ದೊಡ್ಡಬಳ್ಳಾಪುರ: ಬೆಂಗಳೂರಿನೊಂದಿಗೆ ನಿಕಟ ಸಂಪರ್ಕ ಹೊಂದಿರುವ ನಗರದಲ್ಲಿ ಮೂರು ಕೊರೊನಾ ಪ್ರಕರಣ ಪತ್ತೆಯಾಗಿದೆ. ಜೂ. 26 ರಂದು ದೊಡ್ಡಬಳ್ಳಾಪುರದ ಚೈತನ್ಯ ನಗರದಲ್ಲಿ ಪ್ರಕರಣ ಪತ್ತೆಯಾಗಿದ್ದು ಎರಡೂ ಕೊರೊನಾ ಪ್ರಕರಣಕ್ಕೂ ಬೆಂಗಳೂರಿನ ನಂಟಿದೆ.
ಇಂದು ಚಿಕ್ಕಪೇಟೆಯ ವ್ಯಾಪಾರಿಗೂ ಕೊರೊನಾ ಸೋಂಕು ತಗುಲಿದ್ದು ಇವರು ಸಹ ವ್ಯಾಪಾರಕ್ಕೆಂದು ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಇನ್ನು ಚಿಕ್ಕಪೇಟೆಯನ್ನು ಸೀಲ್ಡೌನ್ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಚಿಕ್ಕಪೇಟೆಯಲ್ಲಿ ಎಂಎಬಿಎಲ್ ಪ್ರೌಢಶಾಲೆ ಇದ್ದು, ಈ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರವನ್ನಾಗಿ ಮಾಡಲಾಗಿತ್ತು. 308 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದರು. ವೈದ್ಯರ ಸಲಹೆ ಮತ್ತು ಅಧಿಕಾರಿಗಳ ತೀರ್ಮಾನದಂತೆ ಎಂಎಬಿಎಲ್ ಪರೀಕ್ಷಾ ಕೇಂದ್ರವನ್ನು ಕಾರ್ಮಲ್ ಜ್ಯೋತಿ ಪ್ರೌಢಶಾಲೆ ಶಾಲೆಗೆ ಬದಲಾವಣೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪ ರೆಡ್ಡಿ ಈಟಿವಿ ಭಾರತರಕ್ಕೆ ತಿಳಿಸಿದ್ದಾರೆ.