ಬೆಂಗಳೂರು : ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುವ ಮೂಲಕ ಸರಿದಾರಿಗೆ ತರಲು ಯತ್ನಿಸುತ್ತಿದೆ.
ಇಂದು ಶಿವಾಜಿನಗರದ ಕಮರ್ಷಿಯಿಲ್ ರಸ್ತೆಯಲ್ಲಿರುವ ಕೆಎಫ್ಸಿ ಇಂಡಿಯಾ ಮಳಿಗೆಯವರು ತ್ಯಾಜ್ಯ ವಿಂಗಡಿಸದೆ ಒಟ್ಟಿಗೆ ಕಸದ ಬುಟ್ಟಿಗೆ ಸುರಿದಿದ್ದಾರೆ. ಇದನ್ನು ಕಂಡು ಬಿಬಿಎಂಪಿ ಅಧಿಕಾರಿಗಳು ಹತ್ತು ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ಹಸಿ, ಒಣ ತ್ಯಾಜ್ಯ ವಿಂಗಡಿಸದೆ ಮುಂದೆಯೂ ಮಿಶ್ರಿತ ತ್ಯಾಜ್ಯ ನೀಡಿದ್ದಲ್ಲಿ ದಂಡದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.