ETV Bharat / state

ನಾಳೆ ಎಂದಿನ ದಿನಚರಿ ನಿಗದಿ.. ವಿದಾಯ ಭಾಷಣಕ್ಕೆ ಸಿದ್ಧರಾದ್ರಾ ಯಡಿಯೂರಪ್ಪ?

author img

By

Published : Jul 25, 2021, 5:54 PM IST

ನಾಳೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದರೂ ಸಿಎಂ ಯಡಿಯೂರಪ್ಪ ನಾಳೆ ನಿಗದಿಯಾಗಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುವ ಭಾಷಣ ಯಡಿಯೂರಪ್ಪ ಅವರ ಭವಿಷ್ಯದ ನಡೆಯನ್ನು ಸ್ಪಷ್ಟವಾಗಿ ಸೂಚಿಸಲಿದೆ.

cm bsy resignation news
ಯಡಿಯೂರಪ್ಪ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷ ತುಂಬಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುವ ಸನ್ನಿವೇಶ ಮುಂದಿದ್ದರೂ ಸಿಎಂ ಕರ್ತವ್ಯನಿಷ್ಠೆ ಮೆರೆಯುವ ದಿನಚರಿ ಪಾಲನೆ ಮಾಡುತ್ತಿದ್ದಾರೆ.

ಎಂದಿನಂತೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎನ್ನುವುದು ಇಂದು ಹೈಕಮಾಂಡ್ ರವಾನಿಸುವ ಸಂದೇಶದ ಮೇಲೆ ಅವಲಂಬಿಸಿದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿಎಂ ಯಡಿಯೂರಪ್ಪ ನಾಳಿನ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ನಾಳೆಗೆ ಬೆಳಗ್ಗೆ 9.50 ರಿಂದ 10.10 ರವರೆಗೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ನಡೆಯುವ ಕಾರ್ಯಕ್ರಮದ ನಂತರ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ. 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆಯಲಿರುವ ಸರ್ಕಾರದ ಎರಡು ವರ್ಷದ ಸಾಧನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದು, ಸರ್ಕಾರದ ಸಾಧನೆ ಕುರಿತು ಭಾಷಣ ಮಾಡಲಿದ್ದಾರೆ.

ವಿದಾಯ ಭಾಷಣ?

ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುವ ಭಾಷಣ ಯಡಿಯೂರಪ್ಪ ಅವರ ಭವಿಷ್ಯದ ನಡೆಯನ್ನು ಸ್ಪಷ್ಟವಾಗಿ ಸೂಚಿಸಲಿದೆ. ರಾಜೀನಾಮೆ ನೀಡುವಂತೆ ಹೈಕಮಾಂಡ್ ಸಂದೇಶ ಕಳಿಸಿದ್ದರೆ ಯಡಿಯೂರಪ್ಪ ವಿದಾಯದ ಭಾಷಣ ಮಾಡಲಿದ್ದಾರೆ. ರಾಜಕೀಯ ಏಳು-ಬೀಳು, ಸರ್ಕಾರ ಎದುರಿಸಿದ ಸಂಕಷ್ಟ-ಸವಾಲುಗಳನ್ನು ಪ್ರಸ್ತಾಪಿಸಿ ಭಾವುಕ ಭಾಷಣ ಮಾಡಲಿದ್ದಾರೆ. ಮುಂದಿನ ನಡೆಯ ನಿರ್ಧಾರವನ್ನೂ ಬಹುತೇಕ ಪ್ರಕಟಿಸುವ ಸುಳಿವುಗಳನ್ನು ಭಾಷಣದಲ್ಲೇ ನೀಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮೂರು ದಿನ ಆಡಳಿತ ನಡೆಸಿದ್ದ ವೇಳೆ ಬಹುಮತ ಸಾಬೀತು ಬದಲು ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ನೆನಪಿಸುವ ರೀತಿಯಲ್ಲಿ ಭಾಷಣ ಮಾಡಿ ಸದನದಿಂದ ಹೊರನಡೆದು ರಾಜೀನಾಮೆ ನೀಡಿದ್ದರು. ಈಗ ಅದೇ ರೀತಿ ಸಾಧನಾ ಸಮಾರಂಭದಲ್ಲೇ ವಿದಾಯದ ಭಾಷಣ ಮಾಡಿ ಕಾಲ್ನಡಿಗೆಯಲ್ಲೇ ಬೆಂಬಲಿಗರ ಜೊತೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.ಆದರೆ ಇದೆಲ್ಲವೂ ಹೈಕಮಾಂಡ್ ನೀಡುವ ಸೂಚನೆಯನ್ನು ಅವಲಂಬಿಸಿದೆ.

ಹೈಕಮಾಂಡ್ ಸಂದೇಶ ಏನಿರಬಹುದು..

ಇಂದು ರಾತ್ರಿ ಹೈಕಮಾಂಡ್ ಸಿಎಂ ಯಡಿಯೂರಪ್ಪಗೆ ಸಂದೇಶ ಕಳಿಸುವುದು ಬಹುತೇಕ ಖಚಿತ. ತಕ್ಷಣ ರಾಜೀನಾಮೆ ನೀಡಿ, ಸ್ವಲ್ಪ ದಿನಗಳ ಕಾಲದ ನಂತರ ರಾಜೀನಾಮೆ ನೀಡಿ,ಸಿಎಂ ಹುದ್ದೆಯಲ್ಲಿ ಮುಂದುವರೆಯಿರಿ.ಈ ರೀತಿಯ ಮೂರು ಆಯ್ಕೆಯಲ್ಲಿ ಯಾವ ಸಂದೇಶ ಬರಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

ರಾಜಭವನಕ್ಕೆ ಭೇಟಿ:

ಸದ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನವದೆಹಲಿ ಪ್ರವಾಸದಲ್ಲಿದ್ದು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.ನಾಳೆ ರಾಜ್ಯಪಾಲರ ಭೇಟಿಗೆ ಸಿಎಂ ಅನುಮತಿ ಕೇಳಿದ್ದು ನಾಳೆ ಸಂಜೆ ಭೇಟಿ ಮಾಡಲಿದ್ದಾರೆ. ಸಮಯವನ್ನು ರಾಜಭವನದ ಕಚೇರಿ ಅಂತಿಮಗೊಳಿಸಬೇಕಿದ್ದು, ರಾಜ್ಯಪಾಲರು ವಾಪಸ್ಸಾದ ನಂತರ ಸಿಎಂ ಕಚೇರಿಗೆ ಸಮಯದ ಮಾಹಿತಿ ಕಳಿಸಿಕೊಡಲಾಗುತ್ತದೆ. ನಾಳೆಯೇ ರಾಜೀನಾಮೆ ಕೊಡಿ ಎನ್ನುವ ಸೂಚನೆ ಇದ್ದಲ್ಲಿ ನಾಳೆ ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಅಥವಾ ರಾಜೀನಾಮೆಗೆ ಸಮಯಾವಕಾಶ ನೀಡಿದಲ್ಲಿ ನಾಳೆ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ಹಂಚಿಕೊಂಡು ರಾಜ್ಯಪಾಲರಿಂದ ಶುಭಾಷಯ ಸ್ವೀಕರಿಸಿ ಬರಲಿದ್ದಾರೆ.

ಆಪ್ತ ಸಚಿವರ ಭೇಟಿ:

ನಾಳೆ ಬೆಳಗ್ಗೆ ಆಪ್ತ ಸಚಿವರು ಸಿಎಂ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಲಭ್ಯರಿರುವ ಸಚಿವರು ಸಿಎಂ ನಿವಾಸಕ್ಕೆ ಬಂದು ಮಾತುಕತೆ ನಡೆಸಲಿದ್ದಾರೆ. ನಂತರ ಎಲ್ಲರೂ ಜೊತೆಯಾಗಿಯೇ ವಿಧಾನಸೌಧದತ್ತ ತೆರಳಲಿದ್ದಾರೆ.

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷ ತುಂಬಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುವ ಸನ್ನಿವೇಶ ಮುಂದಿದ್ದರೂ ಸಿಎಂ ಕರ್ತವ್ಯನಿಷ್ಠೆ ಮೆರೆಯುವ ದಿನಚರಿ ಪಾಲನೆ ಮಾಡುತ್ತಿದ್ದಾರೆ.

ಎಂದಿನಂತೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎನ್ನುವುದು ಇಂದು ಹೈಕಮಾಂಡ್ ರವಾನಿಸುವ ಸಂದೇಶದ ಮೇಲೆ ಅವಲಂಬಿಸಿದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿಎಂ ಯಡಿಯೂರಪ್ಪ ನಾಳಿನ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ನಾಳೆಗೆ ಬೆಳಗ್ಗೆ 9.50 ರಿಂದ 10.10 ರವರೆಗೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ನಡೆಯುವ ಕಾರ್ಯಕ್ರಮದ ನಂತರ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ. 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆಯಲಿರುವ ಸರ್ಕಾರದ ಎರಡು ವರ್ಷದ ಸಾಧನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದು, ಸರ್ಕಾರದ ಸಾಧನೆ ಕುರಿತು ಭಾಷಣ ಮಾಡಲಿದ್ದಾರೆ.

ವಿದಾಯ ಭಾಷಣ?

ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುವ ಭಾಷಣ ಯಡಿಯೂರಪ್ಪ ಅವರ ಭವಿಷ್ಯದ ನಡೆಯನ್ನು ಸ್ಪಷ್ಟವಾಗಿ ಸೂಚಿಸಲಿದೆ. ರಾಜೀನಾಮೆ ನೀಡುವಂತೆ ಹೈಕಮಾಂಡ್ ಸಂದೇಶ ಕಳಿಸಿದ್ದರೆ ಯಡಿಯೂರಪ್ಪ ವಿದಾಯದ ಭಾಷಣ ಮಾಡಲಿದ್ದಾರೆ. ರಾಜಕೀಯ ಏಳು-ಬೀಳು, ಸರ್ಕಾರ ಎದುರಿಸಿದ ಸಂಕಷ್ಟ-ಸವಾಲುಗಳನ್ನು ಪ್ರಸ್ತಾಪಿಸಿ ಭಾವುಕ ಭಾಷಣ ಮಾಡಲಿದ್ದಾರೆ. ಮುಂದಿನ ನಡೆಯ ನಿರ್ಧಾರವನ್ನೂ ಬಹುತೇಕ ಪ್ರಕಟಿಸುವ ಸುಳಿವುಗಳನ್ನು ಭಾಷಣದಲ್ಲೇ ನೀಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮೂರು ದಿನ ಆಡಳಿತ ನಡೆಸಿದ್ದ ವೇಳೆ ಬಹುಮತ ಸಾಬೀತು ಬದಲು ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ನೆನಪಿಸುವ ರೀತಿಯಲ್ಲಿ ಭಾಷಣ ಮಾಡಿ ಸದನದಿಂದ ಹೊರನಡೆದು ರಾಜೀನಾಮೆ ನೀಡಿದ್ದರು. ಈಗ ಅದೇ ರೀತಿ ಸಾಧನಾ ಸಮಾರಂಭದಲ್ಲೇ ವಿದಾಯದ ಭಾಷಣ ಮಾಡಿ ಕಾಲ್ನಡಿಗೆಯಲ್ಲೇ ಬೆಂಬಲಿಗರ ಜೊತೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.ಆದರೆ ಇದೆಲ್ಲವೂ ಹೈಕಮಾಂಡ್ ನೀಡುವ ಸೂಚನೆಯನ್ನು ಅವಲಂಬಿಸಿದೆ.

ಹೈಕಮಾಂಡ್ ಸಂದೇಶ ಏನಿರಬಹುದು..

ಇಂದು ರಾತ್ರಿ ಹೈಕಮಾಂಡ್ ಸಿಎಂ ಯಡಿಯೂರಪ್ಪಗೆ ಸಂದೇಶ ಕಳಿಸುವುದು ಬಹುತೇಕ ಖಚಿತ. ತಕ್ಷಣ ರಾಜೀನಾಮೆ ನೀಡಿ, ಸ್ವಲ್ಪ ದಿನಗಳ ಕಾಲದ ನಂತರ ರಾಜೀನಾಮೆ ನೀಡಿ,ಸಿಎಂ ಹುದ್ದೆಯಲ್ಲಿ ಮುಂದುವರೆಯಿರಿ.ಈ ರೀತಿಯ ಮೂರು ಆಯ್ಕೆಯಲ್ಲಿ ಯಾವ ಸಂದೇಶ ಬರಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

ರಾಜಭವನಕ್ಕೆ ಭೇಟಿ:

ಸದ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನವದೆಹಲಿ ಪ್ರವಾಸದಲ್ಲಿದ್ದು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.ನಾಳೆ ರಾಜ್ಯಪಾಲರ ಭೇಟಿಗೆ ಸಿಎಂ ಅನುಮತಿ ಕೇಳಿದ್ದು ನಾಳೆ ಸಂಜೆ ಭೇಟಿ ಮಾಡಲಿದ್ದಾರೆ. ಸಮಯವನ್ನು ರಾಜಭವನದ ಕಚೇರಿ ಅಂತಿಮಗೊಳಿಸಬೇಕಿದ್ದು, ರಾಜ್ಯಪಾಲರು ವಾಪಸ್ಸಾದ ನಂತರ ಸಿಎಂ ಕಚೇರಿಗೆ ಸಮಯದ ಮಾಹಿತಿ ಕಳಿಸಿಕೊಡಲಾಗುತ್ತದೆ. ನಾಳೆಯೇ ರಾಜೀನಾಮೆ ಕೊಡಿ ಎನ್ನುವ ಸೂಚನೆ ಇದ್ದಲ್ಲಿ ನಾಳೆ ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಅಥವಾ ರಾಜೀನಾಮೆಗೆ ಸಮಯಾವಕಾಶ ನೀಡಿದಲ್ಲಿ ನಾಳೆ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ಹಂಚಿಕೊಂಡು ರಾಜ್ಯಪಾಲರಿಂದ ಶುಭಾಷಯ ಸ್ವೀಕರಿಸಿ ಬರಲಿದ್ದಾರೆ.

ಆಪ್ತ ಸಚಿವರ ಭೇಟಿ:

ನಾಳೆ ಬೆಳಗ್ಗೆ ಆಪ್ತ ಸಚಿವರು ಸಿಎಂ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಲಭ್ಯರಿರುವ ಸಚಿವರು ಸಿಎಂ ನಿವಾಸಕ್ಕೆ ಬಂದು ಮಾತುಕತೆ ನಡೆಸಲಿದ್ದಾರೆ. ನಂತರ ಎಲ್ಲರೂ ಜೊತೆಯಾಗಿಯೇ ವಿಧಾನಸೌಧದತ್ತ ತೆರಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.