ETV Bharat / state

ಕಾರ್​​-ಬೈಕ್​​ ಶೋರೂಮ್​​​​​ ಈ ಪೊಲೀಸಪ್ಪನ ಟಾರ್ಗೆಟ್​​ : ಖರ್ಚಿಗೆ ಮಗ ಹಣ ಕೊಟ್ಟಿಲ್ಲ ಅಂತಾ ಕಳ್ಳತನದ ಹಾದಿ ಹಿಡಿದ ಅಪ್ಪ! - ಕಾರ್​​- ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ತಾನು ಬಳಸುತ್ತಿದ್ದ ಮೊಬೈಲ್ ಬ್ಲ್ಯೂಟೂತ್‌ ಕಾರಿನ‌ ಸಿಸ್ಟಂ‌ಗೆ ಲಿಂಕ್ ಆಗಿದ್ದರಿಂದ ಈ ಸಿಸ್ಟಂ ಮಾಲೀಕರ ಸ್ಮಾರ್ಟ್ ಫೋನ್​ಗೂ ಕನೆಕ್ಟ್ ಆಗಿತ್ತು. ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿದೆ..

ಖರ್ಚಿಗೆ ಮಗ ಹಣ ಕೊಟ್ಟಿಲ್ಲ ಅಂತ ಕಳ್ಳತನದ ಹಾದಿ ಹಿಡಿದ ಅಪ್ಪ
ಖರ್ಚಿಗೆ ಮಗ ಹಣ ಕೊಟ್ಟಿಲ್ಲ ಅಂತ ಕಳ್ಳತನದ ಹಾದಿ ಹಿಡಿದ ಅಪ್ಪ
author img

By

Published : Feb 22, 2022, 4:23 PM IST

ಬೆಂಗಳೂರು : ಈತ ಈ ಹಿಂದೆ ಸೌದಿಯಲ್ಲಿ ಪೊಲೀಸ್ ಕೆಲಸದಲ್ಲಿದ್ದ. ವಿಆರ್​​ಎಸ್ ಪಡೆದು ಕೇರಳಗೆ ಬಂದು ಬ್ಯುಸಿನೆಸ್ ಕೂಡ ಆರಂಭಿಸಿದ್ದ. ಮಗ ಐಟಿ ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳ ಪಡಿತಿದ್ದರೂ ಅಪ್ಪನಿಗೆ ಮಾತ್ರ ಓಡಾಡೋಕೆ ಒಂದು ಬೈಕ್ ‌ಕೂಡ ಕೊಡಿಸಲಿರಲಿಲ್ಲ.

ಮಗ ಹಣ ಕೊಡಲಿಲ್ಲ, ಓಡಾಡೋಕೆ ಬೈಕು, ಕಾರು ಇಲ್ಲ ಅಂತಾ ಅಪ್ಪ ಆಯ್ಕೆ ಮಾಡಿಕೊಂಡಿದ್ದು ಕಳ್ಳತನ ವೃತ್ತಿ. ಅದು ಕೂಡ ಇವನು ಮನೆ ಮುಂದೆ ನಿಲ್ಲಿಸಿದ ಬೈಕ್ ಮತ್ತು ಕಾರ್​ಗೆ ಕೈ ಹಾಕುತ್ತಿರಲಿಲ್ಲ.‌

ಶೋರೂಮ್‌ಗಳಲ್ಲಿ ಮಾತ್ರ ವಾಹನಗಳನ್ನ ಕದಿಯುತ್ತಿದ್ದ. ಹೀಗೆ ಶೋರೂಮ್‌ನ ಟಾರ್ಗೆಟ್ ಮಾಡಿಕೊಂಡು ಕಳ್ಳತನ ‌ಮಾಡುತ್ತಿದ್ದ 61 ವರ್ಷದ ನಜೀರ್ ಅಹಮ್ಮದ್​​ನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಕಳೆದ ತಿಂಗಳು ಮೈಸೂರು ರಸ್ತೆಯ ಕಾರು ಶೋರೂಮ್ ಮುಂದೆ ಪಾರ್ಕ್ ಮಾಡಿದ್ದ ಕಾರು ಕದ್ದಿದ್ದ ನಜೀರ್, ಬೈಕ್ ಶೋರೂಮ್​​ನಲ್ಲೂ ಒಂದು ಬೈಕ್ ಕಳ್ಳತನ ಮಾಡಿದ್ದ.

ಕಸ್ಟಮರ್ ಸೋಗಿನಲ್ಲಿ ಬಂದು ವೆಹಿಕಲ್‌ ಕಳ್ಳತನ ಮಾಡುತ್ತಿದ್ದ ನಜೀರ್ ಈ ಹಿಂದೆ ಕೂಡ ಸಾಕಷ್ಟು ಕಾರು ಕದ್ದು ಜೈಲು ಸೇರಿದ್ದ. ಆದ್ರೆ, ಈ ಬಾರಿ ಯಾವುದೇ ಸುಳಿವಿಲ್ಲದೆ ಕಳ್ಳತನ ಮಾಡಿದ್ದ ನಜೀರ್, ಕೊನೆಗೆ ಆತ ಬಳಸುತ್ತಿದ್ದ ಬ್ಲ್ಯೂಟೂತ್‌ನಿಂದ ಲಾಕ್ ಆಗಿದ್ದಾನೆ.

ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್. ಜೆ. ರಚನಾ

ತಾನು ಬಳಸುತ್ತಿದ್ದ ಮೊಬೈಲ್ ಬ್ಲ್ಯೂಟೂತ್‌ ಕಾರಿನ‌ ಸಿಸ್ಟಂ‌ಗೆ ಲಿಂಕ್ ಆಗಿದ್ದರಿಂದ ಈ ಸಿಸ್ಟಂ ಮಾಲೀಕರ ಸ್ಮಾರ್ಟ್ ಫೋನ್​ಗೂ ಕನೆಕ್ಟ್ ಆಗಿತ್ತು. ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿದೆ.

ಸದ್ಯ ಬಂಧಿತನಿಂದ ಎರಡು ದ್ವಿಚಕ್ರ ವಾಹನ, 1 ಕಾರು ವಶಪಡಿಸಿಕೊಂಡಿದ್ದಾರೆ. ಈತನ ಬಂಧನದಿಂದ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣ ಬೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು : ಈತ ಈ ಹಿಂದೆ ಸೌದಿಯಲ್ಲಿ ಪೊಲೀಸ್ ಕೆಲಸದಲ್ಲಿದ್ದ. ವಿಆರ್​​ಎಸ್ ಪಡೆದು ಕೇರಳಗೆ ಬಂದು ಬ್ಯುಸಿನೆಸ್ ಕೂಡ ಆರಂಭಿಸಿದ್ದ. ಮಗ ಐಟಿ ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳ ಪಡಿತಿದ್ದರೂ ಅಪ್ಪನಿಗೆ ಮಾತ್ರ ಓಡಾಡೋಕೆ ಒಂದು ಬೈಕ್ ‌ಕೂಡ ಕೊಡಿಸಲಿರಲಿಲ್ಲ.

ಮಗ ಹಣ ಕೊಡಲಿಲ್ಲ, ಓಡಾಡೋಕೆ ಬೈಕು, ಕಾರು ಇಲ್ಲ ಅಂತಾ ಅಪ್ಪ ಆಯ್ಕೆ ಮಾಡಿಕೊಂಡಿದ್ದು ಕಳ್ಳತನ ವೃತ್ತಿ. ಅದು ಕೂಡ ಇವನು ಮನೆ ಮುಂದೆ ನಿಲ್ಲಿಸಿದ ಬೈಕ್ ಮತ್ತು ಕಾರ್​ಗೆ ಕೈ ಹಾಕುತ್ತಿರಲಿಲ್ಲ.‌

ಶೋರೂಮ್‌ಗಳಲ್ಲಿ ಮಾತ್ರ ವಾಹನಗಳನ್ನ ಕದಿಯುತ್ತಿದ್ದ. ಹೀಗೆ ಶೋರೂಮ್‌ನ ಟಾರ್ಗೆಟ್ ಮಾಡಿಕೊಂಡು ಕಳ್ಳತನ ‌ಮಾಡುತ್ತಿದ್ದ 61 ವರ್ಷದ ನಜೀರ್ ಅಹಮ್ಮದ್​​ನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಕಳೆದ ತಿಂಗಳು ಮೈಸೂರು ರಸ್ತೆಯ ಕಾರು ಶೋರೂಮ್ ಮುಂದೆ ಪಾರ್ಕ್ ಮಾಡಿದ್ದ ಕಾರು ಕದ್ದಿದ್ದ ನಜೀರ್, ಬೈಕ್ ಶೋರೂಮ್​​ನಲ್ಲೂ ಒಂದು ಬೈಕ್ ಕಳ್ಳತನ ಮಾಡಿದ್ದ.

ಕಸ್ಟಮರ್ ಸೋಗಿನಲ್ಲಿ ಬಂದು ವೆಹಿಕಲ್‌ ಕಳ್ಳತನ ಮಾಡುತ್ತಿದ್ದ ನಜೀರ್ ಈ ಹಿಂದೆ ಕೂಡ ಸಾಕಷ್ಟು ಕಾರು ಕದ್ದು ಜೈಲು ಸೇರಿದ್ದ. ಆದ್ರೆ, ಈ ಬಾರಿ ಯಾವುದೇ ಸುಳಿವಿಲ್ಲದೆ ಕಳ್ಳತನ ಮಾಡಿದ್ದ ನಜೀರ್, ಕೊನೆಗೆ ಆತ ಬಳಸುತ್ತಿದ್ದ ಬ್ಲ್ಯೂಟೂತ್‌ನಿಂದ ಲಾಕ್ ಆಗಿದ್ದಾನೆ.

ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್. ಜೆ. ರಚನಾ

ತಾನು ಬಳಸುತ್ತಿದ್ದ ಮೊಬೈಲ್ ಬ್ಲ್ಯೂಟೂತ್‌ ಕಾರಿನ‌ ಸಿಸ್ಟಂ‌ಗೆ ಲಿಂಕ್ ಆಗಿದ್ದರಿಂದ ಈ ಸಿಸ್ಟಂ ಮಾಲೀಕರ ಸ್ಮಾರ್ಟ್ ಫೋನ್​ಗೂ ಕನೆಕ್ಟ್ ಆಗಿತ್ತು. ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿದೆ.

ಸದ್ಯ ಬಂಧಿತನಿಂದ ಎರಡು ದ್ವಿಚಕ್ರ ವಾಹನ, 1 ಕಾರು ವಶಪಡಿಸಿಕೊಂಡಿದ್ದಾರೆ. ಈತನ ಬಂಧನದಿಂದ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣ ಬೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.