ETV Bharat / state

ಈಶ್ವರಪ್ಪ ಅಪ್ಪಟ ದೇಶ ಭಕ್ತ, ಅದರಲ್ಲಿ ಅನುಮಾನ ಬೇಡ.. ಸಿ ಟಿ ರವಿ

author img

By

Published : Feb 16, 2022, 5:28 PM IST

ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್​ಗಾಗಿ ರೀತಿ ಮಾಡಿಕೊಂಡಿದೆ. ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡಿದರೆ ನಾಳೆ ದಿಗಂಬರ್ ಅನುಯಾಯಿಗಳು ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ..

C T ravi
ಸಿ.ಟಿ.ರವಿ

ಬೆಂಗಳೂರು : ಆಫ್ಘಾನಿಸ್ಥಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾದೇಶ ಮಾಡಿದ್ದು ಇದೇ ಮನಸ್ಥಿತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಕಾನೂನು ಪಾಲಿಸಲು ಅವರಿಗೆ ಇಷ್ಟ ಅಲ್ಲ ಅನ್ನೋ ಮನಸ್ಥಿತಿಯನ್ನು ತೋರಿಸುತ್ತದೆ. ಈ ಬೆಳವಣಿಗೆ ನಮ್ಮ ದೇಶವನ್ನು ಹಲವು ತುಂಡು ಮಾಡಿದ್ದು ಇದೇ ಬೆಳವಣಿಗೆ. ಆಫ್ಘಾನಿಸ್ಥಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾ ಮಾಡಿದ್ದು ಇದೇ ಮನಸ್ಥಿತಿ.

ಈ ದೇಶದಲ್ಲಿ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪಾಲಿಸುವುದಿಲ್ಲ ಎನ್ನುವುದು ಯಾವ ಮನಸ್ಥಿತಿ. ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ. ನಾಳೆ ಇನ್ನೊಂದು ಬೇಡುತ್ತಾರೆ. ಕೋರ್ಟ್ ಯಾವುದೇ ರೀತಿಯ ಧಾರ್ಮಿಕ ಸೂಚಿತ ಬಟ್ಟೆಗಳನ್ನು ಹಾಕಬಾರದು ಎಂದು ಹೇಳಿದ ಮೇಲೂ ಈ ರೀತಿಯ ಮನಸ್ಥಿತಿ ಬಹಳ ಅಪಾಯಕಾರಿ ಎಂದರು.

ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್​ಗಾಗಿ ರೀತಿ ಮಾಡಿಕೊಂಡಿದೆ. ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡಿದರೆ ನಾಳೆ ದಿಗಂಬರ್ ಅನುಯಾಯಿಗಳು ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ.

ಗಾಂಧೀಜಿ ವೇಷದಲ್ಲಿ ಮೇಲಿನ ಬಟ್ಟೆ ಹಾಕಿಕೊಳ್ಳದೆ ಬರುತ್ತೇವೆಂದರೂ ಪರಿಸ್ಥಿತಿ ಏನಾಗಬಹುದು ಆಲೋಚಿಸಿ. ಹೈಕೋರ್ಟ್​ನಲ್ಲಿ ಅವರಿಗೆ ಹಿನ್ನಡೆಯಾದರೆ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಸುಪ್ರೀಂಕೋರ್ಟ್ ಏನು ತೀರ್ಪು ಕೊಡುತ್ತದೆ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದರು.

ಈಶ್ವರಪ್ಪ ಹೇಳಿಕೆ ಸಮರ್ಥಿಸಿದ ಸಿ ಟಿ ರವಿ : ಕೇಸರಿ ಬಾವುಟ ಹಾರಿಸುವ ವಿಚಾರದಲ್ಲಿ ಈಗಾಗಲೇ ಈಶ್ವರಪ್ಪ ಸ್ಪಷ್ಟಣೆ ನೀಡಿದ್ದಾರೆ. ನಾವು ಯಾವಾಗಲೂ ರಾಷ್ಟ್ರ ಧ್ವಜಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ರಾಷ್ಟ್ರ ಧ್ವಜಕ್ಕಿಂತ ಮೇಲೆ ಭಗವಾ ಧ್ವಜ ಹಾರಬೇಕೆಂದು ಯಾವತ್ತೂ ಹೇಳಿಲ್ಲ.

ಆದರೆ, ಭಗವಾ ಧ್ವಜಕ್ಕೂ ಒಂದು ಸ್ಥಾನ ಇದೆ. ತ್ರಿವರ್ಣ ಧ್ವಜಕ್ಕೂ ಮೊದಲು ದೇಶದಲ್ಲಿ ಕಾಂಗ್ರೆಸ್​ನ ಚರಕ ಇರುವ ಧ್ವಜ ಇತ್ತು. ತ್ರಿವರ್ಣ ಧ್ವಜ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ರಾಷ್ಟ್ರಧ್ವಜ ಅದೇ ಆಗಿರುತ್ತದೆ. ಈಶ್ವರಪ್ಪ ಅಪ್ಪಟ ದೇಶ ಭಕ್ತ. ಅದರಲ್ಲಿ ಅನುಮಾನ ಬೇಡ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಸಚಿವ ಕೆ ಎಸ್​ ಈಶ್ವರಪ್ಪ ಹೇಳಿಕೆಗೆ ತೀವ್ರ ವಿರೋಧ : 3 ಗಂಟೆಗೆ ಸದನ ಮುಂದೂಡಿದ ಸ್ಪೀಕರ್​

ಬೆಂಗಳೂರು : ಆಫ್ಘಾನಿಸ್ಥಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾದೇಶ ಮಾಡಿದ್ದು ಇದೇ ಮನಸ್ಥಿತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಕಾನೂನು ಪಾಲಿಸಲು ಅವರಿಗೆ ಇಷ್ಟ ಅಲ್ಲ ಅನ್ನೋ ಮನಸ್ಥಿತಿಯನ್ನು ತೋರಿಸುತ್ತದೆ. ಈ ಬೆಳವಣಿಗೆ ನಮ್ಮ ದೇಶವನ್ನು ಹಲವು ತುಂಡು ಮಾಡಿದ್ದು ಇದೇ ಬೆಳವಣಿಗೆ. ಆಫ್ಘಾನಿಸ್ಥಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾ ಮಾಡಿದ್ದು ಇದೇ ಮನಸ್ಥಿತಿ.

ಈ ದೇಶದಲ್ಲಿ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪಾಲಿಸುವುದಿಲ್ಲ ಎನ್ನುವುದು ಯಾವ ಮನಸ್ಥಿತಿ. ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ. ನಾಳೆ ಇನ್ನೊಂದು ಬೇಡುತ್ತಾರೆ. ಕೋರ್ಟ್ ಯಾವುದೇ ರೀತಿಯ ಧಾರ್ಮಿಕ ಸೂಚಿತ ಬಟ್ಟೆಗಳನ್ನು ಹಾಕಬಾರದು ಎಂದು ಹೇಳಿದ ಮೇಲೂ ಈ ರೀತಿಯ ಮನಸ್ಥಿತಿ ಬಹಳ ಅಪಾಯಕಾರಿ ಎಂದರು.

ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್​ಗಾಗಿ ರೀತಿ ಮಾಡಿಕೊಂಡಿದೆ. ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡಿದರೆ ನಾಳೆ ದಿಗಂಬರ್ ಅನುಯಾಯಿಗಳು ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ.

ಗಾಂಧೀಜಿ ವೇಷದಲ್ಲಿ ಮೇಲಿನ ಬಟ್ಟೆ ಹಾಕಿಕೊಳ್ಳದೆ ಬರುತ್ತೇವೆಂದರೂ ಪರಿಸ್ಥಿತಿ ಏನಾಗಬಹುದು ಆಲೋಚಿಸಿ. ಹೈಕೋರ್ಟ್​ನಲ್ಲಿ ಅವರಿಗೆ ಹಿನ್ನಡೆಯಾದರೆ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಸುಪ್ರೀಂಕೋರ್ಟ್ ಏನು ತೀರ್ಪು ಕೊಡುತ್ತದೆ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದರು.

ಈಶ್ವರಪ್ಪ ಹೇಳಿಕೆ ಸಮರ್ಥಿಸಿದ ಸಿ ಟಿ ರವಿ : ಕೇಸರಿ ಬಾವುಟ ಹಾರಿಸುವ ವಿಚಾರದಲ್ಲಿ ಈಗಾಗಲೇ ಈಶ್ವರಪ್ಪ ಸ್ಪಷ್ಟಣೆ ನೀಡಿದ್ದಾರೆ. ನಾವು ಯಾವಾಗಲೂ ರಾಷ್ಟ್ರ ಧ್ವಜಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ರಾಷ್ಟ್ರ ಧ್ವಜಕ್ಕಿಂತ ಮೇಲೆ ಭಗವಾ ಧ್ವಜ ಹಾರಬೇಕೆಂದು ಯಾವತ್ತೂ ಹೇಳಿಲ್ಲ.

ಆದರೆ, ಭಗವಾ ಧ್ವಜಕ್ಕೂ ಒಂದು ಸ್ಥಾನ ಇದೆ. ತ್ರಿವರ್ಣ ಧ್ವಜಕ್ಕೂ ಮೊದಲು ದೇಶದಲ್ಲಿ ಕಾಂಗ್ರೆಸ್​ನ ಚರಕ ಇರುವ ಧ್ವಜ ಇತ್ತು. ತ್ರಿವರ್ಣ ಧ್ವಜ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ರಾಷ್ಟ್ರಧ್ವಜ ಅದೇ ಆಗಿರುತ್ತದೆ. ಈಶ್ವರಪ್ಪ ಅಪ್ಪಟ ದೇಶ ಭಕ್ತ. ಅದರಲ್ಲಿ ಅನುಮಾನ ಬೇಡ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಸಚಿವ ಕೆ ಎಸ್​ ಈಶ್ವರಪ್ಪ ಹೇಳಿಕೆಗೆ ತೀವ್ರ ವಿರೋಧ : 3 ಗಂಟೆಗೆ ಸದನ ಮುಂದೂಡಿದ ಸ್ಪೀಕರ್​

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.