ETV Bharat / state

ಕಮಲಪಡೆ ಕಟ್ಟಿ ಹಾಕಲು ಕೈ ಮಾಸ್ಟರ್​ ಪ್ಲಾನ್​: ರಾಜ್ಯ ಸರ್ಕಾರ ಕೇಂದ್ರದ ಕೈಗೊಂಬೆ ಎಂದು ಸಿದ್ದು ಟೀಕೆ

author img

By

Published : Oct 11, 2019, 11:48 AM IST

ನಿನ್ನೆ ಸದನದಲ್ಲಿ ಜೆಡಿಎಸ್​​​​ನ ಕೆಲವು ಶಾಸಕರು ನಮ್ಮ ಧ್ವನಿಗೆ ಧ್ವನಿ ಗೂಡಿಸಿದ್ದಾರೆ. 10 ದಿನಗಳು ಅಧಿವೇಶನ ನಡೆಸಿ ಎಂದು ಪಟ್ಟು ಹಿಡಿಯೋಣ. ಮೊದಲು ನಾನು ಇವತ್ತು ಪ್ರಾರಂಭ ಮಾಡುತ್ತೇನೆ. ಆ ನಂತರ ಕೆಲವರು ನೆರೆ ಬಗ್ಗೆ ಮಾತನಾಡಿ ಎಂದು ಸೂಚನೆ ನೀಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು : ರಾಜ್ಯ ನಾಯಕರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತಾರೂಢ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ವಿಧಾನಸೌಧದ ಕೊಠಡಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಜೆಟ್ ಲೇಖಾನುದಾನ ಪಡೆಯುವುದೇ ಅತ್ಯಂತ ಮುಖ್ಯವಾಗಿದೆ. ರಾಜ್ಯ ನಾಯಕರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಲಾಗುತ್ತಿದೆ. ಕೇಂದ್ರದ ಸರ್ವಾಧಿಕಾರಿ ಧೋರಣೆ ಹಾಗೂ ಫ್ಯಾಸಿಸ್ಟ್ ಮನೋಭಾವ ರಾಜ್ಯದಲ್ಲಿಯೂ ಗೋಚರಿಸುತ್ತಿದೆ. ಇಂತಹ ಸರ್ಕಾರದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ಇಂತಹ ಸರ್ಕಾರದ ವಿರುದ್ಧ ಸಮರ್ಥ ಹೋರಾಟ ನಡೆಸಬೇಕಾಗಿದೆ ಎಂದು ಶಾಸಕರಿಗೆ ಕರೆಕೊಟ್ಟರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಸ್ಪೀಕರ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಾವು ಬಿಎಸಿ ಸಭೆಯಲ್ಲಿ ಹೇಳಿದ್ದೇವೆ ಕನಿಷ್ಠ 10 ದಿನ ಅಧಿವೇಶನ ನಡೆಸಿ ಎಂದು. ಅವರಿಗೆ ಅಧಿವೇಶನ ನಡೆಸಲು ಇಷ್ಟ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ತರಹದ ಧೋರಣೆ ಇರಬಾರದು. ನಾವುಗಳು ಜನರ ಪ್ರತಿನಿಧಿಗಳಾಗಿ ಇಲ್ಲಿಗೆ ಬರುತ್ತೇವೆ. ಈ ಸರ್ಕಾರ ಸರ್ವಾಧಿಕಾರಿ ಆಡಳಿತ ಮಾತ್ರವಲ್ಲದೇ ಆರ್ಫ್ಯಾಸಿಸ್ಟ್, ಅಂಟಿ ಡೆಮೊಕ್ರಟಿಕ್ ಪಾರ್ಟಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹ ಪರಿಹಾರ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಇವರು ಕೇಂದ್ರದಲ್ಲಿ 35,161 ಕೋಟಿ ಕೇಳಿದ್ದಾರೆ. ನೆರೆ ವಿಚಾರವನ್ನು ಇವತ್ತು ಪ್ರಮುಖವಾಗಿ ಚರ್ಚೆ ಮಾಡಬೇಕು. ನಿನ್ನೆ ಸದನದಲ್ಲಿ ಜೆಡಿಎಸ್​​​ನ ಕೆಲವು ಶಾಸಕರು ನಮ್ಮ ಧ್ವನಿಗೆ ಧ್ವನಿ ಗೂಡಿಸಿದ್ದಾರೆ. 10 ದಿನಗಳು ಅಧಿವೇಶನ ನಡೆಸಿ ಎಂದು ಪಟ್ಟು ಹಿಡಿಯೋಣ. ಮೊದಲು ನಾನು ಇವತ್ತು ಪ್ರಾರಂಭ ಮಾಡುತ್ತೇನೆ. ಆ ನಂತರ ಕೆಲವರು ನೆರೆ ಬಗ್ಗೆ ಮಾತನಾಡಿ ಎಂದು ಸೂಚನೆ ನೀಡಿದರು.

ಸರ್ಕಾರದ ವಿರುದ್ಧ ಹೋರಾಟ: ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕುರಿತ ಚರ್ಚೆ ನಡೆಯುತ್ತಿದ್ದು, ಸೀಮಿತ ಕಾಲಾವಧಿಯಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಯಾವ್ಯಾವ ವಿಧದ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಅನುದಾನದಲ್ಲಿ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ.

ಸಭೆ ಮುಕ್ತಾಯದ ನಂತರ ಮಾತನಾಡಿದ ಸಿದ್ದರಾಮಯ್ಯ ಸದನದಲ್ಲಿ ಪಾಲ್ಗೊಳ್ಳುತ್ತೇವೆ. ಇಂದು ಕೂಡ ನಾನು ಭಾಷಣ ಮುಂದುವರಿಸುತ್ತೇನೆ ಎಂದಷ್ಟೇ ಹೇಳಿ ತೆರಳಿದರು.

ಬೆಂಗಳೂರು : ರಾಜ್ಯ ನಾಯಕರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತಾರೂಢ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ವಿಧಾನಸೌಧದ ಕೊಠಡಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಜೆಟ್ ಲೇಖಾನುದಾನ ಪಡೆಯುವುದೇ ಅತ್ಯಂತ ಮುಖ್ಯವಾಗಿದೆ. ರಾಜ್ಯ ನಾಯಕರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಲಾಗುತ್ತಿದೆ. ಕೇಂದ್ರದ ಸರ್ವಾಧಿಕಾರಿ ಧೋರಣೆ ಹಾಗೂ ಫ್ಯಾಸಿಸ್ಟ್ ಮನೋಭಾವ ರಾಜ್ಯದಲ್ಲಿಯೂ ಗೋಚರಿಸುತ್ತಿದೆ. ಇಂತಹ ಸರ್ಕಾರದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ಇಂತಹ ಸರ್ಕಾರದ ವಿರುದ್ಧ ಸಮರ್ಥ ಹೋರಾಟ ನಡೆಸಬೇಕಾಗಿದೆ ಎಂದು ಶಾಸಕರಿಗೆ ಕರೆಕೊಟ್ಟರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಸ್ಪೀಕರ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಾವು ಬಿಎಸಿ ಸಭೆಯಲ್ಲಿ ಹೇಳಿದ್ದೇವೆ ಕನಿಷ್ಠ 10 ದಿನ ಅಧಿವೇಶನ ನಡೆಸಿ ಎಂದು. ಅವರಿಗೆ ಅಧಿವೇಶನ ನಡೆಸಲು ಇಷ್ಟ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ತರಹದ ಧೋರಣೆ ಇರಬಾರದು. ನಾವುಗಳು ಜನರ ಪ್ರತಿನಿಧಿಗಳಾಗಿ ಇಲ್ಲಿಗೆ ಬರುತ್ತೇವೆ. ಈ ಸರ್ಕಾರ ಸರ್ವಾಧಿಕಾರಿ ಆಡಳಿತ ಮಾತ್ರವಲ್ಲದೇ ಆರ್ಫ್ಯಾಸಿಸ್ಟ್, ಅಂಟಿ ಡೆಮೊಕ್ರಟಿಕ್ ಪಾರ್ಟಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹ ಪರಿಹಾರ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಇವರು ಕೇಂದ್ರದಲ್ಲಿ 35,161 ಕೋಟಿ ಕೇಳಿದ್ದಾರೆ. ನೆರೆ ವಿಚಾರವನ್ನು ಇವತ್ತು ಪ್ರಮುಖವಾಗಿ ಚರ್ಚೆ ಮಾಡಬೇಕು. ನಿನ್ನೆ ಸದನದಲ್ಲಿ ಜೆಡಿಎಸ್​​​ನ ಕೆಲವು ಶಾಸಕರು ನಮ್ಮ ಧ್ವನಿಗೆ ಧ್ವನಿ ಗೂಡಿಸಿದ್ದಾರೆ. 10 ದಿನಗಳು ಅಧಿವೇಶನ ನಡೆಸಿ ಎಂದು ಪಟ್ಟು ಹಿಡಿಯೋಣ. ಮೊದಲು ನಾನು ಇವತ್ತು ಪ್ರಾರಂಭ ಮಾಡುತ್ತೇನೆ. ಆ ನಂತರ ಕೆಲವರು ನೆರೆ ಬಗ್ಗೆ ಮಾತನಾಡಿ ಎಂದು ಸೂಚನೆ ನೀಡಿದರು.

ಸರ್ಕಾರದ ವಿರುದ್ಧ ಹೋರಾಟ: ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕುರಿತ ಚರ್ಚೆ ನಡೆಯುತ್ತಿದ್ದು, ಸೀಮಿತ ಕಾಲಾವಧಿಯಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಯಾವ್ಯಾವ ವಿಧದ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಅನುದಾನದಲ್ಲಿ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ.

ಸಭೆ ಮುಕ್ತಾಯದ ನಂತರ ಮಾತನಾಡಿದ ಸಿದ್ದರಾಮಯ್ಯ ಸದನದಲ್ಲಿ ಪಾಲ್ಗೊಳ್ಳುತ್ತೇವೆ. ಇಂದು ಕೂಡ ನಾನು ಭಾಷಣ ಮುಂದುವರಿಸುತ್ತೇನೆ ಎಂದಷ್ಟೇ ಹೇಳಿ ತೆರಳಿದರು.

Intro:newsBody:ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ, ಸದನದಲ್ಲಿ ಪಾಲ್ಗೊಳ್ಳಲು ನಿರ್ಧಾರ

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆದು ಮುಕ್ತಾಯವಾಗಿದ್ದು ವಿವಿಧ ವಿಚಾರಗಳ ಚರ್ಚೆ ನಡೆದಿದೆ. ಸಭೆ ಮುಗಿಸಿ ಆಚೆ ತೆರಳಿದ ಸಂದರ್ಭ ಸಿದ್ದರಾಮಯ್ಯ ಮಾತನಾಡಿ, ಸದನದಲ್ಲಿ ಪಾಲ್ಗೊಳ್ಳುತ್ತೇವೆ. ನಾನು ಇಂದು ಕೂಡ ಭಾಷಣ ಮುಂದುವರಿಸುತ್ತೇನೆ ಎಂದಷ್ಟೇ ಹೇಳಿ ತೆರಳಿದರು.
ಸಭೆಯಲ್ಲಿ ಸೂಚನೆ
ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇವರಿಗೆ ಆಸ್ವಾದನ ನಡೆಸುವ ಆಸೆ ಇಲ್ಲ ಬದಲಾಗಿ ಬಜೆಟ್ ಲೇಖಾನುದಾನ ಪಡೆಯುವುದೇ ಅತ್ಯಂತ ಮುಖ್ಯವಾಗಿದೆ. ರಾಜ್ಯ ನಾಯಕರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಲಾಗುತ್ತಿದೆ. ಕೇಂದ್ರದ ಸರ್ವಾಧಿಕಾರಿ ಧೋರಣೆ ಹಾಗೂ ಫ್ಯಾಸಿಸ್ಟ್ ಮನೋಭಾವ ರಾಜ್ಯದಲ್ಲಿಯೂ ಗೋಚರಿಸುತ್ತಿದೆ. ಇಂತಹ ಸರ್ಕಾರದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ಇಂತಹ ಸರ್ಕಾರದ ವಿರುದ್ಧ ಸಮರ್ಥ ಹೋರಾಟ ನಡೆಸಬೇಕಾಗಿದೆ ಎಂದು ಶಾಸಕರಿಗೆ ಕರೆಕೊಟ್ಟರು.
ಸ್ಪೀಕರ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಾವು ಬಿಎಸಿ ಸಭೆಯಲ್ಲಿ ಹೇಳಿದ್ದೇವೇ ಕನಿಷ್ಠ 10 ದಿನ ನಡೆಸಿ ಎಂದು. ಜೊತೆಗೆ ಇವಾಗ ಚುನಾವಣೆ ಬೇರೆ ಇಲ್ಲ 10 ನಡೆಸಿ ಎಂದು ಹೇಳಿದ್ದೇವೆ. ಅವರಿಗೆ ಅಧಿವೇಶನ ನಡೆಸಲು ಇಷ್ಟ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ತರ ಇರಬಾರದು. ನಾವುಗಳು ಜನರ ಪ್ರತಿನಿಧಿಗಳಾಗಿ ಇಲ್ಲಿಗೆ ಬರುತ್ತೇವೆ. ಈ ಸರ್ಕಾರ ಸರ್ವಾಧಿಕಾರಿ ಆಡಳಿತ ಮಾತ್ರ ಅಲ್ಲ ದೇ ಆರ್ ಫ್ಯಾಸಿಸ್ಟ್, ಅಂಟಿ ಡೆಮೊಕ್ರಟಿಕ್ ಪಾರ್ಟಿ. ಪ್ರವಾಹ ಪರಿಹಾರ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಇವರು ಕೇಂದ್ರದಲ್ಲಿ 35161 ಕೋಟಿ ಕೇಳಿದ್ದಾರೆ. ನೆರೆ ವಿಚಾರವನ್ನು ಇವತ್ತು ಪ್ರಮುಖವಾಗಿ ಚರ್ಚೆ ಮಾಡಬೇಕು. ನಿನ್ನೆ ಸದನದಲ್ಲಿ ಜೆಡಿಎಸ್ ನ ಕೆಲವು ಶಾಸಕರು ನಮ್ಮ ಧ್ವನಿಗೆ ಧ್ವನಿ ಗೂಡಿಸಿದ್ದಾರೆ. 10 ದಿನಗಳು ಅಧಿವೇಶನ ನಡೆಸಿ ಎಂದು ಪಟ್ಟು ಹಿಡಿಯೋಣ . ಮೊದಲು ನಾನು ಇವತ್ತು ಪ್ರಾರಂಭ ಮಾಡುತ್ತೇನೆ ಆ ನಂತರ ಕೆಲವರು ನೆರೆ ಬಗ್ಗೆ ಮಾತನಾಡಿ ಎಂದು ಸೂಚನೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಹೋರಾಟ
ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಕುರಿತ ಚರ್ಚೆ ನಡೆಯುತ್ತಿದ್ದು, ಸೀಮಿತ ಕಾಲಾವಧಿಯಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಯಾವ್ಯಾವ ವಿಧದ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಅನುದಾನದಲ್ಲಿ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.