ETV Bharat / state

ವೀಕ್‌ಎಂಡ್‌ನಲ್ಲಿ ಅಲೋಕ್ ಕುಮಾರ್ ನೈಟ್ ರೌಂಡ್ಸ್.. ಕಾನೂನು ಮೀರಿದವರಿಗೆ ರಾತ್ರಿ ಕ್ಲಾಸ್‌! - ಬೆಂಗಳೂರಲ್ಲಿೠ ವಿಶೇಷ ಕಾರ್ಯಚರಣೆ

ವಾರದಲ್ಲಿ ಒಮ್ಮೆ ವಿಶೇಷ ಕಾರ್ಯಚರಣೆ ಮಾಡುತ್ತೇವೆ. ರಾತ್ರಿ ಸಮಯದಲ್ಲಿ ಪೊಲೀಸರು ಇದ್ದಾರೆ ಎಂಬ ಧೈರ್ಯ ಸಾರ್ವಜನಿಕರಿಗೆ ಇರಬೇಕು ಎಂದರು.

ಅಲೋಕ್ ಕುಮಾರ್
author img

By

Published : Jul 28, 2019, 9:43 AM IST

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ನಿಯಂತ್ರಣ ಮಾಡಲು ನೂತನ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಗರದಲ್ಲಿ ರಾತ್ರಿ ಗಸ್ತು ತಿರುಗಿ ಮಧ್ಯರಾತ್ರಿಯಲ್ಲಿ ತಿರುಗಾಡ್ತಿದ್ದ ರೋಡ್ ರೋಮಿಯೋಗಳಿಗೆ, ಬೈಕ್ ಸವಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್, ಹೆಬ್ಬಾಳ, ಮಲ್ಲೇಶ್ವರಂ, ಬಾಣಸವಾಡಿ, ರಾಜಾಜಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಸರಿಯಾಗಿ ಕೆಲಸ ನಿರ್ವಹಿಸದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಅಲೋಕ್ ಕುಮಾರ್..

ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿ ಅವರು, ವಾರದಲ್ಲಿ ಒಮ್ಮೆ ವಿಶೇಷ ಕಾರ್ಯಚರಣೆ ಮಾಡುತ್ತೇವೆ. ರಾತ್ರಿ ಸಮಯದಲ್ಲಿ ಪೊಲೀಸರು ಇದ್ದಾರೆ ಎಂಬ ಧೈರ್ಯ ಸಾರ್ವಜನಿಕರಿಗೆ ಇರಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ನಿಯಂತ್ರಣ ಮಾಡಲು ನೂತನ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಗರದಲ್ಲಿ ರಾತ್ರಿ ಗಸ್ತು ತಿರುಗಿ ಮಧ್ಯರಾತ್ರಿಯಲ್ಲಿ ತಿರುಗಾಡ್ತಿದ್ದ ರೋಡ್ ರೋಮಿಯೋಗಳಿಗೆ, ಬೈಕ್ ಸವಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್, ಹೆಬ್ಬಾಳ, ಮಲ್ಲೇಶ್ವರಂ, ಬಾಣಸವಾಡಿ, ರಾಜಾಜಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಸರಿಯಾಗಿ ಕೆಲಸ ನಿರ್ವಹಿಸದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಅಲೋಕ್ ಕುಮಾರ್..

ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿ ಅವರು, ವಾರದಲ್ಲಿ ಒಮ್ಮೆ ವಿಶೇಷ ಕಾರ್ಯಚರಣೆ ಮಾಡುತ್ತೇವೆ. ರಾತ್ರಿ ಸಮಯದಲ್ಲಿ ಪೊಲೀಸರು ಇದ್ದಾರೆ ಎಂಬ ಧೈರ್ಯ ಸಾರ್ವಜನಿಕರಿಗೆ ಇರಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

Intro:ಅಲೋಕ್ ಕುಮಾರ್ ನೈಟ್ ರೌಂಡ್ಸ್... ಸಿಲಿಕಾನ್ ಸಿಟಿಯ ರೋಡ್ ರೋಮಿಯೊ ಗಳು ಫುಲ್ ಶಾಕ್

ಹೊಸ ಸಿಎಂ ಯಡಿಯೂರಪ್ಪ ನಗರದಲ್ಲಿ ಕ್ರೈಂ‌ ಕಂಟ್ರೋಲ್ ಮಾಡಲು ಖಡಕ್ ಸೂಚನೆ ನೀಡಿದ್ದು ಹೀಗಾಗಿ ಕಮಿಷನರ್ ಅಲೋಕ್ ಕುಮಾರ್ ನಗರದಲ್ಲಿ ನೈಟ್ ರೌಂಡ್ಸ್ ಮಾಡಿ ಮೀಡ್ ನೈಟಲ್ಲಿ ತಿರುಗಾಡ್ತಿದ್ದ ರೋಡ್ ರೋಮಿಯೋಗಳಿಗೆ, ಬೈಕ್ ಸವಾರರಿಗೆ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್, ಹೆಬ್ಬಾಳ, ಮಲ್ಲೇಶ್ವರಂ, ಬಾಣಸಾವಾಡಿ, ರಾಜಾಜಿ ನಗರ ಹೀಗೆ ಹಲವು ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದ್ರು. ವಿಸಿಟ್ ವೇಳೆ ಪೊಲೀಸರ ನಿರ್ಲಕ್ಷ್ಯ ಕಂಡು ಫುಲ್ ಗರಂ ಆದ್ರು.
ಹಾಗೆ ರಸ್ತೆಯಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ರಾತ್ರಿ ವೇಳೆ ಹೆಲ್ಮೆಟ್ ಹಾಕದೆ ಬೈಕ್ ರೈಡ್ ಮಾಡ್ತಿದ್ದ ರೋಡ್ ರೋಮಿಯೋಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡ್ರು. ಅಷ್ಟು ಮಾತ್ರವಲ್ಲ ಕೆಲ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ ಪಾಯಿಂಟ್ ಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಕಂಡು ಕೆಂಡಮಂಡಲವಾಗಿ ನಗರದ ೨೦ಕ್ಕೂ ಹೆಚ್ಚಿನ ಚೆಕ್ ಪಾಯಿಂಟ್ ಗಳಲ್ಲಿ ಕಾರು, ಬೈಕ್ ಗಳನ್ನ ತಾಪಸಣೆ ಮಾಡಿ, ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಬುದ್ದಿವಾದ ಹೇಳಿ ಕಳಿಸಿದ್ರು.

ಇನ್ನು ಮಾಧ್ಯಮದವರ ಜೊತೆ ಮಾತಾಡಿ ವಾರದಲ್ಲಿ ಒಮ್ಮೆ ವಿಶೇಷ ಕಾರ್ಯಚರಣೆ ಮಾಡ್ತಿದ್ದೇವೆ. ಸಾರ್ವಜನಿಕರಿಗೆ ರಾತ್ರಿ ಟೈಮಲ್ಲಿ ಪೊಲೀಸರು ಇದ್ದಾರೆ ಅಂತ ಕಾನ್ಫಿಡೆನ್ಸ್ ಬರಬೇಕು. ದಾಖಲೆಗಳಿಲ್ಲದ ಸಾವಿರಕ್ಕೂ ಹೆಚ್ಚಿನ ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ ಅಂತ ತಿಳಿಸಿದ್ರು.Body:KN_BNG_01_ALOK_7204498Conclusion:KN_BNG_01_ALOK_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.