ETV Bharat / state

ಬಿಜೆಪಿಯ ಭ್ರಷ್ಟೋತ್ಸವ ಅಧ್ಯಾಯ ಅಂತಿಮ ಹಂತಕ್ಕೆ ಬಂದಂತಿದೆ: ಕಾಂಗ್ರೆಸ್

author img

By

Published : Aug 26, 2022, 4:58 PM IST

ಬಿಜೆಪಿ ಸರ್ಕಾರದ ಕಮಿಷನ್ 'ಪಾಪದ ಕೊಡ' ತುಂಬಿದ್ದರೂ ಇನ್ನೂ ಬುದ್ದಿ ಬಂದಿಲ್ಲ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದೆ.

congress-tweet-against-bjp-government
ಬಿಜೆಪಿಯ ಭ್ರಷ್ಟೋತ್ಸವ ಅಧ್ಯಾಯ ಅಂತಿಮ ಹಂತಕ್ಕೆ ಬಂದಂತಿದೆ: ಕಾಂಗ್ರೆಸ್ ಟ್ವೀಟ್

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್​ ಟೀಕೆ ಮುಂದುವರೆಸಿದ್ದು, ಬಿಜೆಪಿಯ ಭ್ರಷ್ಟೋತ್ಸವ ಅಧ್ಯಾಯ ಅಂತಿಮ ಹಂತಕ್ಕೆ ಬಂದಂತಿದೆ ಎಂದಿದೆ.

'ನಷ್ಟ'ವಾಗುವುದು ಯಾರ ಮಾನ ಎಂದು ಗೊತ್ತಿದ್ದೂ ಈ ಭ್ರಷ್ಟ ಸರ್ಕಾರ ಕೇಸ್ ದಾಖಲಿಸುವ ಧೈರ್ಯ ತೋರುತ್ತಾ?. 'ಮನಿ'ರತ್ನ ಮಾನನಷ್ಟ ಮೊಕದ್ದಮೆ ಹೂಡುತ್ತಾರಾ?. ದಾಖಲೆ ಇದ್ದರೆ ಬಹಿರಂಗಪಡಿಸಲಿ ಎನ್ನುತ್ತಿದ್ದ ಸಿಎಂ ಬೊಮ್ಮಾಯಿ‌ ಈಗ ಏನು ಹೇಳುತ್ತಾರೆ ಎಂದು ಕೈ ಪಕ್ಷ​​ ಪ್ರಶ್ನಿಸಿದೆ.

ಬಿಎಸ್​ವೈ ಮುಕ್ತ ಬಿಜೆಪಿ ಅಧ್ಯಾಯ ಮುಗಿದಿದೆ ಎಂದುಕೊಳ್ಳುತ್ತಿರುವಾಗಲೇ ಯಡಿಯೂರಪ್ಪ ಪುನಃ ದೆಹಲಿಗೆ ಹೊರಟಿದ್ದಾರೆ. ಯತ್ನಾಳ್ ಹೇಳಿದಂತೆ 'ತಿರುಪತಿ ಅಗ್ರಿಮೆಂಟ್' ನಂತರ ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ. ಬಿಎಸ್​ವೈ ದೆಹಲಿ ಭೇಟಿಯ ಮರ್ಮವೇನು ಎಂದು ಕೇಳಿದೆ.

ಬಿಜೆಪಿ ಕಮಿಷನ್ ಶೇ.40ರಿಂದ 50ಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿಯಲ್ಲಿ ಶೇ.50 ಕಮಿಷನ್ ಕಳೆದರೆ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಉಳಿಯುವುದೇನು?. ಕೇವಲ 'ಮರಳು' ಮಾತ್ರ. ಹಾಗಾಗಿ ಜನತೆಗೆ ಉಳಿಯುವುದು 'ಮರಳಿ'ನ ರಸ್ತೆಗಳು ಮಾತ್ರ. ಮಳೆ ಬಂದರೆ 'ಮರಳು' ಮಾಯ. ರಸ್ತೆಯೂ ಮಾಯ ಎಂದು ಟೀಕಿಸಿದೆ.

ಈ ಬಿಜೆಪಿ ಸರ್ಕಾರದ ಕಮಿಷನ್ 'ಪಾಪದ ಕೊಡ' ತುಂಬಿದ್ದರೂ ಇನ್ನೂ ಬುದ್ದಿ ಬಂದಿಲ್ಲ. ಶಾಸಕರನ್ನು 'ಕುರಿ'ಗಳಂತೆ ಹೈಜಾಕ್ ಮಾಡಿ ರಚಿಸಿರುವ ಸರ್ಕಾರ, ಗುತ್ತಿಗೆದಾರರ ಸಂಘದಲ್ಲೂ 'ಆಪರೇಷನ್ ಕಮಲ' ಮಾಡಲು ಯತ್ನಿಸಿ ಭ್ರಷ್ಟೋತ್ಸವ ಪ್ರಕರಣಗಳನ್ನು ಮುಚ್ಚಿ ಹಾಕಬೇಕೆಂದಿದೆ ಎಂದು ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಶೇ 40 ಕಮಿಷನ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್​ ಟೀಕೆ ಮುಂದುವರೆಸಿದ್ದು, ಬಿಜೆಪಿಯ ಭ್ರಷ್ಟೋತ್ಸವ ಅಧ್ಯಾಯ ಅಂತಿಮ ಹಂತಕ್ಕೆ ಬಂದಂತಿದೆ ಎಂದಿದೆ.

'ನಷ್ಟ'ವಾಗುವುದು ಯಾರ ಮಾನ ಎಂದು ಗೊತ್ತಿದ್ದೂ ಈ ಭ್ರಷ್ಟ ಸರ್ಕಾರ ಕೇಸ್ ದಾಖಲಿಸುವ ಧೈರ್ಯ ತೋರುತ್ತಾ?. 'ಮನಿ'ರತ್ನ ಮಾನನಷ್ಟ ಮೊಕದ್ದಮೆ ಹೂಡುತ್ತಾರಾ?. ದಾಖಲೆ ಇದ್ದರೆ ಬಹಿರಂಗಪಡಿಸಲಿ ಎನ್ನುತ್ತಿದ್ದ ಸಿಎಂ ಬೊಮ್ಮಾಯಿ‌ ಈಗ ಏನು ಹೇಳುತ್ತಾರೆ ಎಂದು ಕೈ ಪಕ್ಷ​​ ಪ್ರಶ್ನಿಸಿದೆ.

ಬಿಎಸ್​ವೈ ಮುಕ್ತ ಬಿಜೆಪಿ ಅಧ್ಯಾಯ ಮುಗಿದಿದೆ ಎಂದುಕೊಳ್ಳುತ್ತಿರುವಾಗಲೇ ಯಡಿಯೂರಪ್ಪ ಪುನಃ ದೆಹಲಿಗೆ ಹೊರಟಿದ್ದಾರೆ. ಯತ್ನಾಳ್ ಹೇಳಿದಂತೆ 'ತಿರುಪತಿ ಅಗ್ರಿಮೆಂಟ್' ನಂತರ ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ. ಬಿಎಸ್​ವೈ ದೆಹಲಿ ಭೇಟಿಯ ಮರ್ಮವೇನು ಎಂದು ಕೇಳಿದೆ.

ಬಿಜೆಪಿ ಕಮಿಷನ್ ಶೇ.40ರಿಂದ 50ಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿಯಲ್ಲಿ ಶೇ.50 ಕಮಿಷನ್ ಕಳೆದರೆ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಉಳಿಯುವುದೇನು?. ಕೇವಲ 'ಮರಳು' ಮಾತ್ರ. ಹಾಗಾಗಿ ಜನತೆಗೆ ಉಳಿಯುವುದು 'ಮರಳಿ'ನ ರಸ್ತೆಗಳು ಮಾತ್ರ. ಮಳೆ ಬಂದರೆ 'ಮರಳು' ಮಾಯ. ರಸ್ತೆಯೂ ಮಾಯ ಎಂದು ಟೀಕಿಸಿದೆ.

ಈ ಬಿಜೆಪಿ ಸರ್ಕಾರದ ಕಮಿಷನ್ 'ಪಾಪದ ಕೊಡ' ತುಂಬಿದ್ದರೂ ಇನ್ನೂ ಬುದ್ದಿ ಬಂದಿಲ್ಲ. ಶಾಸಕರನ್ನು 'ಕುರಿ'ಗಳಂತೆ ಹೈಜಾಕ್ ಮಾಡಿ ರಚಿಸಿರುವ ಸರ್ಕಾರ, ಗುತ್ತಿಗೆದಾರರ ಸಂಘದಲ್ಲೂ 'ಆಪರೇಷನ್ ಕಮಲ' ಮಾಡಲು ಯತ್ನಿಸಿ ಭ್ರಷ್ಟೋತ್ಸವ ಪ್ರಕರಣಗಳನ್ನು ಮುಚ್ಚಿ ಹಾಕಬೇಕೆಂದಿದೆ ಎಂದು ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಶೇ 40 ಕಮಿಷನ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.