ETV Bharat / state

ಜಾಹೀರಾತು ಬೈಲಾ ರಚನೆ... ಹಿಂದಿನ ಸರ್ಕಾರದ ನಿರ್ಣಯಕ್ಕೆ ಪಾಲಿಕೆ ಸದಸ್ಯರ ವಿರೋಧ

author img

By

Published : Jul 29, 2019, 8:32 PM IST

ಬಿಬಿಎಂಪಿಯು ಬೆಂಗಳೂರು ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬ್ಯಾನ್ ಮಾಡಿ, ಕೌನ್ಸಿಲ್ ಒಪ್ಪಿಗೆಯೊಂದಿಗೆ ರಚಿಸಿದ್ದ ಜಾಹೀರಾತು ಬೈಲಾವನ್ನು ಕಳೆದ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತ್ತು. ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿತ್ತು. ಇದು ಪಾಲಿಕೆಗೆ ಮಾಡುವ ಅವಮಾನ. ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಬಿಬಿಎಂಪಿ ಸದಸ್ಯರು ವಿರೋಧಿಸಿದರು.

ಬಿಬಿಎಂಪಿ ಕೌನ್ಸಿಲ್ ಸಭೆ

ಬೆಂಗಳೂರು: ನೂತನ ಜಾಹೀರಾತು ಬೈಲಾ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ನಗರದಲ್ಲಿ ವಾಣಿಜ್ಯ ಜಾಹೀರಾತು ಅಳವಡಿಕೆಗೆ ಅವಕಾಶವಿದೆಯೆಂದು ಜಾಹೀರಾತು ಬೈಲಾ ಸಿದ್ಧಪಡಿಸಿತ್ತು. ಆದ್ರೆ ಇದನ್ನು ಇಂದಿನ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಕಾರ್ಪೋರೇಟರ್ಸ್ ವಿರೋಧಿಸಿದರು.

ಬಿಬಿಎಂಪಿಯು ಬೆಂಗಳೂರು ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬ್ಯಾನ್ ಮಾಡಿ, ಕೌನ್ಸಿಲ್ ಒಪ್ಪಿಗೆಯೊಂದಿಗೆ ರಚಿಸಿದ್ದ ಜಾಹೀರಾತು ಬೈಲಾವನ್ನು ಕಳೆದ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತ್ತು. ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿತ್ತು. ಇದು ಪಾಲಿಕೆಗೆ ಮಾಡುವ ಅವಮಾನ, ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪಾಲಿಕೆ ಸದಸ್ಯರು ವಿರೋಧಿಸಿದರು.

ಸರ್ಕಾರ ಮಾಡಿರುವ ಹೊಸ ಬೈಲಾಕ್ಕೆ ಪಾಲಿಕೆಯ ಅಭಿಪ್ರಾಯ ಕೇಳಿದ್ದು, ನಾಳೆ ಕೌನ್ಸಿಲ್ ಸಭೆಯಲ್ಲಿ ವಿರೋಧದ ನಿರ್ಣಯ ಮಾಡಿ ಸರ್ಕಾರಕ್ಕೆ ಕಳಿಸಿಕೊಡಲು ಬಿಬಿಎಂಪಿ ತೀರ್ಮಾನಿಸಿದೆ. ಇದೇ ವೇಳೆ ಕೌನ್ಸಿಲ್​​ನಲ್ಲಿ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಚುನಾವಣೆ ಸಮಯದಲ್ಲಿ ಹಣ ಮಾಡುವ ಉದ್ದೇಶದಿಂದ ಡಿಸಿಎಂ ಪರಮೇಶ್ವರ್ ಜಾಹೀರಾತು ಬೈಲಾದಲ್ಲಿ ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.

ಬಿಬಿಎಂಪಿ ಕೌನ್ಸಿಲ್ ಸಭೆ

ಆಡಳಿತ ಪಕ್ಷದವರಾದ ವಾಜಿದ್, ರಿಜ್ವಾನ್ ಅರ್ಷದ್, ಗುಣಶೇಖರ್ ಕೂಡಾ ಕಳೆದ ಸರ್ಕಾರದ ಈ ನಿರ್ಧಾರ ತಪ್ಪು ಎಂದರು. ಸಣ್ಣಪುಟ್ಟ ಜಾಹೀರಾತುದಾರರನ್ನು ಬೀದಿಗೆ ತಂದು ಕೋಟ್ಯಂತರ ರೂಪಾಯಿ ವ್ಯವಹಾರದ ದೊಡ್ಡ ದೊಡ್ಡ ಬಿಲ್ಡರ್ಸ್​ಗೆ ಕೊಡೋದು ಎಷ್ಟು ಸರಿ ಎಂದು ರಿಜ್ವಾನ್ ಅರ್ಷದ್ ಪ್ರಶ್ನಿಸಿದರು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, 2018ರ ಆಗಸ್ಟ್​ ತಿಂಗಳಲ್ಲಿ ಜಾಹೀರಾತು ನಿಷೇಧಕ್ಕೆ ತೀರ್ಮಾನಿಸಲಾಯಿತು. ಆದ್ರೆ ಟೌನ್ ಹಾಲ್​​ನಲ್ಲಿ ಆಕ್ಷೇಪಣೆದಾರರ ಸಭೆ ನಡೆಸಿದಾಗ ವೈಯಕ್ತಿಕವಾಗಿ ನಿಂದನೆ ಮಾಡಲಾಯಿತು. ಜಾಹೀರಾತು ನಿಷೇಧ ಮಾಡಿರುವ ನನಗೂ, ನನ್ನ ಮಕ್ಕಳಿಗೂ ಶಾಪ ತಟ್ಟುತ್ತೆ ಎಂದಿದ್ದರು. ಆದರೆ ಈ ನಿರ್ಧಾರ ಮಾಡುವುದು ನಾನಲ್ಲ, ಕೌನ್ಸಿಲ್. ಕೌನ್ಸಿಲ್ ನಿರ್ಧಾರದಂತೆ ನಾನು ನಡೆಯುತ್ತೇನೆ. ಈ ಹೊಸ ಬೈಲಾ ನಿಯಮಕ್ಕೆ ಒಪ್ಪಿಗೆಯಿಲ್ಲವಾದರೆ ಅದೇ ನಿರ್ಣಯವನ್ನು ಸರ್ಕಾರಕ್ಕೆ ಕಳಿಸಬಹುದು ಎಂದರು.

ಅಲ್ಲದೆ ಆಗಸ್ಟ್​ 1ರಂದು ಹೈಕೋರ್ಟ್ ವಿಚಾರಣೆಯಲ್ಲೂ ಈ ವಿಚಾರ ಚರ್ಚೆಗೆ ಬರಲಿದೆ. ಆ ವೇಳೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಮೂರು ತಿಂಗಳು ಆಗಿರುವುದರಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಇದನ್ನು ಅನುಮೋದಿಸಲ್ಪಟ್ಟಿದೆ ಎಂದು ನಿರ್ಣಯ ಮಾಡಲು ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು: ನೂತನ ಜಾಹೀರಾತು ಬೈಲಾ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ನಗರದಲ್ಲಿ ವಾಣಿಜ್ಯ ಜಾಹೀರಾತು ಅಳವಡಿಕೆಗೆ ಅವಕಾಶವಿದೆಯೆಂದು ಜಾಹೀರಾತು ಬೈಲಾ ಸಿದ್ಧಪಡಿಸಿತ್ತು. ಆದ್ರೆ ಇದನ್ನು ಇಂದಿನ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಕಾರ್ಪೋರೇಟರ್ಸ್ ವಿರೋಧಿಸಿದರು.

ಬಿಬಿಎಂಪಿಯು ಬೆಂಗಳೂರು ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬ್ಯಾನ್ ಮಾಡಿ, ಕೌನ್ಸಿಲ್ ಒಪ್ಪಿಗೆಯೊಂದಿಗೆ ರಚಿಸಿದ್ದ ಜಾಹೀರಾತು ಬೈಲಾವನ್ನು ಕಳೆದ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತ್ತು. ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿತ್ತು. ಇದು ಪಾಲಿಕೆಗೆ ಮಾಡುವ ಅವಮಾನ, ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪಾಲಿಕೆ ಸದಸ್ಯರು ವಿರೋಧಿಸಿದರು.

ಸರ್ಕಾರ ಮಾಡಿರುವ ಹೊಸ ಬೈಲಾಕ್ಕೆ ಪಾಲಿಕೆಯ ಅಭಿಪ್ರಾಯ ಕೇಳಿದ್ದು, ನಾಳೆ ಕೌನ್ಸಿಲ್ ಸಭೆಯಲ್ಲಿ ವಿರೋಧದ ನಿರ್ಣಯ ಮಾಡಿ ಸರ್ಕಾರಕ್ಕೆ ಕಳಿಸಿಕೊಡಲು ಬಿಬಿಎಂಪಿ ತೀರ್ಮಾನಿಸಿದೆ. ಇದೇ ವೇಳೆ ಕೌನ್ಸಿಲ್​​ನಲ್ಲಿ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಚುನಾವಣೆ ಸಮಯದಲ್ಲಿ ಹಣ ಮಾಡುವ ಉದ್ದೇಶದಿಂದ ಡಿಸಿಎಂ ಪರಮೇಶ್ವರ್ ಜಾಹೀರಾತು ಬೈಲಾದಲ್ಲಿ ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.

ಬಿಬಿಎಂಪಿ ಕೌನ್ಸಿಲ್ ಸಭೆ

ಆಡಳಿತ ಪಕ್ಷದವರಾದ ವಾಜಿದ್, ರಿಜ್ವಾನ್ ಅರ್ಷದ್, ಗುಣಶೇಖರ್ ಕೂಡಾ ಕಳೆದ ಸರ್ಕಾರದ ಈ ನಿರ್ಧಾರ ತಪ್ಪು ಎಂದರು. ಸಣ್ಣಪುಟ್ಟ ಜಾಹೀರಾತುದಾರರನ್ನು ಬೀದಿಗೆ ತಂದು ಕೋಟ್ಯಂತರ ರೂಪಾಯಿ ವ್ಯವಹಾರದ ದೊಡ್ಡ ದೊಡ್ಡ ಬಿಲ್ಡರ್ಸ್​ಗೆ ಕೊಡೋದು ಎಷ್ಟು ಸರಿ ಎಂದು ರಿಜ್ವಾನ್ ಅರ್ಷದ್ ಪ್ರಶ್ನಿಸಿದರು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, 2018ರ ಆಗಸ್ಟ್​ ತಿಂಗಳಲ್ಲಿ ಜಾಹೀರಾತು ನಿಷೇಧಕ್ಕೆ ತೀರ್ಮಾನಿಸಲಾಯಿತು. ಆದ್ರೆ ಟೌನ್ ಹಾಲ್​​ನಲ್ಲಿ ಆಕ್ಷೇಪಣೆದಾರರ ಸಭೆ ನಡೆಸಿದಾಗ ವೈಯಕ್ತಿಕವಾಗಿ ನಿಂದನೆ ಮಾಡಲಾಯಿತು. ಜಾಹೀರಾತು ನಿಷೇಧ ಮಾಡಿರುವ ನನಗೂ, ನನ್ನ ಮಕ್ಕಳಿಗೂ ಶಾಪ ತಟ್ಟುತ್ತೆ ಎಂದಿದ್ದರು. ಆದರೆ ಈ ನಿರ್ಧಾರ ಮಾಡುವುದು ನಾನಲ್ಲ, ಕೌನ್ಸಿಲ್. ಕೌನ್ಸಿಲ್ ನಿರ್ಧಾರದಂತೆ ನಾನು ನಡೆಯುತ್ತೇನೆ. ಈ ಹೊಸ ಬೈಲಾ ನಿಯಮಕ್ಕೆ ಒಪ್ಪಿಗೆಯಿಲ್ಲವಾದರೆ ಅದೇ ನಿರ್ಣಯವನ್ನು ಸರ್ಕಾರಕ್ಕೆ ಕಳಿಸಬಹುದು ಎಂದರು.

ಅಲ್ಲದೆ ಆಗಸ್ಟ್​ 1ರಂದು ಹೈಕೋರ್ಟ್ ವಿಚಾರಣೆಯಲ್ಲೂ ಈ ವಿಚಾರ ಚರ್ಚೆಗೆ ಬರಲಿದೆ. ಆ ವೇಳೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಮೂರು ತಿಂಗಳು ಆಗಿರುವುದರಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಇದನ್ನು ಅನುಮೋದಿಸಲ್ಪಟ್ಟಿದೆ ಎಂದು ನಿರ್ಣಯ ಮಾಡಲು ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

Intro:ಸರ್ಕಾರ ಹಾಗೂ ಬಿಬಿಎಂಪಿ ನಡುವೆ ಜಾಹಿರಾತು ಬೈಲಾ ರಚನೆ ತಿಕ್ಕಾಟ- ಕಳೆದ ಸರ್ಕಾರದ ನಿರ್ಣಯಕ್ಕೆ ಪಾಲಿಕೆ ಸದಸ್ಯರ ವಿರೋಧ


ಬೆಂಗಳೂರು- ನೂತನ ಜಾಹಿರಾತು ಬೈಲಾ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಕಳೆದ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ನಗರದಲ್ಲಿ ವಾಣಿಜ್ಯ ಜಾಹಿರಾತು ಅಳವಡಿಕೆಗೆ ಅವಕಾಶವಿದೆಯೆಂದು ಜಾಹಿರಾತು ಬೈಲಾದ ಪಾಲಿಸಿ ಸಿದ್ಧಪಡಿಸಿತ್ತು. ಆದ್ರೆ ಇದನ್ನು ಇಂದಿನ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಕಾರ್ಪೋರೇಟರ್ಸ್ ವಿರೋಧಿಸಿದರು.
ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯಲ್ಲಿ ಜಾಹಿರಾತು ಅಳವಡಿಕೆ ಬ್ಯಾನ್ ಮಾಡಿ, ಕೌನ್ಸಿಲ್ ಒಪ್ಪಿಗೆಯೊಂದಿಗೆ ರಚಿಸಿದ್ದ ಜಾಹಿರಾತು ಬೈಲಾವನ್ನು ಕಳೆದ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತ್ತು. ವಾಣಿಜ್ಯ ಜಾಹಿರಾತಿಗೆ ಅನುಮತಿ ನೀಡಿತ್ತು. ಇದು ಪಾಲಿಕೆಗೆ ಮಾಡುವ ಅವಮಾನ, ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪಾಲಿಕೆ ಸದಸ್ಯರು ವಿರೋಧಿಸಿದರು.
ಸರ್ಕಾರ ಮಾಡಿರುವ ಹೊಸ ಬೈಲಾಕ್ಕೆ ಪಾಲಿಕೆಯ ಅಭಿಪ್ರಾಯ ಕೇಳಿದ್ದು, ನಾಳೆ ಕೌನ್ಸಿಲ್ ಸಭೆಯಲ್ಲಿ ವಿರೋಧದ ನಿರ್ಣಯ ಮಾಡಿ ಸರ್ಕಾರಕ್ಕೆ ಕಳಿಸಿಕೊಡಲು ಬಿಬಿಎಂಪಿ ತೀರ್ಮಾನಿಸಿದೆ.
ಇದೇ ವೇಳೆ ಕೌನ್ಸಿಲ್ ನಲ್ಲಿ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಚುನಾವಣೆ ಸಮಯದಲ್ಲಿ ಹಣ ಮಾಡುವ ಉದ್ದೇಶದಿಂದ ಡಿಸಿಎಂ ಪರಮೇಶ್ವರ್ ಜಾಹಿರಾತು ಬೈಲಾದಲ್ಲಿ ವಾಣಿಜ್ಯ ಜಾಹಿರಾತಿಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.
ಆಡಳಿತ ಪಕ್ಷದವರಾದ ವಾಜಿದ್, ರಿಜ್ವಾನ್ ಅರ್ಷದ್ ,ಗುಣಶೇಖರ್ ಕೂಡಾ ಕಳೆದ ಸರ್ಕಾರದ ಈ ನಿರ್ಧಾರ ತಪ್ಪು ಎಂದರು.
ಸಣ್ಣಪುಟ್ಟ ಜಾಹಿರಾತುದಾರರನ್ನು ಬೀದಿಗೆ ತಂದು ಕೋಟ್ಯಾಂತರ ರುಪಾಯಿ ವ್ಯವಹಾರದ ದೊಡ್ಡ ದೊಡ್ಡ ಬಿಲ್ಡರ್ಸ್ ಗೆ ಕೊಡೋದು ಎಷ್ಟು ಸರಿ ಎಂದು ರಿಜ್ವಾನ್ ಅರ್ಷದ್ ಪ್ರಶ್ನಿಸಿದರು.


ನಮ್ಮ ಶಾಪ ನಿಮಗೂ, ನಿಮ್ಮ ಮಕ್ಕಳಿಗೂ ತಟ್ಟುತ್ತೆ ಎಂದು ನಿಂದಿಸಿದ್ದರು


ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, 2018 ರ ಆಗಷ್ಟ್ ತಿಂಗಳಲ್ಲಿ ಜಾಹಿರಾತು ನಿಷೇಧಕ್ಕೆ ತೀರ್ಮಾನಿಸಲಾಯಿತು. ಆದ್ರೆ ಟೌನ್ ಹಾಲ್ ನಲ್ಲಿ ಆಕ್ಷೇಪಣೆದಾರರ ಸಭೆ ನಡೆಸಿದಾಗ ವೈಯಕ್ತಿಕವಾಗಿ ನಿಂದನೆ ಮಾಡಿದ್ರು. ಜಾಹಿರಾತು ನಿಷೇಧ ಮಾಡಿರುವ ನನಗೂ, ನನ್ನ ಮಕ್ಕಳಿಗೂ ಶಾಪ ತಟ್ಟುತ್ತೆ ಎಂದಿದ್ದರು. ಆದ್ರೆ ಈ ನಿರ್ಧಾರ ಮಾಡುವುದು ನಾನಲ್ಲ ಕೌನ್ಸಿಲ್. ಕೌನ್ಸಿಲ್ ನಿರ್ಧಾರದಂತೆ ನಾನು ನಡೆಯುತ್ತೇನೆ. ಈ ಹೊಸ ಬೈಲಾ ನಿಯಮಕ್ಕೆ ಒಪ್ಪಿಗೆಯಿಲ್ಲವಾದರೆ ಅದೇ ನಿರ್ಣಯವನ್ನು ಸರ್ಕಾರಕ್ಕೆ ಕಳಿಸಬಹುದು ಎಂದರು.
ಅಲ್ಲದೆ ಆಗಷ್ಟ್ 1 ರಂದು ಹೈಕೋರ್ಟ್ ವಿಚಾರಣೆಯಲ್ಲೂ ಈ ವಿಚಾರ ಚರ್ಚೆಗೆ ಬರಲಿದೆ. ಆ ವೇಳೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಮೂರು ತಿಂಗಳು ಆಗಿರುವುದರಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಇದನ್ನು ಅನುಮೋದಿಸಲ್ಪಟ್ಟಿದೆ ಎಂದು ನಿರ್ಣಯ ಮಾಡಲು ಮನವಿ ಮಾಡಲಾಗುತ್ತದೆ ಎಂದರು.


ಸೈಕಲ್ ಪ್ರಾಜೆಕ್ಟ್ ಸಂಬಂಧಿಸಿದ ದೊಡ್ಡ ಮೊತ್ತದ ಟೆಂಡರ್ ಅನ್ನು ಆಯುಕ್ತರು ಹಾಗೂ ಮೇಯರ್, ಕೌನ್ಸಿಲ್ ಗಮನಕ್ಕೆ ತಾರದೇ ಇಂಜಿನಿಯರಿಂಗ್ ಸೆಕ್ಷನ್ ನಿಂದ ಮಾಡಿರುವ ತೀರ್ಮಾನವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಯುಕ್ತರು ಆದೇಶಿಸಿದ್ದಾರೆ. ಇದನ್ನು ಮಾಡಿರುವ ಚೀಫ್ ಇಂಜಿನಿಯರ್ ಕೆ.ಟಿ ನಾಗರಾಜ್ ಅವರನ್ನು ಅಮಾನತು ಮಾಡುವಂತೆ ಸಭೆ ಒತ್ತಾಯಿಸಿತು.




ನಗರದಲ್ಲಿ ಕಸ ಸಮಸ್ಯೆ


ಬೆಳ್ಳಳ್ಳಿ ಕ್ವಾರ ಭರ್ತಿಯಾಗಿರುವುದರಿಂದ ಕಳೆದ ಮೂರು ದಿನದಿಂದ ನಗರದಲ್ಲಿ ಕಸ ಸ್ವಚ್ಛವಾಗಿಲ್ಲ. ಬ್ಲಾಕ್ ಸ್ಪಾಟ್ ಗಳು ಹೆಚ್ಚಾಗಿವೆ. ಈ ಸಂಬಂಧ ಪ್ರತಿಕ್ರೊಯಿಸಿದ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹೊಸ ನಾಲ್ಕು ಕ್ವಾರಿಗಳಿಗೆ ಸರ್ಕಾರದಿಂದ ಒಪ್ಪಿಗೆ ಸಿಗಲು ಕಾಯುತ್ತಿದ್ದೇವೆ. ಅಲ್ಲದೆ ಮಿಟಗಾನಹಳ್ಳಿಯ ಕ್ವಾರಿಯಲ್ಲಿ ಕಸ ಹಾಕಿವ ಬಗ್ಗೆ ಇಂದು ಸಂಜೆ ಶಾಸಕರಾದ ಅರವಿಂದ ಲಿಂಬಾವಳಿಯವರೊಂಬಿಗೆ ಸಭೆ ನಿಗದಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದರು.


ಸೌಮ್ಯಶ್ರೀ
Kn_Bng_01_council_meeting_7202707


Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.