಗೂ ಲೋಕೇಶ್ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ವಿಜಯ್ ಚಾಮುಂಡೇಶ್ವರಿ ಬಾರ್ ನಲ್ಲಿ 2022 ರಲ್ಲಿ ಸಪ್ಲೈಯರ್ ಆಗಿ ಕೆಲಸ ಸೇರಿಕೊಂಡಿದ್ದ. ಆರು ತಿಂಗಳ ಕಾಲ ಕೆಲಸ ಮಾಡಿ ಅನ್ಯ ಕಾರಣಕ್ಕಾಗಿ ಕೆಲಸ ತೊರೆದು ಡ್ರೈವರ್ ಆಗಿ ಕೆಲಸ‌ ಮಾಡುತ್ತಿದ್ದ. ಈ ಮಧ್ಯೆ ಆಗಾಗ ಬಾರ್ ಗೆ ಮದ್ಯಸೇವನೆಗೆ ಮಾಡಲು ವಿಜಯ್ ಬರುತ್ತಿದ್ದ. ನಿನ್ನೆ ಸಂಜೆ 7 ಗಂಟೆಗೆ ಬಾರ್ ಗೆ ಬಂದಿದ್ದ ಈತ ರಾತ್ರಿ 10 ಗಂಟೆವರೆಗೂ ಬಾರ್ ನಲ್ಲಿದ್ದ.‌ ಈ ವೇಳೆ ಅಲ್ಲಿಗೆ ಬಂದ ಗಿರೀಶ್ ಹಾಗೂ ಲೊಕೇಶ್ ನೊಂದಿಗೆ‌‌ ಮದ್ಯಪಾರ್ಟಿ ಮಾಡಿದ್ದನು. ಬಿಲ್ ನೀಡುವ ವಿಚಾರದಲ್ಲಿ ಗಲಾಟೆಯಾಗಿದೆ. ಮಾತಿನ ಭರದಲ್ಲಿ ಗಿರೀಶ್ ಗೆ ವಿಜಯ್ ಕುಂಟ ಎಂದು‌ ರೇಗಿಸಿದ್ದಾನೆ. ಅನಂತರ ಬಾರ್ ಹೊರಗೆಯೂ ಮೂವರಲ್ಲಿ ಗಲಾಟೆ ಶುರುವಾಗಿದೆ.

murdered youth
ಹತ್ಯೆಯಾದ ಯುವಕ

ಬಾರ್ ಕೂಗಳತೆ ದೂರಕ್ಕೆ ವಿಜಯ್​ನನ್ನು ಕರೆದುಕೊಂಡು ಹೋದ ಆರೋಪಿಗಳು ಅಲ್ಲೇ ಇದ್ದ ಹಾಲೋಬ್ಲಾಕ್‌ ಕಲ್ಲಿನಿಂದ ತಲೆ ಮೇಲೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ‌ ಕುಸಿದುಬಿದ್ದು ವಿಜಯ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ದುಷ್ಕೃತ್ಯ ನಡೆಸಿದ ಬಳಿಕ ಬಂಧನ ಭೀತಿಯಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಬಾರ್ ಕ್ಯಾಷಿಯರ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಕೃತ್ಯವೆಸಗಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ, ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ - ಮಂಗಳೂರು : ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೋ ನ್ಯಾಯಾಲಯ ಇಂದು ಆರೋಪಿಗೆ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿದೆ.

ಅಪರಾಧಿಯು ಅಪ್ರಾಪ್ತ ಬಾಲಕಿಯ ತಾಯಿಯ ಎರಡನೇ ಪತಿ. ಬಾಲಕಿಯ ತಾಯಿ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಜುಲೈ 26ರಂದು ನಸುಕಿನ ವೇಳೆ 3.30ರ ವೇಳೆಗೆ ಈತ ತನ್ನ ಪತ್ನಿಯ ಮೊದಲನೆ ಪತಿಯ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರ ಮಾಡಿದ್ದನು. ಅಲ್ಲದೇ ಯಾರಲ್ಲಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದನು. ಬಳಿಕ ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ದೊಡ್ಡಮ್ಮನ ಬಳಿ ತಿಳಿಸಿದ್ದಳು. ಅವರು ತಕ್ಷಣ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂಓದಿ:ಯಲ್ಲಮ್ಮ ದೇವಿ ಉತ್ಸವದಲ್ಲಿ ನೂಕು ನುಗ್ಗಲು.. ಐವರಿಗೆ ಚಾಕು ಇರಿತ, 200 ಮೊಬೈಲ್​ ಕಳವು!

Last Updated : Jun 22, 2023, 7:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.