ETV Bharat / state

ಬಿಬಿಎಂಪಿ ವಾರ್ಡ್‌ ಮೀಸಲಾತಿ ಅಧಿಸೂಚನೆ ಪ್ರಕಟ: ಮಹಿಳೆಯರಿಗೆ ಹೆಚ್ಚಿನ ಆದ್ಯತೆ - ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 243 ವಾರ್ಡ್​ಗಳ ಮೀಸಲಾತಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.

BBMP
ಬಿಬಿಎಂಪಿ
author img

By

Published : Aug 4, 2022, 3:04 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾರ್ಡ್ ವಿಂಗಡಣೆಯ ನಂತರ ರಾಜ್ಯ ಸರ್ಕಾರ 243 ವಾರ್ಡ್‌ಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟಿಸಿದೆ. ಇದು ಕೆಲವು ಪಕ್ಷದ ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರಮುಖ ವಾರ್ಡ್​ಗಳ ಮೇಲೆ ನಿಗಾ ಇರಿಸಿದ್ದ ಬಿಬಿಎಂಪಿ ಹಿರಿಯ ಮಾಜಿ ಸದಸ್ಯರಿಗೆ, ಇದೀಗ ವಾರ್ಡ್​ಗಳೇ ಇಲ್ಲದಂತೆ ಆಗಿದೆ. ಜತೆಗೆ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಪಾಲಿಕೆಯ ಹಲವು ಮಾಜಿ ಸದಸ್ಯರಿಗೆ ತಲೆಬಿಸಿ ಉಂಟುಮಾಡಿದೆ.

ಮಾಜಿ ಮೇಯರ್ ಮಡಿವಾಳ ವಾರ್ಡ್​ನ ಮಂಜುನಾಥ್ ರೆಡ್ಡಿ, ಗೋರಪ್ಪನಪಾಳ್ಯದ ರಿಜ್ವಾನ್ ನವಾಬ್ ವಾರ್ಡ್‌ಗೆ ಸಾಮಾನ್ಯ ವರ್ಗ (ಮಹಿಳೆ) ಮೀಸಲಿಡಲಾಗಿದೆ. ಡಿ.ಜೆ.ಹಳ್ಳಿಯ ಮಾಜಿ ಮೇಯರ್ ಆರ್.ಸಂಪತ್ ರಾಜ್ ತಮ್ಮ ವಾರ್ಡ್​ನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದ್ದು, ಒಬಿಸಿ ಮಹಿಳೆಗೆ ಮೀಸಲು ಒದಗಿಸಲಾಗಿದೆ.

ಗೌತಮ್ ಜೈನ್ ಸ್ಪರ್ಧೆ ಇಲ್ಲ: ಜೋಗುಪಾಳ್ಯ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಮಾಜಿ ಮೇಯರ್ ಗೌತಮ್ ಜೈನ್​ ಅವರಿಗೂ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. 234 ವಾರ್ಡ್‌ಗಳ ಪಟ್ಟಿಯ ಪ್ರಕಾರ, ಸಾಮಾನ್ಯ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರು 129 ವಾರ್ಡ್‌ಗಳಲ್ಲಿ ಸ್ಪರ್ಧಿಸಬಹುದು.

ಇದನ್ನೂ ಓದಿ: ಮೋದಿ ದೂರದೃಷ್ಟಿ ನಾಯಕ, ಅಮಿತ್ ಶಾ ದಕ್ಷ ನಾಯಕ: ಸಿಎಂ ಬೊಮ್ಮಾಯಿ‌ ಬಣ್ಣನೆ

ಮಹಿಳೆಯರಿಗೆ ಆದ್ಯತೆ: ಸಾಮಾನ್ಯ, ಹಿಂದುಳಿದ ವರ್ಗ ಎ, ಬಿ, ಎಸ್‌ಸಿ ಮತ್ತು ಎಸ್​​ಟಿ ಮೀಸಲಾತಿಯಡಿ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸದ್ಯ ಅಧಿಸೂಚನೆ ದಿನಾಂಕದಿಂದ 7 ದಿನಗಳವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಧಾನಸೌಧ, ಬೆಂಗಳೂರು 560001 ಸಲ್ಲಿಸಬೇಕಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾರ್ಡ್ ವಿಂಗಡಣೆಯ ನಂತರ ರಾಜ್ಯ ಸರ್ಕಾರ 243 ವಾರ್ಡ್‌ಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟಿಸಿದೆ. ಇದು ಕೆಲವು ಪಕ್ಷದ ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರಮುಖ ವಾರ್ಡ್​ಗಳ ಮೇಲೆ ನಿಗಾ ಇರಿಸಿದ್ದ ಬಿಬಿಎಂಪಿ ಹಿರಿಯ ಮಾಜಿ ಸದಸ್ಯರಿಗೆ, ಇದೀಗ ವಾರ್ಡ್​ಗಳೇ ಇಲ್ಲದಂತೆ ಆಗಿದೆ. ಜತೆಗೆ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಪಾಲಿಕೆಯ ಹಲವು ಮಾಜಿ ಸದಸ್ಯರಿಗೆ ತಲೆಬಿಸಿ ಉಂಟುಮಾಡಿದೆ.

ಮಾಜಿ ಮೇಯರ್ ಮಡಿವಾಳ ವಾರ್ಡ್​ನ ಮಂಜುನಾಥ್ ರೆಡ್ಡಿ, ಗೋರಪ್ಪನಪಾಳ್ಯದ ರಿಜ್ವಾನ್ ನವಾಬ್ ವಾರ್ಡ್‌ಗೆ ಸಾಮಾನ್ಯ ವರ್ಗ (ಮಹಿಳೆ) ಮೀಸಲಿಡಲಾಗಿದೆ. ಡಿ.ಜೆ.ಹಳ್ಳಿಯ ಮಾಜಿ ಮೇಯರ್ ಆರ್.ಸಂಪತ್ ರಾಜ್ ತಮ್ಮ ವಾರ್ಡ್​ನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದ್ದು, ಒಬಿಸಿ ಮಹಿಳೆಗೆ ಮೀಸಲು ಒದಗಿಸಲಾಗಿದೆ.

ಗೌತಮ್ ಜೈನ್ ಸ್ಪರ್ಧೆ ಇಲ್ಲ: ಜೋಗುಪಾಳ್ಯ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಮಾಜಿ ಮೇಯರ್ ಗೌತಮ್ ಜೈನ್​ ಅವರಿಗೂ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. 234 ವಾರ್ಡ್‌ಗಳ ಪಟ್ಟಿಯ ಪ್ರಕಾರ, ಸಾಮಾನ್ಯ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರು 129 ವಾರ್ಡ್‌ಗಳಲ್ಲಿ ಸ್ಪರ್ಧಿಸಬಹುದು.

ಇದನ್ನೂ ಓದಿ: ಮೋದಿ ದೂರದೃಷ್ಟಿ ನಾಯಕ, ಅಮಿತ್ ಶಾ ದಕ್ಷ ನಾಯಕ: ಸಿಎಂ ಬೊಮ್ಮಾಯಿ‌ ಬಣ್ಣನೆ

ಮಹಿಳೆಯರಿಗೆ ಆದ್ಯತೆ: ಸಾಮಾನ್ಯ, ಹಿಂದುಳಿದ ವರ್ಗ ಎ, ಬಿ, ಎಸ್‌ಸಿ ಮತ್ತು ಎಸ್​​ಟಿ ಮೀಸಲಾತಿಯಡಿ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸದ್ಯ ಅಧಿಸೂಚನೆ ದಿನಾಂಕದಿಂದ 7 ದಿನಗಳವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಧಾನಸೌಧ, ಬೆಂಗಳೂರು 560001 ಸಲ್ಲಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.