ETV Bharat / state

ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಇದುವರೆಗೂ ನಾಲ್ವರ ಬಂಧನ: ಕಮಲ್ ಪಂತ್

author img

By

Published : May 5, 2021, 6:03 PM IST

ಒಂದು‌ ಪ್ರಕರಣದಲ್ಲಿ‌ ರೋಹಿತ್ ಕುಮಾರ್ ಮತ್ತು ನೇತ್ರಾವತಿ ಮತ್ತೊಂದು ಪ್ರಕರಣದಲ್ಲಿ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಕೊರೊನಾ ವಾರ್ ರೂಂ ಉಸ್ತುವಾರಿ ಡಾ.ಸುರೇಶ್ ಹಾಗೂ ದಕ್ಷಿಣ ವಲಯದ ವಾರ್ ರೂಂ ಉಸ್ತುವಾರಿ ಡಾ.ರೆಹಾನ್ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ದಕ್ಷಿಣ ವಲಯ ಇನ್ಚಾರ್ಜ್ ಡಾ.ರೆಹಾನ್ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ‌.

ಕಮಲ್ ಪಂತ್
ಕಮಲ್ ಪಂತ್

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಂಬಂಧ ಇದುವರೆಗೂ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು‌ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಬುಧವಾರ ತಿಳಿಸಿದ್ದಾರೆ‌.

ಸೋಂಕಿನ ಗುಣಲಕ್ಷಣ ಇಲ್ಲದೇ ಹೋಂ‌ ಐಸೋಲೇಷನ್​ನಲ್ಲಿದವರ ಹೆಸರಿನಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಂದ ಹಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ‌ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ‌ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ನಾಲ್ವರನ್ನು ಬಂಧಿಸಲಾಗಿದೆ‌‌ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಿಳಿಸಿದ್ದಾರೆ.

ಕಮಲ್ ಪಂತ್

ಒಂದು‌ ಪ್ರಕರಣದಲ್ಲಿ‌ ರೋಹಿತ್ ಕುಮಾರ್ ಮತ್ತು ನೇತ್ರಾವತಿ ಮತ್ತೊಂದು ಪ್ರಕರಣದಲ್ಲಿ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಕೊರೊನಾ ವಾರ್ ರೂಂ ಉಸ್ತುವಾರಿ ಡಾ.ಸುರೇಶ್ ಹಾಗೂ ದಕ್ಷಿಣ ವಲಯದ ವಾರ್ ರೂಂ ಉಸ್ತುವಾರಿ ಡಾ.ರೆಹಾನ್ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ದಕ್ಷಿಣ ವಲಯ ಇನ್ಚಾರ್ಜ್ ಡಾ.ರೆಹಾನ್ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ‌.

ಡಾ.ಸುರೇಶ್​ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ಸದ್ಯ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ:ಬೆಡ್ ಬ್ಲಾಕಿಂಗ್ ದಂಧೆ‌: ಬೆಂಗಳೂರಲ್ಲಿ ಕೃತಕ ಅಭಾವ ಸೃಷ್ಟಿಸಿದ್ದ ಮಹಿಳೆ‌ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಂಬಂಧ ಇದುವರೆಗೂ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು‌ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಬುಧವಾರ ತಿಳಿಸಿದ್ದಾರೆ‌.

ಸೋಂಕಿನ ಗುಣಲಕ್ಷಣ ಇಲ್ಲದೇ ಹೋಂ‌ ಐಸೋಲೇಷನ್​ನಲ್ಲಿದವರ ಹೆಸರಿನಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಂದ ಹಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ‌ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ‌ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ನಾಲ್ವರನ್ನು ಬಂಧಿಸಲಾಗಿದೆ‌‌ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಿಳಿಸಿದ್ದಾರೆ.

ಕಮಲ್ ಪಂತ್

ಒಂದು‌ ಪ್ರಕರಣದಲ್ಲಿ‌ ರೋಹಿತ್ ಕುಮಾರ್ ಮತ್ತು ನೇತ್ರಾವತಿ ಮತ್ತೊಂದು ಪ್ರಕರಣದಲ್ಲಿ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಕೊರೊನಾ ವಾರ್ ರೂಂ ಉಸ್ತುವಾರಿ ಡಾ.ಸುರೇಶ್ ಹಾಗೂ ದಕ್ಷಿಣ ವಲಯದ ವಾರ್ ರೂಂ ಉಸ್ತುವಾರಿ ಡಾ.ರೆಹಾನ್ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ದಕ್ಷಿಣ ವಲಯ ಇನ್ಚಾರ್ಜ್ ಡಾ.ರೆಹಾನ್ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ‌.

ಡಾ.ಸುರೇಶ್​ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ಸದ್ಯ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ:ಬೆಡ್ ಬ್ಲಾಕಿಂಗ್ ದಂಧೆ‌: ಬೆಂಗಳೂರಲ್ಲಿ ಕೃತಕ ಅಭಾವ ಸೃಷ್ಟಿಸಿದ್ದ ಮಹಿಳೆ‌ ಸೇರಿ ಇಬ್ಬರು ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.