ಬೆಂಗಳೂರು : ಲಾಕ್ಡೌನ್ ಜಾರಿಯಾಗಿ ಮೂರು ದಿನಗಳು ಕಳೆದಿವೆ. ಕೋವಿಡ್ ನಿಯಂತ್ರಣ, ಶ್ರಮಿಕರಿಗೆ ನೆರವು ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಚಿವರು ಮತ್ತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಸುರಿಯುವ ಮಳೆಯ ನಡುವೆಯೂ ನಿವಾಸದ ಮುಂಭಾಗದ ಕಾರಿಡಾರ್ನ ಹೊರಾಂಗಣದಲ್ಲಿ ಸಿಎಂ ಸಭೆ ನಡೆಸುತ್ತಿದ್ದು, ಲಾಕ್ಡೌನ್ನ ಮೂರನೇ ದಿನದ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ.
ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗುತ್ತಿದೆ. ಇದಕ್ಕೆ ಕೋವಿಡ್ ಟೆಸ್ಟ್ ಪ್ರಮಾಣ ಕಡಿಮೆ ಮಾಡಿರುವುದು ಕಾರಣ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ವಾಸ್ತವ ಸಂಗತಿ ಕುರಿತು ಸಿಎಂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಕಳೆದ ಮೂರು ದಿನದ ಸ್ಥಿತಿಗತಿ ಅವಲೋಕಿಸಿದ ನಂತರ ಶ್ರಮಿಕ ವರ್ಗಕ್ಕೆ ಯಾವುದಾದರೂ ರೀತಿಯ ನೆರವು ನೀಡುವ ಅಗತ್ಯತೆ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗ್ತಿದೆ.