ETV Bharat / state

ಅಂತರ್ಜಲ ವೃದ್ಧಿಗೆ ನೀಲಗಿರಿ ಮರಗಳ ತೆರವು: ಡಿಸಿ ಕಾರ್ಯಕ್ಕೆ ರೈತರಿಂದ ಸಾಥ್​​​ - Clearance of Eucalyptus trees

ದಿನೇ ದಿನೆ ರಾಜ್ಯದ ಅಂತರ್ಜಲಮಟ್ಟ ಕಡಿಮೆಯಾಗುತ್ತಿದ್ದು, ನೀರನ್ನು ಉಳಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸಲು ಬೆಂಗಳೂರು ಗ್ರಾಮಾಂತರದಲ್ಲಿ ನೀಲಗಿರಿ ಮರಗಳ ತೆರವು ಮಾಡಲಾಗುತ್ತಿದೆ.

ರೈತರಿಂದ ಸಾಥ್
author img

By

Published : Aug 2, 2019, 1:43 PM IST

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಬ್ಬನಹಳ್ಳಿಯಲ್ಲಿ ಅಂತರ್ಜಲವನ್ನು ಉಳಿಸಲು ಜಿಲ್ಲಾಡಳಿತ ಸೇರಿದಂತೆ ಇಲ್ಲಿನ ಸ್ಥಳೀಯರು ನೀಲಗಿರಿ ಮರಗಳನ್ನು ತೆರುವು ಮಾಡುತ್ತಿದ್ದಾರೆ.

ಬಯಲುಸೀಮೆ ಪ್ರದೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹ ಒಂದು. ಇಲ್ಲಿ ಅಂತರ್ಜಲ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದು, ಇದಕ್ಕೆ ಕಾರಣ ಹಲವು ಇವೆ. ಒಂದು ಕಡೆ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ, ಮತ್ತೊಂದೆಡೆ ವೇಗವಾಗಿ ಬೆಳೆಯುತ್ತಿರುವ ಕಾಂಕ್ರೀಟ್ ಕಟ್ಟಡಗಳು ಹಾಗೂ ಪ್ರಮುಖವಾಗಿ ಅಂತರ್ಜಲದ‌ ನೀರನ್ನೇ ಹೀರಿಕೊಂಡು ಬೆಳೆಯುತ್ತಿರುವ ನೀಲಗಿರಿ ಮರಗಳು. ಇದೀಗ ನೀಲಗಿರಿ ಮರಗಳ ತೆರವು ಮಾಡಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಇದಕ್ಕೆ ರೈತರು ಸೇರಿದಂತೆ ಜಿಲ್ಲೆಯ ಎಲ್ಲಾ ಜನರು ಕೈ ಜೋಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ರೈತರಿಂದ ಸಾಥ್

ದೇವನಹಳ್ಳಿ ತಾಲೂಕಿನ ರಬ್ಬನಹಳ್ಳಿಯಲ್ಲಿ ದಶಕಗಳಿಂದ ಈ ನೀಲಗಿರಿ ಶಾಪವಾಗಿ ಕಾಡುತ್ತಿದೆ. ದಿನದಿಂದ ದಿನಕ್ಕೆ ಜಿಲ್ಲೆಯಾದ್ಯಂತ ನೀಲಗಿರಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಅಂತರ್ಜಲಮಟ್ಟ ಕುಸಿಯಲು ಕಾರಣವಾಗುತ್ತಿತ್ತು. ಇದರಿಂದ ನೀರು ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಇದೀಗ ಅದಕ್ಕೆ ಮುಕ್ತಿ ತೋರಲು ಸರ್ಕಾರದ ಜೊತೆಯಲ್ಲಿ ಜನರು ಸೇರಿಕೊಂಡಿದ್ದಾರೆ. ಅಲ್ಲದೇ ಸರ್ಕಾರ ಕೂಡ ನೀಲಗಿರಿ ಮರಗಳನ್ನು ತೆರವುಗೊಳಿಸುವಂತೆ ಆದೇಶ ಕೂಡ ನೀಡಿತ್ತು. ಇದಕ್ಕೆ ಜನಸಾಮಾನ್ಯರಿಂದ ಉತ್ತಮ‌ ರೆಸ್ಪಾನ್ಸ್ ಸಿಕ್ಕಿದೆ. ನೀಲಗಿರಿ ಮರಗಳ ಬೆಲೆಗಳು ಪಾತಾಳಕ್ಕೆ ಕುಸಿದಿದೆ. ಇದರಿಂದ ಯಾವುದೇ ಲಾಭವಿಲ್ಲ. ಮರಗಳನ್ನು ಬುಡ ಸಮೇತ ನಾಶ ಮಾಡುವುದರಿಂದ ಅಂತರ್ಜಲದ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ಜಿಲ್ಲಾಧಿಕಾರಿ ಕರಿಗೌಡರು ಹೇಳುತ್ತಾರೆ.

ದಶಕಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರನ್ನು ಬೇತಾಳನಂತೆ ಕಾಡುತ್ತಿದ್ದ ನೀಲಗಿರಿ ತೋಪುಗಳ ನಿರ್ಮೂಲನ ಅಭಿಯಾನಕ್ಕೆ ರೈತಾಪಿ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಅಭಿಯಾನದಿಂದ ನೀಲಗಿರಿ ಸಂಪೂರ್ಣವಾಗಿ ನಿರ್ಮೂಲನೆ ಆಗುವುದರ ಜೊತೆಯಲ್ಲಿ ಎಲ್ಲರ ಆಶಯದಂತೆ ಅಂತರ್ಜಲ ನೀರಿನ ಮಟ್ಟ ಏರಿಕೆಯಾದರೆ ಎಲ್ಲಾ ರೈತರು ಖುಷಿಯಾಗಿರಬಹುದು ಎಂದು ಸ್ಥಳೀಯರು ಆಶಯ ವ್ಯಕ್ತಪಡಿಸಿದರು.

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಬ್ಬನಹಳ್ಳಿಯಲ್ಲಿ ಅಂತರ್ಜಲವನ್ನು ಉಳಿಸಲು ಜಿಲ್ಲಾಡಳಿತ ಸೇರಿದಂತೆ ಇಲ್ಲಿನ ಸ್ಥಳೀಯರು ನೀಲಗಿರಿ ಮರಗಳನ್ನು ತೆರುವು ಮಾಡುತ್ತಿದ್ದಾರೆ.

ಬಯಲುಸೀಮೆ ಪ್ರದೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹ ಒಂದು. ಇಲ್ಲಿ ಅಂತರ್ಜಲ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದು, ಇದಕ್ಕೆ ಕಾರಣ ಹಲವು ಇವೆ. ಒಂದು ಕಡೆ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ, ಮತ್ತೊಂದೆಡೆ ವೇಗವಾಗಿ ಬೆಳೆಯುತ್ತಿರುವ ಕಾಂಕ್ರೀಟ್ ಕಟ್ಟಡಗಳು ಹಾಗೂ ಪ್ರಮುಖವಾಗಿ ಅಂತರ್ಜಲದ‌ ನೀರನ್ನೇ ಹೀರಿಕೊಂಡು ಬೆಳೆಯುತ್ತಿರುವ ನೀಲಗಿರಿ ಮರಗಳು. ಇದೀಗ ನೀಲಗಿರಿ ಮರಗಳ ತೆರವು ಮಾಡಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಇದಕ್ಕೆ ರೈತರು ಸೇರಿದಂತೆ ಜಿಲ್ಲೆಯ ಎಲ್ಲಾ ಜನರು ಕೈ ಜೋಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ರೈತರಿಂದ ಸಾಥ್

ದೇವನಹಳ್ಳಿ ತಾಲೂಕಿನ ರಬ್ಬನಹಳ್ಳಿಯಲ್ಲಿ ದಶಕಗಳಿಂದ ಈ ನೀಲಗಿರಿ ಶಾಪವಾಗಿ ಕಾಡುತ್ತಿದೆ. ದಿನದಿಂದ ದಿನಕ್ಕೆ ಜಿಲ್ಲೆಯಾದ್ಯಂತ ನೀಲಗಿರಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಅಂತರ್ಜಲಮಟ್ಟ ಕುಸಿಯಲು ಕಾರಣವಾಗುತ್ತಿತ್ತು. ಇದರಿಂದ ನೀರು ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಇದೀಗ ಅದಕ್ಕೆ ಮುಕ್ತಿ ತೋರಲು ಸರ್ಕಾರದ ಜೊತೆಯಲ್ಲಿ ಜನರು ಸೇರಿಕೊಂಡಿದ್ದಾರೆ. ಅಲ್ಲದೇ ಸರ್ಕಾರ ಕೂಡ ನೀಲಗಿರಿ ಮರಗಳನ್ನು ತೆರವುಗೊಳಿಸುವಂತೆ ಆದೇಶ ಕೂಡ ನೀಡಿತ್ತು. ಇದಕ್ಕೆ ಜನಸಾಮಾನ್ಯರಿಂದ ಉತ್ತಮ‌ ರೆಸ್ಪಾನ್ಸ್ ಸಿಕ್ಕಿದೆ. ನೀಲಗಿರಿ ಮರಗಳ ಬೆಲೆಗಳು ಪಾತಾಳಕ್ಕೆ ಕುಸಿದಿದೆ. ಇದರಿಂದ ಯಾವುದೇ ಲಾಭವಿಲ್ಲ. ಮರಗಳನ್ನು ಬುಡ ಸಮೇತ ನಾಶ ಮಾಡುವುದರಿಂದ ಅಂತರ್ಜಲದ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ಜಿಲ್ಲಾಧಿಕಾರಿ ಕರಿಗೌಡರು ಹೇಳುತ್ತಾರೆ.

ದಶಕಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರನ್ನು ಬೇತಾಳನಂತೆ ಕಾಡುತ್ತಿದ್ದ ನೀಲಗಿರಿ ತೋಪುಗಳ ನಿರ್ಮೂಲನ ಅಭಿಯಾನಕ್ಕೆ ರೈತಾಪಿ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಅಭಿಯಾನದಿಂದ ನೀಲಗಿರಿ ಸಂಪೂರ್ಣವಾಗಿ ನಿರ್ಮೂಲನೆ ಆಗುವುದರ ಜೊತೆಯಲ್ಲಿ ಎಲ್ಲರ ಆಶಯದಂತೆ ಅಂತರ್ಜಲ ನೀರಿನ ಮಟ್ಟ ಏರಿಕೆಯಾದರೆ ಎಲ್ಲಾ ರೈತರು ಖುಷಿಯಾಗಿರಬಹುದು ಎಂದು ಸ್ಥಳೀಯರು ಆಶಯ ವ್ಯಕ್ತಪಡಿಸಿದರು.

Intro:KN_BNG_01_01_Neelagiri_Remove_Ambarish_7203301
Slug : ಅಂತರ್ಜಲ ವೃದ್ಧಿಗೆ ನೀಲಗಿರಿ ಮರಗಳ ತೆರವು: ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ರೈತರಿಂದ ಸಾಥ್

ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಮಳೆಯಾಗದೇ ಬರಗಾಲ ಸೃಷ್ಟಿಯಗುತ್ತಿದೆ..‌ ಮಳೆಗಾಲ ಶುರುವಾದ್ರೂ ಬೇಸಿಗೆಯಂತಿರುವ ಇಂದು ಅಂತರ್ಜಲದಲ್ಲೂ ನೀರಿನ ಅಭಾವ ಎದುರಾಗಿದೆ.. ಇಂತಹ ಸಂದರ್ಭದಲ್ಲಿ ನೀರನ್ನು ಉಳಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸುವಂತ ಕೆಲಸ ಮಾಡಬೇಕು.. ಇದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಲ್ಲದೇ, ಜನರು ಕೂಡ‌ ನೀರನ್ನು ಉಳಿಸುವಂತ ಪ್ರಯತ್ನ ಮಾಡ್ತಿದ್ದಾರೆ..

ಯೆಸ್, ಬಯಲು ಸೀಮೆ ಪ್ರದೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹ ಒಂದು. ಜಿಲ್ಲೆಯಲ್ಲಿ ಅಂತರ್ಜಲ ದಿನದಿಂದ ದಿನಕ್ಕೆ ಪಾತಾಳಕ್ಕೆ ಸಾಗುತ್ತಿದೆ ಇದಕ್ಕೆ ಕಾರಣ ಒಂದಾ ಎರಡಾ ಹಲವಾರು ಇವೆ.. ಒಂದು ಕಡೆ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ, ಮತ್ತೊಂದೆಡೆ ವೇಗವಾಗಿ ಬೆಳೆಯುತ್ತಿರುವ ಕಾಂಕ್ರೀಟ್ ಕಟ್ಟಡಗಳಾದ್ರೆ, ಅಂತರ್ಜಲದ‌ ನೀರನ್ನೇ ಹೀರಿಕೊಂಡು ಬೆಳೆಯುತ್ತಿರುವ ನೀಲಗಿರಿ ಮರಗಳು.. ಇದೀಗ ಅದನ್ನು ತೊಲಗಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಇದಕ್ಕೆ ರೈತರು ಸೇರಿದಂತೆ ಜಿಲ್ಲೆಯ ಎಲ್ಲಾ ಜನರು ಕೈ ಜೋಡಿಸಿದ್ದಾರೆ..

ನೀಲಗಿರಿ ಮರಗಳನ್ನು ನಾಶ ಮಾಡುತ್ತಿರುವ ಜಿಲ್ಲಾಧಿಕಾರಿ.. ಜಿಲ್ಲಾಧಿಕಾರಿಗೆ ಸಾಥ್ ನೀಡುತ್ತಿರುವ ಗ್ರಾಮಸ್ಥರು ಮತ್ತು ರೈತರು.. ಮತ್ತೊಂದು ಕಡೆ ನೀಲಗಿರಿ ಮರಗಳ ಬುಡಗಳಿಗೆ ಕತ್ತರಿ ಹಾಕುತ್ತಿರುವ ಜೆಸಿಬಿ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಬ್ಬನಹಳ್ಳಿಯಲ್ಲಿ... ದಶಕಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಈ ನೀಲಗಿರಿ ಶಾಪವಾಗಿ ಕಾಡುತ್ತಿದೆ.. ದಿನದಿಂದ ದಿನಕ್ಕೆ ಜಿಲ್ಲೆಯಾದ್ಯಂತ ನೀಲಗಿರಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತಿತ್ತು.. ಇದ್ರಿಂದ ನೀರು ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು.. ಆದರೆ ಇದೀಗ ಅದಕ್ಕೆ ಮುಕ್ತಿ ತೋರಲು ಸರ್ಕಾರದ ಜೊತೆಯಲ್ಲಿ ಜನರು ಸೇರಿಕೊಂಡಿದ್ದಾರೆ.. ಅಲ್ಲದೇ ಸರ್ಕಾರ ಕೂಡ ನೀಲಗಿರಿ ಮರಗಳನ್ನು ತೆರವು ಗೊಳಿಸುವಂತೆ ಆದೇಶ ಕೂಡ ನೀಡಿತ್ತು.. ಇದಕ್ಕೆ ಜನಸಾಮಾನ್ಯರಿಂದ ಉತ್ತಮ‌ ರೆಸ್ಪಾನ್ಸ್ ಸಿಕ್ಕಿದೆ..

ಬೈಟ್ : ಚೈತ್ರಾ, ತಾಲೂಕು ಪಂಚಾಯಿತಿ ಅಧ್ಯಕ್ಷೆ

ನೀಲಗಿರಿ ಮರಗಳು ನೂರಾರು ಅಡಿಗಳಷ್ಟು ಆಳಕ್ಕೆ ಇಳಿದು ಅಂತರ್ಜಲದಲ್ಲಿ ದೊರೆಯುವ ನೀರನ್ನು ಖಾಲಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ... ಇದ್ರಿಂದ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತದೆ.. ರೈತರು ಕೊರೆಸಿದ ಬೋರ್ ವೆಲ್ ಗಳು ಸಹ ಬರಿದಾಗುವುದರೊಂದಿಗೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಇದರಿಂದ ನೀರನ್ನು ಕಾಪಾಡುವಂತ ಕೆಲಸವಾಗಬೇಕಿತ್ತು.. ಅಲ್ಲದೇ ನೀಲಗಿರಿ ಮರಗಳ ಬೆಲೆಗಳು ಪಾತಾಳಕ್ಕೆ ಕುಸಿದಿದೆ.. ಇದರಿಂದ ಯಾವುದೇ ಲಾಭವಿಲ್ಲ..‌ ಮರಗಳನ್ನು ಬುಡ ಸಮೇತ ನಾಶ ಮಾಡುವುದರಿಂದ ಅಂತರ್ಜಲದ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ಜಿಲ್ಲಾಧಿಕಾರಿ ಕರಿಗೌಡರು ಹೇಳುತ್ತಾರೆ..

ಬೈಟ್ : ಕರೀಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ

ಅಲ್ಲದೇ ಈ ನೀಲಗಿರಿ ಮರಗಳಿಂದ‌ ರೈತರಿಗೆ ಲಾಭಕ್ಕಿಂತ ನಷ್ಟವರೆ ಹೆಚ್ಚು.. ಒಂದು ಕಡೆ ಅಂತರ್ಜಾಲ ನೀರಿನ ಮಟ್ಟ ಕುಸಿದ್ರೆ, ಮತ್ತೊಂದು ಕಡೆ ಈ ಬೆಳೆಯಿಂದ ರೈತರಿಗೆ ಯಾವುದೇ ಲಾಭವಿಲ್ಲ.. ಮರಗಳನ್ನು ನಾಶ ಮಾಡಿ ಇದರ ಬದಲು ಬೇರೆ ಮರಗಳನ್ನು ನೆಡುವುದರಿಂದ ನೀರಿನ‌ ಮಟ್ಟ ಹೆಚ್ಚಾಗಿ ಮುಂದಿನ ಪೀಳಿಗೆಗೆ ನೀರು ಸಿಗಲಿದೆ ಎನ್ನುತ್ತಾರೆ ರೈತ ಮುನೇಗೌಡರು..

ಬೈಟ್ : ಮುನೇಗೌಡ, ರೈತ

ದಶಕಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರನ್ನು ಬೇತಾಳನಂತೆ ಕಾಡುತ್ತಿದ್ದ ನೀಲಗಿರಿ ತೋಪುಗಳ ನಿರ್ಮೂಲನ ಅಭಿಯಾನಕ್ಕೆ ರೈತಾಪಿ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಈ ಅಭಿಯಾನ ನೀಲಗಿರಿ ಸಂಪೂರ್ಣವಾಗಿ ನಿರ್ಮೂಲನೆ ಆಗುವುದರ ಜೊತೆಯಲ್ಲಿ ಎಲ್ಲರ ಆಶಯದಂತೆ ಅಂತರ್ಜಲ ನೀರಿನ ಮಟ್ಟ ಏರಿಕೆಯಾದರೆ ಎಲ್ಲಾ ರೈತರು ಖುಷಿಯಾಗಿರುವುದರಲ್ಲಿ ನೋ ಡೌಟ್ಸ್.. Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.