ETV Bharat / state

ಲಾಕ್​ಡೌನ್​ ಅವಧಿಯಲ್ಲಿ ಅನ್ನ ಹಾಕಿದ ಮುನಿರತ್ನರನ್ನು ಕೈಬಿಡಬೇಡಿ: ಮತದಾರರಿಗೆ ಚಕ್ರವರ್ತಿ ಮನವಿ - ಆರ್​ಆರ್ ನಗರ ಉಪಚುನಾವಣೆ ಫಲಿತಾಂಶ

ಆರ್​​ಆರ್​ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಇಂದು​ ಭರ್ಜರಿ ಮತಬೇಟೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ರೋಡ್ ಶೋನಲ್ಲಿ ಮತಯಾಚಿಸಿದ್ದಾರೆ. ಈ ವೇಳೆ ಕೊರೊನಾ ಸಮಯದಲ್ಲಿ ಜನರ ಸೇವೆ ಮಾಡಿರುವ ಮುನಿರತ್ನ ಅವರನ್ನು ಕೈಬಿಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

challenging-star-dharshan-
ಮುನಿರತ್ನ ಪರ ದರ್ಶನ್ ಪ್ರಚಾರ
author img

By

Published : Oct 30, 2020, 3:16 PM IST

Updated : Oct 30, 2020, 4:21 PM IST

ಬೆಂಗಳೂರು: ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಮನೆಮನೆಗೆ ಮುನಿರತ್ನ ಊಟ ಕಳಿಸಿ ಮಾನವೀಯತೆ ತೋರಿದ್ದರು. ಹಾಗಾಗಿ ಈ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರನ್ನು ಕೈಬಿಡಬೇಡಿ. ಮುನಿರತ್ನರನ್ನು ಗೆಲ್ಲಿಸಿ ಎಂದು ನಟ ದರ್ಶನ್​ ಆರ್​​​ ಆರ್​​​ ನಗರ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ್ದಾರೆ.

ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ

ಜೆ ಪಿ ಪಾರ್ಕ್​​​ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿರತ್ನ ಇವತ್ತು ನಿನ್ನೆಯಿಂದ ಪರಿಚಯವಾಗಿಲ್ಲ. ಹಲವಾರು ವರ್ಷಗಳಿಂದ ಅವರು ನಿರ್ಮಾಪಕ, ಶಾಸಕರನ್ನಾಗಿ ನಾನು ನೋಡಿದ್ದೇನೆ. ಕೊರೊನಾ ಇಡಿ ಜಗತ್ತಿಗೆ ಹರಡಿತ್ತು, ಎಲ್ಲರೂ ಮನೆ ಸೇರಿಕೊಂಡು ಬಿಟ್ಟರು ಜೇಬಿನಲ್ಲಿ ಹಣ ಇದ್ದರೂ ಅರ್ಧ ಲೀಟರ್ ಹಾಲು ಕುಡಿಯುವುದಕ್ಕೆ ಆಗಲಿಲ್ಲ. ಅಂಥಹ ಸಂದರ್ಭದಲ್ಲಿ ಮುನಿರತ್ನ ರಾಜೀನಾಮೆ ಕೊಟ್ಟಿದ್ದರು ಕ್ಷೇತ್ರದ ಜನರ ಪರ ಇದ್ದರು ಎಂದಿದ್ದಾರೆ.

ಹಸಿದವರಿಗೆ ಮುನಿರತ್ನ ಅನ್ನ ಕೊಟ್ಟರು ಆವತ್ತು ಮುನಿರತ್ನ ಜನರಿಗೆ ಯಾವ ಜಾತಿ ಅಂತ ಕೇಳದೇ ಅನ್ನ ಕೊಟ್ಟರು. ಮತಹಾಕುತ್ತಾರೆ ಎನ್ನದೆ ಮಾನವೀಯತೆಯಿಂದ ಊಟ ಹಾಕಿದರು. ಅದಕ್ಕೆ ಸೇವೆ ಮಾಡಲು ಅವರಿಗೆ ಅವಕಾಶ ನೀಡಿ ಈ ಬಾರಿಯೂ ಮುನಿರತ್ನ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​​ ಮಾತನಾಡಿ, ಈ ಚುನಾವಣೆ ಅನಿವಾರ್ಯವಾಗಿ ಬಂದಿದೆ ಬಿಜೆಪಿಗೆ ಬಲ ತುಂಬಲು ಮುನಿರತ್ನ ಬಂದಿದ್ದಾರೆ. ಈ ಕ್ಷೇತ್ರಕ್ಕೆ ಹಲವಾರು ಯೋಜನೆ ನೀಡಿದವರು. ಹೆಚ್ಚು ಅನುದಾನ ತಂದಿದ್ದಾರೆ. ಕೆಲಸ‌ ಮಾಡಿದ್ದು, ಅವರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಬೆಂಗಳೂರು: ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಮನೆಮನೆಗೆ ಮುನಿರತ್ನ ಊಟ ಕಳಿಸಿ ಮಾನವೀಯತೆ ತೋರಿದ್ದರು. ಹಾಗಾಗಿ ಈ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರನ್ನು ಕೈಬಿಡಬೇಡಿ. ಮುನಿರತ್ನರನ್ನು ಗೆಲ್ಲಿಸಿ ಎಂದು ನಟ ದರ್ಶನ್​ ಆರ್​​​ ಆರ್​​​ ನಗರ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ್ದಾರೆ.

ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ

ಜೆ ಪಿ ಪಾರ್ಕ್​​​ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿರತ್ನ ಇವತ್ತು ನಿನ್ನೆಯಿಂದ ಪರಿಚಯವಾಗಿಲ್ಲ. ಹಲವಾರು ವರ್ಷಗಳಿಂದ ಅವರು ನಿರ್ಮಾಪಕ, ಶಾಸಕರನ್ನಾಗಿ ನಾನು ನೋಡಿದ್ದೇನೆ. ಕೊರೊನಾ ಇಡಿ ಜಗತ್ತಿಗೆ ಹರಡಿತ್ತು, ಎಲ್ಲರೂ ಮನೆ ಸೇರಿಕೊಂಡು ಬಿಟ್ಟರು ಜೇಬಿನಲ್ಲಿ ಹಣ ಇದ್ದರೂ ಅರ್ಧ ಲೀಟರ್ ಹಾಲು ಕುಡಿಯುವುದಕ್ಕೆ ಆಗಲಿಲ್ಲ. ಅಂಥಹ ಸಂದರ್ಭದಲ್ಲಿ ಮುನಿರತ್ನ ರಾಜೀನಾಮೆ ಕೊಟ್ಟಿದ್ದರು ಕ್ಷೇತ್ರದ ಜನರ ಪರ ಇದ್ದರು ಎಂದಿದ್ದಾರೆ.

ಹಸಿದವರಿಗೆ ಮುನಿರತ್ನ ಅನ್ನ ಕೊಟ್ಟರು ಆವತ್ತು ಮುನಿರತ್ನ ಜನರಿಗೆ ಯಾವ ಜಾತಿ ಅಂತ ಕೇಳದೇ ಅನ್ನ ಕೊಟ್ಟರು. ಮತಹಾಕುತ್ತಾರೆ ಎನ್ನದೆ ಮಾನವೀಯತೆಯಿಂದ ಊಟ ಹಾಕಿದರು. ಅದಕ್ಕೆ ಸೇವೆ ಮಾಡಲು ಅವರಿಗೆ ಅವಕಾಶ ನೀಡಿ ಈ ಬಾರಿಯೂ ಮುನಿರತ್ನ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​​ ಮಾತನಾಡಿ, ಈ ಚುನಾವಣೆ ಅನಿವಾರ್ಯವಾಗಿ ಬಂದಿದೆ ಬಿಜೆಪಿಗೆ ಬಲ ತುಂಬಲು ಮುನಿರತ್ನ ಬಂದಿದ್ದಾರೆ. ಈ ಕ್ಷೇತ್ರಕ್ಕೆ ಹಲವಾರು ಯೋಜನೆ ನೀಡಿದವರು. ಹೆಚ್ಚು ಅನುದಾನ ತಂದಿದ್ದಾರೆ. ಕೆಲಸ‌ ಮಾಡಿದ್ದು, ಅವರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

Last Updated : Oct 30, 2020, 4:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.