ETV Bharat / state

ಭದ್ರಾ ಹುಲಿ ಯೋಜನೆ ಬಫರ್ ಝೋನ್: ರೈತರ ಹಿತಕಾಯುವ ಭರವಸೆ ನೀಡಿದ ಸಿಎಂ

ಸದಾನಂದಗೌಡರು ಸಿಎಂ ಆಗಿದ್ದಾಗಲೇ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿ ಭದ್ರಾ ಮತ್ತು ಕುದುರೆಮುಖ ಹೆಸರು ಕೈಬಿಡಲು ಕೇಂದ್ರಕ್ಕೆ ಒತ್ತಾಯ ಮಾಡಿದ್ದೆವು. ಆದರೂ, ಈಗ ಘೋಷಿಸಲ್ಪಟ್ಟ ಹೆಸರುಗಳಲ್ಲಿ ಭದ್ರಾ, ಕುದುರೆಮುಖ ಸೇರಿವೆ. ಇದರಲ್ಲಿ ಮುಖ್ಯವಾಗಿ ಈಗಾಗಲೇ ಜಾರಿಯಲ್ಲಿರುವ ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ 10 ಕಿ.ಮೀ. ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮವಲಯ ಜಾರಿಗೆ ನಿರ್ಧರಿಸಿದ್ದು, ಇದಕ್ಕೆ ಸಾಕಷ್ಟು ವಿರೋಧ ಎದುರಾಗಿದೆ.

author img

By

Published : Oct 22, 2020, 8:30 PM IST

CM held meeting with officials about Bhadra tiger project buffer zone expansion
ಭದ್ರಾ ಹುಲಿ ಯೋಜನೆ ಬಫರ್ ಝೋನ್ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ.

ಬೆಂಗಳೂರು: ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ ಹೊಸದಾಗಿ 10 ಕಿ.ಮೀ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮವಲಯ ಜಾರಿಗೊಳಿಸುವ ವಿಚಾರದಲ್ಲಿ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ತಕ್ಕ ನಿರ್ಧಾರವನ್ನು ತೆಗೆಗೆದುಕೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭದ್ರಾ ಹುಲಿ ಯೋಜನೆ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ಸಿ.ಟಿ. ರವಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಆರಂಭಗೊಳ್ಳುತ್ತಿದ್ದಂತೆ ಹುಲಿ ಯೋಜನೆ ಕುರಿತು ಸಂಸದೆ ಶೋಭಾ ಕರಂದ್ಲಾಜೆ ವಿವರ ನೀಡಿದರು.

CM held meeting with officials about Bhadra tiger project buffer zone expansion
ಭದ್ರಾ ಹುಲಿ ಯೋಜನೆ ಬಫರ್ ಝೋನ್ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ.

2011ರಲ್ಲಿ ರಾಜ್ಯ ವ್ಯಾಪ್ತಿಯಲ್ಲಿ 7 ಹುಲಿ ಯೋಜನೆ ಪ್ರದೇಶಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ ಭದ್ರಾ ಹಾಗೂ ಕುದುರೆಮುಖ ಪ್ರದೇಶಗಳು ಸೇರಿವೆ. ಅಂದು ಸದಾನಂದಗೌಡರು ಸಿಎಂ ಆಗಿದ್ದಾಗಲೇ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿ ಭದ್ರಾ ಮತ್ತು ಕುದುರೆಮುಖ ಹೆಸರು ಕೈಬಿಡಲು ಕೇಂದ್ರಕ್ಕೆ ಒತ್ತಾಯ ಮಾಡಿದ್ದೆವು. ಆದರೂ, ಈಗ ಘೋಷಿಸಲ್ಪಟ್ಟ ಹೆಸರುಗಳಲ್ಲಿ ಭದ್ರಾ, ಕುದುರೆಮುಖ ಸೇರಿವೆ. ಇದರಲ್ಲಿ ಮುಖ್ಯವಾಗಿ ಈಗಾಗಲೇ ಜಾರಿಯಲ್ಲಿರುವ ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ 10 ಕಿ.ಮೀ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮವಲಯ ಜಾರಿಗೆ ನಿರ್ಧರಿಸಿದ್ದು ಇದಕ್ಕೆ ಸಾಕಷ್ಟು ವಿರೋಧ ಎದುರಾಗಿದೆ ಎಂದರು.

51 ಗ್ರಾಮಗಳು ಈಗ ಬಫರ್ ಝೋನ್ ವಿಸ್ತರಣೆ ಯೋಜನೆ ವ್ಯಾಪ್ತಿಗೆ ಬರಲಿವೆ. ಇದರಿಂದ ನರಸಿಂಹರಾಜಪುರ ಜನ ಒಕ್ಕಲೇಳಬೇಕಿದೆ. 8000ಕ್ಕೂ ಹೆಚ್ಚಿನ ಕುಟುಂಬಗಳು ಈ ವ್ಯಾಪ್ತಿಗೆ ಬರಲಿವೆ. ಒಂದು ವೇಳೆ ಬಫರ್ ಝೋನ್ ವಿಸ್ತರಣೆ ಮಾಡಿದಲ್ಲಿ ಮನಷ್ಯ ಹಾಗೂ ವನ್ಯಜೀವಿ ನಡುವೆ ಭಾರಿ ಸಂಘರ್ಷ ಎದುರಾಗಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು.

CM held meeting with officials about Bhadra tiger project buffer zone expansion
ಭದ್ರಾ ಹುಲಿ ಯೋಜನೆ ಬಫರ್ ಝೋನ್ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ.

ಈಗಾಗಲೇ ಅಕ್ಟೋಬರ್ 15 ರಂದು ಎನ್.ಆರ್.ಪುರ ತಾಲೂಕು ಬಂದ್ ಕರೆ ನೀಡಿ ಮಲೆನಾಡು ಹಿತರಕ್ಷಣಾ ಸಮಿತಿ, ರೈತ ಸಂಘ ಹೋರಾಟ ನಡೆಸಿವೆ. ಸ್ಥಳೀಯ ಜನರ ಬದುಕಿನ ಪ್ರಶ್ನೆಯಾಗಿರುವ ಕಾರಣ ಬಫರ್ ಝೋನ್ ಅನ್ನು ಹೊಸದಾಗಿ 10 ಕಿಲೋ ಮೀಟರ್ ವಿಸ್ತರಣೆ ಮಾಡುವುದು ಬೇಡ. ನದಿ ಹರಿವಿನಲ್ಲೇ ಅದು ಕೊನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಂಬಂಧಪಟ್ಟ ಅಧಿಕಾರಿಗಳಿಂದಲೂ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಎಲ್ಲ ಆಯಾಮದಲ್ಲಿಯೂ ಅವಲೋಕಿಸಿ ಏನು ಮಾಡಬಹುದು ಎನ್ನುವ ಕುರಿತು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುತ್ತದೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ತಕ್ಕ ನಿರ್ಧಾರವನ್ನು ತೆಗೆಗೆದುಕೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಸಭೆಗೆ ಭರವಸೆ ನೀಡಿದರು.

ಬೆಂಗಳೂರು: ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ ಹೊಸದಾಗಿ 10 ಕಿ.ಮೀ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮವಲಯ ಜಾರಿಗೊಳಿಸುವ ವಿಚಾರದಲ್ಲಿ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ತಕ್ಕ ನಿರ್ಧಾರವನ್ನು ತೆಗೆಗೆದುಕೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭದ್ರಾ ಹುಲಿ ಯೋಜನೆ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ಸಿ.ಟಿ. ರವಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಆರಂಭಗೊಳ್ಳುತ್ತಿದ್ದಂತೆ ಹುಲಿ ಯೋಜನೆ ಕುರಿತು ಸಂಸದೆ ಶೋಭಾ ಕರಂದ್ಲಾಜೆ ವಿವರ ನೀಡಿದರು.

CM held meeting with officials about Bhadra tiger project buffer zone expansion
ಭದ್ರಾ ಹುಲಿ ಯೋಜನೆ ಬಫರ್ ಝೋನ್ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ.

2011ರಲ್ಲಿ ರಾಜ್ಯ ವ್ಯಾಪ್ತಿಯಲ್ಲಿ 7 ಹುಲಿ ಯೋಜನೆ ಪ್ರದೇಶಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ ಭದ್ರಾ ಹಾಗೂ ಕುದುರೆಮುಖ ಪ್ರದೇಶಗಳು ಸೇರಿವೆ. ಅಂದು ಸದಾನಂದಗೌಡರು ಸಿಎಂ ಆಗಿದ್ದಾಗಲೇ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿ ಭದ್ರಾ ಮತ್ತು ಕುದುರೆಮುಖ ಹೆಸರು ಕೈಬಿಡಲು ಕೇಂದ್ರಕ್ಕೆ ಒತ್ತಾಯ ಮಾಡಿದ್ದೆವು. ಆದರೂ, ಈಗ ಘೋಷಿಸಲ್ಪಟ್ಟ ಹೆಸರುಗಳಲ್ಲಿ ಭದ್ರಾ, ಕುದುರೆಮುಖ ಸೇರಿವೆ. ಇದರಲ್ಲಿ ಮುಖ್ಯವಾಗಿ ಈಗಾಗಲೇ ಜಾರಿಯಲ್ಲಿರುವ ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ 10 ಕಿ.ಮೀ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮವಲಯ ಜಾರಿಗೆ ನಿರ್ಧರಿಸಿದ್ದು ಇದಕ್ಕೆ ಸಾಕಷ್ಟು ವಿರೋಧ ಎದುರಾಗಿದೆ ಎಂದರು.

51 ಗ್ರಾಮಗಳು ಈಗ ಬಫರ್ ಝೋನ್ ವಿಸ್ತರಣೆ ಯೋಜನೆ ವ್ಯಾಪ್ತಿಗೆ ಬರಲಿವೆ. ಇದರಿಂದ ನರಸಿಂಹರಾಜಪುರ ಜನ ಒಕ್ಕಲೇಳಬೇಕಿದೆ. 8000ಕ್ಕೂ ಹೆಚ್ಚಿನ ಕುಟುಂಬಗಳು ಈ ವ್ಯಾಪ್ತಿಗೆ ಬರಲಿವೆ. ಒಂದು ವೇಳೆ ಬಫರ್ ಝೋನ್ ವಿಸ್ತರಣೆ ಮಾಡಿದಲ್ಲಿ ಮನಷ್ಯ ಹಾಗೂ ವನ್ಯಜೀವಿ ನಡುವೆ ಭಾರಿ ಸಂಘರ್ಷ ಎದುರಾಗಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು.

CM held meeting with officials about Bhadra tiger project buffer zone expansion
ಭದ್ರಾ ಹುಲಿ ಯೋಜನೆ ಬಫರ್ ಝೋನ್ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ.

ಈಗಾಗಲೇ ಅಕ್ಟೋಬರ್ 15 ರಂದು ಎನ್.ಆರ್.ಪುರ ತಾಲೂಕು ಬಂದ್ ಕರೆ ನೀಡಿ ಮಲೆನಾಡು ಹಿತರಕ್ಷಣಾ ಸಮಿತಿ, ರೈತ ಸಂಘ ಹೋರಾಟ ನಡೆಸಿವೆ. ಸ್ಥಳೀಯ ಜನರ ಬದುಕಿನ ಪ್ರಶ್ನೆಯಾಗಿರುವ ಕಾರಣ ಬಫರ್ ಝೋನ್ ಅನ್ನು ಹೊಸದಾಗಿ 10 ಕಿಲೋ ಮೀಟರ್ ವಿಸ್ತರಣೆ ಮಾಡುವುದು ಬೇಡ. ನದಿ ಹರಿವಿನಲ್ಲೇ ಅದು ಕೊನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಂಬಂಧಪಟ್ಟ ಅಧಿಕಾರಿಗಳಿಂದಲೂ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಎಲ್ಲ ಆಯಾಮದಲ್ಲಿಯೂ ಅವಲೋಕಿಸಿ ಏನು ಮಾಡಬಹುದು ಎನ್ನುವ ಕುರಿತು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುತ್ತದೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ತಕ್ಕ ನಿರ್ಧಾರವನ್ನು ತೆಗೆಗೆದುಕೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಸಭೆಗೆ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.