ETV Bharat / state

ಸಿದ್ಧಾರ್ಥ್ ನಿಗೂಢ ಸಾವು ಪ್ರಕರಣ: ಸೂಕ್ತ ತನಿಖೆಗೆ ವಕೀಲರ ಆಗ್ರಹ

author img

By

Published : Aug 2, 2019, 6:20 AM IST

ರಾಜ್ಯದಲ್ಲಿ ಉದ್ಯಮಿಗಳ ಮೇಲೆ ಆದಾಯ ತೆರಿಗೆ, ಇಡಿ, ಸಿಬಿಐ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಗುಜರಾತ್​ನಲ್ಲಿ ಉದ್ಯಮಿಗಳು ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿ ಯಾವುದೇ ಭಯವಿಲ್ಲದೇ ಈ ದೇಶದಲ್ಲಿ ಓಡಾಡುತ್ತಿದ್ದಾರೆ ಎಂದು ಬೆಂಗಳೂರು ವಕೀಲರ‌ ಸಂಘ ಅಧ್ಯಕ್ಷ ಎ.ಪಿ ರಂಗನಾಥ್ ಆರೋಪಿಸಿದ್ದಾರೆ.

ಸಮಾನ ಮನಸ್ಕ ವಕೀಲರಿಂದ ಪ್ರತಿಭಟನೆ

ಬೆಂಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿ ನಗರದ ಮೌರ್ಯ ಸರ್ಕಲ್ ಬಳಿ ಸಮಾನ ಮನಸ್ಕ ವಕೀಲರಿಂದ ಪ್ರತಿಭಟನೆ ನಡೆಸಲಾಯಿತು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ರಾಜ್ಯದ ಉದ್ಯಮಿಗಳ ಮೇಲೆ ನಡೆಯುತ್ತಿರುವ ಕಿರುಕುಳಕ್ಕೆ ಬ್ರೇಕ್ ಹಾಕಬೇಕಿದೆ. ಸಿದ್ಧಾರ್ಥ್​ ಸಾವಿಗೂ ಮುನ್ನ ಪತ್ರದಲ್ಲಿ ಹೆಸರಿಸಿದ ಐಟಿ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಿ ಅಂತ ಒತ್ತಾಯಿಸಿದರು.‌ ಇನ್ನು ಆದಾಯ ತೆರಿಗೆ, ಇಡಿ, ಸಿಬಿಐ ಅಧಿಕಾರಿಗಳಿಂದ ಕರ್ನಾಟಕದ ಉದ್ಯಮಿಗಳನ್ನು ರಕ್ಷಿಸಿ ಅಂತ ಇದೇ ವೇಳೆ ಘೋಷಣೆ ಕೂಗಿದರು.

ಸಿದ್ಧಾರ್ಥ ನಿಗೂಢ ಸಾವಿನ ಪ್ರಕರಣ ಸೂಕ್ತ ತನಿಖೆ ನಡೆಸುವಂತೆ ಸಮಾನ ಮನಸ್ಕ ವಕೀಲರಿಂದ ಪ್ರತಿಭಟನೆ

ಇದೇ ಸಂದರ್ಭದಲ್ಲಿ ಬೆಂಗಳೂರು ವಕೀಲರ‌ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಮಾತನಾಡಿ, ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ತನಿಖೆ ಆಗಬೇಕು. ಐಟಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹಾಕಬೇಕು ಎಂದರು.

ಇನ್ನು ಗುಜರಾತ್​ನ ಉದ್ಯಮಿಗಳು ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿ ಯಾವುದೇ ಭಯವಿಲ್ಲದೇ ಈ ದೇಶದಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ಐಟಿಯವರು ಯಾವುದೇ ರೀತಿ ತೊಂದರೆ ಕೊಡುತ್ತಿಲ್ಲ ಅಂತ ರಂಗನಾಥ್​ ಆರೋಪಿಸಿದರು.

ಬೆಂಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿ ನಗರದ ಮೌರ್ಯ ಸರ್ಕಲ್ ಬಳಿ ಸಮಾನ ಮನಸ್ಕ ವಕೀಲರಿಂದ ಪ್ರತಿಭಟನೆ ನಡೆಸಲಾಯಿತು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ರಾಜ್ಯದ ಉದ್ಯಮಿಗಳ ಮೇಲೆ ನಡೆಯುತ್ತಿರುವ ಕಿರುಕುಳಕ್ಕೆ ಬ್ರೇಕ್ ಹಾಕಬೇಕಿದೆ. ಸಿದ್ಧಾರ್ಥ್​ ಸಾವಿಗೂ ಮುನ್ನ ಪತ್ರದಲ್ಲಿ ಹೆಸರಿಸಿದ ಐಟಿ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಿ ಅಂತ ಒತ್ತಾಯಿಸಿದರು.‌ ಇನ್ನು ಆದಾಯ ತೆರಿಗೆ, ಇಡಿ, ಸಿಬಿಐ ಅಧಿಕಾರಿಗಳಿಂದ ಕರ್ನಾಟಕದ ಉದ್ಯಮಿಗಳನ್ನು ರಕ್ಷಿಸಿ ಅಂತ ಇದೇ ವೇಳೆ ಘೋಷಣೆ ಕೂಗಿದರು.

ಸಿದ್ಧಾರ್ಥ ನಿಗೂಢ ಸಾವಿನ ಪ್ರಕರಣ ಸೂಕ್ತ ತನಿಖೆ ನಡೆಸುವಂತೆ ಸಮಾನ ಮನಸ್ಕ ವಕೀಲರಿಂದ ಪ್ರತಿಭಟನೆ

ಇದೇ ಸಂದರ್ಭದಲ್ಲಿ ಬೆಂಗಳೂರು ವಕೀಲರ‌ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಮಾತನಾಡಿ, ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ತನಿಖೆ ಆಗಬೇಕು. ಐಟಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹಾಕಬೇಕು ಎಂದರು.

ಇನ್ನು ಗುಜರಾತ್​ನ ಉದ್ಯಮಿಗಳು ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿ ಯಾವುದೇ ಭಯವಿಲ್ಲದೇ ಈ ದೇಶದಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ಐಟಿಯವರು ಯಾವುದೇ ರೀತಿ ತೊಂದರೆ ಕೊಡುತ್ತಿಲ್ಲ ಅಂತ ರಂಗನಾಥ್​ ಆರೋಪಿಸಿದರು.

Intro:ಉದ್ಯಮಿ ಸಿದಾರ್ಥ ಆತ್ಮಹತ್ಯೆ ಪ್ರಕರಣ; ಸೂಕ್ತ ತನಿಖೆ ಮಾಡುವಂತೆ ಒತ್ತಾಯ..

ಬೆಂಗಳೂರು: ಖ್ಯಾತ ಉದ್ಯಮಿ ಸಿದಾರ್ಥರ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು..‌ಜೊತೆಗೆ ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿ ಇಂದು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಸಮಾನ ಮನಸ್ಕ ವಕೀಲರಿಂದ ಪ್ರತಿಭಟನೆ ನಡೆಸಲಾಯಿತು.. ಸಿದಾರ್ಥರ ಭಾವಚಿತ್ರ ಹಿಡಿದುಕೊಂಡು ಘೋಷಣೆ ಕೂಗಿದರು..

ಆದಾಯ ತೆರಿಗೆ ಅಧಿಕಾರಿಗಳಿಂದ ರಾಜ್ಯದ ಉದ್ಯಮಿಗಳ ಮೇಲೆ ನಡೆಯುತ್ತಿರುವ ಕಿರುಕುಳಕ್ಕೆ ಬ್ರೇಕ್ ಹಾಕಬೇಕಿದೆ.. ಸಿದಾರ್ಥರವರ ಮರಣ ಪತ್ರದಲ್ಲಿ ಹೆಸರಿಸಿದ ಐಟಿ ಅಧಿಕಾರಿಗಳ ಮೇಲೆ ತಕ್ಷಣ ಎಫ್ ಐ ಆರ್ ದಾಖಲಿಸಿ ಅಂತ ಒತ್ತಾಯಿಸಿದರು.‌ ಇನ್ನು ಆದಾಯ ತೆರಿಗೆ, ಇಡಿ, ಸಿಬಿಐ ಅಧಿಕಾರಿಗಳಿಂದ ಕರ್ನಾಟಕ ರಾಜ್ಯದ ಉದ್ಯಮಿಗಳನ್ನು ರಕ್ಷಸಿ ಅಂತ ಆಗ್ರಹಿಸಿದರು..

ಬೆಂಗಳೂರು ವಕೀಲರ‌ ಸಂಘ ಅಧ್ಯಕ್ಷ ಎ.ಪಿ.ರಂಗನಾಥ್ ಮಾತಾನಾಡಿ, ಸಿದಾರ್ಥ ಅವರ ಆತ್ಮಹತ್ಯೆ ಕುರಿತು ತನಿಖೆ ಆಗಬೇಕು.. ಐಟಿ ಅಧಿಕಾರಿಗಳ ಮೇಲೆ ಮೊಕದ್ದಮೆ ಹಾಕಬೇಕು ಅಂತ ತಿಳಿಸಿದರು.. ಗುಜರಾತಿನಲ್ಲಿ ಸರ್ಕಾರಕ್ಕೆ ನಷ್ಟವನ್ನು ಉಂಟುವ ಉದ್ಯಮಿಗಳು ಯಾವುದೇ ಭಯವಿಲ್ಲದೇ ಈ ದೇಶದಲ್ಲಿ ಓಡಾಡುತ್ತಿದ್ದಾರೆ.. ಅವರಿಗೆ ಐಟಿ ಯವರು ತೊಂದರೆ ಕೊಡುತ್ತಿಲ್ಲ ಅಂತ ಆರೋಪ ಮಾಡಿದರು... ಇವರೊಟ್ಟಿಗೆ ವಕೀಲ ಅಮೃತೇಶ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ ಕೂಡ ಸೂಕ್ತ ತನಿಖೆಗೆ ಆಗ್ರಹಿಸಿದರು..

KN_BNG_02_SIDDHARATH_LAYOR_PROTEST_SCRIPT_7201801

BYTE - ಬೆಂಗಳೂರು ವಕೀಲರ‌ ಸಂಘ ಅಧ್ಯಕ್ಷ- ಎ.ಪಿ.ರಂಗನಾಥ್

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.