ETV Bharat / state

ಬೆಂಗಳೂರು ನಗರ, ಗ್ರಾಮಾಂತರ ಕೋರ್ಟ್​ಗಳ ಭೌತಿಕ ಕಲಾಪ ರದ್ದು

author img

By

Published : Jul 13, 2020, 9:51 PM IST

ಲಾಕ್​ಡೌನ್​ ಅವಧಿಯಲ್ಲಿ ಭೌತಿಕ ಫೈಲಿಂಗ್ ರದ್ದಾಗಿರಲಿದ್ದು, ವಕೀಲರು ಮತ್ತು ಕಕ್ಷಿದಾರರು ಇ-ಮೇಲ್ ಮೂಲಕ ತುರ್ತು ಪ್ರಕರಣಗಳನ್ನಷ್ಟೇ ದಾಖಲಿಸಬಹುದಾಗಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಸಿಎಂಎಂ ನ್ಯಾಯಾಧೀಶರ ಇ-ಮೇಲ್ ವಿಳಾಸಕ್ಕೆ ಮನವಿ ಸಲ್ಲಿಸಿದರೆ, ಅವುಗಳನ್ನು ಪರಿಶೀಲಿಸಿ ತುರ್ತು ವಿಚಾರಣೆ ಅಗತ್ಯವಿದ್ದರಷ್ಟೇ ಕೋರ್ಟ್ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುತ್ತದೆ.

ಬೆಂಗಳೂರು ಕೋರ್ಟ್​ಗಳ ಫಿಸಿಕಲ್ ಕಲಾಪ ರದ್ದು
ಬೆಂಗಳೂರು ಕೋರ್ಟ್​ಗಳ ಫಿಸಿಕಲ್ ಕಲಾಪ ರದ್ದು

ಬೆಂಗಳೂರು : ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರ ನಾಳೆ ರಾತ್ರಿಯಿಂದ ಒಂದು ವಾರ ಲಾಕ್ ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಎರಡೂ ಜಿಲ್ಲೆಗಳ ಭೌತಿಕ ಕೋರ್ಟ್ ಕಲಾಪವನ್ನು ಲಾಕ್ ಡೌನ್ ಮುಗಿಯುವವರೆಗೂ ಸ್ಥಗಿತಗೊಳಿಸಿ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಈ ಕುರಿತು ನೋಟಿಸ್ ಹೊರಡಿಸಿದ್ದಾರೆ. ಅದರಂತೆ, ಈ ಅವಧಿಯಲ್ಲಿ ಫಿಸಿಕಲ್ ಫೈಲಿಂಗ್ ರದ್ದಾಗಿರಲಿದ್ದು, ವಕೀಲರು ಮತ್ತು ಕಕ್ಷಿದಾರರು ಇ-ಮೇಲ್ ಮೂಲಕ ತುರ್ತು ಪ್ರಕರಣಗಳನ್ನಷ್ಟೇ ದಾಖಲಿಸಬಹುದಾಗಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಸಿಎಂಎಂ ನ್ಯಾಯಾಧೀಶರ ಇ-ಮೇಲ್ ವಿಳಾಸಕ್ಕೆ ಮನವಿ ಸಲ್ಲಿಸಿದರೆ, ಅವುಗಳನ್ನು ಪರಿಶೀಲಿಸಿ ತುರ್ತು ವಿಚಾರಣೆ ಅಗತ್ಯವಿದ್ದರಷ್ಟೇ ಕೋರ್ಟ್ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುತ್ತದೆ.

ಲಾಕ್ ಡೌನ್ ಅವಧಿ ಮುಗಿಯುವರೆಗೂ ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವಷ್ಟೇ ವಿಚಾರಣೆ ನಡೆಸಲಾಗುತ್ತದೆ. ಹಾಗಾಗಿ ವಿಚಾರಣೆ ದಿನಾಂಕ, ವಿಡಿಯೋ ಕಾನ್ಫರೆನ್ಸ್ ಐಡಿ ಹಾಗೂ ಪಾಸ್ ವರ್ಡ್ ಗಳನ್ನು ಸಂಬಂಧಪಟ್ಟ ವಕೀಲರು ಮತ್ತು ಪಾರ್ಟಿ ಇನ್-ಪರ್ಸನ್​ಗೆ ಇ-ಮೇಲ್ ಮೂಲಕವೇ ತಿಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶವು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ಮಾತ್ರವೇ ಅನ್ವಯವಾಗಲಿದೆ. ಉಳಿದ ಜಿಲ್ಲೆಗಳ ನ್ಯಾಯಾಲಯಗಳು ಈಗಾಗಲೇ ಹೊರಡಿಸಿರುವ ಎಸ್ಓ‌ಪಿ (ಮಾರ್ಗಸೂಚಿ) ಅನ್ವಯ ಕಾರ್ಯ ನಿರ್ವಹಿಸಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು : ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರ ನಾಳೆ ರಾತ್ರಿಯಿಂದ ಒಂದು ವಾರ ಲಾಕ್ ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಎರಡೂ ಜಿಲ್ಲೆಗಳ ಭೌತಿಕ ಕೋರ್ಟ್ ಕಲಾಪವನ್ನು ಲಾಕ್ ಡೌನ್ ಮುಗಿಯುವವರೆಗೂ ಸ್ಥಗಿತಗೊಳಿಸಿ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಈ ಕುರಿತು ನೋಟಿಸ್ ಹೊರಡಿಸಿದ್ದಾರೆ. ಅದರಂತೆ, ಈ ಅವಧಿಯಲ್ಲಿ ಫಿಸಿಕಲ್ ಫೈಲಿಂಗ್ ರದ್ದಾಗಿರಲಿದ್ದು, ವಕೀಲರು ಮತ್ತು ಕಕ್ಷಿದಾರರು ಇ-ಮೇಲ್ ಮೂಲಕ ತುರ್ತು ಪ್ರಕರಣಗಳನ್ನಷ್ಟೇ ದಾಖಲಿಸಬಹುದಾಗಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಸಿಎಂಎಂ ನ್ಯಾಯಾಧೀಶರ ಇ-ಮೇಲ್ ವಿಳಾಸಕ್ಕೆ ಮನವಿ ಸಲ್ಲಿಸಿದರೆ, ಅವುಗಳನ್ನು ಪರಿಶೀಲಿಸಿ ತುರ್ತು ವಿಚಾರಣೆ ಅಗತ್ಯವಿದ್ದರಷ್ಟೇ ಕೋರ್ಟ್ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುತ್ತದೆ.

ಲಾಕ್ ಡೌನ್ ಅವಧಿ ಮುಗಿಯುವರೆಗೂ ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವಷ್ಟೇ ವಿಚಾರಣೆ ನಡೆಸಲಾಗುತ್ತದೆ. ಹಾಗಾಗಿ ವಿಚಾರಣೆ ದಿನಾಂಕ, ವಿಡಿಯೋ ಕಾನ್ಫರೆನ್ಸ್ ಐಡಿ ಹಾಗೂ ಪಾಸ್ ವರ್ಡ್ ಗಳನ್ನು ಸಂಬಂಧಪಟ್ಟ ವಕೀಲರು ಮತ್ತು ಪಾರ್ಟಿ ಇನ್-ಪರ್ಸನ್​ಗೆ ಇ-ಮೇಲ್ ಮೂಲಕವೇ ತಿಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶವು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ಮಾತ್ರವೇ ಅನ್ವಯವಾಗಲಿದೆ. ಉಳಿದ ಜಿಲ್ಲೆಗಳ ನ್ಯಾಯಾಲಯಗಳು ಈಗಾಗಲೇ ಹೊರಡಿಸಿರುವ ಎಸ್ಓ‌ಪಿ (ಮಾರ್ಗಸೂಚಿ) ಅನ್ವಯ ಕಾರ್ಯ ನಿರ್ವಹಿಸಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.