ETV Bharat / state

ಸೈಕ್ಲಿಂಗ್ ಪಟು ಪವಿತ್ರಾ ಕುರ್ತಕೋಟಿಗೆ 5 ಲಕ್ಷ ಬೆಲೆಯ ಸೈಕಲ್ ವಿತರಿಸಿದ ಸಿಎಂ

author img

By

Published : Sep 24, 2021, 12:20 PM IST

Updated : Sep 24, 2021, 12:32 PM IST

ಅಂತಾರಾಜ್ಯ ಮಟ್ಟದ ಸೈಕ್ಲಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿಗಳಿಸಿದ್ದ ಗದಗ್​​ನ ಪವಿತ್ರಾ ಕುರ್ತಕೋಟಿಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸೈಕಲ್ ವಿತರಿಸಲಾಗಿದೆ. 5 ಲಕ್ಷ ರೂ. ಬೆಲೆಯ ಸೈಕಲ್ ಇದಾಗಿದ್ದು, ಕೆನಡಾದಿಂದ ತರಿಸಲಾಗಿದೆ.

KN_BNG_02_CM_CYCLE_SCRIPT_7208080
ಸೈಕ್ಲಿಂಗ್ ಪಟು ಪವಿತ್ರಾ ಕುರ್ತಕೋಟಿಗೆ 5 ಲಕ್ಷ ಬೆಲೆಯ ಸೈಕಲ್ ವಿತರಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ದಾನಿಗಳ ಸಹಾಯದಿಂದ ಸೈಕಲ್ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿರುವ ಗದಗ್​​ನ ಪವಿತ್ರಾ ಕುರ್ತಕೋಟಿಗೆ 5 ಲಕ್ಷ ರೂ ಮೌಲ್ಯದ ಸೈಕಲ್​ ಅನ್ನು ಸಿಎಂ ಬೊಮ್ಮಾಯಿ ಹಸ್ತಾಂತರಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್ ಮತ್ತು ರೇಣುಕಾ ದಂಪತಿ ಪುತ್ರಿ ಕು. ಪವಿತ್ರಾ ಕುರ್ತಕೋಟಿ ಅಂತಾರಾಜ್ಯ ಮಟ್ಟದ ಸೈಕ್ಲಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದರು. ಆದರೆ, ಆಕೆಯ ಬಳಿ ಉತ್ತಮ ಸೈಕಲ್ ಇರಲಿಲ್ಲ. ಒಳ್ಳೆಯ ಸೈಕಲ್​ ತರಿಸಿಕೊಡುವಂತೆ ಈಕೆ, ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಳು.

CM Bommai distributed bicycle to cyclist worth 5 lakh rupees
5 ಲಕ್ಷ ಬೆಲೆಯ ಸೈಕಲ್ ವಿತರಿಸಿದ ಸಿಎಂ ಬೊಮ್ಮಾಯಿ

ಈ ಮನವಿ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಬ್ಲಾಸಂ ಆಸ್ಪತ್ರೆ ಮತ್ತು ಮಧುಸೂದನ್ ಅವರ ಸಹಕಾರದೊಂದಿಗೆ Argon-18 E-119 ಸೈಕಲ್‍ ಅನ್ನು ಖರೀದಿಸಿ ಸಿಎಂ ಮೂಲಕ ಹಸ್ತಾಂತರಿಸಿದ್ದಾರೆ. ಈ ಸೈಕಲ್ ಅನ್ನು ಕೆನಡಾದಿಂದ ತರಿಸಲಾಗಿದ್ದು, ಬರೋಬ್ಬರಿ 5 ಲಕ್ಷ ಬೆಲೆಯದ್ದಾಗಿದೆ.

ಪ್ರಥಮ ಪಿಯುಸಿ ಓದುತ್ತಿರುವ ಪವಿತ್ರಾಳ ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟ ತಯಾರಿಕ ಸಹಾಯಕರಾಗಿದ್ದಾರೆ. ತಂದೆ ರೈತರು. ಹೀಗಿದ್ದರೂ ದಾನಿಗಳ ಸಹಾಯದಿಂದ ಸೈಕಲ್ ಖರೀದಿಸಿ ವಿವಿಧೆಡೆ ಪ್ರಶಸ್ತಿ ಗೆದ್ದು ಗಮನಸೆಳೆದಿದ್ದಳು.

ಪವಿತ್ರಾ ಸೈಕ್ಲಿಂಗ್ ಸ್ಪರ್ಧೆಯ ಸಾಧನೆ

  • 2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್‍ ಸೈಕ್ಲಿಂಗ್‍ 15ಕಿ.ಮಿ. ಸ್ಪರ್ಧೆಯಲ್ಲಿ 5ನೇ ಸ್ಥಾನ
  • 2019ರ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂಟಿಬಿ ಸೈಕ್ಲಿಂಗ್​​ ಸ್ಪರ್ಧೆಯಲ್ಲಿ 9ನೇ ಸ್ಥಾನ
  • 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂಟಿಬಿ ಮೌಂಟೇನ್ ಬೈಕ್‍ ಸ್ಪರ್ಧೆಯಲ್ಲಿ 3ನೇ ಸ್ಥಾನ
  • 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂಟಿಬಿ ಮೌಂಟೇನ್‍ ಬೈಕ್‍ ಸ್ಪರ್ಧೆಯಲ್ಲಿ 3ನೇ ಸ್ಥಾನ
  • ಈಗ ನ್ಯಾಷನಲ್‍ ಲೆವೆಲ್ ಗೇಮ್ಸ್​ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ

ಪಂಜಾಬ್‍ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದು, ಈ ಕ್ಯಾಂಪಿನಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಗುಣಮಟ್ಟದ ಸೈಕಲ್‍ ಅವಶ್ಯಕತೆ ಇತ್ತು, ಅದನ್ನು ಈಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗಿದೆ.

ಬೆಂಗಳೂರು: ದಾನಿಗಳ ಸಹಾಯದಿಂದ ಸೈಕಲ್ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿರುವ ಗದಗ್​​ನ ಪವಿತ್ರಾ ಕುರ್ತಕೋಟಿಗೆ 5 ಲಕ್ಷ ರೂ ಮೌಲ್ಯದ ಸೈಕಲ್​ ಅನ್ನು ಸಿಎಂ ಬೊಮ್ಮಾಯಿ ಹಸ್ತಾಂತರಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್ ಮತ್ತು ರೇಣುಕಾ ದಂಪತಿ ಪುತ್ರಿ ಕು. ಪವಿತ್ರಾ ಕುರ್ತಕೋಟಿ ಅಂತಾರಾಜ್ಯ ಮಟ್ಟದ ಸೈಕ್ಲಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದರು. ಆದರೆ, ಆಕೆಯ ಬಳಿ ಉತ್ತಮ ಸೈಕಲ್ ಇರಲಿಲ್ಲ. ಒಳ್ಳೆಯ ಸೈಕಲ್​ ತರಿಸಿಕೊಡುವಂತೆ ಈಕೆ, ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಳು.

CM Bommai distributed bicycle to cyclist worth 5 lakh rupees
5 ಲಕ್ಷ ಬೆಲೆಯ ಸೈಕಲ್ ವಿತರಿಸಿದ ಸಿಎಂ ಬೊಮ್ಮಾಯಿ

ಈ ಮನವಿ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಬ್ಲಾಸಂ ಆಸ್ಪತ್ರೆ ಮತ್ತು ಮಧುಸೂದನ್ ಅವರ ಸಹಕಾರದೊಂದಿಗೆ Argon-18 E-119 ಸೈಕಲ್‍ ಅನ್ನು ಖರೀದಿಸಿ ಸಿಎಂ ಮೂಲಕ ಹಸ್ತಾಂತರಿಸಿದ್ದಾರೆ. ಈ ಸೈಕಲ್ ಅನ್ನು ಕೆನಡಾದಿಂದ ತರಿಸಲಾಗಿದ್ದು, ಬರೋಬ್ಬರಿ 5 ಲಕ್ಷ ಬೆಲೆಯದ್ದಾಗಿದೆ.

ಪ್ರಥಮ ಪಿಯುಸಿ ಓದುತ್ತಿರುವ ಪವಿತ್ರಾಳ ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟ ತಯಾರಿಕ ಸಹಾಯಕರಾಗಿದ್ದಾರೆ. ತಂದೆ ರೈತರು. ಹೀಗಿದ್ದರೂ ದಾನಿಗಳ ಸಹಾಯದಿಂದ ಸೈಕಲ್ ಖರೀದಿಸಿ ವಿವಿಧೆಡೆ ಪ್ರಶಸ್ತಿ ಗೆದ್ದು ಗಮನಸೆಳೆದಿದ್ದಳು.

ಪವಿತ್ರಾ ಸೈಕ್ಲಿಂಗ್ ಸ್ಪರ್ಧೆಯ ಸಾಧನೆ

  • 2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್‍ ಸೈಕ್ಲಿಂಗ್‍ 15ಕಿ.ಮಿ. ಸ್ಪರ್ಧೆಯಲ್ಲಿ 5ನೇ ಸ್ಥಾನ
  • 2019ರ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂಟಿಬಿ ಸೈಕ್ಲಿಂಗ್​​ ಸ್ಪರ್ಧೆಯಲ್ಲಿ 9ನೇ ಸ್ಥಾನ
  • 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂಟಿಬಿ ಮೌಂಟೇನ್ ಬೈಕ್‍ ಸ್ಪರ್ಧೆಯಲ್ಲಿ 3ನೇ ಸ್ಥಾನ
  • 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂಟಿಬಿ ಮೌಂಟೇನ್‍ ಬೈಕ್‍ ಸ್ಪರ್ಧೆಯಲ್ಲಿ 3ನೇ ಸ್ಥಾನ
  • ಈಗ ನ್ಯಾಷನಲ್‍ ಲೆವೆಲ್ ಗೇಮ್ಸ್​ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ

ಪಂಜಾಬ್‍ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದು, ಈ ಕ್ಯಾಂಪಿನಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಗುಣಮಟ್ಟದ ಸೈಕಲ್‍ ಅವಶ್ಯಕತೆ ಇತ್ತು, ಅದನ್ನು ಈಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗಿದೆ.

Last Updated : Sep 24, 2021, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.