ETV Bharat / state

ಕುಡಿದ ಮತ್ತಲ್ಲಿ ಶ್ರೀಮಂತರ ಮಕ್ಕಳಿಂದ ಕಾರು ಅಪಘಾತ: ಇಬ್ಬರ ಬಂಧನ - ಹೋಲಿ ಹಬ್ಬ ಆಚರಣೆ

ತಾಜ್ ವೆಸ್ಟ್ಎಂಡ್​​ ಹೋಟೆಲ್​​ನಲ್ಲಿ ಹೋಲಿ ಹಬ್ಬ ಆಚರಣೆ ನಂತರ, ವಾಪಸ್​​ ಆಗುವ ವೇಳೆ ಶ್ರೀಮಂತ ಮಕ್ಕಳಿಬ್ಬರ ಕಾರು ಅಪಘಾತವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Car accident case of rich people children
ಶ್ರೀಮಂತ ಮಕ್ಕಳಿಬ್ಬರ ಕಾರು ಅಪಘಾತ ಪ್ರಕರಣ
author img

By

Published : Mar 11, 2020, 11:01 PM IST

ಬೆಂಗಳೂರು: ಶ್ರೀಮಂತ ಮಕ್ಕಳ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಹೈಗ್ರೌಂಡ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ತಾಜ್ ವೆಸ್ಟ್ಎಂಡ್​​ ಹೋಟೆಲ್​​ನಲ್ಲಿ ಹೋಲಿ ಹಬ್ಬ ಆಚರಣೆ ಮಾಡಿದ ನಂತರ, ಹೊರಗೆ ಹೋಗುವ ಸಂದರ್ಭದಲ್ಲಿ ಕಾರುಗಳು ಡಿಕ್ಕಿಯಾಗಿದ್ದವು. ಬಳಿಕ ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ಸಂಬಂಧ ಆರೋಪಿಗಳನ್ನ ಹೈಗ್ರೌಂಡ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ತಾಜ್ ವೆಸ್ಟ್ ಹೋಟೆಲ್​​ನಲ್ಲಿ ಹೋಲಿ ಹಬ್ಬ ಆಚರಣೆಗಾಗಿ ನಿನ್ನೆ ಗಣ್ಯ ವ್ಯಕ್ತಿಗಳ ಮಕ್ಕಳು ,ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು ಸೇರಿದ್ದರು. ಹೋಲಿ ಸಂಭ್ರಮ ಮುಗಿದ ನಂತರ ಹೊರ ಬರುವ ವೇಳೆ ಮಹೀಂದ್ರ ಎಕ್ಸ್ ಯು ವಿ, ಪೋಲೊ ಜಿಟಿಎಸ್ ಒಂದಕ್ಕೊಂದು ಡಿಕ್ಕಿಯಾಗಿ ಗಲಾಟೆ ಶುರುವಾಗಿತ್ತು. ಹೈಗ್ರೌಂಡ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದರು.

ಪೋಲೊ ಕಾರಿನ ಚಾಲಕ ಆಕಾಶ್ ಕೆ. ಮೂರ್ತಿ‌, ರಾಹುಲ್ ರೆಡ್ಡಿ ಅವರ ಮಹೀಂದ್ರ ಎಕ್ಸ್ ಯು ವಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ. ತಕ್ಷಣ ಇಬ್ಬರ ನಡುವೆ ಜಗಳ ತಾರಕಕ್ಕೇರಿದ ಪರಿಣಾಮ, ಸ್ಥಳದಲ್ಲಿ ಇತರೆ ವಾಹನ ಸವಾರರಿಗೂ ತೊಂದರೆಯಾಯಿತು. ಪೊಲೀಸರು ಪರಿಶೀಲನೆ ನಡೆಸಿದಾಗ ಕುಡಿದು ಅಜಾಗರುಕತೆಯಿಂದ ಗಾಡಿ ಓಡಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಮಕ್ಕಳ ಕುಟುಂಬದವಾರಾಗಿದ್ದು, ಮೋಜು ಮಸ್ತಿಗಾಗಿ ಹೋಲಿ ಸಂಭ್ರಮದಲ್ಲಿ ಕುಡಿದು ಈ ರೀತಿ ಮಾಡಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಶ್ರೀಮಂತ ಮಕ್ಕಳ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಹೈಗ್ರೌಂಡ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ತಾಜ್ ವೆಸ್ಟ್ಎಂಡ್​​ ಹೋಟೆಲ್​​ನಲ್ಲಿ ಹೋಲಿ ಹಬ್ಬ ಆಚರಣೆ ಮಾಡಿದ ನಂತರ, ಹೊರಗೆ ಹೋಗುವ ಸಂದರ್ಭದಲ್ಲಿ ಕಾರುಗಳು ಡಿಕ್ಕಿಯಾಗಿದ್ದವು. ಬಳಿಕ ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ಸಂಬಂಧ ಆರೋಪಿಗಳನ್ನ ಹೈಗ್ರೌಂಡ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ತಾಜ್ ವೆಸ್ಟ್ ಹೋಟೆಲ್​​ನಲ್ಲಿ ಹೋಲಿ ಹಬ್ಬ ಆಚರಣೆಗಾಗಿ ನಿನ್ನೆ ಗಣ್ಯ ವ್ಯಕ್ತಿಗಳ ಮಕ್ಕಳು ,ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು ಸೇರಿದ್ದರು. ಹೋಲಿ ಸಂಭ್ರಮ ಮುಗಿದ ನಂತರ ಹೊರ ಬರುವ ವೇಳೆ ಮಹೀಂದ್ರ ಎಕ್ಸ್ ಯು ವಿ, ಪೋಲೊ ಜಿಟಿಎಸ್ ಒಂದಕ್ಕೊಂದು ಡಿಕ್ಕಿಯಾಗಿ ಗಲಾಟೆ ಶುರುವಾಗಿತ್ತು. ಹೈಗ್ರೌಂಡ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದರು.

ಪೋಲೊ ಕಾರಿನ ಚಾಲಕ ಆಕಾಶ್ ಕೆ. ಮೂರ್ತಿ‌, ರಾಹುಲ್ ರೆಡ್ಡಿ ಅವರ ಮಹೀಂದ್ರ ಎಕ್ಸ್ ಯು ವಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ. ತಕ್ಷಣ ಇಬ್ಬರ ನಡುವೆ ಜಗಳ ತಾರಕಕ್ಕೇರಿದ ಪರಿಣಾಮ, ಸ್ಥಳದಲ್ಲಿ ಇತರೆ ವಾಹನ ಸವಾರರಿಗೂ ತೊಂದರೆಯಾಯಿತು. ಪೊಲೀಸರು ಪರಿಶೀಲನೆ ನಡೆಸಿದಾಗ ಕುಡಿದು ಅಜಾಗರುಕತೆಯಿಂದ ಗಾಡಿ ಓಡಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಮಕ್ಕಳ ಕುಟುಂಬದವಾರಾಗಿದ್ದು, ಮೋಜು ಮಸ್ತಿಗಾಗಿ ಹೋಲಿ ಸಂಭ್ರಮದಲ್ಲಿ ಕುಡಿದು ಈ ರೀತಿ ಮಾಡಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.