ETV Bharat / state

ಇವನೇನ್‌ ಮನುಷ್ಯನಾ ಇಲ್ಲ.. ಬೆಂಗಳೂರಿನಲ್ಲೊಬ್ಬ ಸಾಲಗಾರರ ಕಾಟ ಎಂದು ಮಡದಿ, ಮಗನಿಗೆ ನೇಣುಬಿಗಿದ! - kannada news

ಬೆಂಗಳೂರಿನಲ್ಲಿ ಹೆಚ್ಎಎಲ್ ವಿಭೂತಿಪುರದಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ಹೆಂಡತಿ ಮತ್ತು ತನ್ನ ಮಗನಿಗೆ ನೇಣು ಬಿಗಿದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಸಾಲಬಾದೆ ತಾಳಲಾರದೆ ಹೆತ್ತ ಮಗ, ಹೆಂಡತಿಯನ್ನೆ ಕೊಂದ ಪಾಪಿ ಪತಿ
author img

By

Published : Jun 2, 2019, 10:01 PM IST

Updated : Jun 2, 2019, 11:04 PM IST

ಬೆಂಗಳೂರು: ಸಾಲಗಾರರ ಕಾಟಕ್ಕೆ ಬೇಸತ್ತ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗನಿಗೇ ನೇಣು ಬಿಗಿದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.


ಕೊಲೆ ಮಾಡಲು ಕಾರಣ ಏನು :
ಬೆಂಗಳೂರಿನ ಹೆಚ್ಎಎಲ್‌ನ ವಿಭೂತಿಪುರದಲ್ಲಿ ಈ ಘಟನೆ ನಡೆದಿದೆ. ಸಾಲಗಾರರ ಕಾಟ ತಾಳಲಾರದೇ ಪತ್ನಿ ಗೀತಾಬಾಯಿ, ಹಾಗೂ ಮಗ ವರುಣರಾವ್‌ ಎಂಬುವರಿಗೆ ಸುರೇಶ್​ ಎಂಬ ಕ್ರೂರಿ ನೇಣು ಹಾಕಿದ್ದಾನೆ. ಮತ್ತೊಂದು ಆಘಾತಕಾರಿ ಏನಂದ್ರೇ, ತನ್ನ ತಂದೆಯೇ ತಾಯಿ ಮತ್ತು ಸೋದರನಿಗೆ ನೇಣು ಹಾಕುತ್ತಿರುವಾಗ ಹಿರಿಯ ಮಗಳು ಮೊಬೈಲ್​ನಲ್ಲಿ ಈ ಎಲ್ಲ ದೃಶ್ಯವನ್ನೂ ಸೆರೆಯಿಡಿದಿದ್ದಾಳೆ. ಇದೇ ದೃಶ್ಯ ಈಟಿವಿ ಭಾರತ್‌ಗೆ ಲಭ್ಯವಾಗಿದೆ.

ಹೆಚ್ಎಎಲ್‌ನ ವಿಭೂತಿಪುರದ ನಿವಾಸಿಗಳಾದ ಗೀತಾಬಾಯಿ ಹಾಗೂ ಸುರೇಶ್ ಎಂಬ ದಂಪತಿ ತಮ್ಮ ಮಗನ ಜೊತೆ ವಾಸವಿದ್ದರು. ಸುರೇಶ್ ಸ್ವೀಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಗೀತಾ ಖಾಸಗಿ ಕಂಪೆನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.

ವಿಭೂತಿಪುರದ ಫೈನಾನ್ಸಿಯರ್ ಸುಧಾ ಎಂಬುವರ ಬಳಿ ಎರಡು ವರ್ಷಗಳ ಹಿಂದೆ ನಲವತ್ತು ಸಾವಿರ ಸಾಲ ಪಡೆದು ಅದಕ್ಕೆ ಬಡ್ಡಿ ಸಮೇತ ಸಾಲವನ್ನೂ ತೀರಿಸಿದ್ರು. ಆದರೂ ಕೂಡ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರಂತೆ. ಕಳೆದ ನಾಲ್ಕು ದಿನಗಳ ಹಿಂದೆ ಸುಧಾ ಕಡೆಯವರು ಮನೆ ಬಳಿ ಬಂದು ಗೀತಾಬಾಯಿಯನ್ನು ಸಾರ್ವಜನಿಕರ ಮುಂದೆ ಹಲ್ಲೆ ಮಾಡಿ ಹೋಗಿದ್ದರಂತೆ. ಇದರಿಂದ ನಿನ್ನೆ ಗೀತಾಬಾಯಿ ಪತಿ ಸುರೇಶ್ ಮನೆಯಲ್ಲಿಯೇ ಪ್ಲಾನ್ ಮಾಡಿ ಎಲ್ಲರನ್ನೂ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್​ ಮಾಡಿದ್ದರಂತೆ.

ಹೆಂಡತಿ ಮತ್ತು ಮಗನನ್ನು ಕೊಲೆ ಮಾಡಿದ ಬಳಿಕ ತನ್ನ ಮಗಳನ್ನು ಕೊಲೆ ಮಾಡುವ ಪ್ರಯತ್ನಕ್ಕೆ ಇಳಿದಿದ್ದ, ಈ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಬಂದು ಸುರೇಶ್​ ಮಗಳನ್ನು ರಕ್ಷಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸುರೇಶ್​ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ಸಾಲಗಾರರ ಕಾಟಕ್ಕೆ ಬೇಸತ್ತ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗನಿಗೇ ನೇಣು ಬಿಗಿದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.


ಕೊಲೆ ಮಾಡಲು ಕಾರಣ ಏನು :
ಬೆಂಗಳೂರಿನ ಹೆಚ್ಎಎಲ್‌ನ ವಿಭೂತಿಪುರದಲ್ಲಿ ಈ ಘಟನೆ ನಡೆದಿದೆ. ಸಾಲಗಾರರ ಕಾಟ ತಾಳಲಾರದೇ ಪತ್ನಿ ಗೀತಾಬಾಯಿ, ಹಾಗೂ ಮಗ ವರುಣರಾವ್‌ ಎಂಬುವರಿಗೆ ಸುರೇಶ್​ ಎಂಬ ಕ್ರೂರಿ ನೇಣು ಹಾಕಿದ್ದಾನೆ. ಮತ್ತೊಂದು ಆಘಾತಕಾರಿ ಏನಂದ್ರೇ, ತನ್ನ ತಂದೆಯೇ ತಾಯಿ ಮತ್ತು ಸೋದರನಿಗೆ ನೇಣು ಹಾಕುತ್ತಿರುವಾಗ ಹಿರಿಯ ಮಗಳು ಮೊಬೈಲ್​ನಲ್ಲಿ ಈ ಎಲ್ಲ ದೃಶ್ಯವನ್ನೂ ಸೆರೆಯಿಡಿದಿದ್ದಾಳೆ. ಇದೇ ದೃಶ್ಯ ಈಟಿವಿ ಭಾರತ್‌ಗೆ ಲಭ್ಯವಾಗಿದೆ.

ಹೆಚ್ಎಎಲ್‌ನ ವಿಭೂತಿಪುರದ ನಿವಾಸಿಗಳಾದ ಗೀತಾಬಾಯಿ ಹಾಗೂ ಸುರೇಶ್ ಎಂಬ ದಂಪತಿ ತಮ್ಮ ಮಗನ ಜೊತೆ ವಾಸವಿದ್ದರು. ಸುರೇಶ್ ಸ್ವೀಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಗೀತಾ ಖಾಸಗಿ ಕಂಪೆನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.

ವಿಭೂತಿಪುರದ ಫೈನಾನ್ಸಿಯರ್ ಸುಧಾ ಎಂಬುವರ ಬಳಿ ಎರಡು ವರ್ಷಗಳ ಹಿಂದೆ ನಲವತ್ತು ಸಾವಿರ ಸಾಲ ಪಡೆದು ಅದಕ್ಕೆ ಬಡ್ಡಿ ಸಮೇತ ಸಾಲವನ್ನೂ ತೀರಿಸಿದ್ರು. ಆದರೂ ಕೂಡ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರಂತೆ. ಕಳೆದ ನಾಲ್ಕು ದಿನಗಳ ಹಿಂದೆ ಸುಧಾ ಕಡೆಯವರು ಮನೆ ಬಳಿ ಬಂದು ಗೀತಾಬಾಯಿಯನ್ನು ಸಾರ್ವಜನಿಕರ ಮುಂದೆ ಹಲ್ಲೆ ಮಾಡಿ ಹೋಗಿದ್ದರಂತೆ. ಇದರಿಂದ ನಿನ್ನೆ ಗೀತಾಬಾಯಿ ಪತಿ ಸುರೇಶ್ ಮನೆಯಲ್ಲಿಯೇ ಪ್ಲಾನ್ ಮಾಡಿ ಎಲ್ಲರನ್ನೂ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್​ ಮಾಡಿದ್ದರಂತೆ.

ಹೆಂಡತಿ ಮತ್ತು ಮಗನನ್ನು ಕೊಲೆ ಮಾಡಿದ ಬಳಿಕ ತನ್ನ ಮಗಳನ್ನು ಕೊಲೆ ಮಾಡುವ ಪ್ರಯತ್ನಕ್ಕೆ ಇಳಿದಿದ್ದ, ಈ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಬಂದು ಸುರೇಶ್​ ಮಗಳನ್ನು ರಕ್ಷಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸುರೇಶ್​ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Intro:ಫೈನಾನ್ಸಿಯರ್ ಹಾವಳಿಗೆ ತಾಯಿ ಮಗ ಆತ್ಮಹತ್ಯೆ ?
ಸ್ವತಃ ತಾಯಿ ಮುಂದೆ ಮಗನಿಗೆ ನೇಣು ಹಾಕಿದ ತಂದೆ..


ಮೊನ್ನೆಯಷ್ಟು ಸಿಸಿಬಿ ಪೊಲೀಸರು ಮೀಡರ್ ಬಡ್ಡಿ ದಂಧೆಕೋರರ ಮೇಲೆ ದಾಳಿ ನಡೆಸಿದ್ರು. ದಾಳಿ ನಂತರವೂ ಎಚ್ಚೇತುಕೊಳ್ಳದ ದಂಧೆಕೋರರು ಬಡವರ ಮೇಲೆ ಅಟ್ಟಹಾಸ ಮೇರಿದ್ದಾರೆ. ಬಡ್ಡಿ ಕೋರರ ಹಾವಳಿಗೆ ಬೇಸತು ತಾಯಿ ಮಗ ಪ್ರಾಣಬೀಟ್ಟಿದ್ದಾರೆ.ಅದರೆ ಇಲ್ಲಿ ಸಾವಿನ ವಿಡಿಯೋ ನೋಡಿದರೆ ಕರುಳು ಕಿತ್ತು ಬರುತ್ತಿದೆ.



ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಸಿಸಿಬಿ ಪೊಲೀಸರು ಬಡ್ಡಿ ದಂಧೆ ಮಟ್ಟಹಾಕಲು ಕಾರ್ಯಚಾರಣೆ ನಡೆಸುತ್ತಿದ್ರೆ . ಫೈನಾನ್ಸರ್ ಗಳು ಮಾತ್ರ ಪೊಲೀಸರ ಕಣ್ಣಿಗೆ ಮಣ್ಣು ಎರೆಚಿ ತಮ್ಮ ವ್ಯಾಪಾರ ವ್ಯವಹಾರಗಳನ್ನ ಮಾಡಿ‌ ಜನರ ಪ್ರಾಣ ಇರುತ್ತಿದ್ದಾರೆ. ಯಸ್ ನಿನ್ನೆ ಹೆಚ್ ಎ ಎಲ್ ವಿಭೂತಿಪುರದಲ್ಲಿ ಮೀಟರ್ ಬಡ್ಡಿ ದಂಧೆ ಕೋರರ ಹಾವಳಿಗೆ ತಾಯಿ ಮಗ ಮನನೊಂದು ಮನೆಯಲ್ಲೇ ಇಬ್ಬರು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೀತಾಬಾಯಿ ಹಾಗೂ 12 ವರ್ಷದ ಮಗ ಮೃತಪಟ್ಟವರು ಆದರೆ ಈ ವೀಡಿಯೋ ‌ನೋಡಿದ್ರೆ ಆತ್ಮಹತ್ಯೆ ಅಲ್ಲ ಸ್ವತಃ ತನ್ನ ತಂದೆ ಸುರೇಶ, ತಾಯಿ‌ ಗೀತ ಹಾಗು ಅಕ್ಕನ ಕಣ್ಣಿನ ಮುಂದೆ ಮಗನಿಗೆ ನೇಣು ಹಾಕಲಾಗಿತ್ತು


Body: ಹೆಚ್ ಎ ಎಲ್ ನಿವಾಸಿಗಳಾದ ಗೀತಾಬಾಯಿ ಹಾಗೂ ಸುರೇಶ್ ತಮ್ಮ ಮಗನ ಜೊತೆ ವಾಸಮಾಡಿಕೊಂಡು ಕೆಲಸ ಮಾಡುತ್ತಿದ್ರು. ಸುರೇಶ್ ಸ್ವೀಗಿ ಡೆಲಿವರಿ ನೌಕರ‌ನಾಗಿ ಕೆಲಸ ಮಾಡುತ್ತಿದ್ದ ಗೀತಾ ಖಾಸಗಿ ಕಂಪನಿ ಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ರು. ವಿಭೂತಿಪುರದ ಫೈನ್ಸಾನಿಯರ್ ಸುಧಾ ಎಂಬುವರ ಬಳಿ ಎರಡು ವರ್ಷಗಳ ಹಿಂದೆ ನಲವತ್ತು ಸಾವಿರ ಸಾಲ ಪಡೆದು ಅದಕ್ಕೆ ಬಡ್ಡಿ ಸಮೇತ ಸಾಲವನ್ನು ತೀರಿಸಿದ್ರು. ಆದ್ರೂ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ರು‌ . ಕಳೆದ ನಾಲ್ಕು ದಿನಗಳ ಹಿಂದೆ ಸಹ ಸುಧಾ ಕಡೆಯವರು ಮನೆ ಬಳಿ ಬಂದು ಗೀತಾ ಬಾಯಿ ಹಾಗೂ ಮಗನಿಗೆ ಸಾರ್ವಜನಿಕ ಮುಂದೆ ಹಲ್ಲೆ ಮಾಡಿ ಹೋಗಿದ್ರು. ಇದ್ದರಿಂದ ನಿನ್ನೆ ಗೀತಾಬಾಯಿ ಪತಿ ಸುರೇಶ್ ಮನೆಯಲ್ಲಿಯೇ ಪ್ಲಾನ್ ಮಾಡಿ ಎಲ್ಲರನ್ನೂ ಸಾಯಿಸಿದ ‌ಮೇಲೆ ತಾನು ಸಾಹ ಸಾಯಲು ಸಿದ್ಧವಾಗಿದ ಅದರೆ ಪತ್ನಿ ಹಾಗೂ ಮಗನನ್ನು ಸಾಹಿಸಿದ ಸುರೇಶ್ ಮಗಳನ್ನು ನೇಣು ಹಾಕಲು ಹೋದಾಗ ಅಕ್ಕ ಪಕ್ಕದ ಅವರು ಬಂದು ಮಗಳನ್ನು ಕೊಡುತ್ತಾರೆ.
ಅದರೆ ಪೋಲಿಸರಿಗೆ ಸತಾಯಿ ಮಗ ಫೈನಾನ್ಸಿಯರ್ ಸುಧಾ ವಿರುದ್ದ ಡೆತ್ ನೋಟ್ ಬರೆದಿಟ್ಟ ಪತ್ರ ಸಾಹ ಸಿಕ್ಕಿದೆ



Conclusion:ಸದ್ಯಕ್ಕೆ ಮೊಬೈಲ್ ನಲ್ಲಿ ಇರುವ ದೃಶ್ಯವನ್ನು ನೋಡಿದ ಪೋಲಿಸರು ಸಾಹ ಶಾಕ್ ಆಗಿದ್ದಾರೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿರುವ ಹೆಚ್ ಎ ಎಲ್ ಪೊಲೀಸರು ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆ‌. ಒಟ್ನಾಲ್ಲಿ ಬಡ್ಡಿ ದಂಧೆಗೆ ತಾಯಿ ಮಗ ಮೃತಪಟ್ಟಿರುವುದ ದುರಂತವೇ ಸರಿ. ಇನ್ನಾದ್ರು ನಗರ ಪೊಲೀಸರು ಬಡ್ಡಿ ದಂಧೆಕೋರರಿಗೆ ಬ್ರೇಕ್ ಹಾಕ್ತಾರ ಕಾದು ನೋಡಬೇಕು


ಧರ್ಮರಾಜು ಎಂ ಕೆಆರ್ ಪುರ.
Last Updated : Jun 2, 2019, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.