ETV Bharat / state

ಇಂದಿರಾ ಕ್ಯಾಂಟೀನ್​ ಇಸ್ಕಾನ್ ಹೆಗಲಿಗೆ ನೀಡಲು ಮುಂದಾದ ಬಿಬಿಎಂಪಿ

author img

By

Published : Apr 8, 2022, 4:02 PM IST

ಊಟ, ಉಪಹಾರ ಪೂರೈಸುವ ಗುತ್ತಿಗೆಯನ್ನು ಇಸ್ಕಾನ್​​ನ ಅಕ್ಷಯ ಪಾತ್ರೆ ಯೋಜನೆಯ ಹೆಗಲಿಗೆ ನೀಡಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಪಾಲಿಕೆ ಮತ್ತು ​ಇಸ್ಕಾನ್ ಪದಾಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

BBMP offer to ISKCON for maintain Indira Canteen
BBMP offer to ISKCON for maintain Indira Canteen

ಬೆಂಗಳೂರು: ಇಂದಿರಾ ಕ್ಯಾಂಟೀನ್​ ನಿರ್ವಹಿಸಲು ಪಾಲಿಕೆ ಬಜೆಟ್​ನಲ್ಲಿ 60 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈ ನಡುವೆ ಕ್ಯಾಂಟೀನ್ ನಿರ್ವಹಣೆಯ ಸಂಬಂಧ ಪಾಲಿಕೆ ಅಧಿಕಾರಿಗಳು ಮತ್ತು ​ಇಸ್ಕಾನ್ ದೇವಸ್ಥಾನದ ಆಡಳಿತ ಮಂಡಳಿಯ ಮಧ್ಯೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾಹಿತಿ ದೊರೆತಿದೆ. ಅದಮ್ಯ ಚೇತನ ಹೊರತುಪಡಿಸಿ ಉಳಿದ ಸಂಸ್ಥೆಗಳ ಮೇಲೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ಹೀಗಾಗಿ, ಊಟ, ಉಪಹಾರ ಪೂರೈಸುವ ಗುತ್ತಿಗೆಯನ್ನು ಇಸ್ಕಾನ್​​ನ ಅಕ್ಷಯ ಪಾತ್ರೆ ಯೋಜನೆಯ ಹೆಗಲಿಗೆ ನೀಡಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಪಾಲಿಕೆ ಮತ್ತು ​ಇಸ್ಕಾನ್ ಪದಾಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಶೆಫ್​ಟಾಕ್ ಸಂಸ್ಥೆ 96 ಕ್ಯಾಂಟೀನ್​ಗಳ ನಿರ್ವಹಣೆ ಮಾಡುತ್ತಿದ್ದು, ರಿವಾರ್ಡ್ಸ್ 49, ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆ 40 ಕ್ಯಾಂಟೀನ್​ ನಿರ್ವಹಣೆ ಮಾಡುತ್ತಿದೆ. ಆಗಸ್ಟ್​ನಲ್ಲಿ ಎಲ್ಲ ಸಂಸ್ಥೆಗಳ ಗುತ್ತಿಗೆ ಅವಧಿ ಮುಗಿಯಲಿದೆ.

ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಆತಂಕ ಬೇಡ ಎಂದ ಸಿಎಂ

57 ಕೋಟಿ ರೂಪಾಯಿ ಬಾಕಿ: ಇಂದಿರಾ ಕ್ಯಾಂಟೀನ್ ಬಡವರಿಗೆ ಕಡಿಮೆ ದರಕ್ಕೆ ಊಟ ಒದಗಿಸುತ್ತಿದ್ದು, ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ ಎಂಬ ಆರೋಪ ಹಲವು ಬಾರಿ ಕೇಳಿ ಬಂದಿದೆ. ಇದರ ನಡುವೆಯೇ ಪಾಲಿಕೆ ಇನ್ನೂ 57 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.

ಬೆಂಗಳೂರು: ಇಂದಿರಾ ಕ್ಯಾಂಟೀನ್​ ನಿರ್ವಹಿಸಲು ಪಾಲಿಕೆ ಬಜೆಟ್​ನಲ್ಲಿ 60 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈ ನಡುವೆ ಕ್ಯಾಂಟೀನ್ ನಿರ್ವಹಣೆಯ ಸಂಬಂಧ ಪಾಲಿಕೆ ಅಧಿಕಾರಿಗಳು ಮತ್ತು ​ಇಸ್ಕಾನ್ ದೇವಸ್ಥಾನದ ಆಡಳಿತ ಮಂಡಳಿಯ ಮಧ್ಯೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾಹಿತಿ ದೊರೆತಿದೆ. ಅದಮ್ಯ ಚೇತನ ಹೊರತುಪಡಿಸಿ ಉಳಿದ ಸಂಸ್ಥೆಗಳ ಮೇಲೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ಹೀಗಾಗಿ, ಊಟ, ಉಪಹಾರ ಪೂರೈಸುವ ಗುತ್ತಿಗೆಯನ್ನು ಇಸ್ಕಾನ್​​ನ ಅಕ್ಷಯ ಪಾತ್ರೆ ಯೋಜನೆಯ ಹೆಗಲಿಗೆ ನೀಡಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಪಾಲಿಕೆ ಮತ್ತು ​ಇಸ್ಕಾನ್ ಪದಾಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಶೆಫ್​ಟಾಕ್ ಸಂಸ್ಥೆ 96 ಕ್ಯಾಂಟೀನ್​ಗಳ ನಿರ್ವಹಣೆ ಮಾಡುತ್ತಿದ್ದು, ರಿವಾರ್ಡ್ಸ್ 49, ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆ 40 ಕ್ಯಾಂಟೀನ್​ ನಿರ್ವಹಣೆ ಮಾಡುತ್ತಿದೆ. ಆಗಸ್ಟ್​ನಲ್ಲಿ ಎಲ್ಲ ಸಂಸ್ಥೆಗಳ ಗುತ್ತಿಗೆ ಅವಧಿ ಮುಗಿಯಲಿದೆ.

ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಆತಂಕ ಬೇಡ ಎಂದ ಸಿಎಂ

57 ಕೋಟಿ ರೂಪಾಯಿ ಬಾಕಿ: ಇಂದಿರಾ ಕ್ಯಾಂಟೀನ್ ಬಡವರಿಗೆ ಕಡಿಮೆ ದರಕ್ಕೆ ಊಟ ಒದಗಿಸುತ್ತಿದ್ದು, ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ ಎಂಬ ಆರೋಪ ಹಲವು ಬಾರಿ ಕೇಳಿ ಬಂದಿದೆ. ಇದರ ನಡುವೆಯೇ ಪಾಲಿಕೆ ಇನ್ನೂ 57 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.