ETV Bharat / state

ಕೊರೊನಾ ಲಾಕ್‌ಡೌನ್.. ಕಾರ್ಮಿಕರು, ಬಡವರಿಗೆ ಉಚಿತ ಆಹಾರ.. ಬೊಕ್ಕಸಕ್ಕಾಗ್ತಿರುವ ಹೊರೆ ಎಷ್ಟು?

author img

By

Published : Apr 6, 2020, 7:20 PM IST

ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರ ನೆರವಿಗೆ ಧಾವಿಸಿ ಉಚಿತ ಆಹಾರ, ಹಾಲು ಮತ್ತು ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ರಾಜ್ಯ ಸರ್ಕಾರವೇ ಬಡವರು, ಕಾರ್ಮಿಕರ ನೆರವಿಗೆ ಆಗಮಿಸಿದೆ.

free food distribute
ಉಚಿತ ಆಹಾರ

ಬೆಂಗಳೂರು : ಕೊರೊನಾ ಲಾಕ್‌ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರಿಗೆ ನೆರವಿನ‌ ಹಸ್ತ ನೀಡುತ್ತಿದೆ. ಲಾಕ್‌ಡೌನ್​ನ 21 ದಿನಗಳ ಕಾಲ ಬಡ ಬಗ್ಗರಿಗೆ ಆಹಾರ ಭದ್ರತೆ ಜೊತೆಗೆ ಆರ್ಥಿಕ ಭದ್ರತೆಯ ಹೊಣೆಗಾರಿಕೆಯನ್ನೂ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ. ಆದರೆ, ಈ ಅನಿವಾರ್ಯತೆಯ ಹೊಣೆಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ಹೊರೆ ಬೀಳುತ್ತಿದೆ.

ಲಾಕ್‌ಡೌನ್ ಹಿನ್ನೆಲೆ ರಾಜ್ಯವೆಲ್ಲ ಸ್ತಬ್ಧವಾಗಿದೆ. ರಾಜ್ಯಾದ್ಯಂತ ವ್ಯಾಪಾರ, ವಹಿವಾಟುಗಳೆಲ್ಲ ಸ್ಥಗಿತವಾಗಿವೆ. ಇದರಿಂದ ಕಾರ್ಮಿಕರು, ಬಡವರಿಗೆ ದಿನದ ತುತ್ತಿಗಾಗಿ ಪರದಾಡುವಂತಾಯಿತು. ಈ ಲಕ್ಷಾಂತರ ಕಾರ್ಮಿಕರು, ಬಡವರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಈ‌ ನಿಟ್ಟಿನಲ್ಲಿ ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರ ನೆರವಿಗೆ ಧಾವಿಸಿ ಉಚಿತ ಆಹಾರ, ಹಾಲು ಮತ್ತು ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ರಾಜ್ಯ ಸರ್ಕಾರವೇ ಬಡವರು, ಕಾರ್ಮಿಕರ ನೆರವಿಗೆ ಆಗಮಿಸಿದೆ.

ಬಡ ಬಗ್ಗರಿಗೆ ಉಚಿತ ಆಹಾರ ವಿತರಣೆ..
ರಾಜ್ಯದ ಬೊಕ್ಕಸಕ್ಕೆ ಆಗುತ್ತಿರುವ ಹೊರೆ ಏನು?: ಲಾಕ್‌ಡೌನ್ ಹಿನ್ನೆಲೆ ಸರ್ಕಾರ ರಾಜ್ಯದ ಅಧಿಸೂಚಿತ ಕೊಳೆಗೇರಿಗಳು ಮತ್ತು ಕಾರ್ಮಿಕರಿರುವ ಬಡಾವಣೆಗಳಲ್ಲಿ ಏ.14 ರವರೆಗೆ ಉಚಿತ ಹಾಲು ವಿತರಿಸಲು ನಿರ್ಧರಿಸಿದೆ. ಕೆಎಂಎಫ್‌ ಪ್ರತಿ ದಿನ ಹಾಲು ಉತ್ಪಾದಕರಿಂದ 69 ಲಕ್ಷ ಲೀಟರ್‌ ಹಾಲು ಖರೀದಿಸುತ್ತಿದೆ. 42 ಲಕ್ಷ ಲೀಟರ್‌ ಮಾರಾಟವಾಗುತ್ತಿದೆ. ಸುಮಾರು 7.5 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಈ ರೀತಿ ಉಳಿಯುವ ಹಾಲನ್ನು ಸರ್ಕಾರವೇ ಖರೀದಿಸಿ ಬಡವರಿಗೆ ಉಚಿತವಾಗಿ ನೀಡುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕೆಎಂಎಫ್‌ಗೆ ಪ್ರತಿ ಲೀಟರ್ ಹಾಲಿಗೆ 36 ರೂ.ನಂತೆ ಒಟ್ಟು ಲಾಕ್‌ಡೌನ್ ಅವಧಿಗೆ 32 ಕೋಟಿ ರೂ. ಪಾವತಿ ಮಾಡಬೇಕಾಗಿದೆ. ಬರೋಬ್ಬರಿ ₹300 ಪ್ರೋತ್ಸಾಹ ಧನ: ಇತ್ತ ಕಾರ್ಮಿಕರ ಲಾಕ್‌ಡೌನ್‌ನಿಂದ ಅತ್ಯಂತ ಸಂಕಷ್ಟಕ್ಕೊಳಗಾಗಿರುವುದು ಕಾರ್ಮಿಕ ಸಮುದಾಯ‌. ಕಾರ್ಮಿಕರ ನೆರವಿಗೆ ಬರುವುದು ಸರ್ಕಾರದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಆರ್ಥಿಕ ಭದ್ರತೆ ನೀಡಲು ರಾಜ್ಯ ಸರ್ಕಾರ 2,000 ರೂ. ಪ್ರೋತ್ಸಾಹ ಧನ ಘೋಷಿಸಿತು. ರಾಜ್ಯದಲ್ಲಿ ಸುಮಾರು ₹15 ಲಕ್ಷ ನೋಂದಾಯಿತ ಕಟ್ಟಡ, ವಲಸೆ ಕಾರ್ಮಿಕರಿದ್ದು, ಅವರಿಗೆ ರಾಜ್ಯ ಸರ್ಕಾರ ತಲಾ 2,000 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಆ ಮೂಲಕ ಸುಮಾರು 300 ಕೋಟಿ ರೂ. ಪ್ರೋತ್ಸಾಹ ಧನವನ್ನು ಕಾರ್ಮಿಕರಿಗೆ ಸರ್ಕಾರ ನೀಡಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
1,12,300 ಲಕ್ಷ ಕಾರ್ಮಿಕರಿಗೆ ಉಚಿತ ಆಹಾರ : ಲಾಕ್‌ಡೌನ್ ಹಿನ್ನೆಲೆ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳಿಗೆ ಗುಳೇ ಹೋದರು. ಸಾಮೂಹಿಕ ಗುಳೇ ಹೋಗುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಲಿ ಕಾರ್ಮಿಕರಿಗೆ ಉಚಿತ ಆಹಾರದ ವ್ಯವಸ್ಥೆಯನ್ನು ಮಾಡಿದೆ. ಈ ಸಂಬಂಧ ಸುಮಾರು ಎರಡು ಲಕ್ಷ ಕಾರ್ಮಿಕರು ರಾಜ್ಯದ ವಿವಿಧೆಡೆ ನಿರ್ಮಿಸಿದ‌ ಕ್ಯಾಂಪ್‌ಗಳಲ್ಲಿ ತಂಗಿದ್ದಾರೆ‌. ಈ ಪೈಕಿ ರಾಜ್ಯ ಸರ್ಕಾರ 1,12,300 ಲಕ್ಷ ಕಾರ್ಮಿಕರಿಗೆ ಸರ್ಕಾರವೇ ಮೂರು ಹೊತ್ತಿನ ಉಚಿತ ಆಹಾರ ನೀಡುತ್ತಿದೆ‌. ಅದರಂತೆ ಏ.14ರವರೆಗೆ ಸರ್ಕಾರ ಉಚಿತ ಆಹಾರ ನೀಡಲಿದೆ. ಸುಮಾರು 20 ಕೋಟಿ ರೂ‌‌. ವ್ಯಯಿಸುತ್ತಿದೆ.

ಬೆಂಗಳೂರು : ಕೊರೊನಾ ಲಾಕ್‌ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರಿಗೆ ನೆರವಿನ‌ ಹಸ್ತ ನೀಡುತ್ತಿದೆ. ಲಾಕ್‌ಡೌನ್​ನ 21 ದಿನಗಳ ಕಾಲ ಬಡ ಬಗ್ಗರಿಗೆ ಆಹಾರ ಭದ್ರತೆ ಜೊತೆಗೆ ಆರ್ಥಿಕ ಭದ್ರತೆಯ ಹೊಣೆಗಾರಿಕೆಯನ್ನೂ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ. ಆದರೆ, ಈ ಅನಿವಾರ್ಯತೆಯ ಹೊಣೆಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ಹೊರೆ ಬೀಳುತ್ತಿದೆ.

ಲಾಕ್‌ಡೌನ್ ಹಿನ್ನೆಲೆ ರಾಜ್ಯವೆಲ್ಲ ಸ್ತಬ್ಧವಾಗಿದೆ. ರಾಜ್ಯಾದ್ಯಂತ ವ್ಯಾಪಾರ, ವಹಿವಾಟುಗಳೆಲ್ಲ ಸ್ಥಗಿತವಾಗಿವೆ. ಇದರಿಂದ ಕಾರ್ಮಿಕರು, ಬಡವರಿಗೆ ದಿನದ ತುತ್ತಿಗಾಗಿ ಪರದಾಡುವಂತಾಯಿತು. ಈ ಲಕ್ಷಾಂತರ ಕಾರ್ಮಿಕರು, ಬಡವರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಈ‌ ನಿಟ್ಟಿನಲ್ಲಿ ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರ ನೆರವಿಗೆ ಧಾವಿಸಿ ಉಚಿತ ಆಹಾರ, ಹಾಲು ಮತ್ತು ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ರಾಜ್ಯ ಸರ್ಕಾರವೇ ಬಡವರು, ಕಾರ್ಮಿಕರ ನೆರವಿಗೆ ಆಗಮಿಸಿದೆ.

ಬಡ ಬಗ್ಗರಿಗೆ ಉಚಿತ ಆಹಾರ ವಿತರಣೆ..
ರಾಜ್ಯದ ಬೊಕ್ಕಸಕ್ಕೆ ಆಗುತ್ತಿರುವ ಹೊರೆ ಏನು?: ಲಾಕ್‌ಡೌನ್ ಹಿನ್ನೆಲೆ ಸರ್ಕಾರ ರಾಜ್ಯದ ಅಧಿಸೂಚಿತ ಕೊಳೆಗೇರಿಗಳು ಮತ್ತು ಕಾರ್ಮಿಕರಿರುವ ಬಡಾವಣೆಗಳಲ್ಲಿ ಏ.14 ರವರೆಗೆ ಉಚಿತ ಹಾಲು ವಿತರಿಸಲು ನಿರ್ಧರಿಸಿದೆ. ಕೆಎಂಎಫ್‌ ಪ್ರತಿ ದಿನ ಹಾಲು ಉತ್ಪಾದಕರಿಂದ 69 ಲಕ್ಷ ಲೀಟರ್‌ ಹಾಲು ಖರೀದಿಸುತ್ತಿದೆ. 42 ಲಕ್ಷ ಲೀಟರ್‌ ಮಾರಾಟವಾಗುತ್ತಿದೆ. ಸುಮಾರು 7.5 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಈ ರೀತಿ ಉಳಿಯುವ ಹಾಲನ್ನು ಸರ್ಕಾರವೇ ಖರೀದಿಸಿ ಬಡವರಿಗೆ ಉಚಿತವಾಗಿ ನೀಡುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕೆಎಂಎಫ್‌ಗೆ ಪ್ರತಿ ಲೀಟರ್ ಹಾಲಿಗೆ 36 ರೂ.ನಂತೆ ಒಟ್ಟು ಲಾಕ್‌ಡೌನ್ ಅವಧಿಗೆ 32 ಕೋಟಿ ರೂ. ಪಾವತಿ ಮಾಡಬೇಕಾಗಿದೆ. ಬರೋಬ್ಬರಿ ₹300 ಪ್ರೋತ್ಸಾಹ ಧನ: ಇತ್ತ ಕಾರ್ಮಿಕರ ಲಾಕ್‌ಡೌನ್‌ನಿಂದ ಅತ್ಯಂತ ಸಂಕಷ್ಟಕ್ಕೊಳಗಾಗಿರುವುದು ಕಾರ್ಮಿಕ ಸಮುದಾಯ‌. ಕಾರ್ಮಿಕರ ನೆರವಿಗೆ ಬರುವುದು ಸರ್ಕಾರದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಆರ್ಥಿಕ ಭದ್ರತೆ ನೀಡಲು ರಾಜ್ಯ ಸರ್ಕಾರ 2,000 ರೂ. ಪ್ರೋತ್ಸಾಹ ಧನ ಘೋಷಿಸಿತು. ರಾಜ್ಯದಲ್ಲಿ ಸುಮಾರು ₹15 ಲಕ್ಷ ನೋಂದಾಯಿತ ಕಟ್ಟಡ, ವಲಸೆ ಕಾರ್ಮಿಕರಿದ್ದು, ಅವರಿಗೆ ರಾಜ್ಯ ಸರ್ಕಾರ ತಲಾ 2,000 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಆ ಮೂಲಕ ಸುಮಾರು 300 ಕೋಟಿ ರೂ. ಪ್ರೋತ್ಸಾಹ ಧನವನ್ನು ಕಾರ್ಮಿಕರಿಗೆ ಸರ್ಕಾರ ನೀಡಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
1,12,300 ಲಕ್ಷ ಕಾರ್ಮಿಕರಿಗೆ ಉಚಿತ ಆಹಾರ : ಲಾಕ್‌ಡೌನ್ ಹಿನ್ನೆಲೆ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳಿಗೆ ಗುಳೇ ಹೋದರು. ಸಾಮೂಹಿಕ ಗುಳೇ ಹೋಗುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಲಿ ಕಾರ್ಮಿಕರಿಗೆ ಉಚಿತ ಆಹಾರದ ವ್ಯವಸ್ಥೆಯನ್ನು ಮಾಡಿದೆ. ಈ ಸಂಬಂಧ ಸುಮಾರು ಎರಡು ಲಕ್ಷ ಕಾರ್ಮಿಕರು ರಾಜ್ಯದ ವಿವಿಧೆಡೆ ನಿರ್ಮಿಸಿದ‌ ಕ್ಯಾಂಪ್‌ಗಳಲ್ಲಿ ತಂಗಿದ್ದಾರೆ‌. ಈ ಪೈಕಿ ರಾಜ್ಯ ಸರ್ಕಾರ 1,12,300 ಲಕ್ಷ ಕಾರ್ಮಿಕರಿಗೆ ಸರ್ಕಾರವೇ ಮೂರು ಹೊತ್ತಿನ ಉಚಿತ ಆಹಾರ ನೀಡುತ್ತಿದೆ‌. ಅದರಂತೆ ಏ.14ರವರೆಗೆ ಸರ್ಕಾರ ಉಚಿತ ಆಹಾರ ನೀಡಲಿದೆ. ಸುಮಾರು 20 ಕೋಟಿ ರೂ‌‌. ವ್ಯಯಿಸುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.