ETV Bharat / state

ಬಿಜೆಪಿಯಿಂದ ಮಾಧ್ಯಮ ರಂಗವನ್ನು ನಿಯಂತ್ರಿಸುವ ಪ್ರಯತ್ನ: ಗುಂಡೂರಾವ್ ಆರೋಪ - ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧಕ್ಕೆ ಗುಂಡೂರಾವ್ ವಿರೋಧ

ಮಾಧ್ಯಮ ಕ್ಷೇತ್ರವನ್ನು ತಮ್ಮ ನಿಯಂತ್ರಣದಲ್ಲಿ ಇಡಲು, ವಿಧಾನಸಭೆ ಕಲಾಪಗಳಿಗೆ ಮಾಧ್ಯಮದವರನ್ನು ನಿಷೇಧಿಸುತ್ತಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕಂಟಕವಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್
author img

By

Published : Oct 12, 2019, 1:19 PM IST

Updated : Oct 12, 2019, 1:32 PM IST

ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸದನದಲ್ಲಿ ಆಗುವ ಚರ್ಚೆಗಳನ್ನು ಸಾರ್ವಜನಿಕರಿಗೆ ತೋರಿಸುವ ಮುಕ್ತ ಅವಕಾಶವನ್ನು ಕಿತ್ತುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೆಪಿಸಿಸಿ ದಿನೇಶ್​ ಗುಂಡೂರಾವ್ ಕಿಡಿಕಾರಿದ್ದಾರೆ.

ಕಾಂಗ್ರೆಸ್​ ಆಡಳಿತರ ಸರ್ಕಾರವಿದ್ದಾಗ, ಮಾಧ್ಯಮದವರು ಎಷ್ಟೆ ಆರೋಪ, ಟೀಕೆಗಳನ್ನು ಮಾಡಿದರೂ ಅವುಗಳನ್ನು ನಿಷೇಧ ಮಾಡಿರಲಿಲ್ಲ.ಬಿಜೆಪಿಯ ಈ ಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಪ್ರಕರಣ: ಬಿಜೆಪಿ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗಳನ್ನು ಬಳಸಿಕೊಳ್ಳಲಾಗುತ್ತಿದೆ. ದ್ವೇಷ ರಾಜಕೀಯದಿಂದ ಬಿಜೆಪಿ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.

ಸೆಕ್ಸ್​ ಟೇಪ್​ ನೋಡಿದವರಾರು? ಅವರು ಯಾವ ಪಕ್ಷದಲ್ಲಿ ಇದ್ದಾರೆ? ಆ ಸುದ್ದಿಯನ್ನು ಬಯಲಿಗೆ ತಂದಿದ್ದು ಮಾಧ್ಯಮದವರು. ಕೆಲವು ನಿಯಮ ಅಥವಾ ಸಲಹೆಗಳನ್ನು ಮಾಡಿ ಮಾಧ್ಯಮದವರಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸದನದಲ್ಲಿ ಆಗುವ ಚರ್ಚೆಗಳನ್ನು ಸಾರ್ವಜನಿಕರಿಗೆ ತೋರಿಸುವ ಮುಕ್ತ ಅವಕಾಶವನ್ನು ಕಿತ್ತುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೆಪಿಸಿಸಿ ದಿನೇಶ್​ ಗುಂಡೂರಾವ್ ಕಿಡಿಕಾರಿದ್ದಾರೆ.

ಕಾಂಗ್ರೆಸ್​ ಆಡಳಿತರ ಸರ್ಕಾರವಿದ್ದಾಗ, ಮಾಧ್ಯಮದವರು ಎಷ್ಟೆ ಆರೋಪ, ಟೀಕೆಗಳನ್ನು ಮಾಡಿದರೂ ಅವುಗಳನ್ನು ನಿಷೇಧ ಮಾಡಿರಲಿಲ್ಲ.ಬಿಜೆಪಿಯ ಈ ಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಪ್ರಕರಣ: ಬಿಜೆಪಿ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗಳನ್ನು ಬಳಸಿಕೊಳ್ಳಲಾಗುತ್ತಿದೆ. ದ್ವೇಷ ರಾಜಕೀಯದಿಂದ ಬಿಜೆಪಿ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.

ಸೆಕ್ಸ್​ ಟೇಪ್​ ನೋಡಿದವರಾರು? ಅವರು ಯಾವ ಪಕ್ಷದಲ್ಲಿ ಇದ್ದಾರೆ? ಆ ಸುದ್ದಿಯನ್ನು ಬಯಲಿಗೆ ತಂದಿದ್ದು ಮಾಧ್ಯಮದವರು. ಕೆಲವು ನಿಯಮ ಅಥವಾ ಸಲಹೆಗಳನ್ನು ಮಾಡಿ ಮಾಧ್ಯಮದವರಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

Intro:Mojo Byite

ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಪ್ರಕರಣ ಮುಕ್ತಾಯವಾದ ಕಾರಣ ಸದ್ಯ ಪರಮೇಶ್ವರ್ ಅವರನ್ನ ಇದೀಗ ಕಾಂಗ್ರೆಸ್ ಮುಖಂಡರು ಭೇಟಿಯಾಗಲು ಅವಕಾಶ ಇರುವ ಹಿನ್ನೆಲೆ
ಪರಮೇಶ್ವರ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಿದ್ದಾರೆ.

ಕಳೆದೆರೆಡು ದಿನಗಳಿಂದ ಪರಮೇಶ್ವರ್ ನಿವಾಸದಲ್ಲಿ ಐಟಿ ಅಧಿಕಾರಿಗಳು ಮೊಕ್ಕಂ ಹೂಡಿದ್ದು ಈ ಸಂಧರ್ಭದಲ್ಲಿ ಯಾರನ್ನು ಕೂಡ ಮನೆಯ ಒಳಗಡೆ ಬಿಡದೆ ಶೋಧ ನಡೆಸುತ್ತಿದ್ದರು. ಹೀಗಾಗಿ ಪರಮೇಶ್ವರ್ ಯಾರನ್ನು ಮಾತಾನಾಡಿಸಲು ಅವಕಾಶ ಇರದೇ ಇರುವ ಕಾರಣ ಐಟಿ ಅಧಿಕಾರಿಗಳ ಎದುರು ಮೌನವಾಗಿದ್ದರು. ಸದ್ಯ‌ಪರಮೇಶ್ವರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ದಾಳಿ ಅಂತ್ಯ ಹಿನ್ನೆಲೆ ಕೈ ನಾಯಕರು ಸದಾಶಿವನಗರದಲ್ಲಿನ ಪರಂ ನಿವಾಸಕ್ಕೆ ಆಗಮಿಸುತ್ತಿದ್ದಾರೆ

ಇನ್ನು ದಿನೇಶ್ ಗುಂಡೂರಾವ್ ಮಾತಾಡಿ ಐಟಿ ದಾಳಿ ವ್ಯವಸ್ಥಿತವಾಗಿ ಕೇಂದ್ರ ಸರ್ಕಾರವು ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ,ಇಡಿ, ಸಿಬಿಐ ಬಳಸಿ ದಾಳಿ ಮಾಡಿಸ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಮುಗಿಸಲು ಈ ರೀತಿ ಮಾಡ್ತಿದ್ದು ಇದು ವ್ಯವಸ್ಥಿತ ಸಂಚು ಕಾಂಗ್ರೆಸ್ ಅವರಿಗೆ ಕಿರುಕುಳ ನೀಡುವುದು, ತೊಂದರೆ ಕೊಡುವುದೇ ಬಿಜೆಪಿಯವರ ಕೆಲಸ
ಕಾಂಗ್ರೆಸ್ ಪಕ್ಷಕ್ಕೆ ಯಾರು ಸಪೋರ್ಟ್ ಮಾಡಬಾರದು ಎಂದು ಈ ರೀತಿ ಮಾಡ್ತಿದ್ದಾರೆ.

ಈಗೀ‌ನ ಪರಿಸ್ಥಿತಿ ಯಲ್ಲಿ ಪ್ರಜಾಪ್ರಭುತ್ವ ದೇಶದಲ್ಲಿ ಇಲ್ಲ ಇವತ್ತು.
ದೇಶದ ಪರಿಸ್ಥಿತಿ ಮುಂದೆ ಏನೇನಾಗುತ್ತೊ ಗೊತ್ತಿಲ್ಲ.ನಾವೆಲ್ಲ ಪರಮೇಶ್ವರ್ ಜೊತೆಗೆ ಇದ್ದೀವಿ ಎಲ್ಲಾವನ್ನು ಎದುರಿಸ್ತೀವಿ. ಹಾಗೆ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳನ್ನ ಯಾವುತ್ತು ದ್ವೇಷ ಮಾಡಿಲ್ಲ.
ಯುಪಿಎ ಸರ್ಕಾರ ಎಷ್ಟು ಟೀಕೆಗಳನ್ನ ಎದುರಿಸಿತ್ತು.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಾಧ್ಯಮಗಳನ್ನ ನಿಯಂತ್ರಣ ಮಾಡ್ತಿದೆ.
ಸದನದಲ್ಲಿನ ವಿಚಾರಗಳು ಜನರಿಗೆ ಸ್ಪಷ್ಟವಾಗಿ ತೋರಿಸಲು ಅಗುತ್ತಿಲ್ಲ.ಅತ್ಯಂತ ಕೆಟ್ಟ ಕ್ರಮವನ್ನ ಬಿಜೆಪಿ ಮಾಡ್ತಿದೆ.

ಬಿಜೆಪಿ ಅಹಿತಕರ ವಿಚಾರ ‌ಮಾಡಿದಾಗ ಸೆಕ್ಸ್ ಟೇಪ್ ನೋಡಿದನ್ನ ಮಾಧ್ಯಮ ತೋರಿಸಿದೆ ಆದ್ರೆ ಇದೀಗ ಮಾಧ್ಯಮ ತಡೆಹಿಡಿದು ಸರಕಾರದ ಅಧೀನದಲ್ಲಿರುವ‌ದೂರದರ್ಶನ ಮಾತ್ರ ಒಳಗೆ ಬಿಟ್ಟಿದ್ದಾರೆ . ದೂರದರ್ಶನ ಸರ್ಕಾರ ನಿಯಂತ್ರಣದಲ್ಲಿದೆ.‌ಮಾಧ್ಯಮ ಸಂಪೂರ್ಣ ನಿಷೇಧ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು


Body:Kn_BNG_08_GUNDURAO_7204498Conclusion:Kn_BNG_08_GUNDURAO_7204498
Last Updated : Oct 12, 2019, 1:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.