ETV Bharat / state

ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವಂತೆ ಕೈಗಾರಿಕೋದ್ಯಮಿಗಳಿಗೆ ಸಿಎಂ ಮನವಿ

author img

By

Published : Sep 19, 2019, 3:22 PM IST

ರಾಜ್ಯದಲ್ಲಿ ಸಂಭವಿಸಿರುವ ನೆರೆಯಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರದ ಅನುದಾನ ವಿಳಂಬವಾಗುತ್ತಿರುವ ಹಿನ್ನಲೆ ನೆರವಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐಟಿ-ಬಿಟಿ ಕಂಪನಿಗಳ ಮೊರೆ ಹೋಗಿದ್ದಾರೆ.

ಸಿಎಂ ಮನವಿ

ಬೆಂಗಳೂರು: ನಗರದ ಖಾಸಗಿ ಹೋಟೆಲ್​ವೊಂದರಲ್ಲಿ ಆಯೋಜಿಸಲಾಗಿದ್ದ ಐಟಿ-ಬಿಟಿ ಕ್ಷೇತ್ರದ ದಿಗ್ಗಜರ ಸಮಾಲೋಚನಾ ಸಭೆಯಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೆರವಿನ ಹಸ್ತ ಚಾಚುವಂತೆ ಕೈಗಾರಿಕೋದ್ಯಮಿಗಳಿಗೆ ಸಿಎಂ‌ ಬಿ.ಎಸ್​.ಯಡಿಯೂರಪ್ಪ ಮನವಿ ಮಾಡಿದರು.

ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಈಗಾಗಲೇ 87 ಜನ ಮೃತಪಟ್ಟಿದ್ದಾರೆ. 1.50 ಲಕ್ಷ ಮನೆ ಸರ್ವನಾಶವಾಗಿದ್ದು, 2.47 ಲಕ್ಷ ಮನೆ ಹಾನಿಗೊಂಡಿವೆ. 15,119 ಕೋಟಿ ಬೆಳ ನಾಶವಾಗಿದೆ. ಒಟ್ಟಾರೆ 38,451 ಕೋಟಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಐಟಿ, ಬಿಟಿ ಕ್ಷೇತ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದರು.

CM appeals to industrialists to help the flood vitcims
ಕೈಗಾರಿಕೋದ್ಯಮಿಗಳಿಗೆ ಸಿಎಂ‌ ಮನವಿ

ಕರ್ನಾಟಕ ಸರ್ಕಾರ ಐಟಿ-ಬಿಟಿಯ ಎಲ್ಲಾ ಉದ್ಯಮಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಸಂಕಷ್ಟದ ಸ್ಥಿತಿಯಲ್ಲಿ ನೀವೆಲ್ಲಾ ಸರ್ಕಾರದ ಜೊತೆಯಲ್ಲಿರಬೇಕು. ಸರ್ಕಾರ ನಿಮ್ಮ ಜೊತೆ ಇರಲಿದೆ. ಐಟಿ-ಬಿಟಿ ಕ್ಷೇತ್ರ ಲಾಭ ಗಳಿಕೆಯ ಉದ್ಯಮ. ನಿಮ್ಮಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ತಕ್ಷಣ ಆರ್ಥಿಕ ನೆರವಿನ ಅಗತ್ಯವಿದೆ. ನಿಮ್ಮ ನಿಮ್ಮ ವ್ಯಾಪ್ತಿಗೆ ಅನುಗುಣವಾಗಿ ಆರ್ಥಿಕ ನೆರವು ನೀಡಿ ಎಂದು ಸಿಎಂ ಬಿಎಸ್​​ವೈ ಮನವಿ ಮಾಡಿದರು.

ಬೆಂಗಳೂರು: ನಗರದ ಖಾಸಗಿ ಹೋಟೆಲ್​ವೊಂದರಲ್ಲಿ ಆಯೋಜಿಸಲಾಗಿದ್ದ ಐಟಿ-ಬಿಟಿ ಕ್ಷೇತ್ರದ ದಿಗ್ಗಜರ ಸಮಾಲೋಚನಾ ಸಭೆಯಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೆರವಿನ ಹಸ್ತ ಚಾಚುವಂತೆ ಕೈಗಾರಿಕೋದ್ಯಮಿಗಳಿಗೆ ಸಿಎಂ‌ ಬಿ.ಎಸ್​.ಯಡಿಯೂರಪ್ಪ ಮನವಿ ಮಾಡಿದರು.

ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಈಗಾಗಲೇ 87 ಜನ ಮೃತಪಟ್ಟಿದ್ದಾರೆ. 1.50 ಲಕ್ಷ ಮನೆ ಸರ್ವನಾಶವಾಗಿದ್ದು, 2.47 ಲಕ್ಷ ಮನೆ ಹಾನಿಗೊಂಡಿವೆ. 15,119 ಕೋಟಿ ಬೆಳ ನಾಶವಾಗಿದೆ. ಒಟ್ಟಾರೆ 38,451 ಕೋಟಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಐಟಿ, ಬಿಟಿ ಕ್ಷೇತ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದರು.

CM appeals to industrialists to help the flood vitcims
ಕೈಗಾರಿಕೋದ್ಯಮಿಗಳಿಗೆ ಸಿಎಂ‌ ಮನವಿ

ಕರ್ನಾಟಕ ಸರ್ಕಾರ ಐಟಿ-ಬಿಟಿಯ ಎಲ್ಲಾ ಉದ್ಯಮಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಸಂಕಷ್ಟದ ಸ್ಥಿತಿಯಲ್ಲಿ ನೀವೆಲ್ಲಾ ಸರ್ಕಾರದ ಜೊತೆಯಲ್ಲಿರಬೇಕು. ಸರ್ಕಾರ ನಿಮ್ಮ ಜೊತೆ ಇರಲಿದೆ. ಐಟಿ-ಬಿಟಿ ಕ್ಷೇತ್ರ ಲಾಭ ಗಳಿಕೆಯ ಉದ್ಯಮ. ನಿಮ್ಮಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ತಕ್ಷಣ ಆರ್ಥಿಕ ನೆರವಿನ ಅಗತ್ಯವಿದೆ. ನಿಮ್ಮ ನಿಮ್ಮ ವ್ಯಾಪ್ತಿಗೆ ಅನುಗುಣವಾಗಿ ಆರ್ಥಿಕ ನೆರವು ನೀಡಿ ಎಂದು ಸಿಎಂ ಬಿಎಸ್​​ವೈ ಮನವಿ ಮಾಡಿದರು.

Intro:


ಬೆಂಗಳೂರು:ರಾಜ್ಯದಲ್ಲಿ ಸಂಭವಿಸಿದ ನೆರೆಯಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರದ ಅನುದಾನ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ನೆರವಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐಟಿಬಿಟಿ ಕಂಪನಿಗಳ ಮೊರೆ ಹೋಗಿದ್ದಾರೆ.

ಟೆಕ್ ಸಮ್ಮಿಟ್ ಹಿನ್ನೆಲೆಯಲ್ಲಿ ನಗರದ ಖಾಸಗಿ ತಾರಾ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಐಟಿ ಬಿಟಿ ಕ್ಷೇತ್ರದ ದಿಗ್ಗಜರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಿಎಂ,
ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೆರವಿನ ಹಸ್ತ ಚಾಚುವಂತೆ ಕೈಗಾರಿಕೋದ್ಯಮಿಗಳಿಗೆ ಸಿಎಂ‌ ಮನವಿ ಮಾಡಿದರು.

ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ.
ಈಗಾಗಲೇ 87 ಜನ ಮೃತಪಟ್ಟಿದ್ದು,1.50 ಲಕ್ಷ ಮನೆ ಸರ್ವನಾಶವಾಗಿದ್ದು,2.47 ಲಕ್ಷ ಮನೆ ಹಾನಿಗೊಂಡಿವೆ.
15,119 ಕೋಟಿ ಬೆಳ ನಾಶವಾಗಿದೆ.ಒಟ್ಟಾರೆ 38,451 ಕೋಟಿ ನಷ್ಟವಾಗಿದೆ ಈ ಹಿನ್ನಲೆಯಲ್ಲಿ ಐಟಿ ಬಿಟಿ ಕ್ಷೇತ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದರು.

ಕರ್ನಾಟಕ ಸರ್ಕಾರ ಐಟಿ,ಬಿಟಿ ಎಲ್ಲಾ ಉದ್ಯಮಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದೆ.ಸಂಕಷ್ಟದ ಸ್ಥಿತಿಯಲ್ಲಿ ನೀವೆಲ್ಲಾ ಸರ್ಕಾರದ ಜೊತೆಯಲ್ಲಿರಬೇಕು.ಸರ್ಕಾರ ನಿಮ್ಮ‌ ಜೊತೆ ಇರಲಿದೆ, ನೀವು ಸರ್ಕಾರದ ಜೊತೆ ಇರಬೇಕು, ಸಂಕಷ್ಟದ ಸಮಯದಲ್ಲಿ‌ ಸರ್ಕಾರದ ಜೊತೆ ಇರಬೇಕು, ಐಟಿ-ಬಿಟಿ ಕ್ಷೇತ್ರ ಲಾಭಗಳಿಕೆ ಉದ್ಯಮ.ನಿಮ್ಮಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ.ಮುಖ್ಯಮಂತ್ರಿ ಪರಿಹಾರ ನಿಧಿಗೆ ತಕ್ಷಣ ಆರ್ಥಿಕ ನೆರವಿಗೆ ಅಗತ್ಯವಿದೆ ನಿಮ್ಮ ನಿಮ್ಮ ವ್ಯಾಪ್ತಿಗೆ ಅನುಗುಣವಾಗಿ ಆರ್ಥಿಕ ನೆರವು ನೀಡಿ ಎಂದು ಸಿಎಂ ಬಿಎಸ್ವೈ ಆಗ್ರಹಿಸಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.