ETV Bharat / state

ಸಿಎಂ ವಿಶ್ವಾಸ ಮತಯಾಚನೆಯಿಂದ ಹಿಂದೆ ಸರಿಯಲ್ಲ : ಹೆಚ್​.ಕೆ.ಪಾಟೀಲ್ - undefined

ಸಿಎಂ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಯಿಂದ ಹಿಂದೆ ಸರಿಯಲ್ಲ ಪ್ರತಿಪಕ್ಷದವರು ಮಾತನಾಡದೆ ಮೌನವಾಗಿರುವುದು ಹೊಣೆಗೇಡಿತನ. ಆದಷ್ಟು ಬೇಗ ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ಹೆಚ್​.ಕೆ.ಪಾಟೀಲ್​ ಹೇಳಿದರು.

ಹೆಚ್​.ಕೆ.ಪಾಟೀಲ್
author img

By

Published : Jul 21, 2019, 5:07 PM IST

ಬೆಂಗಳೂರು: ವಿಶ್ವ ಮತಯಾಚನೆಗೆ ಸಿಎಂ ಕುಮಾರಸ್ವಾಮಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದವರು. ಅವರು ವಿಶ್ವಾಸ ಮತಯಾಚನೆಯಿಂದ ಹಿಂದೆ ಸರಿಯಲ್ಲ ಎಂದು ಹೆಚ್​.ಕೆ.ಪಾಟೀಲ್​ ತಿಳಿಸಿದ್ದಾರೆ.

ನಗರದ ತಾಜ್‍ ವಿವಾಂತಾ ಹೋಟೆಲ್‍ನಲ್ಲಿ ಮಾತನಾಡಿದ ಅವರು, ಮಾತನಾಡುವುದು ಶಾಸಕರ ಮೂಲಭೂತ ಹಕ್ಕು. ಪ್ರತಿಪಕ್ಷದವರು ಮಾತನಾಡದೆ ಮೌನವಾಗಿರುವುದು ಹೊಣೆಗೇಡಿತನ. ಆದಷ್ಟು ಬೇಗ ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಪಕ್ಷದವರು ಮಾತನಾಡದೆ ಮೌನವಾಗಿರುವುದು ಹೊಣೆಗೇಡಿತನ

ರಾಜ್ಯಪಾಲರನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡಿದೆ. ರಾಜ್ಯಪಾಲರು ಪತ್ರ ಕಳುಹಿಸಬಾರದಿತ್ತು. ನನಗೆ ನಾಳೆ ಕಲಾಪದಲ್ಲಿ ಮಾತನಾಡುವ ಅವಕಾಶ ಸಿಕ್ಕರೆ, ಅತೃಪ್ತರ ಬಗ್ಗೆ ಮಾತನಾಡುತ್ತೇನೆ. ಹೃದಯ ಸಂಬಂಧಿ ವಿಭಾಗ ಇಲ್ಲದಿದ್ದರೂ ಮುಂಬೈನಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಶ್ರೀಮಂತ ಪಾಟೀಲ್​ರಿಗೆ ಹೃದಯ ಕಾಯಿಲೆ ಇರುವುದೇ ಅನುಮಾನ. ಬಿಜೆಪಿಯಲ್ಲಿ ದುರುದ್ದೇಶವಿದೆ ಎಂದು ಕಿಡಿಕಾರಿದರು.

ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಬಗ್ಗೆ ಮಾತನಾಡುವ ಬದಲು ಬಿಜೆಪಿ ತೆಪ್ಪಗೆ ಕುಳಿತಿದೆ. ಸರ್ಕಾರದ ಕಾರ್ಯಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ನಾಳೆ ಸಾಯಂಕಾಲದ ವೇಳಗೆ ವಿಶ್ವಾಸ ಮತಯಾಚನೆ ಮಾಡುತ್ತೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ. ರಾಜ್ಯಪಾಲರು 3 ಪತ್ರ ಬರೆದಿದ್ದಾರೆ. ಇದಕ್ಕೆ ಯಾವ ನಿಯಮದಡಿ ಅವಕಾಶ ಇದೆ. ನಿಯಮ, ಕಾನೂನು, ಸಂವಿಧಾನಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ನಮ್ಮ ಹಕ್ಕನ್ನ ಮೊಟಕುಗೊಳಿಸಲು ಸ್ಪೀಕರ್​ಗೂ ಅಧಿಕಾರವಿಲ್ಲ ಎಂದರು.

ಬೆಂಗಳೂರು: ವಿಶ್ವ ಮತಯಾಚನೆಗೆ ಸಿಎಂ ಕುಮಾರಸ್ವಾಮಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದವರು. ಅವರು ವಿಶ್ವಾಸ ಮತಯಾಚನೆಯಿಂದ ಹಿಂದೆ ಸರಿಯಲ್ಲ ಎಂದು ಹೆಚ್​.ಕೆ.ಪಾಟೀಲ್​ ತಿಳಿಸಿದ್ದಾರೆ.

ನಗರದ ತಾಜ್‍ ವಿವಾಂತಾ ಹೋಟೆಲ್‍ನಲ್ಲಿ ಮಾತನಾಡಿದ ಅವರು, ಮಾತನಾಡುವುದು ಶಾಸಕರ ಮೂಲಭೂತ ಹಕ್ಕು. ಪ್ರತಿಪಕ್ಷದವರು ಮಾತನಾಡದೆ ಮೌನವಾಗಿರುವುದು ಹೊಣೆಗೇಡಿತನ. ಆದಷ್ಟು ಬೇಗ ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಪಕ್ಷದವರು ಮಾತನಾಡದೆ ಮೌನವಾಗಿರುವುದು ಹೊಣೆಗೇಡಿತನ

ರಾಜ್ಯಪಾಲರನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡಿದೆ. ರಾಜ್ಯಪಾಲರು ಪತ್ರ ಕಳುಹಿಸಬಾರದಿತ್ತು. ನನಗೆ ನಾಳೆ ಕಲಾಪದಲ್ಲಿ ಮಾತನಾಡುವ ಅವಕಾಶ ಸಿಕ್ಕರೆ, ಅತೃಪ್ತರ ಬಗ್ಗೆ ಮಾತನಾಡುತ್ತೇನೆ. ಹೃದಯ ಸಂಬಂಧಿ ವಿಭಾಗ ಇಲ್ಲದಿದ್ದರೂ ಮುಂಬೈನಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಶ್ರೀಮಂತ ಪಾಟೀಲ್​ರಿಗೆ ಹೃದಯ ಕಾಯಿಲೆ ಇರುವುದೇ ಅನುಮಾನ. ಬಿಜೆಪಿಯಲ್ಲಿ ದುರುದ್ದೇಶವಿದೆ ಎಂದು ಕಿಡಿಕಾರಿದರು.

ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಬಗ್ಗೆ ಮಾತನಾಡುವ ಬದಲು ಬಿಜೆಪಿ ತೆಪ್ಪಗೆ ಕುಳಿತಿದೆ. ಸರ್ಕಾರದ ಕಾರ್ಯಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ನಾಳೆ ಸಾಯಂಕಾಲದ ವೇಳಗೆ ವಿಶ್ವಾಸ ಮತಯಾಚನೆ ಮಾಡುತ್ತೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ. ರಾಜ್ಯಪಾಲರು 3 ಪತ್ರ ಬರೆದಿದ್ದಾರೆ. ಇದಕ್ಕೆ ಯಾವ ನಿಯಮದಡಿ ಅವಕಾಶ ಇದೆ. ನಿಯಮ, ಕಾನೂನು, ಸಂವಿಧಾನಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ನಮ್ಮ ಹಕ್ಕನ್ನ ಮೊಟಕುಗೊಳಿಸಲು ಸ್ಪೀಕರ್​ಗೂ ಅಧಿಕಾರವಿಲ್ಲ ಎಂದರು.

Intro:newsBody:ವಿಶ್ವಾಸಮತ ಯಾಚನೆಯಿಂದ ಹಿಂದೆ ಹೋಗಲ್ಲಾ; ಗೆಲ್ಲುತ್ತೇವೆ: ಎಚ್‍ಕೆಪಿ



ಬೆಂಗಳೂರು: ವಿಶ್ವಾಸ ಮತ ಯಾಚನೆ ಸ್ವಯಂಪ್ರೆರಣೆ ಯಿಂದ ಮುಂದೆ ಬಂದವರು ಸಿಎಂ. ವಿಶ್ವಾಸ ಮತಯಾಚನೆ ಮಾಡದೇ ಹಿಂದೆ ಹೋಗಲ್ಲ ಎಂದು ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ತಾಜ್‍ ವಿವಾಂತಾ ಹೋಟೆಲ್‍ನಲ್ಲಿ ಮಾತನಾಡಿ, ಮಾತನಾಡುವದು ಶಾಸಕರ ಮೂಲಭೂತ ಹಕ್ಕು. ಪ್ರತಿಪಕ್ಷ ಮಾತನಾಡದೆ ಮೌನವಾಗಿರುವುದು ಹೊಣೆಗೇಡಿತನ. ಆದಷ್ಟೂ ಬೇಗ ವಿಶ್ವಾಸ ಮತಯಾಚನೆ ಮಾಡುತ್ತವೇ. ವಿಶ್ವಾಸಮತ ಯಾಚನೆ ನಾಳೆ ಫಿಕ್ಸ್. ರಾಜ್ಯಪಾಲರನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. ರಾಜ್ಯಪಾಲರ ಯಾವ ಕಾನೂನು ಇದೆ. ರಾಜ್ಯಪಾಲರು ಪತ್ರ ಕಳುಹಿಸಬಾರದಿತ್ತು. ಶಾಸಕರಿಗೆ ಮಾತನಾಡುವ ಹಕ್ಕಿದೆ ಎಂದರು.
ನಾಳೆ ಅವಕಾಶ ಸಿಕ್ಕರೆ ಮಾತಾಡುತ್ತೇನೆ
ನನಗೆ ನಾಳೆ ಕಲಾಪದಲ್ಲಿ ಮಾತನಾಡುವ ಅವಕಾಶ ಸಿಕ್ಕರೆ, ಅತೃಪ್ತರ ಬಗ್ಗೆ ಮಾತನಾಡುತ್ತೇನೆ. ಹೃದಯ ಸಂಬಂಧಿ ವಿಭಾಗ ಇಲ್ಲದಿದ್ದರೂ ಮುಂಬೈನಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಶ್ರೀಮಂತ ಪಾಟೀಲ್ ಹೃದಯ ಖಾಯಿಲೆ ಇರುವುದೇ ಅನುಮಾನ. ಬಿಜೆಪಿಯಲ್ಲಿ ದುರುದ್ದೇಶವಿದೆ ಎಂದು ಹೇಳಿದರು.
ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಬಗ್ಗೆ ಮಾತನಾಡುವ ಬದಲು ಬಿಜೆಪಿ ತೆಪ್ಪಗೆ ಕುಳಿತಿದೆ. ಸರ್ಕಾರದ ಕಾರ್ಯಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ನಾಳೆ ಸಾಯಂಕಾಲದ ವೇಳಗೆ ವಿಶ್ವಾಸಮತ ಯಾಚನೆ ಮಾಡುತ್ತೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ. ರಾಜ್ಯಪಾಲರು ಮೂರು ಪತ್ರ ಬರೆದಿದ್ದಾರೆ. ಯಾವ ನಿಯಮದಡಿ ಅವಕಾಶ ಇದೆ. ನಿಯಮ, ಕಾನೂನು, ಸಂವಿಧಾನ ಗಾಳಿಗೆ ತೂರಿ ರಾಜ್ಯಪಾಲರ ಪತ್ರ. ನಮ್ಮ ಹಕ್ಕನ್ನ ಮೊಟಕುಗೊಳಿಸಲು ಸ್ಪೀಕರ್ ಗೂ ಅಧಿಕಾರವಿಲ್ಲ ಎಂದರು.
ಪಾಲಿಟಿಕ್ಸ್ನಿಂದ ದೂರವಿದ್ದೇನೆ
ತಾಜ್ ವಿವಾಂತ ಹೋಟೆಲ್ ಬಳಿ ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ನಾನು ಸ್ಪಲ್ಪ ದಿನ ಪಾಲಿಟಿಕ್ಸ್ ನಿಂದ ದೂರ ಉಳಿದಿದ್ದೇನೆ. ಪೊಲಿಟಿಕ್ಸ್ ಗೆ ಸ್ವಲ್ಪ ದಿನ ರಜ ತಗೊಂಡಿದ್ದೇನೆ. ನಮ್ಮ ಸ್ನೇಹಿತರು ತಾಜ್ ವಿವಾಂತ ಹೋಟೆಲ್ ನಲ್ಲಿದ್ರು ಮಾತನಾಡಿಸಿಕೊಂಡು ಹೋಗೊಣ ಅಂತ ಬಂದಿದೆ. ಇವಾಗ ನಾನು ಏನನ್ನೂ ಪ್ರತಿಕ್ರಿಯೆ ನೀಡಲ್ಲ ಸಾರಿ ಕ್ಷಮಿಸಿ ಎಂದರು.Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.